Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಮೆಂತ್ಯ ಭಾತ್

ಸೋನಾಮಸೂರಿ ಅಕ್ಕಿ : ಅರ್ಧ ಕೆಜಿ
ಮೆಂತ್ಯ ಎರಡು ಚಮಚ
ಕ್ಯಾರೆಟ್: 100 ಗ್ರಾಂ
ಹುರುಳೀ ಕಾಯಿ : 100 ಗ್ರಾಂ
ದಪ್ಪ ಮೆಣಸಿನ ಕಾಯಿ: 1
ಶುಂಠಿ : ಹೆಬ್ಬೆರಳಿನಷ್ಟು
ಈರುಳ್ಳಿ : 2
ಎಣ್ಣೆ, ಉಪ್ಪು, ಗರಂ ಮಸಾಲೆ : 3-4 ಚಿಟಿಕೆ
ಹಸಿ ಮೆಣಸಿನ ಕಾಯಿ : 10 ರಿಂದ 12
ಖಾರ ಬೇಕಾದಷ್ಟು, ಸ್ವಲ್ಪ ಜೀರಿಗೆ
ಮಾಡುವ ವಿಧಾನ : ಅಕ್ಕಿಯನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಿ. ತರಕಾರಿಗಳನ್ನು ಸಣ್ಣಗೆ ಉದ್ದಕ್ಕೆ ಹೆಚ್ಚಿಟ್ಟುಕೊಳ್ಳಿ. ತರಕಾರಿ ಹೋಳುಗಳ ಆಕಾರ ವಿಕಾರಗಳು ನಿಮ್ಮ ಕೌಶಲ್ಯ ಜಾಣ್ಮೆಗೆ ಬಿಟ್ಟದ್ದು. ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಹಚ್ಚಿಕೊಂಡರೆ ಒಳ್ಳೆಯದು.
ಮೆಂತ್ಯಾ ಬಾತ್ ಮಾಡುವುದಕ್ಕೆ ಕುಕ್ಕರ್ ಬೇಡ. ದಪ್ಪ ತಳದ ಪಾತ್ರೆಯಾದರೆ ಚೆನ್ನಾಗಿರುತ್ತದೆ. ಮೊದಲು ಅರ್ಧಬಟ್ಟಲು ಎಣ್ಣೆ ಹಾಕಿ ಕಾಯಿಸಿ. ನಂತರ ಜೀರಿಗೆ, ಮೆಂತ್ಯಹಾಕಿ.
ಬೆಳ್ಳುಳ್ಳಿ- ಶುಂಠಿ ಅರೆದು ಬೇಯುತ್ತಿರುವ ಮಿಶ್ರಣಕ್ಕೆ ಸೇರಿಸಿ. ಅರ್ಧ ನಿಮಿಷಕ್ಕೆಲ್ಲ ಘಂ ಅಂತ ಪರಿಮಳ ಬರುತ್ತದೆ. ಅಂದರೆ ಬೆಳ್ಳುಳ್ಳಿ ಮಿಶ್ರಣ ಚೆನ್ನಾಗಿ ಬೆಂದಿದೆ ಎಂಬ ಸಂಕೇತ. ಈಗ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ ತರಕಾರಿ ಬಟಾಣಿ ಸುರಿಯಿರಿ. ಆಗಾಗ ಮಿಶ್ರಣವನ್ನು ಚೆನ್ನಾಗಿ ಮಗುಚುತ್ತಿರಬೇಕು. ಬೆಂಕಿ ತೀರಾ ಜೋರಾಗಿದ್ದರೆ ಬಾತ್ ತಳ ಹಿಡಿಯುತ್ತದೆ. ಈಗ ಉರಿ ಆರಿಸಿ ಪಾತ್ರೆಗೆ ಪ್ಲೇಟ್ ಮುಚ್ಚಿಟ್ಟು ಹಬೆಯಲ್ಲಿ ಬೇಯಲು ಬಿಡಿ.
ಹಬೆಯ ನೀರು ಬಸಿದು 5-6 ನಿಮಿಷಕ್ಕೆ ತೊಳೆದ ಅಕ್ಕಿ ಹಾಕಿ ಮತ್ತೆ ಮಗುಚಿ. ಒಂದು ಕಪ್ ಅಕ್ಕಿಗೆ ಎರಡೂವರೆ ಕಪ್ನಂತೆ ನೀರು ಹಾಕಿ ಮಗುಚಿ, ಪ್ಲೇಟ್ ಮುಚ್ಚಿಟ್ಟು ಬೇಯಿಸಿ. ಅಕ್ಕಿ ಬೇಯುತ್ತಾ ಅನ್ನ ಅರಳಲು ಪ್ರಾರಂಭವಾದಾಗ ರುಚಿಗೆ ತಕ್ಕಷ್ಟು ಉಪ್ಪು , ಅಗತ್ಯವಿದ್ದರೆ ನಿಂಬೆ ರಸ, 2 ಚಮಚ ತುಪ್ಪ ಹಾಕಿ ಕೆದಕಿ ಮತ್ತೆ ಮುಚ್ಚಿ ಬೇಯಿಸಿ. ನೀರು ಇಂಗುತ್ತಿದ್ದಂತೆಯೇ ತಯಾರು.
ತುಪ್ಪ, ಮೆಂತ್ಯ, ಶುಂಠಿ, ಜೀರಿಗೆ...ಇದೆಲ್ಲ ಹಾಕುವುದರಿಂದ ಇದು ಹೊಟ್ಟೆಗೂ ತಂಪು. ಮೂಗರಳಿಸುವ ಪರಿಮಳದ ನಡುವೆ ಮೆಂತ್ಯದ ಕಹಿಯೂ ಮಾಯವಾಗಿರುತ್ತದೆ. ಇದಕ್ಕೆ ಹೆಚ್ಚು ತೆಂಗಿನ ಕಾಯಿ, ಎಣ್ಣೆ - ಹೆಚ್ಚು ಮಸಾಲೆ ಹಾಕದೇ ಇರುವುದರಿಂದ ಆರೋಗ್ಯಕ್ಕೂ ಉತ್ತಮ. ಸರಿ. ಶುರು ಮಾಡಿ ಅಡುಗೆ, ಆಲ್ ದ ಬೆಸ್ಟ್!



Click it and Unblock the Notifications