Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಉಪ್ಪಿಟ್ಟು ಬೇಡ ಅಂದೋರು ಕೂಡ ಮತ್ತೊಮ್ಮೆ ಸವಿಯೋದು ಖಚಿತ: ಈ ರೀತಿ ಮಾಡಿ ತರಕಾರಿ ಉಪ್ಪಿಟ್ಟು!
ಬೆಳಗ್ಗೆ ತಿಂಡಿಯ ಸಮಯದಲ್ಲಿ ನೀವು ಬಹಳಷ್ಟು ಬಾರಿ ರುಚಿ ರುಚಿಯ ತಿಂಡಿಯನ್ನು ಮಾಡಲು ಬಯಸುತ್ತೀರಿ. ಅದ್ರಲ್ಲು ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡುವ ರುಚಿ ರುಚಿಯ ತಿಂಡಿಗಳು ಅಂದ್ರೆ ಇಷ್ಟವಾಗುತ್ತೆ. ಹಾಗೆ ಮಧ್ಯಾಹ್ನದ ಬಾಕ್ಸ್ಗಾಗಿಯೂ ನೀವು ತಿಂಡಿ ಮಾಡಬೇಕಾಗಿದ್ದರೆ ಎರಡು ಸಮಯದಲ್ಲಿ ಸವಿಯಲು ಇಷ್ಟವಾಗುವ ತಿಂಡಿಗಳ ಮಾಡುವುದು ಸಹಜ.
ಇಂತಹ ತಿಂಡಿಗಳಲ್ಲಿ ಉಪ್ಪಿಟ್ಟು ಕೂಡ ಒಂದು. ನೀವು ತಿಂಡಿಯ ಸಮಯದಲ್ಲಿ ಮಾಡುವ ಉಪ್ಪಿಟ್ಟನ್ನು ಮಧ್ಯಾಹ್ನದ ಊಟದ ಸಮಯಕ್ಕೆ ಬಾಕ್ಸ್ನಲ್ಲಿ ಸವಿಯಬಹುದು. ಆದ್ರೆ ಕೆಲವರಿಗೆ ಉಪ್ಪಿಟ್ಟು ಸವಿಯೋದು ಅಂದ್ರೆ ಇಷ್ಟವಾಗಲ್ಲ. ಉಪ್ಪಿನಲ್ಲಿ ಹಲವು ಬಗೆಗಳಿವೆ. ನೀವು ವಿಶೇಷ ರೀತಿಯ ಉಪ್ಪಿಟ್ಟು ಮಾಡಿದ್ರೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತೆ.
ಆದ್ರೆ ಉಪ್ಪಿಟ್ಟನ್ನು ಎಲ್ಲರಿಗೂ ಇಷ್ಟವಾಗುವಂತೆ ರುಚಿ ರುಚಿಯಾಗಿ ಮಾಡಬಹುದು. ಅದ್ರಲ್ಲೂ ವಿಶೇಷ ರುಚಿಯಲ್ಲಿ ತರಕಾರಿ ಉಪ್ಪಿಟ್ಟು ಮಾಡಿದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಪಲಾವ್ನಂತೆ ಉಪ್ಪಿಟ್ಟಿಗೂ ಕೂಡ ರುಚಿ ರುಚಿಯಾದ ತರಕಾರಿಗಳ ಬಳಸಿಕೊಂಡು ಮಾಡಬಹುದು. ಹಾಗಾದ್ರೆ ತರಕಾಿ ಉಪ್ಪಿಟ್ಟು ಮಾಡುವ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
ತರಕಾರಿ ಉಪ್ಪಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳಿ.
