Latest Updates
-
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ!
ಆಹಾ.. ! ಕೊಬ್ಬರಿ ಮಿಠಾಯಿ ಬಲು ರುಚಿಕರ
Sweets
oi-Staff
By Staff

*ಮನಸ್ವಿನಿ, ನಾರಾವಿ
ತಯಾರಿಸಲು ಬೇಕಾದ ಪದಾರ್ಥಗಳು:
ತೆಂಗಿನಕಾಯಿ -1
ಸಕ್ಕರೆ - ಮುಕ್ಕಾಲು ಕಪ್
ಹಾಲು - 1 ಕಪ್(ಅಥವಾ ಹಾಲಿನಪುಡಿ ಬಳಸಬಹುದು)
5ರಿಂದ 6 ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಿ
ಶುದ್ಧ ತುಪ್ಪ : 1-2 ಟೀ ಚಮಚ
(ಬೇಕಾದರೆ ದ್ರಾಕ್ಷಿ, ಗೊಡಂಬಿ, ಬಾದಾಮಿ ಪುಡಿ ಹಾಕಬಹುದು)
ಮಾಡುವ ಬಗೆ: ತೆಂಗಿನಕಾಯಿಯನ್ನು ಚೆನ್ನಾಗಿ ತುರಿಯಿರಿ. ಆದಷ್ಟು ಬೆಳ್ಳಗಿರುವ ತುರಿಯನ್ನು ಆರಿಸಿರಿ.ಬಾಣಲೆಯಲ್ಲಿ ಕೊಬ್ಬರಿ, ಸಕ್ಕರೆಯನ್ನು ಹಾಕಿ ಜೊತೆಗೆ ಹಾಲನ್ನು ಹಾಕಿ ಕೆದಕುತ್ತಿರಿ. ಸಣ್ಣ ಉರಿಯಲ್ಲಿ ಸದಾ ಕೆದಕುತ್ತಿರಿ. (ಅರಿಶಿನ ಬಣ್ಣವನ್ನು ಹಾಕಬಹುದು)
ಸುಮಾರು 15-20 ನಿಮಿಷದೊಳಗೆ ಪಾಕ ಗಟ್ಟಿಯಾಗತೊಡಗುತ್ತದೆ. ಏಲಕ್ಕಿ ಪುಡಿ(ಜೊತೆಗೆ ದ್ರಾಕ್ಷಿ ಗೋಡಂಬಿ , ಬಾದಾಮಿ ಮಿಶ್ರಣವನ್ನು ಹಾಕಬಹುದು) ಯನ್ನು ಉದುರಿಸಿ ಬಾಣಲೆಯಿಂದ ಬೇರ್ಪಟ್ಟ ಮಿಶ್ರಣವನ್ನು ತುಪ್ಪ ಸವರಿದ ತಟ್ಟೆಗೆ ಬಗ್ಗಿಸಿ ಆರಲು ಬಿಡಿ. ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿಕೊಂಡು ತಿನ್ನಬಹುದು.
Comments
Read more about: ಕೊಬ್ಬರಿ ಮಿಠಾಯಿ manaswini naravi ಸಿಹಿ ತಿನಿಸು ಕರ್ನಾಟಕ ತಿಂಡಿ coconut barfi kobbari mithai ಮನಸ್ವಿನಿ ನಾರಾವಿ
Story first published: Monday, December 8, 2008, 16:26 [IST]
Other articles published on Dec 8, 2008



Click it and Unblock the Notifications