Latest Updates
-
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್
ಬೇಕರಿಯ ಪಫ್ಸ್ ಯಾಕೆ? ನೀವೇ ಮಾಡಿದ್ರೂ ಓಕೆ!

3-ದೊಡ್ಡ ಗಾತ್ರದ ಆಲೂಗಡ್ಡೆ (ಅವುಗಳನ್ನು ಕುದಿಸಿ, ಸಿಪ್ಪೆ ತೆಗೆದು, ಹಿಸುಕಿಟ್ಟುಕೊಳ್ಳಿ)
1/4-ಕಪ್ ಬೇಯಿಸಿದ ಬಟಾಣಿ
1-ಕಪ್ ಕತ್ತರಿಸಿಬೇಯಿಸಿದ ಗಜ್ಜರಿ
1-ಕಪ್ ಕತ್ತರಿಸಿ ಬೇಯಿಸಿದ ಬೀಟ್ರೂಟ್
1-ಕತ್ತರಿಸಿದ ಈರುಳ್ಳಿ
1/2- ಟೀ ಸ್ಪೂನ್ ಜೀರಿಗೆ
1/2- ಟೀ ಸ್ಪೂನ್ ಸಾಸಿವೆ
1/2- ಟೀ ಸ್ಪೂನ್ ಅರಿಶಿಣ ಪುಡಿ
3- ಕತ್ತರಿಸಿದ ಹಸಿಮೆಣಸಿನ ಕಾಯಿ
1/2- ತುರಿದ ಹಸಿಶುಂಠಿ
1/2- ಟೀ ಸ್ಪೂನ್ ಧನಿಯಾ ಪುಡಿ
1- ಟೀ ಸ್ಪೂನ್ ಕೆಂಪು ಮೆಣಸಿನಕಾಯಿ ಪುಡಿ
1- ಟೀ ಸ್ಪೂನ್ ಗರಮ್ ಮಸಾಲಾ
1- ಟೀ ಸ್ಪೂನ್ ನಿಂಬೆ ಹಣ್ಣಿನ ರಸ
1-ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ
2- ಟೇಬಲ್ ಸ್ಪೂನ್ಅಡುಗೆ ಎಣ್ಣೆ
ಮಾಡುವ ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ. ಕಾಯ್ದ ಬಳಿಕ ಜೀರಿಗೆ-ಸಾಸಿವೆ ಹಾಕಿ. ಅದು ಸಿಡಿಯ ತೊಡಗಿದಾಗ ಮೊದಲೇ ಕತ್ತರಿಸಿಟ್ಟುಕೊಂಡ ಶುಂಠಿ, ಹಸಿಮೆಣಸಿನ ಕಾಯಿ, ಬೀಟ್ರೂಟ್, ಗಜ್ಜರಿ(ಕ್ಯಾರೆಟ್), ಬಟಾಣಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ.
ಆನಂತರ ಅದರೊಳಗೆ ಕುದಿಸಿ ಹಿಸುಕಿದ(ಮಿಶ್ರಣ) ಆಲೂಗಡ್ಡೆ ಹಾಕಿ ಚೆನ್ನಾಗಿ ಮಿಶ್ರಣಮಾಡಿ. ಅದಕ್ಕೆ ಗರಮ್ ಮಸಲಾ, ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬಾಣಲೆಯನ್ನು ಮುಚ್ಚಿಡಿ. ಆನಂತರ ಅದನ್ನು ಕೆಳಗಿಳಿಸಿ ನಿಂಬೆ ಹಣ್ಣಿನ ರಸ ಮತ್ತು ಕತ್ತರಿಸಿಟ್ಟುಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿಕೊಳ್ಳಿ.
ಇನ್ನೊಂದೆಡೆ ಮೈದಾ ಹಿಟ್ಟಿನಲ್ಲಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ ಮೃದುವಾಗಿ ಕಲೆಸಿ, ಚಪಾತಿ ಹಿಟ್ಟಿನಂತೆ ಮಾಡಿ ಕೊಳ್ಳಿ. ಅದನ್ನು ಚೌಕಾಕಾರದಲ್ಲಿ ಲಟ್ಟಿಸಿ(ತೀಡುವುದು) ನಾಲ್ಕು ಪದರುಗಳಾಗಿ ಮಾಡಿಕೊಳ್ಳಿ. ಪದರಿನ ಮಧ್ಯದಲ್ಲಿ ತಯಾರಿಸಿದ ಮಿಶ್ರಣವನ್ನು ಹಾಕಿ, ಪದರು ಬಿಚ್ಚಿಕೊಳ್ಳದಂತೆ ನೀರಿನಿಂದ ತೀಡಿಕೊಳ್ಳಿ. ಆಮೇಲೆ ಮೈಕ್ರೋ ವೇವ್ಓವನ್ನಲ್ಲಿ ಬೇಯಲು ಬಿಡಿ. ಕಂದು ಬಣ್ಣಕ್ಕೆ ತಿರುಗಿದ ನಂತರ ಹೊರ ತೆಗೆಯಿರಿ.
ಈಗ ಬಾಯಲ್ಲಿ ನೀರೂರಿಸುವ ಬಿಸಿಬಿಸಿ ವೆಜಿಟೆಬಲ್ ಪಫ್ಸ್ ರೆಡಿ.



Click it and Unblock the Notifications