ತರಕಾರಿ ಉಪ್ಪಿಟ್ಟು ಮಾಡಲು ಅಗತ್ಯ ವಸ್ತುಗಳಿವು
- ಉಪ್ಪಿಟ್ಟು ರವೆ
- ಬಟಾಣಿ
- ಕ್ಯಾರೆಟ್
- ಬೀನ್ಸ್
- ಉದ್ದಿನ ಬೇಳೆ
- ಕಡಲೆ ಬೇಳೆ
- ನಿಂಬೆ ರಸ
- ತೆಂಗಿನ ಕಾಯಿ ತುರಿ
- ತುಪ್ಪ
- ಎಣ್ಣೆ
- ಕರಿಬೇವು
- ಸಾಸಿವೆ
- ಉಪ್ಪು
- ಹಸಿ ಮೆಣಸು
ತರಕಾರಿ ಉಪ್ಪಿಟ್ಟು ಮಾಡಲು ಅಗತ್ಯ ವಸ್ತುಗಳಿವು
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಅನಂತರ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ, ಗೋಡಂಬಿ ಇದ್ದರೆ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ. 1 ನಿಮಿಷದ ಬಳಿಕ ಹಸಿ ಮೆಣಸು, ಶುಂಠಿ, ಕರಿಬೇವು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ ಚಿಟಿಕೆ ಇಂಗು ಹಾಕಿ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ ಹಾಕಿ ಫ್ರೈ ಮಾಡಿ.
ಈಗ ಕತ್ತರಿಸಿಕೊಂಡಿರುವ ತರಕಾರಿ ಹಾಕಬೇಕು. ಕ್ಯಾರೆಟ್, ಬೀನ್ಸ್, ಬಟಾಣಿ, ಹಾಗೆ ನಿಮಗೆ ಇಷ್ಟವಾಗುವ ತರಕಾರಿಗಳನ್ನು ಈ ಉಪ್ಪಿಟ್ಟು ಮಾಡುವಾಗ ಬಳಸಬಹುದು. ಈ ತರಕಾರಿಗಳು ಚೆನ್ನಾಗಿ ಫ್ರೈ ಆಗಬೇಕು. ಈಗ ಒಂದು ಕಪ್ನಲ್ಲಿ ಉಪ್ಪಿಟ್ಟು ರವೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸಹ ಹಾಕಿಕೊಂಡು ಬೇಯಿಸಿಕೊಳ್ಳಿ.
4ರಿಂದ 5 ನಿಮಿಷ ಹುರಿದ ಬಳಿಕ ಅಳತೆ ಕಪ್ನಲ್ಲಿ ಮೂರು ಕಪ್ ಬಿಸಿ ಬೀರು ಹಾಕಬೇಕು. ನೀರು ಹಾಕಿ ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಕಾಯಿ ತುರಿ, ನಿಂಬೆ ರಸ, ತುಪ್ಪ ಹಾಕಿ ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ. ನಿಧಾನಕ್ಕೆ ಗಟ್ಟಿಯಾಗುವಾಗ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬಿಡಿ.
ಇದು ಮೃದುವಾಗಿದ್ದಾಗಲೇ ಒಲೆ ಆಫ್ ಮಾಡಿ ಆದ್ರೆ ಮುಚ್ಚಳ ತೆಗೆಯದೆ ಇಟ್ಟುಬಿಡಿ. 1 ನಿಮಿಷ ಹಾಗೆಯೇ ಬಿಟ್ಟು ಮುಚ್ಚಳ ತೆರೆದು ಒಮ್ಮೆ ಮಿಕ್ಸ್ ಮಾಡಿ ಸವಿಯಲು ಬೀಡಿ. ಇದು ಬಿಸಿ ಬಿಸಿ ಇದ್ದಾಗಲೇ ಸವೊಯಲು ಬಹಳ ರುಚಿ ನೀಡಲಿದೆ. ನೀವು ಸಹ ಈ ವಿಧಾನದಲ್ಲಿ ಉಪ್ಪಿಟ್ಟು ಮಾಡಿ ಸವಿದು ನೋಡಿ. ಕಡಿಮೆ ಸಮಯದಲ್ಲಿ ಇದನ್ನು ಮಾಡಿ ಮುಗಿಸಬಹುದು. ಹಾಗೆ ಎಲ್ಲರು ಈ ಉಪ್ಪಿಟ್ಟು ಸವಿಯಲು ಇಷ್ಟಪಡುತ್ತಾರೆ.



Click it and Unblock the Notifications

