Latest Updates
-
ವೀಕೆಂಡ್ ಪ್ಲಾನ್ ಮಾಡಿದ್ದೀರಾ? ಹವಾಮಾನ ವೈಪರೀತ್ಯದ ಎಚ್ಚರಿಕೆ: ನಿಮ್ಮ ಸುರಕ್ಷತೆಗಾಗಿ ಈ ಬದಲಾವಣೆ ಮಾಡಿಕೊಳ್ಳಿ! -
ಮುಂಬೈ ಬಿಸಿಲು ಮತ್ತು ಆರ್ದ್ರತೆ: 15 ನಿಮಿಷದಲ್ಲಿ ನಿಮ್ಮ ಮನೆಯನ್ನು ತಂಪಾಗಿರಿಸುವ ಸರಳ ಉಪಾಯಗಳು! -
ನಿಮ್ಮ ಆಹಾರದ ಪ್ಯಾಕೆಟ್ನಲ್ಲಿ ಸ್ಟೇಪ್ಲರ್ ಪಿನ್ ಇದೆಯೇ? ಎಚ್ಚರ, FSSAI ಕಠಿಣ ಆದೇಶ! -
ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಮಳೆ ಆತಂಕದ ನಡುವೆ ಗೆಲ್ಲೋರು ಯಾರು? -
ದೆಹಲಿ-ಎನ್ಸಿಆರ್ ಬಿರುಗಾಳಿ: ಫಿಟ್ನೆಸ್ ಪ್ರಿಯರೇ ಎಚ್ಚರ, ಇಂದಿನ ವರ್ಕೌಟ್ ಮನೆಯಲ್ಲೇ ಮಾಡುವುದು ಏಕೆ ಸುರಕ್ಷಿತ? -
ದೆಹಲಿಯಲ್ಲಿ ಇಂದು ಮಳೆ ಎಚ್ಚರಿಕೆ: ನಿಮ್ಮ ಡಿನ್ನರ್ ಪ್ಲಾನ್ ಸುರಕ್ಷಿತವಾಗಿರಲು ಈ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ ಭರ್ಜರಿ ಮಳೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ಈ 5 ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಪತ್ರಿಕೆಯಲ್ಲಿ ಆಹಾರ ಸುತ್ತಿ ತಿನ್ನುತ್ತಿದ್ದೀರಾ? ಇದು ನಿಮ್ಮ ಆರೋಗ್ಯಕ್ಕೆ 'ನಿಧಾನಗತಿಯ ವಿಷ' ಎಚ್ಚರ! -
ಬೆಂಗಳೂರಿನಲ್ಲಿ ಮತ್ತೆ ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ಸೇರಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಬಿಸಿಗಾಳಿ ಅಥವಾ ಭಾರಿ ಮಳೆ: ಮನೆಯಲ್ಲೇ ಫಿಟ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ!
ಮೆಂತ್ಯ ಭಾತ್

ಸೋನಾಮಸೂರಿ ಅಕ್ಕಿ : ಅರ್ಧ ಕೆಜಿ
ಮೆಂತ್ಯ ಎರಡು ಚಮಚ
ಕ್ಯಾರೆಟ್: 100 ಗ್ರಾಂ
ಹುರುಳೀ ಕಾಯಿ : 100 ಗ್ರಾಂ
ದಪ್ಪ ಮೆಣಸಿನ ಕಾಯಿ: 1
ಶುಂಠಿ : ಹೆಬ್ಬೆರಳಿನಷ್ಟು
ಈರುಳ್ಳಿ : 2
ಎಣ್ಣೆ, ಉಪ್ಪು, ಗರಂ ಮಸಾಲೆ : 3-4 ಚಿಟಿಕೆ
ಹಸಿ ಮೆಣಸಿನ ಕಾಯಿ : 10 ರಿಂದ 12
ಖಾರ ಬೇಕಾದಷ್ಟು, ಸ್ವಲ್ಪ ಜೀರಿಗೆ
ಮಾಡುವ ವಿಧಾನ : ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ತರಕಾರಿಗಳನ್ನು ಸಣ್ಣಗೆ ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ತರಕಾರಿ ಹೋಳುಗಳ ಆಕಾರ ವಿಕಾರಗಳು ನಿಮ್ಮ ಕೌಶಲ್ಯ ಜಾಣ್ಮೆಗೆ ಬಿಟ್ಟದ್ದು. ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಂಡರೆ ಒಳ್ಳೆಯದು.
