Latest Updates
-
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ! -
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ!
ರಸಗುಲ್ಲಾವನ್ನು ಮೀರಿಸೋ ಜೈನರಿ ಸಿಹಿ
ಸಿಹಿತಿನಿಸು ಅಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಸ್ವೀಟ್ ತಿನ್ನೋಣ ಅಂದರೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಬೇಕರಿ ಅಂಗಡಿಗಳು ಬಾಗಿಲು ಮುಚ್ಚಿವೆ. ಮಕ್ಕಳೋ ಆಗಾಗ ಏನಾದ್ರು ಕೊಡಮ್ಮ ಅಂತ ದುಂಬಾಲು ಬೀಳುತ್ತವೆ. ಹೀಗಿರುವಾಗ ರುಚಿರುಚಿ ಸಿಹಿತಿನಿಸು ಮಾಡೋದಕ್ಕೆ ನಿಮಗೆ ಐಡಿಯಾ ಹೊಳೆಯುತ್ತಿಲ್ಲವೇ? ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ.

ಇಲ್ಲೊಂದು ರುಚಿರುಚಿಯಾದ ಫಟಾಫಟ್ ಸಿಹಿತಿಂಡಿಯನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ. ಅದುವೇ ಜೈನರಿ. ನೋಡುವುದಕ್ಕೆ ರಸಗುಲ್ಲಾದಂತೆ ಕಂಡರೂ ಇದು ರಸಗುಲ್ಲಾ ಅಲ್ಲ. ಸಕ್ಕರೆ ಪಾಕವಿದ್ದರೂ ಜಾಮೂನಲ್ಲ. ಹಾಗಾದ್ರೆ ಹೇಗೆ ಮಾಡುವುದು ಈ ಜೈನರಿ ಎಂಬುದನ್ನು ತಿಳಿದುಕೊಳ್ಳಬೇಕೇ? ಮುಂದೆ ಓದಿ.
Recipe By: Sushma
Recipe Type: Sweet
Serves: 4
-
ಬೇಕಾಗುವ ಸಾಮಗ್ರಿಗಳು
. ಉದ್ದಿನ ಬೇಳೆ - ಒಂದುವರೆ ಕಪ್
. ಅಕ್ಕಿ- ಮುಕ್ಕಾಲುಕಪ್
. ಸಕ್ಕರೆ - ನಾಲ್ಕು ಕಪ್
. ಕೇಸರಿ - 10 ದಳಗಳು
. ಏಲಕ್ಕಿ - ನಾಲ್ಕು
. ಉಪ್ಪು- ರುಚಿಗೆ ತಕ್ಕಷ್ಟು
. ಅಡುಗೆ ಎಣ್ಣೆ- ನಾಲ್ಕರಿಂದ ಐದು ಕಪ್
-
ಮಾಡುವ ವಿಧಾನ -
ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಚಿಟಿಕೆ ಉಪ್ಪು ಸೇರಿಸಿ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ.( ನೀರು ಸೇರಿಸುವುದು ಬೇಡ)
. ಒಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಹಾಕಿ, ಕೇಸರಿ ದಳಗಳನ್ನು ಸೇರಿಸಿ ಪಾಕ ಮಾಡಿಕೊಳ್ಳಿ. ಜಾಮೂನು ತಯಾರಿಸುವುದಕ್ಕೆ ಸಕ್ಕರೆ ಪಾಕ ಮಾಡಿದಂತೆಯೇ ಮಾಡಿಕೊಳ್ಳಬೇಕು.
. ಪಾಕ ತಯಾರಾಗುತ್ತಿದ್ದಂತೆ ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನೊಂದೆರಡು ಬಾರಿ ಕುದಿಸಿ. ಬಿಸಿ ಬಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
. ಈಗಾಗಲೇ ರುಬ್ಬಿಕೊಂಡಿರುವ ಮಿಶ್ರಣವನ್ನು ಅಡುಗೆ ಎಣ್ಣೆಯಲ್ಲಿ ಸಣ್ಣಸಣ್ಣ ಉಂಡೆಗಾತ್ರ ಬರುವಂತೆ ಬಿಟ್ಟು ಕರಿಯಿರಿ. ಉದ್ದಿನ ವಡೆ ತಯಾರಿಸುವಾಗ ಕರಿಯುವಂತೆಯೇ ಕರಿಯಬೇಕು. ಹೆಚ್ಚು ಕೆಂಬಣ್ಣ ಮಾಡಬೇಡಿ. ಸಣ್ಣ ಉರಿಯಲ್ಲಿ ಕರಿಯುವುದು ಒಳ್ಳೆಯದು.
. ಕರಿದ ಉಂಡೆಯನ್ನು ಬಿಸಿಬಿಸಿ ಸಕ್ಕರೆ ಪಾಕಕ್ಕೆ ಹಾಕಿ.
.ಒಂದರ್ಧ ಘಂಟೆ ನೆನೆಯಲು ಬಿಡಿ.
. ಸಕ್ಕರೆ ಪಾಕದಲ್ಲಿ ನೆನೆದ ಉಂಡೆಗಳನ್ನು ಸಕ್ಕರೆ ಪಾಕದ ಜೊತೆಗೆ ಸರ್ವ್ ಮಾಡಿದರೆ ಜೈನರಿ ಸಿದ್ಧ.
- ಉದ್ದು ಮತ್ತು ಅಕ್ಕಿ ಮಿಶ್ರಿತ ಸಿಹಿಯಾಗಿರುವುದರಿಂದ ಕಾರ್ಬೋಹೈಡ್ರೇಟ್ಸ್ ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ . ಕೇಸರಿ ದಳಗಳನ್ನು ಸೇರಿಸಿರುವ ಸಿಹಿಯಾಗಿರುವುದರಿಂದ ಬಸುರಿ ಮಹಿಳೆಯರಿಗೂ ಕೂಡ ಒಳ್ಳೆಯದು. . ರಸಗುಲ್ಲಾದಲ್ಲಿರುವಂತೆ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ. ಕಡಿಮೆ ಕೊಬ್ಬಿನಂಶ ಇರುವ ಸಿಹಿ ತಿನಿಸಾಗಿದೆ.



Click it and Unblock the Notifications