Latest Updates
-
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಮಳೆ ರಜೆ ದಿನ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ!
ಶೀತ, ಕೆಮ್ಮು ಹತ್ತಿರ ಸುಳಿಯದಿರಲು ಈ ಅಡುಗೆ!
ಮಳೆಗಾಲ ಶುರುವಾಯಿತು. ಈಗ ಶೀತ, ನೆಗಡಿ, ಜ್ವರ ಸಾಮನ್ಯ. ಜ್ವರ ಬಂದರೆ ಬಾಯಿಗೆ ಯಾವ ಅಡುಗೆಯೂ ರುಚಿಸುವುದಿಲ್ಲ. ಆಗ ಕರಿಮೆಣಸಿನ ಕಾಳು ತಯಾರಿಸಿದ ಸಾರು(ರಸಂ) ಅಥವಾ ಕರಿಮೆಣಸಿ ಕಷಾಯ ಮಾಡಿ ಸೇವಿಸಿದರೆ ಬಾಯಿಗೂ ರುಚಿಸುವುದು ಮತ್ತು ಇದು ಜ್ವರ, ಶೀತ, ನೆಗಡಿ ಕಡಿಮೆ ಮಾಡುವುದರಿಂದ ಆರೋಗ್ಯಕ್ಕೂ ಹಿತ. ಇವತ್ತು ನಾವು ಕರಿಮೆಣಸಿನ ಸಾರು ಮತ್ತು ಕಷಾಯ ಮಾಡುವ ವಿಧಾನ ತಿಳಿಯೋಣ.

1. ಕರಿಮೆಣಸಿನ ಸಾರು ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸಿನ ಕಾಳು 2 ಚಮಚ
* ಕಾಲು ಚಮಚ ಕೊತ್ತಂಬರಿ
*ಕಾಲು ಚಮಚ ಜೀರಿಗೆ
*ಕಾಲು ಚಮಚ ಉದ್ದಿನ ಬೇಳೆ
* ತೆಂಗಿನಕಾಯಿ ತುರಿ ಒಂದು ಕಪ್
* ನಿಂಬೆ ಗಾತ್ರದ ಹುಣಸೆ ಹುಳಿ
* ಹುಳಿಯಷ್ಟು ಗಾತ್ರದ ಬೆಲ್ಲ
* ರುಚಿಗೆ ತಕ್ಕ ಉಪ್ಪು
* ಕರಿಬೇವಿನ ಎಲೆ
* ಬೆಳ್ಳುಳ್ಳಿ
* ಸಾಸಿವೆ
* ಎಣ್ಣೆ
ತಯಾರಿಸುವ ವಿಧಾನ:
1. ತೆಂಗಿನ ಕಾಯಿತುರಿಯನ್ನು ಕಂದು ಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಬೇಕು.
2. ಈಗ ಕರಿಮೆಣಸಿನ ಕಾಳು, ಜೀರಿಗೆ, ಉದ್ದಿನ ಬೇಳೆ ಕೊತ್ತಂಬರಿ ಹಾಕಿ ಉದ್ದಿನ ಬೇಳೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
3. ಹುರಿದ ತೆಂಗಿನ ಕಾಯಿ ಮತ್ತು ಹುರಿದ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣನೆ ರುಬ್ಬಬೇಕು. ಅರೆಯುವಾಗ ಬೆಲ್ಲವನ್ನು ತುರಿದು ಜೊತೆಯಲ್ಲಿ ಹಾಕಿ ಅರೆಯಿರಿ.
4. ಈಗ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟಾ ಶಬ್ದ ಬರುವಾಗ ಜಜ್ಜಿದ ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆ ಹಾಕಿ ಬೆಳ್ಳುಳ್ಳಿ ಕಂದು ಬಣ್ಣಕ್ಕೆ ಬರುವಾಗ ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಬೇಕು. ನಂತರ ಉರಿಯಿಂದ ತೆಗೆಯಬೇಕು.
ಈ ರಸವನ್ನು ಬಿಸಿಯಾದ ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ. ತುಂಬಾ ಶೀತ ಇದ್ದರೆ ಹದ ಬಿಸಿ ಮಾಡಿ ಕುಡಿದರೆ ಶೀತ ಕಡಿಮೆಯಾಗುತ್ತದೆ.
ಈ ರಸ ಮಾಡಿಟ್ಟರೆ ಒಂದು ವಾರದವರೆಗೆ ಬಿಸಿ ಮಾಡಿಕೊಂಡು ತಿನ್ನಬಹುದು.
ಕರಿಮೆಣಸಿನ ಕಷಾಯ ಮಾಡುವ ವಿಧಾನ:
ಬೇಕಾಗುವ ಸಾಮಾಗ್ರಿಗಳು:
* ಕರಿಮೆಣಸು 2 ಚಮಚ
* 1/4 ಚಮಚ ಕೊತ್ತಂಬರಿ
* ಅರ್ಧ ಚಮಚ ಜೀರಿಗೆ
* ಕಾಲು ಚಮಚ ಉದ್ದಿನ ಬೇಳೆ
* ಒಂದು ಏಲಕ್ಕಿ
* ಲವಂಗ 2
* ಒಣ ಶುಂಠಿಯ ತುಂಡು ( ಅರ್ಧ ಇಂಚು)
* ಅರಿಶಿಣ 1/ 4 ಚಮಚ
* ರುಚಿಗೆ ತಕ್ಕ ಉಪ್ಪು
* ತುಳಸಿ ಎಲೆ (ಬೇಕಿದ್ದರೆ)
ಮಾಡುವ ವಿಧಾನ: ಈ ಮೇಲಿನ ಸಾಮಾಗ್ರಿಗಳನ್ನು ಹುರಿದು ಪುಡಿ ಮಾಡಿಡಬೇಕು. ಬೇಕಾದಾಗ ಒಂದು ಚಮಚ ಕಷಾಯದ ಪುಡಿ, ಸ್ವಲ್ಪ ಬೆಲ್ಲದ ಚೂರು, ಸ್ವಲ್ಪ ಉಪ್ಪು ತುಳಸಿ ಎಲೆ, 2 ಲೋಟ ನೀರು ಹಾಕಿ ಆ ನೀರು ಒಂದು ಲೋಟ ಆಗುವವರೆಗೆ ಕುದಿಸಿದರೆ ಕಷಾಯ ರೆಡಿ. ಈ ಕಷಾಯ ಶೀತ, ಕೆಮ್ಮು ಹೋಗಲಾಡಿಸಲು ಸಹಕಾರಿಯಾಗಿದೆ.



Click it and Unblock the Notifications