Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೆಣಸಿನಕಾಯಿ ತಿಂದಾಗ ಏನು ಮಾಡಬೇಕು?

ಇನ್ನೇನು ಮಾಡಲು ಸಾಧ್ಯ; ಒಂದು ಲೋಟ ನೀರು ಕುಡಿದು ಖಾರ ನೀಗಿಸಿಕೊಳ್ಳುತ್ತೇವೆ ಅಂತೀರಾ ಅಲ್ವಾ? ಆದರೆ ನೀರು ಕುಡಿದಷ್ಟು ಮಾತ್ರಕ್ಕೆ ಖಾರ ಕಮ್ಮಿಯಾಗಲ್ಲ. ಕಾರಣ... ಹಸಿಮೆಣಸಿನಕಾಯಿ ಕಚ್ಚಿದ ಕೂಡಲೆ ಅದರಲ್ಲಿನ ಎಣ್ಣೆ ಗುಣಗಳು ಬಾಯಲ್ಲೆಲ್ಲಾ ಪಸರಿಸುತ್ತವೆ.
ಇಂತಹ ಸಂದರ್ಭದಲ್ಲಿ ನೀರು ಕುಡಿಯುವುದರಿಂದ ಪ್ರಯೋಜನವಾಗದು. ನೀರು ಎಣ್ಣೆಯನ್ನು ಗ್ರಹಿಸುವುದಿಲ್ಲ. ಹಾಗಾಗಿ ಬಾಯಿಯ ಖಾರ ಕೂಡಲೆ ನೀಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು ಗೊತ್ತೆ...! ಇಲ್ಲಿದೆ ನೋಡಿ ಮನೆ ಮದ್ದು. ಎರಡು ಹನಿ ಮಜ್ಜಿಗೆ ಅಥವಾ ಒಂದು ಚಮಚ ಮೊಸರನ್ನು ಬಾಯಲ್ಲಿ ಹಾಕಿಕೊಳ್ಳಿ.
ಮಜ್ಜಿಗೆ ಅಥವಾ ಮೊಸರು ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಖಾರ ಕೂಡಲೆ ಕಡಿಮೆಯಾಗುತ್ತದೆ. ಅದೇ ರೀತಿ ಮಕ್ಕಳು ಊಟ ಮಾಡುವಾಗ ಹಸಿಮೆಣಸಿನಕಾಯಿ ತಿಂದರೆ ಅರ್ಧ ಲೋಟ ಹಾಲು ಇಲ್ಲವೆ ಬ್ರೆಡ್ಡಿನ ಚೂರನ್ನು ತಿನ್ನಿಸಬೇಕು ಎನ್ನುತ್ತಾರೆ ಆಹಾರ ನಿಪುಣರು. ಬೇಕಿದ್ದರೆ ಇಂದಿನ ಊಟದ ಜೊತೆ ಮೆಣಸಿನಕಾಯೊಂದನ್ನು ತಿಂದು ಪರೀಕ್ಷಿಸಿ ನೋಡಿ! ಆದರೆ, ಪಕ್ಕದಲ್ಲೇ ಮೊಸರು ಅಥವಾ ಮಜ್ಜಿಗೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ.



Click it and Unblock the Notifications
