Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಕೆಂಪಿರುವೆ ಚಟ್ನಿಗೆ ಸಿಕ್ಕಿತು ವಿಶೇಷ ಸ್ಥಾನಮಾನ..ಇಲ್ಲಿದೆ ಅಚ್ಚರಿಯ ಅಂಶಗಳು..!
ಭಾರತದಲ್ಲಿ ಪ್ರತಿಯೊಂದು ಮೂಲೆಯಲ್ಲೂ ವಿಶಿಷ್ಟವಾದ ಆಹಾರ ಪದ್ಧತಿ ಇದೆ. ನೀವು ಒಂದೊಂದು ಕಡೆ ಹೋದಾಗಲು ಅಲ್ಲಿನ ಆಹಾರ ಪದ್ಧತಿ ನಿಮ್ಮನ್ನು ಅಚ್ಚರಿಗೊಳಿಸುತ್ತೆ. ಕೆಲವು ಕಡೆ ಮಾಂಸಾಹಾರ ಫೇಮಸ್ ಆಗಿದ್ದರೆ ಇನ್ನೂ ಕೆಲವು ಕಡೆ ಸಸ್ಯಹಾರವೇ ಇಷ್ಟವಾಗಲಿದೆ. ಹೀಗೆ ಪ್ರತಿಯೊಂದು ಊರಿನೊಳಗು ಒಂದೊಂದು ಆಹಾರ ಪ್ರಕಾರಗಳ ನಾವು ನೋಡುವುದು ಭಾರತದಲ್ಲಿ ಮಾತ್ರ ಎಂದರೂ ತಪ್ಪಗಲಾರದು.
ಭಾರತವು ವಿವಿಧತೆಯಲ್ಲಿ ಏಕತೆಯ ದೇಶವಾಗಿದ್ದು, ಇಲ್ಲಿ ಜೀವನಶೈಲಿ, ಆಡುಭಾಷೆ ಮತ್ತು ಉಡುಗೆ ಮಾತ್ರವಲ್ಲದೆ ಆಹಾರವೂ ವಿಭಿನ್ನವಾಗಿದೆ. ಇಲ್ಲಿನ ಪ್ರತಿಯೊಂದು ರಾಜ್ಯ ಮತ್ತು ನಗರವು ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಇಲ್ಲಿ ಸಿಗುವ ಖಾದ್ಯಗಳು ಪ್ರಪಂಚದಾದ್ಯಂತ ಇಷ್ಟವಾಗಲು ಇದು ಕಾರಣವಾಗಿದೆ. ಏತನ್ಮಧ್ಯೆ, ಭಾರತದ ಮತ್ತೊಂದು ಖಾದ್ಯವು ಪ್ರಸ್ತುತ ಚರ್ಚೆಯಲ್ಲಿದೆ.
ಇನ್ನು ಆಹಾರಗಳ ಸಾಲಿನಲ್ಲಿ ಕೆಲವ ವಿಚಿತ್ರ ಮತ್ತು ವಿಭಿನ್ನ ಆಹಾರ ಪದ್ಧತಿಗಳು ಸಹ ನಮ್ಮ ನಡುವೆ ಇದೆ. ಅದರಲ್ಲಿ ಕೆಂಪು ಇರುವೆಯ ಚಟ್ನಿ ಸಹ ಸೇರಿಕೊಂಡಿದೆ. ಹೌದು ಕೆಂಪು ಇರುವೆ ಆಹಾರವಾಗಿ ಭಾರತದಲ್ಲಿ ಬಳಕೆಯಲ್ಲಿದೆ. ಅದರಲ್ಲೂ ಪುರಾತನ ಕಾಲದಲ್ಲು ಇದರ ಉಲ್ಲೇಖವಿದ್ದೂ ಈಗಲೂ ಕೆಂಪಿರುವೆ ಚಟ್ನಿ ಬಳಕೆಯಲ್ಲಿದೆ.

