Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶೀತ, ಕೆಮ್ಮು ಹತ್ತಿರ ಸುಳಿಯದಿರಲು ಈ ಅಡುಗೆ!
ಮಳೆಗಾಲ ಶುರುವಾಯಿತು. ಈಗ ಶೀತ, ನೆಗಡಿ, ಜ್ವರ ಸಾಮನ್ಯ. ಜ್ವರ ಬಂದರೆ ಬಾಯಿಗೆ ಯಾವ ಅಡುಗೆಯೂ ರುಚಿಸುವುದಿಲ್ಲ. ಆಗ ಕರಿಮೆಣಸಿನ ಕಾಳು ತಯಾರಿಸಿದ ಸಾರು(ರಸಂ) ಅಥವಾ ಕರಿಮೆಣಸಿ ಕಷಾಯ ಮಾಡಿ ಸೇವಿಸಿದರೆ ಬಾಯಿಗೂ ರುಚಿಸುವುದು ಮತ್ತು ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುವುದರಿಂದ ಆರೋಗ್ಯಕ್ಕೂ ಹಿತ. ಇವತ್ತು ನಾವು ಕರಿಮೆಣಸಿನ ಸಾರು ಮತ್ತು ಕಷಾಯ ಮಾಡುವ ವಿಧಾನ ತಿಳಿಯೋಣ.

1. ಕರಿಮೆಣಸಿನ ಸಾರು ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸಿನ ಕಾಳು 2 ಚಮಚ
* ಕಾಲು ಚಮಚ ಕೊತ್ತಂಬರಿ
*ಕಾಲು ಚಮಚ ಜೀರಿಗೆ
*ಕಾಲು ಚಮಚ ಉದ್ದಿನ ಬೇಳೆ
* ತೆಂಗಿನಕಾಯಿ ತುರಿ ಒಂದು ಕಪ್
* ನಿಂಬೆ ಗಾತ್ರದ ಹುಣಸೆ ಹುಳಿ
* ಹುಳಿಯಷ್ಟು ಗಾತ್ರದ ಬೆಲ್ಲ
* ರುಚಿಗೆ ತಕ್ಕ ಉಪ್ಪು
* ಕರಿಬೇವಿನ ಎಲೆ
* ಬೆಳ್ಳುಳ್ಳಿ
* ಸಾಸಿವೆ
* ಎಣ್ಣೆ
ತಯಾರಿಸುವ ವಿಧಾನ:
1. ತೆಂಗಿನ ಕಾಯಿತುರಿಯನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಬೇಕು.
2. ಈಗ ಕರಿಮೆಣಸಿನ ಕಾಳು, ಜೀರಿಗೆ, ಉದ್ದಿನ ಬೇಳೆ ಕೊತ್ತಂಬರಿ ಹಾಕಿ ಉದ್ದಿನ ಬೇಳೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಹುರಿದ ತೆಂಗಿನ ಕಾಯಿ ಮತ್ತು ಹುರಿದ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣನೆ ರುಬ್ಬಬೇಕು. ಅರೆಯುವಾಗ ಬೆಲ್ಲವನ್ನು ತುರಿದು ಜೊತೆಯಲ್ಲಿ ಹಾಕಿ ಅರೆಯಿರಿ.
4. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಹಾಕಿ ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ನಂತರ ಉರಿಯಿಂದ ತೆಗೆಯಬೇಕು.
ಈ ರಸವನ್ನು ಬಿಸಿಯಾದ ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ. ತುಂಬಾ ಶೀತ ಇದ್ದರೆ ಹದ ಬಿಸಿ ಮಾಡಿ ಕುಡಿದರೆ ಶೀತ ಕಡಿಮೆಯಾಗುತ್ತದೆ.
ಈ ರಸ ಮಾಡಿಟ್ಟರೆ ಒಂದು ವಾರದವರೆಗೆ ಬಿಸಿ ಮಾಡಿಕೊಂಡು ತಿನ್ನಬಹುದು.
ಕರಿಮೆಣಸಿನ ಕಷಾಯ ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸು 2 ಚಮಚ
* 1/4 ಚಮಚ ಕೊತ್ತಂಬರಿ
* ಅರ್ಧ ಚಮಚ ಜೀರಿಗೆ
* ಕಾಲು ಚಮಚ ಉದ್ದಿನ ಬೇಳೆ
* ಒಂದು ಏಲಕ್ಕಿ
* ಲವಂಗ 2
* ಒಣ ಶುಂಠಿಯ ತುಂಡು ( ಅರ್ಧ ಇಂಚು)
* ಅರಿಶಿಣ 1/ 4 ಚಮಚ
* ರುಚಿಗೆ ತಕ್ಕ ಉಪ್ಪು
* ತುಳಸಿ ಎಲೆ (ಬೇಕಿದ್ದರೆ)
ಮಾಡುವ ವಿಧಾನ: ಈ ಮೇಲಿನ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿಡಬೇಕು. ಬೇಕಾದಾಗ ಒಂದು ಚಮಚ ಕಷಾಯದ ಪುಡಿ, ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು ತುಳಸಿ ಎಲೆ, 2 ಲೋಟ ನೀರು ಹಾಕಿ ಆ ನೀರು ಒಂದು ಲೋಟ ಆಗುವವರೆಗೆ ಕುದಿಸಿದರೆ ಕಷಾಯ ರೆಡಿ. ಈ ಕಷಾಯ ಶೀತ, ಕೆಮ್ಮು ಹೋಗಲಾಡಿಸಲು ಸಹಕಾರಿಯಾಗಿದೆ.



Click it and Unblock the Notifications
