Latest Updates
-
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್ -
ಜಂಕ್ ಫುಡ್ ತಿನ್ನುವ ಮುನ್ನ ಎಚ್ಚರ! ಪ್ಯಾಕೆಟ್ ಮೇಲೆ ಬರಲಿದೆ ಸುಪ್ರೀಂ ಕೋರ್ಟ್ ಸೂಚಿಸಿದ ವಾರ್ನಿಂಗ್ ಲೇಬಲ್ -
ರೈಲ್ವೆ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಪತ್ತೆ: ಪ್ರಯಾಣಿಕರೇ, ಈ ತಪ್ಪುಗಳನ್ನು ಮಾಡಬೇಡಿ! -
ನಾಗರ ಪಂಚಮಿ ಸಂಭ್ರಮ: ಹಬ್ಬದ ಲುಕ್ ಹೆಚ್ಚಿಸಲು ಈ ಫ್ಯಾಷನ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಬೆಂಗಳೂರಿನಲ್ಲಿ ಓಣಂ ಸಂಭ್ರಮ: ಓಣಸದ್ಯ ಮತ್ತು ಪೂಕಳಂ ಕಿಟ್ಗಳಿಗೆ ಭಾರಿ ಬೇಡಿಕೆ, ಈಗಲೇ ಬುಕ್ ಮಾಡಿ! -
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ!
ರೆಸಿಪಿ: ಟೀ ಜೊತೆ ಸವಿಯಲು ಬಿಸಿ ಬಿಸಿ ಈರುಳ್ಳಿ ಬಜ್ಜಿ
ಸಂಜೆ ಟೀ ಜೊತೆ ಸವಿಯಲು ಈರುಳ್ಳಿ ಬಜ್ಜಿ ತಿನ್ನಿಬೇಕೆಂದು ಅನಿಸುತ್ತಿದೆಯೇ? ಈ ಕೊರೊನಾ ಹೆಚ್ಚಾಗುತ್ತಿರುವುದರಿಂದ ಹೊರಗಡೆ ಅಡ್ಡಾಡುವುದು, ಹೊರಗಿನಿಂದ ಕೊಂಡು ತರುವುದು ಅಷ್ಟು ಸೂಕ್ತವಲ್ಲ, ಹಾಗಾಗಿ ಮನೆಯಲ್ಲಿಯೇ ಮಾಡಿ ಸವಿಯಿರಿ.

ಈರುಳ್ಳಿ ಬಜ್ಜಿ ಮನೆಯಲ್ಲಿಯೇ ಮಾಡುವುದರ ಮತ್ತೊಂದು ಪ್ರಯೋಜನವೆಂದರೆ ಬಳಸುವ ಎಣ್ಣೆ ಶುದ್ಧವಾಗಿರುತ್ತದೆ, ಆದ್ದರಿಂದ ಹೊಟ್ಟೆಗೆ ಹಾನಿಯುಂಟಾಗುವುದಿಲ್ಲ. ಈ ಈರುಳ್ಳಿ ಬಜ್ಜಿ ಮಾಡುವುದು ಕಷ್ಟದ ಕೆಲಸವೇನಲ್ಲ, ಸುಲಭವಾಗಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 5
-
ಬೇಕಾಗುವ ಸಾಮಗ್ರಿ
ಈರುಳ್ಳಿ 3-4
ಹಸಿ ಮೆಣಸು 3
ಸ್ವಲ್ಪ ಕರಿಬೇವು ಉಪ್ಪು
ಅರ್ಧ ಚಮಚ ಅರಿಶಿಣ ಪುಡಿ
ಗರಂ ಮಸಾಲ 1/4 ಚಮಚ
ಜೀರಿಗೆ ಪುಡಿ 1/4 ಚಮಚ
ಕಡಲೆ ಹಿಟ್ಟು 1 ಕಪ್
ಎಣ್ಣೆ 1 ಕಪ್
-
ಮಾಡುವ ವಿಧಾನ:
* ಈರುಳ್ಳಿಯನ್ನು ಉದ್ದುದ್ದವಾಗಿ ತೆಳುವಾಗಿ ಕತ್ತರಿಸಿ ಒಂದು ಒಂದು ದೊಡ್ಡ ಬೌಲ್ಗೆ ಹಾಕಿ.
* ಅದರಲ್ಲಿ ಉಳಿದೆಲ್ಲಾ ಸಾಮಗ್ರಿ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ.
* ತುಂಬಾ ನೀರು ಹಾಕಬೇಡಿ, ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ, ಆದರೆ ಕೈಯಿಂದ ಸುರಿಯುವಂತೆ ಇರಬೇಕು.
* ಇದೇ ಸಮಯಕ್ಕೆ ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ.
* ಎಣ್ಣೆ ಕುದಿ ಬರಲು ಪ್ರಾರಂಭಿಸಿದಾಗ ಸ್ವಲ್ಪ-ಸ್ವಲ್ಪ ಮಿಶ್ರಣ ಕೈಯಿಂದ ತೆಗೆದು ಎಣ್ಣೆಗೆ ಹಾಕಿ ಮಿಶ್ರಣ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.
* ಇಷ್ಟು ಮಾಡಿದರೆ ಟೀ ಜೊತೆ ಸವಿಯಲು ಈರುಳ್ಳಿ ಬಜ್ಜಿ ರೆಡಿ.
- ತುಂಬಾ ಗರಿ ಗರಿ ಬೇಕೆಂದರೆ ಜಾಸ್ತಿ ಹೊತ್ತು ಎಣ್ಣೆಯಲ್ಲಿ ಕರಿಯಿರಿ, ಹೀಗೆ ಕರಿದರೆ 1-2 ದಿನ ಇಡಬಹುದು, ಇಲ್ಲಾ ಅಂದರೆ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ, ಆದರೆ ಈರುಳ್ಳಿ ಹಾಗೂ ಹಿಟ್ಟು ಬೆಂದಿರಬೇಕು, ಬೇಗ ತೆಗೆಯಬೇಡಿ.
- ಸರ್ವ್ - 1 ಪ್ಲೇಟ್



Click it and Unblock the Notifications