Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಮೆಣಸಿನಕಾಯಿ ತಿಂದಾಗ ಏನು ಮಾಡಬೇಕು?

ಇನ್ನೇನು ಮಾಡಲು ಸಾಧ್ಯ; ಒಂದು ಲೋಟ ನೀರು ಕುಡಿದು ಖಾರ ನೀಗಿಸಿಕೊಳ್ಳುತ್ತೇವೆ ಅಂತೀರಾ ಅಲ್ವಾ? ಆದರೆ ನೀರು ಕುಡಿದಷ್ಟು ಮಾತ್ರಕ್ಕೆ ಖಾರ ಕಮ್ಮಿಯಾಗಲ್ಲ. ಕಾರಣ... ಹಸಿಮೆಣಸಿನಕಾಯಿ ಕಚ್ಚಿದ ಕೂಡಲೆ ಅದರಲ್ಲಿನ ಎಣ್ಣೆ ಗುಣಗಳು ಬಾಯಲ್ಲೆಲ್ಲಾ ಪಸರಿಸುತ್ತವೆ.
ಇಂತಹ ಸಂದರ್ಭದಲ್ಲಿ ನೀರು ಕುಡಿಯುವುದರಿಂದ ಪ್ರಯೋಜನವಾಗದು. ನೀರು ಎಣ್ಣೆಯನ್ನು ಗ್ರಹಿಸುವುದಿಲ್ಲ. ಹಾಗಾಗಿ ಬಾಯಿಯ ಖಾರ ಕೂಡಲೆ ನೀಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು ಗೊತ್ತೆ...! ಇಲ್ಲಿದೆ ನೋಡಿ ಮನೆ ಮದ್ದು. ಎರಡು ಹನಿ ಮಜ್ಜಿಗೆ ಅಥವಾ ಒಂದು ಚಮಚ ಮೊಸರನ್ನು ಬಾಯಲ್ಲಿ ಹಾಕಿಕೊಳ್ಳಿ.
ಮಜ್ಜಿಗೆ ಅಥವಾ ಮೊಸರು ಎಣ್ಣೆಯ ಅಂಶವನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಖಾರ ಕೂಡಲೆ ಕಡಿಮೆಯಾಗುತ್ತದೆ. ಅದೇ ರೀತಿ ಮಕ್ಕಳು ಊಟ ಮಾಡುವಾಗ ಹಸಿಮೆಣಸಿನಕಾಯಿ ತಿಂದರೆ ಅರ್ಧ ಲೋಟ ಹಾಲು ಇಲ್ಲವೆ ಬ್ರೆಡ್ಡಿನ ಚೂರನ್ನು ತಿನ್ನಿಸಬೇಕು ಎನ್ನುತ್ತಾರೆ ಆಹಾರ ನಿಪುಣರು. ಬೇಕಿದ್ದರೆ ಇಂದಿನ ಊಟದ ಜೊತೆ ಮೆಣಸಿನಕಾಯೊಂದನ್ನು ತಿಂದು ಪರೀಕ್ಷಿಸಿ ನೋಡಿ! ಆದರೆ, ಪಕ್ಕದಲ್ಲೇ ಮೊಸರು ಅಥವಾ ಮಜ್ಜಿಗೆಯನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ.



Click it and Unblock the Notifications