Latest Updates
-
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ!
ಉಪ್ಪಿಟ್ಟು ಮೇಲೆ ಮುನಿಸೇ, ಬಿರಿಯಾನಿ ತಿನ್ನು ಕೂಸೇ..!

ಬೇಕಾಗುವ ಸಾಮಾಗ್ರಿಗಳು:
*ಬಾಸುಮತಿ ಅಕ್ಕಿ
* ಬಟಾಣಿ 1/2 ಕಪ್
* ಬೀನ್ಸ್, ಕ್ಯಾರೆಟ್, ಹೂಕೋಸು( ಒಂದು ಬಟ್ಟಲು)
* ತುಪ್ಪ 2 ಚಮಚ
* ಈರುಳ್ಳಿ 1
* ಟೊಮೆಟೊ 1
* ಹಸಿ ಮೆಣಸು 5-6
* ಬೆಳ್ಳುಳ್ಳಿ ಎಸಳು 7-8
* ಗರಂ ಮಸಾಲ ಪುಡಿ ಅಥವಾ ಚಕ್ಕೆ, ಲವಂಗ, ಪಲಾವ್ ಎಲೆ
* ಕೆಂಪು ಮೆಣಸಿನ ಪುಡಿ (ನಿಮ್ಮ ಖಾರದ ಅಳತೆಗೆ ತಕ್ಕಷ್ಟು)
* ಅರಿಶಿಣ ಪುಡಿ 1/2 ಚಮಚ
* ಉಪ್ಪು
* ಕೊತ್ತಂಬರಿ ಸೊಪ್ಪು
* ಗೋಡಂಬಿ
* ಒಣದ್ರಾಕ್ಷಿ
* ಬೇಯಿಸಿದ ಮೊಟ್ಟೆ 2 ( ಬೇಕಿದ್ದರೆ)
ತಯಾರಿಸುವ ವಿಧಾನ:
1. 2 ಕಪ್ ಅಕ್ಕಿಯನ್ನು ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಬೇಕು.
2. ನಂತರ ನೀರನ್ನು ಚೆಲ್ಲಿ ಅಕ್ಕಿಯನ್ನು ಒಂದು ಪಾತ್ರೆಯಲ್ಲಿಡಿ.
3. ಫ್ರೆಶರ್ ಕುಕ್ಕರಿನಲ್ಲಿ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿಯಿರಿ.
4. ಎಲ್ಲಾ ಮಸಾಲ ಪುಡಿಯನ್ನುಸೇರಿಸಿ
5. ಹಸಿ ಮೆಣಸು ಮತ್ತು ಟೊಮೆಟೊ ಹಾಕಿ 2-3 ನಿಮಿಷ ಸೌಟಿನಿಂದ ಆಡಿಸುತ್ತಾ ಇರಬೇಕು. ಆಗ ಮಸಾಲೆ ಮತ್ತು ಟೊಮೆಟೊ ಚೆನ್ನಾಗಿ ಮಿಶ್ರ ಆಗುತ್ತದೆ.
6. ಈಗ ಆ ಮಿಶ್ರಣಕ್ಕೆ ತರಕಾರಿಗಳನ್ನು ಸೇರಿಸಿ 2-3 ನಿಮಿಷ ಹುರಿಯಬೇಕು.
7.ರುಚಿಗೆ ತಕ್ಕ ಉಪ್ಪು ಹಾಕಿ.
8. ಈಗ ಅಕ್ಕಿಯನ್ನು ಆ ಮಿಶ್ರಣಕ್ಕೆ ಹಾಕಿ 1-2 ನಿಮಿಷ ಹುರಿದು 4 ಕಪ್ ನೀರು ಹಾಕಿ ಕುಕ್ಕರಿನಲ್ಲಿ 2 ವಿಶಲ್ ಬರುವವರೆಗೆ ಬೇಯಿಸಿ.
9. ಈಗ ಕುಕ್ಕರ್ ನಿಂದ ಆವಿ ಚೆನ್ನಾಗಿ ಹೋದ ಮೇಲೆ ಕುಕ್ಕರ್ ಓಪನ್ ಮಾಡಿ ಗೋಡಂಬಿ, ಒಣದ್ರಾಕ್ಷಿಗಳನ್ನು ಸೇರಿಸಿದರೆ ಬಿರಿಯಾನಿ ರೆಡಿ.
ಇದಕ್ಕೆ ಬೇಕಾದರೆ ಬೇಯಿಸಿದ ಮೊಟ್ಟೆಗಳನ್ನು ಕತ್ತರಿಸಿ ಸೇರಿಸಬಹುದು.



Click it and Unblock the Notifications