Latest Updates
-
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು?
ನಮ್ಮ ಈರುಳ್ಳಿ ಸಾಂಬಾರ್ ಕದ್ದವರಾರು?
ತರಕಾರಿ ಬೆಲೆ ನಿರ್ಧಾರ ಹೇಗೆ ಆಗುತ್ತದೆ, ಅದನ್ನು ನಿರ್ಧಾರ ಮಾಡುವವರು ಯಾರು ಎಂಬ ಪ್ರಶ್ನೆ ನಮ್ಮ ಮನೆಯವರನ್ನೆಲ್ಲ ಕಾಡಿತು. ನಮ್ಮ ಮನೆ ಹತ್ತಿರ ಇರುವ ರಿಲಯನ್ಸ್ ಮಳಿಗೆಯಲ್ಲಿ ತಾಜಾ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ ಅದೇ ತರಕಾರಿಗಳು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಹೆಚ್ಚಾಗಿರುತ್ತವೆ. ಹೀಗೆ ಏಕೆ? ಖಾಸಗಿಯವರು ಕಡಿಮೆ ಬೆಲೆಗೆ, ಸರಕಾರದವರು ದುಬಾರಿ ಬೆಲೆಗೆ ಎನ್ನುವುದು ಯಾವ ನ್ಯಾಯ?
ರಿಲಯನ್ಸ್ ಫ್ರೆಶ್ ಅಂಗಡಿಯಲ್ಲಿ ತರಕಾರಿ ಬೆಲೆಗಳು ಯಾವತ್ತೂ ಕಡಿಮೆ ಇರುತ್ತವೆ. ಈರುಳ್ಳಿ ಬೇರೇ ಕಡೆ 16 ರೂಪಾಯಿ ಇದ್ದರೆ ರಿಲಯನ್ಸ್ ನಲ್ಲಿ 10 ಅಥವಾ 11 ರೂಪಾಯಿಗೆ ಮಾರುತ್ತಾರೆ. ಇತರ ತರಕಾರಿ ಬೆಲೆಗಳು ಕಡಿಮೆನೇ. ತರಕಾರಿಗಳು ಅಂಗಡಿಗೆ ಬರುವ ಮೂಲಗಳು ಒಂದೇ ಇರುವಾಗ ಬೆಲೆ ವ್ಯತ್ಯಾಸ ಏಕೆ ಆಗುತ್ತದೆ ಎನ್ನುವುದು ನಮ್ಮ ಪ್ರಶ್ನೆ. ಕೆಆರ್ ಮಾರುಕಟ್ಟೆ ಮತ್ತಿತರ ಕಾಂಪ್ಲೆಕ್ಸುಗಳಲ್ಲಿ ಮಾರಾಟವಾಗುವ ಬೆಲೆಗಳೂ ದುಬಾರಿಯೇ.
ಬೆಳೆಗಾರನಿಗೂ ಲಾಭವಿಲ್ಲ, ತಿನ್ನುವವರಿಗೂ ಲಾಭವಿಲ್ಲದ ತರಕಾರಿ ಬೆಲೆ ನಿರ್ಧಾರದ ಬಗ್ಗೆ ಏಕ ರೂಪತೆ ಬರಬೇಕು. ಮಧ್ಯವರ್ತಿಗಳ ಹಾವಳಿಯಲ್ಲಿ ಇಬ್ಬರಿಗೂ ಅನ್ಯಾಯವಾಗುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ನಮಗೆ ಉತ್ತರಿಸಬೇಕು.
* ಲಲಿತಾ ಮುನಿರಾಜು ಮತ್ತು ಕೆಂಪಮ್ಮ ಆಡುಗೋಡಿ



Click it and Unblock the Notifications
