Latest Updates
-
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್
ಮೆಂತ್ಯ ಭಾತ್

ಸೋನಾಮಸೂರಿ ಅಕ್ಕಿ : ಅರ್ಧ ಕೆಜಿ
ಮೆಂತ್ಯ ಎರಡು ಚಮಚ
ಕ್ಯಾರೆಟ್: 100 ಗ್ರಾಂ
ಹುರುಳೀ ಕಾಯಿ : 100 ಗ್ರಾಂ
ದಪ್ಪ ಮೆಣಸಿನ ಕಾಯಿ: 1
ಶುಂಠಿ : ಹೆಬ್ಬೆರಳಿನಷ್ಟು
ಈರುಳ್ಳಿ : 2
ಎಣ್ಣೆ, ಉಪ್ಪು, ಗರಂ ಮಸಾಲೆ : 3-4 ಚಿಟಿಕೆ
ಹಸಿ ಮೆಣಸಿನ ಕಾಯಿ : 10 ರಿಂದ 12
ಖಾರ ಬೇಕಾದಷ್ಟು, ಸ್ವಲ್ಪ ಜೀರಿಗೆ
ಮಾಡುವ ವಿಧಾನ : ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ತರಕಾರಿಗಳನ್ನು ಸಣ್ಣಗೆ ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ತರಕಾರಿ ಹೋಳುಗಳ ಆಕಾರ ವಿಕಾರಗಳು ನಿಮ್ಮ ಕೌಶಲ್ಯ ಜಾಣ್ಮೆಗೆ ಬಿಟ್ಟದ್ದು. ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಂಡರೆ ಒಳ್ಳೆಯದು.
ಮೆಂತ್ಯಾ ಬಾತ್ ಮಾಡುವುದಕ್ಕೆ ಕುಕ್ಕರ್ ಬೇಡ. ದಪ್ಪ ತಳದ ಪಾತ್ರೆಯಾದರೆ ಚೆನ್ನಾಗಿರುತ್ತದೆ. ಮೊದಲು ಅರ್ಧಬಟ್ಟಲು ಎಣ್ಣೆ ಹಾಕಿ ಕಾಯಿಸಿ. ನಂತರ ಜೀರಿಗೆ, ಮೆಂತ್ಯಹಾಕಿ.
ಬೆಳ್ಳುಳ್ಳಿ- ಶುಂಠಿ ಅರೆದು ಬೇಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಅರ್ಧ ನಿಮಿಷಕ್ಕೆಲ್ಲ ಘಂ ಅಂತ ಪರಿಮಳ ಬರುತ್ತದೆ. ಅಂದರೆ ಬೆಳ್ಳುಳ್ಳಿ ಮಿಶ್ರಣ ಚೆನ್ನಾಗಿ ಬೆಂದಿದೆ ಎಂಬ ಸಂಕೇತ. ಈಗ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ ತರಕಾರಿ ಬಟಾಣಿ ಸುರಿಯಿರಿ. ಆಗಾಗ ಮಿಶ್ರಣವನ್ನು ಚೆನ್ನಾಗಿ ಮಗುಚುತ್ತಿರಬೇಕು. ಬೆಂಕಿ ತೀರಾ ಜೋರಾಗಿದ್ದರೆ ಬಾತ್ ತಳ ಹಿಡಿಯುತ್ತದೆ. ಈಗ ಉರಿ ಆರಿಸಿ ಪಾತ್ರೆಗೆ ಪ್ಲೇಟ್ ಮುಚ್ಚಿಟ್ಟು ಹಬೆಯಲ್ಲಿ ಬೇಯಲು ಬಿಡಿ.
ಹಬೆಯ ನೀರು ಬಸಿದು 5-6 ನಿಮಿಷಕ್ಕೆ ತೊಳೆದ ಅಕ್ಕಿ ಹಾಕಿ ಮತ್ತೆ ಮಗುಚಿ. ಒಂದು ಕಪ್ ಅಕ್ಕಿಗೆ ಎರಡೂವರೆ ಕಪ್ನಂತೆ ನೀರು ಹಾಕಿ ಮಗುಚಿ, ಪ್ಲೇಟ್ ಮುಚ್ಚಿಟ್ಟು ಬೇಯಿಸಿ. ಅಕ್ಕಿ ಬೇಯುತ್ತಾ ಅನ್ನ ಅರಳಲು ಪ್ರಾರಂಭವಾದಾಗ ರುಚಿಗೆ ತಕ್ಕಷ್ಟು ಉಪ್ಪು , ಅಗತ್ಯವಿದ್ದರೆ ನಿಂಬೆ ರಸ, 2 ಚಮಚ ತುಪ್ಪ ಹಾಕಿ ಕೆದಕಿ ಮತ್ತೆ ಮುಚ್ಚಿ ಬೇಯಿಸಿ. ನೀರು ಇಂಗುತ್ತಿದ್ದಂತೆಯೇ ತಯಾರು.
ತುಪ್ಪ, ಮೆಂತ್ಯ, ಶುಂಠಿ, ಜೀರಿಗೆ...ಇದೆಲ್ಲ ಹಾಕುವುದರಿಂದ ಇದು ಹೊಟ್ಟೆಗೂ ತಂಪು. ಮೂಗರಳಿಸುವ ಪರಿಮಳದ ನಡುವೆ ಮೆಂತ್ಯದ ಕಹಿಯೂ ಮಾಯವಾಗಿರುತ್ತದೆ. ಇದಕ್ಕೆ ಹೆಚ್ಚು ತೆಂಗಿನ ಕಾಯಿ, ಎಣ್ಣೆ - ಹೆಚ್ಚು ಮಸಾಲೆ ಹಾಕದೇ ಇರುವುದರಿಂದ ಆರೋಗ್ಯಕ್ಕೂ ಉತ್ತಮ. ಸರಿ. ಶುರು ಮಾಡಿ ಅಡುಗೆ, ಆಲ್ ದ ಬೆಸ್ಟ್!



Click it and Unblock the Notifications