Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ರಸಗುಲ್ಲಾವನ್ನು ಮೀರಿಸೋ ಜೈನರಿ ಸಿಹಿ
ಸಿಹಿತಿನಿಸು ಅಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಸ್ವೀಟ್ ತಿನ್ನೋಣ ಅಂದರೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಬೇಕರಿ ಅಂಗಡಿಗಳು ಬಾಗಿಲು ಮುಚ್ಚಿವೆ. ಮಕ್ಕಳೋ ಆಗಾಗ ಏನಾದ್ರು ಕೊಡಮ್ಮ ಅಂತ ದುಂಬಾಲು ಬೀಳುತ್ತವೆ. ಹೀಗಿರುವಾಗ ರುಚಿರುಚಿ ಸಿಹಿತಿನಿಸು ಮಾಡೋದಕ್ಕೆ ನಿಮಗೆ ಐಡಿಯಾ ಹೊಳೆಯುತ್ತಿಲ್ಲವೇ? ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ.

ಇಲ್ಲೊಂದು ರುಚಿರುಚಿಯಾದ ಫಟಾಫಟ್ ಸಿಹಿತಿಂಡಿಯನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ. ಅದುವೇ ಜೈನರಿ. ನೋಡುವುದಕ್ಕೆ ರಸಗುಲ್ಲಾದಂತೆ ಕಂಡರೂ ಇದು ರಸಗುಲ್ಲಾ ಅಲ್ಲ. ಸಕ್ಕರೆ ಪಾಕವಿದ್ದರೂ ಜಾಮೂನಲ್ಲ. ಹಾಗಾದ್ರೆ ಹೇಗೆ ಮಾಡುವುದು ಈ ಜೈನರಿ ಎಂಬುದನ್ನು ತಿಳಿದುಕೊಳ್ಳಬೇಕೇ? ಮುಂದೆ ಓದಿ.
Recipe By: Sushma
Recipe Type: Sweet
Serves: 4
-
ಬೇಕಾಗುವ ಸಾಮಗ್ರಿಗಳು
. ಉದ್ದಿನ ಬೇಳೆ - ಒಂದುವರೆ ಕಪ್
. ಅಕ್ಕಿ- ಮುಕ್ಕಾಲುಕಪ್
. ಸಕ್ಕರೆ - ನಾಲ್ಕು ಕಪ್
. ಕೇಸರಿ - 10 ದಳಗಳು
. ಏಲಕ್ಕಿ - ನಾಲ್ಕು
. ಉಪ್ಪು- ರುಚಿಗೆ ತಕ್ಕಷ್ಟು
. ಅಡುಗೆ ಎಣ್ಣೆ- ನಾಲ್ಕರಿಂದ ಐದು ಕಪ್
-
ಮಾಡುವ ವಿಧಾನ -
ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಚಿಟಿಕೆ ಉಪ್ಪು ಸೇರಿಸಿ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ.( ನೀರು ಸೇರಿಸುವುದು ಬೇಡ)
. ಒಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಹಾಕಿ, ಕೇಸರಿ ದಳಗಳನ್ನು ಸೇರಿಸಿ ಪಾಕ ಮಾಡಿಕೊಳ್ಳಿ. ಜಾಮೂನು ತಯಾರಿಸುವುದಕ್ಕೆ ಸಕ್ಕರೆ ಪಾಕ ಮಾಡಿದಂತೆಯೇ ಮಾಡಿಕೊಳ್ಳಬೇಕು.
. ಪಾಕ ತಯಾರಾಗುತ್ತಿದ್ದಂತೆ ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನೊಂದೆರಡು ಬಾರಿ ಕುದಿಸಿ. ಬಿಸಿ ಬಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
. ಈಗಾಗಲೇ ರುಬ್ಬಿಕೊಂಡಿರುವ ಮಿಶ್ರಣವನ್ನು ಅಡುಗೆ ಎಣ್ಣೆಯಲ್ಲಿ ಸಣ್ಣಸಣ್ಣ ಉಂಡೆಗಾತ್ರ ಬರುವಂತೆ ಬಿಟ್ಟು ಕರಿಯಿರಿ. ಉದ್ದಿನ ವಡೆ ತಯಾರಿಸುವಾಗ ಕರಿಯುವಂತೆಯೇ ಕರಿಯಬೇಕು. ಹೆಚ್ಚು ಕೆಂಬಣ್ಣ ಮಾಡಬೇಡಿ. ಸಣ್ಣ ಉರಿಯಲ್ಲಿ ಕರಿಯುವುದು ಒಳ್ಳೆಯದು.
. ಕರಿದ ಉಂಡೆಯನ್ನು ಬಿಸಿಬಿಸಿ ಸಕ್ಕರೆ ಪಾಕಕ್ಕೆ ಹಾಕಿ.
.ಒಂದರ್ಧ ಘಂಟೆ ನೆನೆಯಲು ಬಿಡಿ.
. ಸಕ್ಕರೆ ಪಾಕದಲ್ಲಿ ನೆನೆದ ಉಂಡೆಗಳನ್ನು ಸಕ್ಕರೆ ಪಾಕದ ಜೊತೆಗೆ ಸರ್ವ್ ಮಾಡಿದರೆ ಜೈನರಿ ಸಿದ್ಧ.
- ಉದ್ದು ಮತ್ತು ಅಕ್ಕಿ ಮಿಶ್ರಿತ ಸಿಹಿಯಾಗಿರುವುದರಿಂದ ಕಾರ್ಬೋಹೈಡ್ರೇಟ್ಸ್ ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ . ಕೇಸರಿ ದಳಗಳನ್ನು ಸೇರಿಸಿರುವ ಸಿಹಿಯಾಗಿರುವುದರಿಂದ ಬಸುರಿ ಮಹಿಳೆಯರಿಗೂ ಕೂಡ ಒಳ್ಳೆಯದು. . ರಸಗುಲ್ಲಾದಲ್ಲಿರುವಂತೆ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ. ಕಡಿಮೆ ಕೊಬ್ಬಿನಂಶ ಇರುವ ಸಿಹಿ ತಿನಿಸಾಗಿದೆ.



Click it and Unblock the Notifications