Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಡುಗೆ ಮನೆಯ ವಿಭಿನ್ನ ಕಲೆಗಾರಿಕೆ

* ಅಕ್ಕಿ ಅಥವಾ ಬೇಳೆಯ ಡಬ್ಬಿಗೆ ಕೈಹಾಕುವ ಮೊದಲು ಕೈ ಒಣಗಿರಲಿ. ಹಸಿಕೈಯಿಂದ ಹಿಡಿದರೆ ಹುಳ ಹಿಡಿಯುವುದು ಖಂಡಿತ.
* ಅಕ್ಕಿಯಲ್ಲಿ ನುಸಿಯಾಗದಿರಲು ಡಬ್ಬಿಯಲ್ಲಿ ಒಂದು ಈರುಳ್ಳಿಯನ್ನು ಹೂತಿಡಿ. ಹುಳ ಆಗುವುದಿಲ್ಲ.
* ಅನ್ನ ಮಾಡುವ ಮೊದಲು ಎರಡನೇ ಬಾರಿ ತೊಳೆದ ಅಕ್ಕಿಯ ನೀರನ್ನು ಹಾಗೇ ಚೆಲ್ಲದೆ, ಸಕ್ಕರೆ, ನಿಂಬೆರಸ ಸೇರಿಸಿ ಪಾನಕ ಮಾಡಿ ಕುಡಿಯಬಹುದು. ದೇಹಕ್ಕೆ ಅದು ತಂಪು ತಂಪು.
* ತುಂಡರಿಸಿ ತಿನ್ನದೇ ಪ್ರಿಜ್ಜಲ್ಲಿಟ್ಟ ಸೇಬು ಕಂದು ಬಣ್ಣಕ್ಕೆ ತಿರುಗದಿರಲು ಉಪ್ಪು ಲೇಪಿಸಿ.
* ಡಬ್ಬಿಯಲ್ಲಿ ಶೇಕರಿಸಿಟ್ಟ ಸಕ್ಕರೆಗೆ ಇರುವೆ ಬಾರದಿರಲು ಒಂದೆರಡು ಲವಂಗಗಳನ್ನು ಸೇರಿಸಿಡಿ.
* ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರದಿರಲು ಅರ್ಧ ಹೆಚ್ಚಿ ನೀರಲ್ಲಿ ಕೆಲಹೊತ್ತು ನೆನೆ ಇಡಿ.
* ಹಾಲಿನ ಪಾತ್ರೆ ತಟಪಟ ಸದ್ದು ಮಾಡದಿರಲು ಪಾತ್ರೆಗೆ ಹಾಲು ಹಾಕುವ ಮೊದಲು ಸ್ವಲ್ಪ ನೀರು ಹಾಕಿ.
* ಹಾಲು ಕಾಯಿಸದೆ ಬಹಳ ಹೊತ್ತು ಇಟ್ಟಿದ್ದರೆ, ನಂತರ ಕಾಸುವಾಗ ಚಿಟಿಕೆ ತಿನ್ನುವ ಸೋಡಾ ಸೇರಿಸಿ ಕಾಯಿಸಿ, ಒಡೆಯುವುದಿಲ್ಲ.
* ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.
* ಮೊಸರು ಹುಳಿಹುಳಿಯಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಎರಡು ತಾಸು ಬಿಡ್ಡು ನೀರನ್ನು ಬಸಿದರೆ ಮೊಸರು ಮತ್ತೆ ಸಿಹಿಯಾಗಿರುತ್ತದೆ.
* ಗೋಬಿ ಮಂಚೂರಿ ಮಾಡುವ ಮೊದಲು ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಅರಿಷಿಣ ಸೇರಿಸಿ ಹೂಕೋಸು ತುಣುಕುಗಳನ್ನು ನೀರಲ್ಲಿ ಮುಳುಗಿಸಿ. ಹುಳಗಳು ಹೂಕೋಸಿಂದ ಹೊರಬರುತ್ತವೆ.
* ಉಪ್ಪಿಟ್ಟು, ಅವಲಕ್ಕಿಯಂಥ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.



Click it and Unblock the Notifications











