Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಹೊಟ್ಟೆ ತುಂಬಲು ಈ ವಡೆ ಒಂದು ಸಾಕು!

ತುಂಬಾ ಹೊಟ್ಟೆ ಹಸಿವು ಆದಾಗ ಈ ವಡೆ ಒಂದು ತಿಂದರೆ ಸಾಕು ಹೊಟ್ಟೆ ತುಂಬುವುದು. ಆದ್ದರಿಂದ ಸಾಯಾಂಕಾಲದ ತಿಂಡಿಗೆ ಸೂಕ್ತವಾದ ವಡೆಯಾಗಿದೆ. ಇದನ್ನು ಸುಲಭವಾಗಿ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಕಡಲೆ ಬೇಳೆ 1 ಕಪ್
* ಈರುಳ್ಳಿ 3
* 1/4 ಕಪ್ ಗಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆ
* ಶುಂಠಿ
* ಕರಿಬೇವು
* ಕೊಬ್ಬರಿ ತೆಂಗಿನ ಕಾಯಿಯ 1/2 ದಷ್ಟು
* ಕತ್ತರಿಸಿದ ಹಸಿಮೆಣಸಿನ ಕಾಯಿ 3-4
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಬೇಳೆ ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆಯನ್ನು ನೀರಿನಲ್ಲಿ ಒಂದು ಗಂಟೆಯಷ್ಟು ಕಾಲ ನೆನೆಸಿಡಬೇಕು. ಉದ್ದಿನಬೇಳೆ ಸ್ವಲ್ಪಕ್ಕಿಂತ ಜಾಸ್ತಿ ಹಾಕಬಾರದು. ನಂತರ ಮಿಕ್ಸಿಯಲ್ಲಿ ಹಾಕಿ ಗಟ್ಟಿಯಾಗಿ ನುಣ್ಣಗೆ ಅರೆಯಬೇಕು.
2. ಈಗ ಕೊಬ್ಬರಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಬೇಕು.
3. ಅದಕ್ಕೆ ಶುಂಠಿ, ಕರಿಬೇವು, ಕೊಬ್ಬರಿ ತೆಂಗಿನಕಾಯಿ ತುಂಡು, ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ ಇವೆಲ್ಲವೂ ಸಣ್ಣಗೆ ಕತ್ತರಿಸಿರಬೇಕು. ಆಮೇಲೆ ಉಪ್ಪು ಹಾಕಿ ಕಲೆಸಿ.
4. ಒಲೆಯ ಮೇಲೆ ಇಟ್ಟ ಎಣ್ಣೆ ಹದ ಕಾವು ಬಂದ ಕೂಡಲೇ, ಕಲಸಿಟ್ಟ ಹಿಟ್ಟನ್ನು ಸ್ವಲ್ಪ ದೊಡ್ಡ ಉಂಡೆ ಮಾಡಿ, ಕೈಯಲ್ಲಿ ತಟ್ಟಿ ಎಣ್ಣೆಗೆ ಹಾಕಬೇಕು. ವಡೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಬೇಕು. ತುಂಬಾ ಕರಿದರೆ ಈರುಳ್ಳಿ ಕಹಿಯಾಗುವುದು.
ಸಲಹೆ:
1. ವಡೆ ಗರಿಗರಿಯಾಗಿ ಬೇಕೆಂದು ಬಯಸಿದರೆ ಈರುಳ್ಳಿ ಹಾಕದೇ ಬೇಕಾದರೇ ತಯಾರಿಸಬಹುದು. ಆದರೆ ಈರುಳ್ಳಿ ಹಾಕಿದ ವಡೆಗೆ ರುಚಿ ಜಾಸ್ತಿ.
2. ಈರುಳ್ಳಿ ಹಾಕಿದರೆ, ಮಾರನೇ ದಿನ ಇಟ್ಟ ವಡೆ ತಿನ್ನಲು ಕಷ್ಟ, ತುಂಬಾ ಗಟ್ಟಿಯಾಗಿರುತ್ತದೆ. ಈರುಳ್ಳಿ ಹಾಕದಿದ್ದರೆ ಮೂರು ದಿನ ವಡೆ ಇಟ್ಟರೂ ಹಾಳಾಗದು.
3. ಶುಂಠಿ ಹಾಕಿದರೆ ಇಂಗು ಹಾಕುವ ಅವಶ್ಯಕತೆಯಿಲ್ಲ.
4. ಕೆಲವರು ಉದ್ದಿನ ಬೇಳೆ ಹಾಕದೆ ಮಾಡುತ್ತಾರೆ, ಅದರೆ ಸ್ವಲ್ಪ ಉದ್ದಿನ ಬೇಳೆ ಹಾಕದಿದ್ದರೆ ವಡೆ ತುಂಬಾ ಗಟ್ಟಿಯಾಗುವುದು
5. ಬೇಳೆಯನ್ನು ಕನಿಷ್ಠ ಒಂದು ಗಂಟೆಯಾದರೂ ನೆನೆ ಹಾಕಿರಬೇಕು.



Click it and Unblock the Notifications
