Latest Updates
-
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ!
ಕಾರ್ತೀಕ ಕೃಷ್ಣ ದ್ವಾದಶಿಗೆ ಸ್ಪೆಷಲ್ ಸಾರು

ನಾಳೆ ದ್ವಾದಶಿಗೆ ಹೊಸ ಟೈಪ್ ಬೇಳೆ ಸಾರು. ಆದರೆ ಅದೇ, ಮಾಡಿದ್ದೇ ಮಾಡೋ ಸಾರಲ್ಲ. ಬೇಳೆ ಬೇಯಿಸಿ ಉಪ್ಪು ಖಾರ ಹುಳಿ ಹಾಕಿ ಸ್ಟೌವ್ ನಿಂದ ಪಾತ್ರೆ ಕೆಳಗಿಳಿಸಿ ಕೈತೊಳೆದುಕೊಂಡು ಜೀ ಕನ್ನಡ ಆನ್ ಮಾಡಿ ಬದುಕು ಜಟಕಾ ಬಂಡಿ ಸೀರಿಯಲ್ಲಿಗೆ ಕಣ್ಣು ಕೀಲಿಸಿ ಕೂಡುವವರಿಗೆ ಇವತ್ತಿನ ಸಾರು ರೆಸಿಪಿ ಹೇಳಿಮಾಡಿಸಿದ ಕಿವಿಮಾತಲ್ಲ. ಈ ಸ್ಪೆಷಲ್ ಸಾರು ನಿಮಗೆ ಮಾತ್ರ. ಭಾನುವಾರದ ರಜೆಗಾಗಿ ಕಾಯುತ್ತಿರುವ ಶಬರಿಯರಿಗೆ ಮಾತ್ರ.
ಬೇಕಾಗುವ ಪದಾರ್ಥಗಳ ಪಟ್ಟಿಯಲ್ಲಿ ಯಥಾಪ್ರಕಾರ ತೊಗರಿ ಬೇಳೆ, ಹುಣಿಸೆ ಹಣ್ಣು, ಸಾರಿನ ಪುಡಿ, ಉಪ್ಪು, ಟೊಮೆಟೋ, ತುಪ್ಪ, ತೆಂಗಿನತುರಿ, ಜೀರಿಗೆ ಇರಲಿ. ಸಾರು ಪಾತ್ರೆ ತುಂಬಾ ಮಾಡಬೇಕಾ? ಅಥವಾ ಸ್ವಲ್ಪನೇ ಸಾಕಾ? ಎಂಬ ಪ್ರಶ್ನೆಯೇ ಇಲ್ಲ. ನಿಮ್ಮ ಮನೆಯಲ್ಲಿ ಊಟಕ್ಕೆ ಹಾಜರಾಗುವ ಅನ್ನ ಸಾರು ಭಕ್ತರ ಲೆಕ್ಕದ ಮೇಲೆ ಪ್ರಮಾಣ ಅವಲಂಬಿತ.
ಹಂತ 1) ಕುಕ್ಕರಿನಲ್ಲಿ ಬೇಳೆ ಬೇಯಲಿ. ಬೆಂದು ಕರಗಿರಲಿ; ಹಂತ 2) ಒಗ್ಗರಣೆ ಸೌಟಿನಲ್ಲಿ ತುಪ್ಪ, ಜೀರಿಗೆ, ಟೊಮೆಟೋ ಸ್ವಲ್ಪ ಕಾಯಿತುರಿ ಹಾಕಿ ಬಾಡಿಸಿ ನಂತರ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಈಕಡೆ ಇಡಿ; ಹಂತ 3) ನಿತ್ಯ ಸಾರು ಮಾಡುವ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಒಲೆ ಮೇಲಿಟ್ಟು ಅದು ಕುದಿಬಂದ ಮೇಲೆ ಹೆಚ್ಚಿದ ಕೊತ್ತಂಬರಿ, ಹೆಚ್ಚಿದ ಕರಿಬೇವು, ಸಾರಿನಪುಡಿ, ಉಪ್ಪು ಹಾಕಿ ಕುದಿಯುವುದಕ್ಕೆ ಬಿಡಿ; ಹಂತ 4) ಇದು ಚೆನ್ನಾಗಿ ಕುದ್ದು ಸಾರಿನ ಪುಡಿಯ ಹಸಿ ವಾಸನೆ ಆವಿಯಾದನಂತರ ಹುಣಿಸೆಹಣ್ಣಿನ ರಸ, ಚೂರು ಬೆಲ್ಲ ಹಾಕಿ ಮತ್ತೆ ಕುದಿಯಲು ಬಿಡಿ;
ಹಂತ 5) ರುಬ್ಬಿಕೊಂಡ ಟೊಮೆಟೋ ಚಟ್ನಿಯನ್ನು ಕುದಿಯುತ್ತಿರುವ ಈ ನೀರಿಗೆ ಬೆರಸಿ ಮತ್ತೆ ಕುದಿಯಲು ಬಿಡಿ. ಒಂದೊಂದೂ ಹಂತದಲ್ಲೂ ಚೆನ್ನಾಗಿ ಕುದಿಯುತ್ತಲೇ ಇರಬೇಕು.ಈ ಮೆಥೆಡ್ಡೇ ಈ ಸಾರಿನ ಬಂಡವಾಳ. ಇದೇ ವೇಳೆ, ದಟ್ಸ್ ಕನ್ನಡ ಅಡುಗೆ ರೆಸಿಪಿಗೆ ಗ್ಯಾಸ್ ಜಾಸ್ತಿ ಖರ್ಚಾಗತ್ತೆ ಎಂದು ಗೊಣಗಬಾರದು, ಪ್ಲೀಜ್.
ಕುದಿಯುತ್ತಿರುವ ಸಾರುನೀರಿಗೆ ಈಗ ಬೆಂದ ಬೇಳೆ ಕಟ್ಟನ್ನು ಸುರಿದು ಮತ್ತೆ ಕುದಿಯಲು ಬಿಡಿ. ಕೊತಕೊತ ಕುದ್ದನಂತರ ಎರಡು ಚಮಚ ತುಪ್ಪಕ್ಕೆ, ಚಮಚೆ ಜೀರಿಗೆ, ಚಿಟಿಕೆ ಇಂಗಿನ ಒಗ್ಗರಣೆ ಕೊಟ್ಟು ಸಾರಿನ ಪಾತ್ರೆಯಲ್ಲಿ ಮುಳುಗಿಸಿ. ಚುಂಯ್ ಅಂದರೆ ಸಾರು ರೆಡಿ. ಊಟಕ್ಕೆ ಇನ್ನೂ ಟೈಂ ಇದೆ ಎನ್ನುವವರು ಪುನಃ ಹೆಚ್ಚಿದ ಕೊತ್ತಂಬರಿ, ತೊಳೆದ ಹಸಿ ಕರಿಬೇವಿನ ಎಲೆಗಳನ್ನು ಸಾರಿನ ಮೇಲೆ ತೇಲಿಬಿಡಬಹುದು. ಕೊತ್ತಂಬರಿ ಅಲಂಕಾರಕ್ಕೆ, ಹಸಿ ಕರಿಬೇವು ಪರಿಮಳಕ್ಕೆ.
(ದಟ್ಸ್ ಕನ್ನಡ ಅಡುಗೆಶಾಲೆ)



Click it and Unblock the Notifications