Just In
- 33 min ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 1 hr ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
- 3 hrs ago UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- 3 hrs ago ಹುಟ್ಟುಹಬ್ಬದ ಕೇಕ್ ತಿಂದು ಬಾಲಕಿ ಸಾವು..! ಕೇಕ್ನಲ್ಲಿತ್ತು ಕೃತಕ ಸಿಹಿ ಸಾಕ್ರರಿನ್..!
Don't Miss
- Movies Bhagyalakshmi: ಕೆಲಸ ಹುಡುಕುವುದೇ ಭಾಗ್ಯಾಗೆ ಸವಾಲು; ಶ್ರೇಷ್ಠಾಳಿಂದ ತಾಂಡವ್ಗಿಲ್ಲ ಉಳಿಗಾಲ
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 28, 29ಕ್ಕೆ ಪ್ರಧಾನಿ ಮೋದಿ ಆಗಮನ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಮ್ಮ ಈರುಳ್ಳಿ ಸಾಂಬಾರ್ ಕದ್ದವರಾರು?
ತರಕಾರಿ ಬೆಲೆ ನಿರ್ಧಾರ ಹೇಗೆ ಆಗುತ್ತದೆ, ಅದನ್ನು ನಿರ್ಧಾರ ಮಾಡುವವರು ಯಾರು ಎಂಬ ಪ್ರಶ್ನೆ ನಮ್ಮ ಮನೆಯವರನ್ನೆಲ್ಲ ಕಾಡಿತು. ನಮ್ಮ ಮನೆ ಹತ್ತಿರ ಇರುವ ರಿಲಯನ್ಸ್ ಮಳಿಗೆಯಲ್ಲಿ ತಾಜಾ ತರಕಾರಿಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆದರೆ ಅದೇ ತರಕಾರಿಗಳು ಹಾಪ್ ಕಾಮ್ಸ್ ಮಳಿಗೆಗಳಲ್ಲಿ ಹೆಚ್ಚಾಗಿರುತ್ತವೆ. ಹೀಗೆ ಏಕೆ? ಖಾಸಗಿಯವರು ಕಡಿಮೆ ಬೆಲೆಗೆ, ಸರಕಾರದವರು ದುಬಾರಿ ಬೆಲೆಗೆ ಎನ್ನುವುದು ಯಾವ ನ್ಯಾಯ?
ರಿಲಯನ್ಸ್ ಫ್ರೆಶ್ ಅಂಗಡಿಯಲ್ಲಿ ತರಕಾರಿ ಬೆಲೆಗಳು ಯಾವತ್ತೂ ಕಡಿಮೆ ಇರುತ್ತವೆ. ಈರುಳ್ಳಿ ಬೇರೇ ಕಡೆ 16 ರೂಪಾಯಿ ಇದ್ದರೆ ರಿಲಯನ್ಸ್ ನಲ್ಲಿ 10 ಅಥವಾ 11 ರೂಪಾಯಿಗೆ ಮಾರುತ್ತಾರೆ. ಇತರ ತರಕಾರಿ ಬೆಲೆಗಳು ಕಡಿಮೆನೇ. ತರಕಾರಿಗಳು ಅಂಗಡಿಗೆ ಬರುವ ಮೂಲಗಳು ಒಂದೇ ಇರುವಾಗ ಬೆಲೆ ವ್ಯತ್ಯಾಸ ಏಕೆ ಆಗುತ್ತದೆ ಎನ್ನುವುದು ನಮ್ಮ ಪ್ರಶ್ನೆ. ಕೆಆರ್ ಮಾರುಕಟ್ಟೆ ಮತ್ತಿತರ ಕಾಂಪ್ಲೆಕ್ಸುಗಳಲ್ಲಿ ಮಾರಾಟವಾಗುವ ಬೆಲೆಗಳೂ ದುಬಾರಿಯೇ.
ಬೆಳೆಗಾರನಿಗೂ ಲಾಭವಿಲ್ಲ, ತಿನ್ನುವವರಿಗೂ ಲಾಭವಿಲ್ಲದ ತರಕಾರಿ ಬೆಲೆ ನಿರ್ಧಾರದ ಬಗ್ಗೆ ಏಕ ರೂಪತೆ ಬರಬೇಕು. ಮಧ್ಯವರ್ತಿಗಳ ಹಾವಳಿಯಲ್ಲಿ ಇಬ್ಬರಿಗೂ ಅನ್ಯಾಯವಾಗುತ್ತಿದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ನಮಗೆ ಉತ್ತರಿಸಬೇಕು.
* ಲಲಿತಾ ಮುನಿರಾಜು ಮತ್ತು ಕೆಂಪಮ್ಮ ಆಡುಗೋಡಿ