Latest Updates
-
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ!
ಅಡುಗೆ ಮನೆಯ ವಿಭಿನ್ನ ಕಲೆಗಾರಿಕೆ

* ಅಕ್ಕಿ ಅಥವಾ ಬೇಳೆಯ ಡಬ್ಬಿಗೆ ಕೈಹಾಕುವ ಮೊದಲು ಕೈ ಒಣಗಿರಲಿ. ಹಸಿಕೈಯಿಂದ ಹಿಡಿದರೆ ಹುಳ ಹಿಡಿಯುವುದು ಖಂಡಿತ.
* ಅಕ್ಕಿಯಲ್ಲಿ ನುಸಿಯಾಗದಿರಲು ಡಬ್ಬಿಯಲ್ಲಿ ಒಂದು ಈರುಳ್ಳಿಯನ್ನು ಹೂತಿಡಿ. ಹುಳ ಆಗುವುದಿಲ್ಲ.
* ಅನ್ನ ಮಾಡುವ ಮೊದಲು ಎರಡನೇ ಬಾರಿ ತೊಳೆದ ಅಕ್ಕಿಯ ನೀರನ್ನು ಹಾಗೇ ಚೆಲ್ಲದೆ, ಸಕ್ಕರೆ, ನಿಂಬೆರಸ ಸೇರಿಸಿ ಪಾನಕ ಮಾಡಿ ಕುಡಿಯಬಹುದು. ದೇಹಕ್ಕೆ ಅದು ತಂಪು ತಂಪು.
* ತುಂಡರಿಸಿ ತಿನ್ನದೇ ಪ್ರಿಜ್ಜಲ್ಲಿಟ್ಟ ಸೇಬು ಕಂದು ಬಣ್ಣಕ್ಕೆ ತಿರುಗದಿರಲು ಉಪ್ಪು ಲೇಪಿಸಿ.
* ಡಬ್ಬಿಯಲ್ಲಿ ಶೇಕರಿಸಿಟ್ಟ ಸಕ್ಕರೆಗೆ ಇರುವೆ ಬಾರದಿರಲು ಒಂದೆರಡು ಲವಂಗಗಳನ್ನು ಸೇರಿಸಿಡಿ.
* ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರದಿರಲು ಅರ್ಧ ಹೆಚ್ಚಿ ನೀರಲ್ಲಿ ಕೆಲಹೊತ್ತು ನೆನೆ ಇಡಿ.
* ಹಾಲಿನ ಪಾತ್ರೆ ತಟಪಟ ಸದ್ದು ಮಾಡದಿರಲು ಪಾತ್ರೆಗೆ ಹಾಲು ಹಾಕುವ ಮೊದಲು ಸ್ವಲ್ಪ ನೀರು ಹಾಕಿ.
* ಹಾಲು ಕಾಯಿಸದೆ ಬಹಳ ಹೊತ್ತು ಇಟ್ಟಿದ್ದರೆ, ನಂತರ ಕಾಸುವಾಗ ಚಿಟಿಕೆ ತಿನ್ನುವ ಸೋಡಾ ಸೇರಿಸಿ ಕಾಯಿಸಿ, ಒಡೆಯುವುದಿಲ್ಲ.
* ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.
* ಮೊಸರು ಹುಳಿಹುಳಿಯಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಎರಡು ತಾಸು ಬಿಡ್ಡು ನೀರನ್ನು ಬಸಿದರೆ ಮೊಸರು ಮತ್ತೆ ಸಿಹಿಯಾಗಿರುತ್ತದೆ.
* ಗೋಬಿ ಮಂಚೂರಿ ಮಾಡುವ ಮೊದಲು ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಅರಿಷಿಣ ಸೇರಿಸಿ ಹೂಕೋಸು ತುಣುಕುಗಳನ್ನು ನೀರಲ್ಲಿ ಮುಳುಗಿಸಿ. ಹುಳಗಳು ಹೂಕೋಸಿಂದ ಹೊರಬರುತ್ತವೆ.
* ಉಪ್ಪಿಟ್ಟು, ಅವಲಕ್ಕಿಯಂಥ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.



Click it and Unblock the Notifications