Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಮೆಂತ್ಯ ಭಾತ್

ಸೋನಾಮಸೂರಿ ಅಕ್ಕಿ : ಅರ್ಧ ಕೆಜಿ
ಮೆಂತ್ಯ ಎರಡು ಚಮಚ
ಕ್ಯಾರೆಟ್: 100 ಗ್ರಾಂ
ಹುರುಳೀ ಕಾಯಿ : 100 ಗ್ರಾಂ
ದಪ್ಪ ಮೆಣಸಿನ ಕಾಯಿ: 1
ಶುಂಠಿ : ಹೆಬ್ಬೆರಳಿನಷ್ಟು
ಈರುಳ್ಳಿ : 2
ಎಣ್ಣೆ, ಉಪ್ಪು, ಗರಂ ಮಸಾಲೆ : 3-4 ಚಿಟಿಕೆ
ಹಸಿ ಮೆಣಸಿನ ಕಾಯಿ : 10 ರಿಂದ 12
ಖಾರ ಬೇಕಾದಷ್ಟು, ಸ್ವಲ್ಪ ಜೀರಿಗೆ
ಮಾಡುವ ವಿಧಾನ : ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ತರಕಾರಿಗಳನ್ನು ಸಣ್ಣಗೆ ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ತರಕಾರಿ ಹೋಳುಗಳ ಆಕಾರ ವಿಕಾರಗಳು ನಿಮ್ಮ ಕೌಶಲ್ಯ ಜಾಣ್ಮೆಗೆ ಬಿಟ್ಟದ್ದು. ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಂಡರೆ ಒಳ್ಳೆಯದು.
ಮೆಂತ್ಯಾ ಬಾತ್ ಮಾಡುವುದಕ್ಕೆ ಕುಕ್ಕರ್ ಬೇಡ. ದಪ್ಪ ತಳದ ಪಾತ್ರೆಯಾದರೆ ಚೆನ್ನಾಗಿರುತ್ತದೆ. ಮೊದಲು ಅರ್ಧಬಟ್ಟಲು ಎಣ್ಣೆ ಹಾಕಿ ಕಾಯಿಸಿ. ನಂತರ ಜೀರಿಗೆ, ಮೆಂತ್ಯಹಾಕಿ.
ಬೆಳ್ಳುಳ್ಳಿ- ಶುಂಠಿ ಅರೆದು ಬೇಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಅರ್ಧ ನಿಮಿಷಕ್ಕೆಲ್ಲ ಘಂ ಅಂತ ಪರಿಮಳ ಬರುತ್ತದೆ. ಅಂದರೆ ಬೆಳ್ಳುಳ್ಳಿ ಮಿಶ್ರಣ ಚೆನ್ನಾಗಿ ಬೆಂದಿದೆ ಎಂಬ ಸಂಕೇತ. ಈಗ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ ತರಕಾರಿ ಬಟಾಣಿ ಸುರಿಯಿರಿ. ಆಗಾಗ ಮಿಶ್ರಣವನ್ನು ಚೆನ್ನಾಗಿ ಮಗುಚುತ್ತಿರಬೇಕು. ಬೆಂಕಿ ತೀರಾ ಜೋರಾಗಿದ್ದರೆ ಬಾತ್ ತಳ ಹಿಡಿಯುತ್ತದೆ. ಈಗ ಉರಿ ಆರಿಸಿ ಪಾತ್ರೆಗೆ ಪ್ಲೇಟ್ ಮುಚ್ಚಿಟ್ಟು ಹಬೆಯಲ್ಲಿ ಬೇಯಲು ಬಿಡಿ.
ಹಬೆಯ ನೀರು ಬಸಿದು 5-6 ನಿಮಿಷಕ್ಕೆ ತೊಳೆದ ಅಕ್ಕಿ ಹಾಕಿ ಮತ್ತೆ ಮಗುಚಿ. ಒಂದು ಕಪ್ ಅಕ್ಕಿಗೆ ಎರಡೂವರೆ ಕಪ್ನಂತೆ ನೀರು ಹಾಕಿ ಮಗುಚಿ, ಪ್ಲೇಟ್ ಮುಚ್ಚಿಟ್ಟು ಬೇಯಿಸಿ. ಅಕ್ಕಿ ಬೇಯುತ್ತಾ ಅನ್ನ ಅರಳಲು ಪ್ರಾರಂಭವಾದಾಗ ರುಚಿಗೆ ತಕ್ಕಷ್ಟು ಉಪ್ಪು , ಅಗತ್ಯವಿದ್ದರೆ ನಿಂಬೆ ರಸ, 2 ಚಮಚ ತುಪ್ಪ ಹಾಕಿ ಕೆದಕಿ ಮತ್ತೆ ಮುಚ್ಚಿ ಬೇಯಿಸಿ. ನೀರು ಇಂಗುತ್ತಿದ್ದಂತೆಯೇ ತಯಾರು.
ತುಪ್ಪ, ಮೆಂತ್ಯ, ಶುಂಠಿ, ಜೀರಿಗೆ...ಇದೆಲ್ಲ ಹಾಕುವುದರಿಂದ ಇದು ಹೊಟ್ಟೆಗೂ ತಂಪು. ಮೂಗರಳಿಸುವ ಪರಿಮಳದ ನಡುವೆ ಮೆಂತ್ಯದ ಕಹಿಯೂ ಮಾಯವಾಗಿರುತ್ತದೆ. ಇದಕ್ಕೆ ಹೆಚ್ಚು ತೆಂಗಿನ ಕಾಯಿ, ಎಣ್ಣೆ - ಹೆಚ್ಚು ಮಸಾಲೆ ಹಾಕದೇ ಇರುವುದರಿಂದ ಆರೋಗ್ಯಕ್ಕೂ ಉತ್ತಮ. ಸರಿ. ಶುರು ಮಾಡಿ ಅಡುಗೆ, ಆಲ್ ದ ಬೆಸ್ಟ್!



Click it and Unblock the Notifications