ಒಡಿಶಾ ರಾಜ್ಯದಲ್ಲಿರುವ ಮಯೂರ್ಭಂಜ್ ಜಿಲ್ಲೆಯ ಪ್ರಸಿದ್ಧ ಕೆಂಪು ಇರುವೆ ಚಟ್ನಿ ಜಿಐ (Geographical Indication) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಜಿಲ್ಲೆಯ ನೂರಾರು ಬುಡಕಟ್ಟು ಕುಟುಂಬಗಳು ಈ ಇರುವೆಗಳ ಚಟ್ನಿಗಾಗಿ ಈ ಅವುಗಳ ಹಿಡಿದು ಸಂಗ್ರಹಿಸಿ ಮಾರಾಟ ಮಾಡುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಒಡಿಶಾವನ್ನು ಹೊರತುಪಡಿಸಿ, ಜಾರ್ಖಂಡ್ ಮತ್ತು ಛತ್ತೀಸ್ಗಢದಂತಹ ಇತರ ಪೂರ್ವ ರಾಜ್ಯಗಳಲ್ಲಿ ಜನರು ಈ ಚಟ್ನಿಯನ್ನು ಬಹಳ ಉತ್ಸಾಹದಿಂದ ಸೇವಿಸುತ್ತಾರೆ. ಇದನ್ನು ಮಾಡಲು, ಇರುವೆಗಳು ಮತ್ತು ಅವುಗಳ ಮೊಟ್ಟೆಗಳನ್ನು ಸಂಗ್ರಹಿಸಲಾಗುತ್ತದೆ. ಇದರ ನಂತರ, ಅದರ ಚಟ್ನಿ ಮಾಡಲು, ಅವುಗಳನ್ನು ಮೊದಲು ಸ್ವಚ್ಛಗೊಳಿಸಲಾಗುತ್ತದೆ ಮತ್ತು ನಂತರ ಪುಡಿಮಾಡಿ ಒಣಗಿಸಲಾಗುತ್ತದೆ.
ಚಟ್ನಿ ತಯಾರಿಸುವುದು ಹೀಗೆ
ಇದಾದ ನಂತರ ಅದಕ್ಕೆ ಉಪ್ಪು, ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ ಸೇರಿಸಿ ಮತ್ತೆ ರುಬ್ಬಿ ಈ ರೀತಿ ಕೆಂಪು ಇರುವೆ ಚಟ್ನಿ ತಯಾರಿಸುತ್ತಾರೆ. ಇದು ರುಚಿಯಲ್ಲಿ ತುಂಬಾ ಮಸಾಲೆಯುಕ್ತವಾಗಿದೆ. ಈ ಚಟ್ನಿ ರುಚಿಕರವಾಗಿರುವುದರ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಈ ಚಟ್ನಿಯಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಸತು, ವಿಟಮಿನ್ ಬಿ-12, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮುಂತಾದ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ನಂಬಲಾಗಿದೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 16 ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆದಿ ಮಹೋತ್ಸವವನ್ನು ಬುಡಕಟ್ಟು ಕರಕುಶಲ ಮೇಳವನ್ನು ಉದ್ಘಾಟಿಸಿದ್ದರು. ಈ ವೇಳೆ ಸಹ ಕೆಂಪು ಇರುವೆಯ ಚಟ್ನಿ ಎಲ್ಲರ ಗಮನ ಸೆಳೆದಿತ್ತು. ಬುಡಕಟ್ಟು ಸಮಾಜವು ಮಾಡಿದ ಅನೇಕ ವಿಷಯಗಳನ್ನು ಜಗತ್ತಿಗೆ ಪ್ರಸ್ತುತಪಡಿಸಲು ಮತ್ತು ಬುಡಕಟ್ಟು ಸಮಾಜದ ಬಗ್ಗೆ ತಿಳಿದುಕೊಳ್ಳಲು ಇಲ್ಲಿ ವೇದಿಕೆ ಕಲ್ಪಿಸಲಾಗಿತ್ತು.
ರಾಜ್ಯದಲ್ಲೂ ಇತ್ತು ಕೆಂಪಿರುವೆ ಚಟ್ಬಿ
ರಾಜ್ಯದ ಮಲೆನಾಡು ಭಾಗದಲ್ಲಿ ಈಗಲೂ ಕೆಂಪಿರುವೆ ಚಟ್ನಿ ಫೇಮಸ್ ಆಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಮಂಗಳೂರು, ಕೊಡಗು ಸೇರಿ ಈ ಭಾಗದಲ ಕೆಲವು ಕಡೆ ಈಗಲೂ
ಬೆಳಗ್ಗೆಯ ತಿಂಡಿಗೆ ಕೆಂಪಿರುವೆ ಚಟ್ನಿ ನೋಡಬಹುದು. ಆದರೆ ಇತ್ತೀಚಿನ ದಿನಗಳಲ್ಲಿ
ಈ ಚಟ್ನಿ ಜನರಿಂದ ದೂರಾಗಿದ್ದು, ಇದರ ಸ್ಥಳವನ್ನು ಬೇರೆ ಆಹಾರಗಳು
ಆವರಿಸಿಕೊಂಡಿವೆ.



Click it and Unblock the Notifications