Latest Updates
-
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ!
ಹೊಟ್ಟೆ ತುಂಬಲು ಈ ವಡೆ ಒಂದು ಸಾಕು!

ತುಂಬಾ ಹೊಟ್ಟೆ ಹಸಿವು ಆದಾಗ ಈ ವಡೆ ಒಂದು ತಿಂದರೆ ಸಾಕು ಹೊಟ್ಟೆ ತುಂಬುವುದು. ಆದ್ದರಿಂದ ಸಾಯಾಂಕಾಲದ ತಿಂಡಿಗೆ ಸೂಕ್ತವಾದ ವಡೆಯಾಗಿದೆ. ಇದನ್ನು ಸುಲಭವಾಗಿ ಮಾಡಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಕಡಲೆ ಬೇಳೆ 1 ಕಪ್
* ಈರುಳ್ಳಿ 3
* 1/4 ಕಪ್ ಗಿಂತ ಸ್ವಲ್ಪ ಕಡಿಮೆ ಉದ್ದಿನ ಬೇಳೆ
* ಶುಂಠಿ
* ಕರಿಬೇವು
* ಕೊಬ್ಬರಿ ತೆಂಗಿನ ಕಾಯಿಯ 1/2 ದಷ್ಟು
* ಕತ್ತರಿಸಿದ ಹಸಿಮೆಣಸಿನ ಕಾಯಿ 3-4
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಕಡಲೆ ಬೇಳೆ ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆಯನ್ನು ನೀರಿನಲ್ಲಿ ಒಂದು ಗಂಟೆಯಷ್ಟು ಕಾಲ ನೆನೆಸಿಡಬೇಕು. ಉದ್ದಿನಬೇಳೆ ಸ್ವಲ್ಪಕ್ಕಿಂತ ಜಾಸ್ತಿ ಹಾಕಬಾರದು. ನಂತರ ಮಿಕ್ಸಿಯಲ್ಲಿ ಹಾಕಿ ಗಟ್ಟಿಯಾಗಿ ನುಣ್ಣಗೆ ಅರೆಯಬೇಕು.
2. ಈಗ ಕೊಬ್ಬರಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿಬೇಕು.
3. ಅದಕ್ಕೆ ಶುಂಠಿ, ಕರಿಬೇವು, ಕೊಬ್ಬರಿ ತೆಂಗಿನಕಾಯಿ ತುಂಡು, ಕತ್ತರಿಸಿದ ಹಸಿ ಮೆಣಸಿನ ಕಾಯಿ ಹಾಕಿ ಇವೆಲ್ಲವೂ ಸಣ್ಣಗೆ ಕತ್ತರಿಸಿರಬೇಕು. ಆಮೇಲೆ ಉಪ್ಪು ಹಾಕಿ ಕಲೆಸಿ.
4. ಒಲೆಯ ಮೇಲೆ ಇಟ್ಟ ಎಣ್ಣೆ ಹದ ಕಾವು ಬಂದ ಕೂಡಲೇ, ಕಲಸಿಟ್ಟ ಹಿಟ್ಟನ್ನು ಸ್ವಲ್ಪ ದೊಡ್ಡ ಉಂಡೆ ಮಾಡಿ, ಕೈಯಲ್ಲಿ ತಟ್ಟಿ ಎಣ್ಣೆಗೆ ಹಾಕಬೇಕು. ವಡೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಬೇಕು. ತುಂಬಾ ಕರಿದರೆ ಈರುಳ್ಳಿ ಕಹಿಯಾಗುವುದು.
ಸಲಹೆ:
1. ವಡೆ ಗರಿಗರಿಯಾಗಿ ಬೇಕೆಂದು ಬಯಸಿದರೆ ಈರುಳ್ಳಿ ಹಾಕದೇ ಬೇಕಾದರೇ ತಯಾರಿಸಬಹುದು. ಆದರೆ ಈರುಳ್ಳಿ ಹಾಕಿದ ವಡೆಗೆ ರುಚಿ ಜಾಸ್ತಿ.
2. ಈರುಳ್ಳಿ ಹಾಕಿದರೆ, ಮಾರನೇ ದಿನ ಇಟ್ಟ ವಡೆ ತಿನ್ನಲು ಕಷ್ಟ, ತುಂಬಾ ಗಟ್ಟಿಯಾಗಿರುತ್ತದೆ. ಈರುಳ್ಳಿ ಹಾಕದಿದ್ದರೆ ಮೂರು ದಿನ ವಡೆ ಇಟ್ಟರೂ ಹಾಳಾಗದು.
3. ಶುಂಠಿ ಹಾಕಿದರೆ ಇಂಗು ಹಾಕುವ ಅವಶ್ಯಕತೆಯಿಲ್ಲ.
4. ಕೆಲವರು ಉದ್ದಿನ ಬೇಳೆ ಹಾಕದೆ ಮಾಡುತ್ತಾರೆ, ಅದರೆ ಸ್ವಲ್ಪ ಉದ್ದಿನ ಬೇಳೆ ಹಾಕದಿದ್ದರೆ ವಡೆ ತುಂಬಾ ಗಟ್ಟಿಯಾಗುವುದು
5. ಬೇಳೆಯನ್ನು ಕನಿಷ್ಠ ಒಂದು ಗಂಟೆಯಾದರೂ ನೆನೆ ಹಾಕಿರಬೇಕು.



Click it and Unblock the Notifications