Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಡುಗೆ ಮನೆಯ ವಿಭಿನ್ನ ಕಲೆಗಾರಿಕೆ

* ಅಕ್ಕಿ ಅಥವಾ ಬೇಳೆಯ ಡಬ್ಬಿಗೆ ಕೈಹಾಕುವ ಮೊದಲು ಕೈ ಒಣಗಿರಲಿ. ಹಸಿಕೈಯಿಂದ ಹಿಡಿದರೆ ಹುಳ ಹಿಡಿಯುವುದು ಖಂಡಿತ.
* ಅಕ್ಕಿಯಲ್ಲಿ ನುಸಿಯಾಗದಿರಲು ಡಬ್ಬಿಯಲ್ಲಿ ಒಂದು ಈರುಳ್ಳಿಯನ್ನು ಹೂತಿಡಿ. ಹುಳ ಆಗುವುದಿಲ್ಲ.
* ಅನ್ನ ಮಾಡುವ ಮೊದಲು ಎರಡನೇ ಬಾರಿ ತೊಳೆದ ಅಕ್ಕಿಯ ನೀರನ್ನು ಹಾಗೇ ಚೆಲ್ಲದೆ, ಸಕ್ಕರೆ, ನಿಂಬೆರಸ ಸೇರಿಸಿ ಪಾನಕ ಮಾಡಿ ಕುಡಿಯಬಹುದು. ದೇಹಕ್ಕೆ ಅದು ತಂಪು ತಂಪು.
* ತುಂಡರಿಸಿ ತಿನ್ನದೇ ಪ್ರಿಜ್ಜಲ್ಲಿಟ್ಟ ಸೇಬು ಕಂದು ಬಣ್ಣಕ್ಕೆ ತಿರುಗದಿರಲು ಉಪ್ಪು ಲೇಪಿಸಿ.
* ಡಬ್ಬಿಯಲ್ಲಿ ಶೇಕರಿಸಿಟ್ಟ ಸಕ್ಕರೆಗೆ ಇರುವೆ ಬಾರದಿರಲು ಒಂದೆರಡು ಲವಂಗಗಳನ್ನು ಸೇರಿಸಿಡಿ.
* ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರದಿರಲು ಅರ್ಧ ಹೆಚ್ಚಿ ನೀರಲ್ಲಿ ಕೆಲಹೊತ್ತು ನೆನೆ ಇಡಿ.
* ಹಾಲಿನ ಪಾತ್ರೆ ತಟಪಟ ಸದ್ದು ಮಾಡದಿರಲು ಪಾತ್ರೆಗೆ ಹಾಲು ಹಾಕುವ ಮೊದಲು ಸ್ವಲ್ಪ ನೀರು ಹಾಕಿ.
* ಹಾಲು ಕಾಯಿಸದೆ ಬಹಳ ಹೊತ್ತು ಇಟ್ಟಿದ್ದರೆ, ನಂತರ ಕಾಸುವಾಗ ಚಿಟಿಕೆ ತಿನ್ನುವ ಸೋಡಾ ಸೇರಿಸಿ ಕಾಯಿಸಿ, ಒಡೆಯುವುದಿಲ್ಲ.
* ಆಲೂಗಡ್ಡೆ ಬೇಗನೆ ಬೇಯಬೇಕಿದ್ದರೆ ಸ್ವಲ್ಪ ಹೊತ್ತು ಉಪ್ಪಿನ ನೀರಲ್ಲಿ ನೆನೆಸಿಟ್ಟು ನಂತರ ಬೇಯಿಸಿ.
* ಮೊಸರು ಹುಳಿಹುಳಿಯಾಗಿದ್ದರೆ ಅದಕ್ಕೆ ಸ್ವಲ್ಪ ನೀರು ಸೇರಿಸಿ ಎರಡು ತಾಸು ಬಿಡ್ಡು ನೀರನ್ನು ಬಸಿದರೆ ಮೊಸರು ಮತ್ತೆ ಸಿಹಿಯಾಗಿರುತ್ತದೆ.
* ಗೋಬಿ ಮಂಚೂರಿ ಮಾಡುವ ಮೊದಲು ನೀರಿನಲ್ಲಿ ಚಿಟಿಕೆ ಉಪ್ಪು ಮತ್ತು ಅರಿಷಿಣ ಸೇರಿಸಿ ಹೂಕೋಸು ತುಣುಕುಗಳನ್ನು ನೀರಲ್ಲಿ ಮುಳುಗಿಸಿ. ಹುಳಗಳು ಹೂಕೋಸಿಂದ ಹೊರಬರುತ್ತವೆ.
* ಉಪ್ಪಿಟ್ಟು, ಅವಲಕ್ಕಿಯಂಥ ತಿಂಡಿಗೆ ಉಪ್ಪು ಜಾಸ್ತಿಯಾದರೆ ಇನ್ನಷ್ಟು ನಿಂಬೆರಸ ಹಿಂಡಿದರೆ ಉಪ್ಪಿನಂಶ ಕಡಿಮೆಯಾಗುತ್ತದೆ.



Click it and Unblock the Notifications