ಮೆಂತ್ಯಾ ಬಾತ್ ಮಾಡುವುದಕ್ಕೆ ಕುಕ್ಕರ್ ಬೇಡ. ದಪ್ಪ ತಳದ ಪಾತ್ರೆಯಾದರೆ ಚೆನ್ನಾಗಿರುತ್ತದೆ. ಮೊದಲು ಅರ್ಧಬಟ್ಟಲು ಎಣ್ಣೆ ಹಾಕಿ ಕಾಯಿಸಿ. ನಂತರ ಜೀರಿಗೆ, ಮೆಂತ್ಯಹಾಕಿ.
ಬೆಳ್ಳುಳ್ಳಿ- ಶುಂಠಿ ಅರೆದು ಬೇಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಅರ್ಧ ನಿಮಿಷಕ್ಕೆಲ್ಲ ಘಂ ಅಂತ ಪರಿಮಳ ಬರುತ್ತದೆ. ಅಂದರೆ ಬೆಳ್ಳುಳ್ಳಿ ಮಿಶ್ರಣ ಚೆನ್ನಾಗಿ ಬೆಂದಿದೆ ಎಂಬ ಸಂಕೇತ. ಈಗ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ ತರಕಾರಿ ಬಟಾಣಿ ಸುರಿಯಿರಿ. ಆಗಾಗ ಮಿಶ್ರಣವನ್ನು ಚೆನ್ನಾಗಿ ಮಗುಚುತ್ತಿರಬೇಕು. ಬೆಂಕಿ ತೀರಾ ಜೋರಾಗಿದ್ದರೆ ಬಾತ್ ತಳ ಹಿಡಿಯುತ್ತದೆ. ಈಗ ಉರಿ ಆರಿಸಿ ಪಾತ್ರೆಗೆ ಪ್ಲೇಟ್ ಮುಚ್ಚಿಟ್ಟು ಹಬೆಯಲ್ಲಿ ಬೇಯಲು ಬಿಡಿ.
ಹಬೆಯ ನೀರು ಬಸಿದು 5-6 ನಿಮಿಷಕ್ಕೆ ತೊಳೆದ ಅಕ್ಕಿ ಹಾಕಿ ಮತ್ತೆ ಮಗುಚಿ. ಒಂದು ಕಪ್ ಅಕ್ಕಿಗೆ ಎರಡೂವರೆ ಕಪ್ನಂತೆ ನೀರು ಹಾಕಿ ಮಗುಚಿ, ಪ್ಲೇಟ್ ಮುಚ್ಚಿಟ್ಟು ಬೇಯಿಸಿ. ಅಕ್ಕಿ ಬೇಯುತ್ತಾ ಅನ್ನ ಅರಳಲು ಪ್ರಾರಂಭವಾದಾಗ ರುಚಿಗೆ ತಕ್ಕಷ್ಟು ಉಪ್ಪು , ಅಗತ್ಯವಿದ್ದರೆ ನಿಂಬೆ ರಸ, 2 ಚಮಚ ತುಪ್ಪ ಹಾಕಿ ಕೆದಕಿ ಮತ್ತೆ ಮುಚ್ಚಿ ಬೇಯಿಸಿ. ನೀರು ಇಂಗುತ್ತಿದ್ದಂತೆಯೇ ತಯಾರು.
ತುಪ್ಪ, ಮೆಂತ್ಯ, ಶುಂಠಿ, ಜೀರಿಗೆ...ಇದೆಲ್ಲ ಹಾಕುವುದರಿಂದ ಇದು ಹೊಟ್ಟೆಗೂ ತಂಪು. ಮೂಗರಳಿಸುವ ಪರಿಮಳದ ನಡುವೆ ಮೆಂತ್ಯದ ಕಹಿಯೂ ಮಾಯವಾಗಿರುತ್ತದೆ. ಇದಕ್ಕೆ ಹೆಚ್ಚು ತೆಂಗಿನ ಕಾಯಿ, ಎಣ್ಣೆ - ಹೆಚ್ಚು ಮಸಾಲೆ ಹಾಕದೇ ಇರುವುದರಿಂದ ಆರೋಗ್ಯಕ್ಕೂ ಉತ್ತಮ. ಸರಿ. ಶುರು ಮಾಡಿ ಅಡುಗೆ, ಆಲ್ ದ ಬೆಸ್ಟ್!



Click it and Unblock the Notifications