Latest Updates
-
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ
ರೆಸಿಪಿ: ಈ ರಸಂ ರೋಗ ನಿರೋಧಕ ಶಕ್ತಿ ವೃದ್ಧಿಸುವುದು
ರಸಂ ಅನ್ನು ಹಲವಾರು ರುಚಿಯಲ್ಲಿ ನೀವು ಮಾಡಬಹುದು. ಇದನ್ನು ಅನ್ನದ ಜೊತೆ ಸವಿಯಲು ಮಾಡಬಹುದು. ಇನ್ನು ರಸಂ ಬಾಯಿಗೆ ರುಚಿ, ಜೀರ್ಣಕ್ರಿಯೆಗೆ ಒಳ್ಳೆಯದು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ನಾವಿಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ರಸಂ ರೆಸಿಪಿ ನೀಡಿದ್ದೇವೆ ನೋಡಿ:
ಬೇಕಾಗುವ ಸಾಮಗ್ರಿ
ಒಂದು ಚಿಕ್ಕ ನಿಂಬೆ ಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು
ಟೊಮೆಟೊ 2-3 (ಚಿಕ್ಕದಾಗಿ ಕತ್ತರಿಸಿದ್ದು)
ಹಸಿ ಮೆಣಸು 1
ಇಂಗು (ಚಿಟಿಕೆಯಷ್ಟು)
ಬೆಲ್ಲ 1 ಚಮಚ (ಪುಡಿ ಮಾಡಿದ್ದು)
ಶುಂಠಿ 1 ತುಂಡು (ಜಜ್ಜಿದ್ದು)
ತೊಗರಿ ಬೇಳೆ 1/2 ಕಪ್
ಕಾಳು ಮೆಣಸು 1 ಚಮಚ
ಜೀರಿಗೆ 1 ಚಮಚ
ಸಾಸಿವೆ 1 ಚಮಚ
ಕರಿಬೇವು
ರಸಂ ಪುಡಿ ( 1 ಚಮಚ)
ತುಪ್ಪ 1 ಚಮಚ
ಅರಿಶಿಣ ಪುಡಿ 1/2 ಚಮಚ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
* ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ 10 ನಿಮಿಷ ನೆನೆ ಹಾಕಿ.
* ಬೇಳೆಗೆ ಬೇಯಲು ತಕ್ಕ ನೀರು ಹಾಕಿ, ಸ್ವಲ್ಪ ಉಪ್ಪು, ಅರಿಶಿಣ ಪುಡಿ ಚೆನ್ನಾಗಿ
ಬೇಯಿಸಿ.
* ಈಗ ಹುಣಸೆ ನೀರನ್ನು ಕಡಿಮೆ ಉರಿಯಲ್ಲಿ ಕುದಿಸಿ, ಕುದಿಯುವಾಗ ಶುಂಠಿ ಸೇರಿಸಿ.
ಈಗ ಟೊಮೆಟೊ, ಹಸಿ ಮೆಣಸಿನಕಾಯಿ, ಬೆಲ್ಲ, ಇಂಗು ಹಾಗೂ ರಸಂ ಪೌಡರ್ ಸೇರಿಸಿ.
* ಈಗ ಬೇಳೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಅದನ್ನು ಹುಣಸೆ ರಸದ ಜೊತೆ ಸೇರಿಸಿ
2-3 ಕಪ್ ನೀರು ಸೇರಿಸಿ.
* ಈಗ ಜೀರಿಗೆ, ಕಾಳು ಮೆಣಸು ರುಬ್ಬಿ ಅಥವಾ ಪುಡಿ ಮಾಡಿ ಹಾಕಿ, ಉರಿ ಸ್ವಲ್ಪ
ಕಡಿಮೆ ಮಾಡಿ.
* ಈಗ ಒಗ್ಗರಣೆಗೆ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ, ಕರಿಬೇವು ಸೇರಿಸಿ,
ಬೆಳ್ಳುಳ್ಳಿ ಎಸಳು ಹಾಕಿ, ರಸಂಗೆ ಹಾಕಿ.
* ಈಗ ನಿಂಬೆ ರಸ ಸೇರಿಸಿ ಆಫ್ ಮಾಡಿ.
* ನಂತರ ಕೊತ್ತಂಬರಿ ಸೊಪ್ಪು ಚಿಕ್ಕದಾಗಿ ಕತ್ತರಿಸಿ ಹಾಕಿದರೆ ರುಚಿಯಾದ ರಸಂ
ರೆಡಿ.
Recipe 2
ಬೇಕಾಗುವ ಸಾಮಗ್ರಿ
* ತುಪ್ಪ 1 ಚಮಚ
* ಒಣ ಮೆಣಸು 4
* ಸ್ವಲ್ಪ ಇಂಗು
* ಸ್ವಲ್ಪ ಕರಿಬೇವು
* ರುಚಿಗೆ ತಕ್ಕ ಉಪ್ಪು
* ತೊಗರಿ ಬೇಳೆ 1 ಕಪ್
* ಬೆಲ್ಲ 1 ಚಮಚ
ತುಪ್ಪ 1 ಚಮಚ
ಒಗ್ಗರಣೆಗೆ
* ತುಪ್ಪ 1 ಚಮಚ
* 1 ಚಮಚ ಸಾಸಿವೆ
* ಕರಿಬೇವು
* ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
* ಒಂದು ಚಮಚ ತುಪ್ಪ ಬಿಸಿ ಮಾಡಿ, ಒಂದು ಒಣ ಮೆಣಸು ಹಾಕಿ, ಅದರಲ್ಲಿ ಹುಣಸೆ ರಸ, ಇಂಗು, ಅರಿಶಿಣ ಪುಡಿ, ಕರಿಬೇವು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಬಿಸಿ ಮಾಡಿ. ಹುಣಸೆ ಹಣ್ಣಿನ ಹಸಿ ವಾಸನೆ ಹೋಗಬೇಕು.
* ಈಗ ಬೇಯಿಸಿದ ತೊಗರಿಬೇಳೆ ಹಾಕಿ ಬೆಲ್ಲ ಸೇರಿಸಿ, ಉರಿ ಕಡಿಮೆ ಮಾಡಿ ರಸಂ ಕುದಿಸಿ ಉರಿಯಿಂದ ಇಳಿಸಿ ಇಡಿ.
* ಈಗ ತುಪ್ಪವನ್ನು ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ರಂಸ ಜೊತೆ ಸೇರಿಸಿದರೆ ರುಚಿಕರವಾದ ರಸಂ ರೆಡಿ.



Click it and Unblock the Notifications