Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಶೀತ, ಕೆಮ್ಮು ಹತ್ತಿರ ಸುಳಿಯದಿರಲು ಈ ಅಡುಗೆ!
ಮಳೆಗಾಲ ಶುರುವಾಯಿತು. ಈಗ ಶೀತ, ನೆಗಡಿ, ಜ್ವರ ಸಾಮನ್ಯ. ಜ್ವರ ಬಂದರೆ ಬಾಯಿಗೆ ಯಾವ ಅಡುಗೆಯೂ ರುಚಿಸುವುದಿಲ್ಲ. ಆಗ ಕರಿಮೆಣಸಿನ ಕಾಳು ತಯಾರಿಸಿದ ಸಾರು(ರಸಂ) ಅಥವಾ ಕರಿಮೆಣಸಿ ಕಷಾಯ ಮಾಡಿ ಸೇವಿಸಿದರೆ ಬಾಯಿಗೂ ರುಚಿಸುವುದು ಮತ್ತು ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುವುದರಿಂದ ಆರೋಗ್ಯಕ್ಕೂ ಹಿತ. ಇವತ್ತು ನಾವು ಕರಿಮೆಣಸಿನ ಸಾರು ಮತ್ತು ಕಷಾಯ ಮಾಡುವ ವಿಧಾನ ತಿಳಿಯೋಣ.

1. ಕರಿಮೆಣಸಿನ ಸಾರು ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸಿನ ಕಾಳು 2 ಚಮಚ
* ಕಾಲು ಚಮಚ ಕೊತ್ತಂಬರಿ
*ಕಾಲು ಚಮಚ ಜೀರಿಗೆ
*ಕಾಲು ಚಮಚ ಉದ್ದಿನ ಬೇಳೆ
* ತೆಂಗಿನಕಾಯಿ ತುರಿ ಒಂದು ಕಪ್
* ನಿಂಬೆ ಗಾತ್ರದ ಹುಣಸೆ ಹುಳಿ
* ಹುಳಿಯಷ್ಟು ಗಾತ್ರದ ಬೆಲ್ಲ
* ರುಚಿಗೆ ತಕ್ಕ ಉಪ್ಪು
* ಕರಿಬೇವಿನ ಎಲೆ
* ಬೆಳ್ಳುಳ್ಳಿ
* ಸಾಸಿವೆ
* ಎಣ್ಣೆ
ತಯಾರಿಸುವ ವಿಧಾನ:
1. ತೆಂಗಿನ ಕಾಯಿತುರಿಯನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಬೇಕು.
2. ಈಗ ಕರಿಮೆಣಸಿನ ಕಾಳು, ಜೀರಿಗೆ, ಉದ್ದಿನ ಬೇಳೆ ಕೊತ್ತಂಬರಿ ಹಾಕಿ ಉದ್ದಿನ ಬೇಳೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಹುರಿದ ತೆಂಗಿನ ಕಾಯಿ ಮತ್ತು ಹುರಿದ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣನೆ ರುಬ್ಬಬೇಕು. ಅರೆಯುವಾಗ ಬೆಲ್ಲವನ್ನು ತುರಿದು ಜೊತೆಯಲ್ಲಿ ಹಾಕಿ ಅರೆಯಿರಿ.
4. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಹಾಕಿ ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ನಂತರ ಉರಿಯಿಂದ ತೆಗೆಯಬೇಕು.
ಈ ರಸವನ್ನು ಬಿಸಿಯಾದ ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ. ತುಂಬಾ ಶೀತ ಇದ್ದರೆ ಹದ ಬಿಸಿ ಮಾಡಿ ಕುಡಿದರೆ ಶೀತ ಕಡಿಮೆಯಾಗುತ್ತದೆ.
ಈ ರಸ ಮಾಡಿಟ್ಟರೆ ಒಂದು ವಾರದವರೆಗೆ ಬಿಸಿ ಮಾಡಿಕೊಂಡು ತಿನ್ನಬಹುದು.
ಕರಿಮೆಣಸಿನ ಕಷಾಯ ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸು 2 ಚಮಚ
* 1/4 ಚಮಚ ಕೊತ್ತಂಬರಿ
* ಅರ್ಧ ಚಮಚ ಜೀರಿಗೆ
* ಕಾಲು ಚಮಚ ಉದ್ದಿನ ಬೇಳೆ
* ಒಂದು ಏಲಕ್ಕಿ
* ಲವಂಗ 2
* ಒಣ ಶುಂಠಿಯ ತುಂಡು ( ಅರ್ಧ ಇಂಚು)
* ಅರಿಶಿಣ 1/ 4 ಚಮಚ
* ರುಚಿಗೆ ತಕ್ಕ ಉಪ್ಪು
* ತುಳಸಿ ಎಲೆ (ಬೇಕಿದ್ದರೆ)
ಮಾಡುವ ವಿಧಾನ: ಈ ಮೇಲಿನ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿಡಬೇಕು. ಬೇಕಾದಾಗ ಒಂದು ಚಮಚ ಕಷಾಯದ ಪುಡಿ, ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು ತುಳಸಿ ಎಲೆ, 2 ಲೋಟ ನೀರು ಹಾಕಿ ಆ ನೀರು ಒಂದು ಲೋಟ ಆಗುವವರೆಗೆ ಕುದಿಸಿದರೆ ಕಷಾಯ ರೆಡಿ. ಈ ಕಷಾಯ ಶೀತ, ಕೆಮ್ಮು ಹೋಗಲಾಡಿಸಲು ಸಹಕಾರಿಯಾಗಿದೆ.



Click it and Unblock the Notifications