Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಖೀರ್ ಸ್ವೀಟ್ ಕುರ್ಮಾ-ಮೊಘಲಾಯಿ ರೆಸಿಪಿ
ಖೀರ್ ಅಥವಾ ಶೀರ್ ಕುರ್ಮಾ ಮೊಘಲಾಯಿ ಶೈಲಿಯಲ್ಲಿ ತಯಾರಿಸುವ ಪಾಯಸವಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಶ್ಯಾವಿಗೆ ಪಾಯಸದಲ್ಲಿ ಖರ್ಜೂರ ಬಳಸುವುದಿಲ್ಲ, ಆದರೆ ಈ ಮೊಘಲಾಯಿ ಶೈಲಿಯ ಪಾಯಸದಲ್ಲಿ ಖರ್ಜೂರ ಪ್ರಮುಖವಾದ ಪದಾರ್ಥವಾಗಿದೆ.
ಹಬ್ಬ ಹರಿದಿನಗಳಲ್ಲಿ ಸುಲಭವಾಗಿ ಮಾಡಬಹುದಾದ ಸವಿರುಚಿಯ ಪಾಯಸ ಇದಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
ಶ್ಯಾವಿಗೆ-200 ಗ್ರಾಂ
ಹಾಲು 2 ಲೀಟರ್
ಸಕ್ಕರೆ 2 ಚಮಚ
ಏಲಕ್ಕಿ 4
ಚಿಟಿಕೆಯಷ್ಟು ಕೇಸರಿ
ಒಣ ಖರ್ಜೂರ 5
ಬಾದಾಮಿ 5
ಪಿಸ್ತಾ 4
ತುಪ್ಪ 3 ಚಮಚ
ಕೊಬ್ಬರಿ (ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು)
ತಯಾರಿಸುವ ವಿಧಾನ:
* ಬಾಣಲೆಗೆ 2 ಚಮಚ ತುಪ್ಪ ಹಾಕಿ ಅದಲ್ಲಿ ಶ್ಯಾವಿಗೆ ಹಾಕಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿದು ಬದಿಯಲ್ಲಿಡಿ.
* ಈಗ ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕುದಿಸಿ, ನಂತರ ಹಾಲಿಗೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ, ಕೇಸರಿ ಸೇರಿಸಿ, ಹಾಲು ಸ್ವಲ್ಪ ಮಂದವಾಗುವವರೆಗೆ ಕುದಿಸಿ.
* ಈಗ ಸಕ್ಕರೆಯನ್ನು ಹಾಕಿ, ಸಕ್ಕರೆ ಕರಗುವವರೆಗೆ ಸೌಟ್ ನಿಂದ ತಿರುಗಿಸಿ. ನಂತರ ಶ್ಯಾವಿಗೆ ಹಾಕಿ 5-6 ನಿಮಿಷ ಕುದಿಸಿ ಉರಿಯಿಂದ ಇಳಿಸಿ.
* ಈಗ ಒಂದು ಚಮಚ ತುಪ್ಪವನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ, ಅದರಲ್ಲಿ ಬಾದಾಮಿ ಪಿಸ್ತಾ , ಖರ್ಜೂರ (ಖರ್ಜೂರವನ್ನು ಕತ್ತರಿಸಿ ಹಾಕಿ), ಒಣ ಕೊಬ್ಬರಿಯ ತುಂಡುಗಳನ್ನು ಹಾಕಿ 2-3 ನಿಮಿಷ ಹುರಿದು ಪಾಯಸಕ್ಕೆ ಹಾಕಿದರೆ ಸ್ವೀಟ್ ಕುರ್ಮಾ ಸವಿಯಲು ರೆಡಿ.



Click it and Unblock the Notifications











