Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
1 ಕಪ್ ಗೋಧಿ ಹಿಟ್ಟಿನಲ್ಲಿ ಶಂಕರಪಾಲಿ ಮಾಡಿ..! 15 ನಿಮಿಷದಲ್ಲಿ ತಿಂಡಿ ರೆಡಿ
ಮನೆಯಲ್ಲಿ ಮಕ್ಕಳಿಗೆ ಇಲ್ಲವೆ ಅತಿಥಿಗಳು, ಸಂಬಂಧಿಕರು ಬಂದಾಗ ಅವರಿಗೆ ಸವಿಯಲು ಕೊಡಲು ತಿಂಡಿ ಯಾವುದಾದರು ಇದ್ದರೆ ಉತ್ತಮ. ಇದಕ್ಕಾಗಿಯೇ ನೀವು ಅಂಗಡಿ, ಬೇಕರಿಯಿಂದ ಯಾವ ತಿಂಡಿ ಬೇಕಾದರು ತಂದು ಸವಿಯಲು ನೀಡಬಹುದು. ಆದರೆ ನೀವೆ ಮನೆಯಲ್ಲಿ ಮಾಡಿದ ತಿಂಡಿ ಹೇಗೆ?
ಮನೆಯಲ್ಲಿ ನೀವು ಫ್ರೀ ಇದ್ದಾಗ ಯಾವುದಾದರು ತಿಂಡಿ ಅಥವಾ ಸ್ನ್ಯಾಕ್ಸ್ ಮಾಡುವ ಉದ್ದೇಶ ನಿಮ್ಮದಾಗಿದ್ದರೆ ಶಂಕರಪಾಲಿ ಮಾಡಿ ನೋಡಿ. ಹೌದು ಬೇಕರಿಯಲ್ಲಿ ವಿವಿಧ ರೀತಿಯ ಶಂಕರಪಾಲಿ ನೀವು ನೋಡಿರುತ್ತೀರಿ. ಆದ್ರೆ ಮನೆಯಲ್ಲಿ ಗೋಧಿ ಹಿಟ್ಟು ಬಳಸಿ ಶಂಕರಪಾಲಿ ಮಾಡಿದ್ದೀರಾ?

ಗೋಧಿ ಹಿಟ್ಟಿನಲ್ಲಿ ಅದ್ಭುತ ರುಚಿಯ ಶಂಕರಪಾಲಿ ಮಾಡಬಹುದು. ಹಾಗಾದ್ರೆ ಶಂಕರಪಾಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಗೋಧಿ ಹಿಟ್ಟಿನ ಶಂಕರಪಾಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ತೆಗೆದುಕೊಳ್ಳುತ್ತೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶಂಕರಪಾಲಿ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು - 1 ಕಪ್
- ತುಪ್ಪ- ಕಾಲು ಕಪ್
- ಉಪ್ಪು
- ಸಕ್ಕರೆ - ಅರ್ಧ ಕಪ್
- ಏಲಕ್ಕಿ ಪುಡಿ
- ಎಣ್ಣೆ
ಗೋಧಿ ಹಿಟ್ಟಿನ ಶಂಕರಪಾಲಿ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ತೆಗೆದುಕೊಂಡು ಅದಕ್ಕೆ ಕಾಲು ಕಪ್ ಸಕ್ಕರೆ, ಕಾಲು ಕಪ್ ತುಪ್ಪ ಹಾಕಿ ಕುದಿಯಲು ಬಿಡಬೇಕು. ತಳ ಹಿಡಿಯದಂತೆ ನಿಧಾನ ಉರಿಯಲ್ಲಿ ಇಟ್ಟು ತಿರುಗಿಸುತ್ತಾ ಇರಿ. ಕಾಲು ಚಮಚ ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಕುದಿಸಿಕೊಳ್ಳಿ.
ಈಗ ಒಂದು ಬೌಲ್ನಲ್ಲಿ ಗೋಧಿ ಹಿಟ್ಟು ತೆಗೆದುಕೊಂಡು ಅದಕ್ಕೆ ಒಲೆ ಮೇಲಿರುವ ಪದಾರ್ಥವನ್ನು ಸೇರಿಸಿಕೊಳ್ಳಿ. ಬಳಿಕ ಚೆನ್ನಾಗಿ ಕಲಸಿಕೊಳ್ಳಿ. ಹೋಳಿಗೆ ಹೂರ್ಣದಂತೆ ಆಗುವವರೆಗೂ ಚೆನ್ನಾಗಿ ಕಲಸಿಕೊಳ್ಳಿ. ಚಪಾತಿ ಹಿಟ್ಟು ಅಥವಾ ಹೂರ್ಣದಂತೆ ಆಗುತ್ತದೆ. ನಂತರ ಈ ಹಿಟ್ಟನ್ನು ಚಪಾತಿ ಮಣೆಯಲ್ಲಿ ಲಟ್ಟಿಸಿಕೊಳ್ಳಿ. ದೊಡ್ಡ ರೊಟ್ಟಿಯಂತೆ ಲಟ್ಟಿಸಿಕೊಳ್ಳಿ. ನಂತರ ಅಂಚನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
ನಂತರ ನೇರವಾಗಿ ಸಾಲುಗಳ ಹಾಕಿ ಚಚೌಕವಾಗಿ ಸಣ್ಣ ಸಣ್ಣ ಚೌಕ ಬರುವಂತೆ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ಬಳಿಕ ಈ ಚಚೌಕವಾದ ಸಣ್ಣ ಹಿಟ್ಟಿನ ಉಂಡೆಯನ್ನ ಎಣ್ಣೆಗೆ ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ ಸುಮಾರು 15 ನಿಮಿಷ ಕರಿಯಬೇಕು. ಆಗಾಗ ಕೈಯಾಡಿಸುತ್ತಿದ್ದರೆ ಆಯಿತು. ಇದು ಗಾಢ ಕಾಫಿ ಬಣ್ಣಕ್ಕೆ ತಿರುಗಿದರೆ ಕರಿದು ಮುಗಿದಿದೆ ಎಂದರ್ಥ. ಇಷ್ಟಾದರೆ ನಿಮ್ಮ ಮುಂದೆ ಕರಿದ ಶಂಕರಪಾಲಿ ರೆಡಿಯಾಗುತ್ತದೆ.
ನೀವು ಸಹ ಒಮ್ಮೆ ಮನೆಯಲ್ಲಿ ಫ್ರೀ ಇದ್ದಾಗ ಈ ತಿಂಡಿ ಮಾಡಿ ನೋಡಿ. ಒಂದು ಬಾಕ್ಸ್ನಲ್ಲಿ ಹಾಕಿ ಇಟ್ಟರೆ ಸುಮಾರು 1 ತಿಂಗಳ ಕಾಲ ಇಟ್ಟು ಸವಿಯಬಹುದು. ಮನೆಯಲ್ಲಿ ಟೈ ಪಾಸ್ ಮಾಡುವಾಗ, ಟಿವಿ ನೋಡುವಾಗ ಸವಿಯಲು ಸಖತ್ ರುಚಿ ನೀಡಲಿದೆ.



Click it and Unblock the Notifications
