Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಮೆಣಸಿನಕಾಯಿ ತಿಂದಾಗ ಏನು ಮಾಡಬೇಕು?

ಇನ್ನೇನು ಮಾಡಲು ಸಾಧ್ಯ; ಒಂದು ಲೋಟ ನೀರು ಕುಡಿದು ಖಾರ ನೀಗಿಸಿಕೊಳ್ಳುತ್ತೇವೆ ಅಂತೀರಾ ಅಲ್ವಾ? ಆದರೆ ನೀರು ಕುಡಿದಷ್ಟು ಮಾತ್ರಕ್ಕೆ ಖಾರ ಕಮ್ಮಿಯಾಗಲ್ಲ. ಕಾರಣ... ಹಸಿಮೆಣಸಿನಕಾಯಿ ಕಚ್ಚಿದ ಕೂಡಲೆ ಅದರಲ್ಲಿನ ಎಣ್ಣೆ ಗುಣಗಳು ಬಾಯಲ್ಲೆಲ್ಲಾ ಪಸರಿಸುತ್ತವೆ.
ಇಂತಹ ಸಂದರ್ಭದಲ್ಲಿ ನೀರು ಕುಡಿಯುವುದರಿಂದ ಪ್ರಯೋಜನವಾಗದು. ನೀರು ಎಣ್ಣೆಯನ್ನು ಗ್ರಹಿಸುವುದಿಲ್ಲ. ಹಾಗಾಗಿ ಬಾಯಿಯ ಖಾರ ಕೂಡಲೆ ನೀಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು ಗೊತ್ತೆ...! ಇಲ್ಲಿದೆ ನೋಡಿ ಮನೆ ಮದ್ದು. ಎರಡು ಹನಿ ಮಜ್ಜಿಗೆ ಅಥವಾ ಒಂದು ಚಮಚ ಮೊಸರನ್ನು ಬಾಯಲ್ಲಿ ಹಾಕಿಕೊಳ್ಳಿ.
ಮಜ್ಜಿಗೆ ಅಥವಾ ಮೊಸರು ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಖಾರ ಕೂಡಲೆ ಕಡಿಮೆಯಾಗುತ್ತದೆ. ಅದೇ ರೀತಿ ಮಕ್ಕಳು ಊಟ ಮಾಡುವಾಗ ಹಸಿಮೆಣಸಿನಕಾಯಿ ತಿಂದರೆ ಅರ್ಧ ಲೋಟ ಹಾಲು ಇಲ್ಲವೆ ಬ್ರೆಡ್ಡಿನ ಚೂರನ್ನು ತಿನ್ನಿಸಬೇಕು ಎನ್ನುತ್ತಾರೆ ಆಹಾರ ನಿಪುಣರು. ಬೇಕಿದ್ದರೆ ಇಂದಿನ ಊಟದ ಜೊತೆ ಮೆಣಸಿನಕಾಯೊಂದನ್ನು ತಿಂದು ಪರೀಕ್ಷಿಸಿ ನೋಡಿ! ಆದರೆ, ಪಕ್ಕದಲ್ಲೇ ಮೊಸರು ಅಥವಾ ಮಜ್ಜಿಗೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ.



Click it and Unblock the Notifications











