Latest Updates
-
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು!
ಸವಿರುಚಿಯ ಬಟಾಣಿ ಕಚೋರಿ
ಕಚೋರಿಯನ್ನು ನೂರಕ್ಕೂ ಹೆಚ್ಚಿನ ರುಚಿಯಲ್ಲಿ ತಯಾರಿಸಬಹುದು. ಅದಕ್ಕೆ ಬಳಸುವ ತರಕಾರಿಯ ಮೇಲೆ ಕಚೋರಿಯ ರುಚಿ ಭಿನ್ನವಾಗಿರುತ್ತದೆ. ಇಲ್ಲಿ ನಾವು ಬಟಾಣಿ ಹಾಕಿ ಮಾಡುವ ಕಚೋರಿಯ ರೆಸಿಪಿ ನೀಡಿದ್ದೇವೆ.
ಈ ಕಚೋರಿ ತಯಾರಿಸುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
1 ಕಪ್ ಮೈದಾ
1 ಸೌಟು ಕಡಲೆ ಹಿಟ್ಟು
2 ಚಮಚ ರವೆ
1/4 ಕಪ್ ನೀರು
1/4 ಕಪ್ ಎಣ್ಣೆ+1 ಚಮಚ ಎಣ್ಣೆ
ರುಚಿಗೆ ತಕ್ಕ ಉಪ್ಪು
ತುಂಬಲು
ಎರಡೂವರೆ ಕಪ್ ಬೇಯಿಸಿದ ಬಟಾಣಿ
ಅರ್ಧ ಚಮಚ ಜೀರಿಗೆ
ಸ್ವಲ್ಪ ಸೋಂಪು
ಅರ್ಧ ಚಮಚ ಅರಿಶಿಣ ಪುಡಿ
1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಅರ್ಧ ಚಮಚ ಹಸಿ ಮೆಣಸಿಕಾಯಿ ಪೇಸ್ಟ್
2 ಚಮಚ ಸಕ್ಕರೆ
1 ಚಮಚ ನಿಂಬೆ ರಸ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ
* ಬ್ಲೆಂಡರ್ ನಲ್ಲಿ ನೀರು, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ರುಬ್ಬಿ. ಆಗ ನೀರು ಸ್ವಲ್ಪ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಈಗ ಮೈದಾ ಹಾಕಿ ನಂತರ ಕಡಲೆ ಹಿಟ್ಟು ಮತ್ತು ರವೆ ಹಾಕಿ ಮತ್ತೊಮ್ಮೆ ರುಬ್ಬಿ. ಆಗ ಚಿಕ್ಕ-ಚಿಕ್ಕ ಗುಳ್ಳೆಗಳು ಏಳುತ್ತವೆ(ದೋಸೆಗೆ ಅರೆಯುವಾಗ ಬರುವಾಗೆ). ಮಿಶ್ರಣ ಪೂರಿಯ ಹದಕ್ಕೆ ಗಟ್ಟಿಯಾಗಿರಲಿ.
* ಈಗ ಬಾಣಲಿಯನ್ನು ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ನೆ ಹಾಕಿ, ಎಣ್ಣೆ ಬಿಸಿಯಾದಾಗ ಇಂಗು ಹಾಕಿ 1 ನಿಮಿಷದ ಬಳಿಕ, ಜೀರಿಗೆ, ಸೋಂಪು ಹಾಕಿ ನಂತರ ಬೇಯಿಸಿ ತರಕಾರಿ ಹಾಕಬೇಕು. ಹಸಿ ಮೆಣಸು, ಬೆಳ್ಳುಳ್ಳಿ, ಪೇಸ್ಟ್ ಸೇರಿಸಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕೆಲೆಸಿ. ನಂತರ ಸಕ್ಕರೆ ಹಾಕಿ ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿ. ನಂತರ ಇವುಗಳನ್ನು ಉಂಡೆ ಕಟ್ಟಿ.
* ಇದೇ ಸಮಯದಲ್ಲಿ ಎಣ್ಣೆ ಕಾಯಲು ಇಟ್ಟಿರಬೇಕು.
* ಹಿಟ್ಟನ್ನು ಚಪಾತಿಗೆ ತಟ್ಟುವ ರೀತಿಯಲ್ಲಿ ಸ್ವಲ್ಪ ಮಂದವಾಗಿ ತಟ್ಟಿ ಅದರ ಒಳಗೆ ಬೇಯಿಸಿ ಉಂಡೆ ಕಟ್ಟಿದ ತರಕಾರಿ ಹಾಕಿ, ತರಕಾರಿ ಎಣ್ಣೆಗೆ ಹಾಕಿದಾಗ ಹೊರಗಡೆ ಹೋಗದಂತೆ ಮಡಚಿ, ಕಾದ ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದರೆ ಬಟಾಣಿ ಕಚೋರಿ ರೆಡಿ.



Click it and Unblock the Notifications