Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ರಸಗುಲ್ಲಾವನ್ನು ಮೀರಿಸೋ ಜೈನರಿ ಸಿಹಿ
ಸಿಹಿತಿನಿಸು ಅಂದಾಕ್ಷಣ ಬಾಯಲ್ಲಿ ನೀರು ಬರುತ್ತೆ. ಸ್ವೀಟ್ ತಿನ್ನೋಣ ಅಂದರೆ ಈ ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಬೇಕರಿ ಅಂಗಡಿಗಳು ಬಾಗಿಲು ಮುಚ್ಚಿವೆ. ಮಕ್ಕಳೋ ಆಗಾಗ ಏನಾದ್ರು ಕೊಡಮ್ಮ ಅಂತ ದುಂಬಾಲು ಬೀಳುತ್ತವೆ. ಹೀಗಿರುವಾಗ ರುಚಿರುಚಿ ಸಿಹಿತಿನಿಸು ಮಾಡೋದಕ್ಕೆ ನಿಮಗೆ ಐಡಿಯಾ ಹೊಳೆಯುತ್ತಿಲ್ಲವೇ? ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆ ನಾವಿದ್ದೇವೆ.

ಇಲ್ಲೊಂದು ರುಚಿರುಚಿಯಾದ ಫಟಾಫಟ್ ಸಿಹಿತಿಂಡಿಯನ್ನು ಮಾಡುವ ವಿಧಾನ ತಿಳಿಸಿಕೊಡುತ್ತಿದ್ದೇವೆ. ಅದುವೇ ಜೈನರಿ. ನೋಡುವುದಕ್ಕೆ ರಸಗುಲ್ಲಾದಂತೆ ಕಂಡರೂ ಇದು ರಸಗುಲ್ಲಾ ಅಲ್ಲ. ಸಕ್ಕರೆ ಪಾಕವಿದ್ದರೂ ಜಾಮೂನಲ್ಲ. ಹಾಗಾದ್ರೆ ಹೇಗೆ ಮಾಡುವುದು ಈ ಜೈನರಿ ಎಂಬುದನ್ನು ತಿಳಿದುಕೊಳ್ಳಬೇಕೇ? ಮುಂದೆ ಓದಿ.
Recipe By: Sushma
Recipe Type: Sweet
Serves: 4
-
ಬೇಕಾಗುವ ಸಾಮಗ್ರಿಗಳು
. ಉದ್ದಿನ ಬೇಳೆ - ಒಂದುವರೆ ಕಪ್
. ಅಕ್ಕಿ- ಮುಕ್ಕಾಲುಕಪ್
. ಸಕ್ಕರೆ - ನಾಲ್ಕು ಕಪ್
. ಕೇಸರಿ - 10 ದಳಗಳು
. ಏಲಕ್ಕಿ - ನಾಲ್ಕು
. ಉಪ್ಪು- ರುಚಿಗೆ ತಕ್ಕಷ್ಟು
. ಅಡುಗೆ ಎಣ್ಣೆ- ನಾಲ್ಕರಿಂದ ಐದು ಕಪ್
-
ಮಾಡುವ ವಿಧಾನ -
ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಸುಮಾರು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಚಿಟಿಕೆ ಉಪ್ಪು ಸೇರಿಸಿ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ.( ನೀರು ಸೇರಿಸುವುದು ಬೇಡ)
. ಒಂದು ಪಾತ್ರೆಯಲ್ಲಿ ಸಕ್ಕರೆಗೆ ನೀರು ಹಾಕಿ, ಕೇಸರಿ ದಳಗಳನ್ನು ಸೇರಿಸಿ ಪಾಕ ಮಾಡಿಕೊಳ್ಳಿ. ಜಾಮೂನು ತಯಾರಿಸುವುದಕ್ಕೆ ಸಕ್ಕರೆ ಪಾಕ ಮಾಡಿದಂತೆಯೇ ಮಾಡಿಕೊಳ್ಳಬೇಕು.
. ಪಾಕ ತಯಾರಾಗುತ್ತಿದ್ದಂತೆ ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನೊಂದೆರಡು ಬಾರಿ ಕುದಿಸಿ. ಬಿಸಿ ಬಿಸಿ ಸಕ್ಕರೆ ಪಾಕ ತಯಾರಿಸಿಕೊಳ್ಳಿ.
. ಈಗಾಗಲೇ ರುಬ್ಬಿಕೊಂಡಿರುವ ಮಿಶ್ರಣವನ್ನು ಅಡುಗೆ ಎಣ್ಣೆಯಲ್ಲಿ ಸಣ್ಣಸಣ್ಣ ಉಂಡೆಗಾತ್ರ ಬರುವಂತೆ ಬಿಟ್ಟು ಕರಿಯಿರಿ. ಉದ್ದಿನ ವಡೆ ತಯಾರಿಸುವಾಗ ಕರಿಯುವಂತೆಯೇ ಕರಿಯಬೇಕು. ಹೆಚ್ಚು ಕೆಂಬಣ್ಣ ಮಾಡಬೇಡಿ. ಸಣ್ಣ ಉರಿಯಲ್ಲಿ ಕರಿಯುವುದು ಒಳ್ಳೆಯದು.
. ಕರಿದ ಉಂಡೆಯನ್ನು ಬಿಸಿಬಿಸಿ ಸಕ್ಕರೆ ಪಾಕಕ್ಕೆ ಹಾಕಿ.
.ಒಂದರ್ಧ ಘಂಟೆ ನೆನೆಯಲು ಬಿಡಿ.
. ಸಕ್ಕರೆ ಪಾಕದಲ್ಲಿ ನೆನೆದ ಉಂಡೆಗಳನ್ನು ಸಕ್ಕರೆ ಪಾಕದ ಜೊತೆಗೆ ಸರ್ವ್ ಮಾಡಿದರೆ ಜೈನರಿ ಸಿದ್ಧ.
- ಉದ್ದು ಮತ್ತು ಅಕ್ಕಿ ಮಿಶ್ರಿತ ಸಿಹಿಯಾಗಿರುವುದರಿಂದ ಕಾರ್ಬೋಹೈಡ್ರೇಟ್ಸ್ ನಿಮ್ಮ ದೇಹಕ್ಕೆ ಲಭ್ಯವಾಗುತ್ತದೆ . ಕೇಸರಿ ದಳಗಳನ್ನು ಸೇರಿಸಿರುವ ಸಿಹಿಯಾಗಿರುವುದರಿಂದ ಬಸುರಿ ಮಹಿಳೆಯರಿಗೂ ಕೂಡ ಒಳ್ಳೆಯದು. . ರಸಗುಲ್ಲಾದಲ್ಲಿರುವಂತೆ ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲ. ಕಡಿಮೆ ಕೊಬ್ಬಿನಂಶ ಇರುವ ಸಿಹಿ ತಿನಿಸಾಗಿದೆ.



Click it and Unblock the Notifications
