Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ನಮ್ಮ ಈರುಳ್ಳಿ ಸಾಂಬಾರ್ ಕದ್ದವರಾರು?
ತರಕಾರಿ ಬೆಲೆ ನಿರ್ಧಾರ ಹೇಗೆ ಆಗುತ್ತದೆ, ಅದನ್ನು ನಿರ್ಧಾರ ಮಾಡುವವರು ಯಾರು ಎಂಬ ಪ್ರಶ್ನೆ ನಮ್ಮ ಮನೆಯವರನ್ನೆಲ್ಲ ಕಾಡಿತು. ನಮ್ಮ ಮನೆ ಹತ್ತಿರ ಇರುವ ರಿಲಯನ್ಸ್ ಮಳಿಗೆಯಲ್ಲಿ ತಾಜಾ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ ಅದೇ ತರಕಾರಿಗಳು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಹೆಚ್ಚಾಗಿರುತ್ತವೆ. ಹೀಗೆ ಏಕೆ? ಖಾಸಗಿಯವರು ಕಡಿಮೆ ಬೆಲೆಗೆ, ಸರಕಾರದವರು ದುಬಾರಿ ಬೆಲೆಗೆ ಎನ್ನುವುದು ಯಾವ ನ್ಯಾಯ?
ರಿಲಯನ್ಸ್ ಫ್ರೆಶ್ ಅಂಗಡಿಯಲ್ಲಿ ತರಕಾರಿ ಬೆಲೆಗಳು ಯಾವತ್ತೂ ಕಡಿಮೆ ಇರುತ್ತವೆ. ಈರುಳ್ಳಿ ಬೇರೇ ಕಡೆ 16 ರೂಪಾಯಿ ಇದ್ದರೆ ರಿಲಯನ್ಸ್ ನಲ್ಲಿ 10 ಅಥವಾ 11 ರೂಪಾಯಿಗೆ ಮಾರುತ್ತಾರೆ. ಇತರ ತರಕಾರಿ ಬೆಲೆಗಳು ಕಡಿಮೆನೇ. ತರಕಾರಿಗಳು ಅಂಗಡಿಗೆ ಬರುವ ಮೂಲಗಳು ಒಂದೇ ಇರುವಾಗ ಬೆಲೆ ವ್ಯತ್ಯಾಸ ಏಕೆ ಆಗುತ್ತದೆ ಎನ್ನುವುದು ನಮ್ಮ ಪ್ರಶ್ನೆ. ಕೆಆರ್ ಮಾರುಕಟ್ಟೆ ಮತ್ತಿತರ ಕಾಂಪ್ಲೆಕ್ಸುಗಳಲ್ಲಿ ಮಾರಾಟವಾಗುವ ಬೆಲೆಗಳೂ ದುಬಾರಿಯೇ.
ಬೆಳೆಗಾರನಿಗೂ ಲಾಭವಿಲ್ಲ, ತಿನ್ನುವವರಿಗೂ ಲಾಭವಿಲ್ಲದ ತರಕಾರಿ ಬೆಲೆ ನಿರ್ಧಾರದ ಬಗ್ಗೆ ಏಕ ರೂಪತೆ ಬರಬೇಕು. ಮಧ್ಯವರ್ತಿಗಳ ಹಾವಳಿಯಲ್ಲಿ ಇಬ್ಬರಿಗೂ ಅನ್ಯಾಯವಾಗುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ನಮಗೆ ಉತ್ತರಿಸಬೇಕು.
* ಲಲಿತಾ ಮುನಿರಾಜು ಮತ್ತು ಕೆಂಪಮ್ಮ ಆಡುಗೋಡಿ



Click it and Unblock the Notifications
