Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಹುರುಳಿಕಾಳಿನ ಚಟ್ನಿ: ಸಿಂಪಲ್ ರೆಸಿಪಿ, ಆದರೆ ರುಚಿ ಸಿಂಪಲ್ ಅಲ್ವೇ ಅಲ್ಲ
ನೀವು ಹುರುಳಿಕಾಳಿನ ಚಟ್ನಿ ಮಾಡಿದ್ದೀರಾ, ಇಲ್ಲಾಂದ್ರೆ ಟ್ರೈ ಮಾಡಿ ನೋಡಿ, ಸೂಪರ್ ರುಚಿಯಾಗಿರುತ್ತೆ, ಅಲ್ಲದೆ ಈ ಚಟ್ನಿಯಿಂದ ಆರೋಗ್ಯಕ್ಕೂ ಅಷ್ಟೊಂದು ಪ್ರಯೋಜನಗಳಿವೆ. ಈ ಚಟ್ನಿ ರೆಸಿಪಿ ಸಿಂಪಲ್ ಆದರೆ ಟೇಸ್ಟ್ ಅಲ್ಲ ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ತೆಂಗಿನ ತುರಿ
1/4ಕಪ್ ಹುರುಳಿಕಾಳು
(ಹುರುಳಿಕಾಳನ್ನು ನೀವು ತೊಳೆದು ಒಣಗಿಸಿ ಇಟ್ಟಿರಿ)
ಸ್ವಲ್ಪ ಹುಣಸೆ ಹಣ್ಣು (ಹುಣಸೆಹಣ್ಣಿನ ಬೀಜದ ಗಾತ್ರದಷ್ಟು ಎರಡು ಸಲ ಹಾಕಿದರೆ
ಸಾಕಾಗುತ್ತೆ)
3-4 ಹಸಿ ಮೆಣಸು
1 ಈರುಳ್ಳಿ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
ನೀವು ಹುರುಳಿಕಾಳನ್ನು ಒಂದು ತವಾದಲ್ಲಿ ಹಾಕಿ ರೋಸ್ಟ್ ಮಾಡಿ,ಹುರುಳಿ ಕಾಳು
ಹುರಿದಾಗ ಒಳ್ಳೆಯ ಸುವಾಸನೆ ಬರುತ್ತದೆ ಅಲ್ಲಿಯವರೆಗೆ ರೋಸ್ಟ್ ಮಾಡಿ.
ಈಗ ಅದನ್ನು ಮಿಕ್ಸಿ ಜಾರ್ಗೆ ಸೇರಿಸಿ
ತೆಂಗಿನ ತುರಿ, ಹುಣಸೆಹಣ್ಣು, ಉಪ್ಪು, ಮೆಣಸು ಹಾಕಿ ರುಬ್ಬಿ
ನಂತರ ಒಗ್ಗರಣೆ ಹಾಕಿದರೆ ಹುರುಳಿಕಾಳಿನ ಚಟ್ನಿ ರೆಡಿ.
ಇತರ ಸಲಹೆ
ಹುರುಳಿಕಾಳಿನ ಚಟ್ನಿಗೆ ನೀವು ಹಸಿ ಮೆಣಸು ಬದಲಿಗೆ ಒಣ ಮೆಣಸು ಹಾಕಬಹುದು.
ಈ ಚಟ್ನಿ ಗಂಜಿ ಅಥವಾ ಅನ್ನಕ್ಕೆ ತರಿತರಿ ರುಬ್ಬಿದರೆ ಚೆನ್ನಾಗಿರುತ್ತದೆ.
ದೋಸೆ, ಇಡ್ಲಿಗೆ ನುಣ್ಣನೆ ರುಬ್ಬಿ
ಹುರುಳಿಕಾಳಿನ ಪ್ರಯೋಜನಗಳು
ಹುರುಳಿಕಾಳಿಗೆ ಮಧುಮೇಹ ನಿಯಂತ್ರಿಸುವ ಶಕ್ತಿ ಇದೆ
ಇದು ಕಾರ್ಬೋಹೈಡ್ರೇಟ್ ನಿಧಾನವಾಗಿ ಜೀರ್ಣವಾಗುವಂತೆ ಮಾಡುತ್ತದೆ, ಇದರಿಂದ
ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ.
ಇದರಲ್ಲಿ Antioxidants ಅಧಿಕವಿದೆ: ಇದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ
ಹೆಚ್ಚಿಸಲು ತುಂಬಾನೇ ಸಹಕಾರಿ.
ಮೂತ್ರ ಚೆನ್ನಾಗಿ ಹೋಗಲು ಸಹಾಯ ಮಾಡುತ್ತದೆ: ವಾರಕ್ಕೆ ಎರಡು ಬಾರಿಯಾದರೂ
ಹುರುಳಿಕಾಳು ಸೇವಿಸಬೇಕು, ಇದು ಮೂತ್ರದ ಮೂಲಕ ಕಶ್ಮಲವನ್ನು ಹೊರ ಹಾಕಲು ಸಹಾಯ
ಮಾಡುತ್ತದೆ. ಇದರಿಂದ ಕಿಡ್ನಿ ಸ್ಟೋನ್ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.
ಅಸ್ತಮಾ ರೋಗಿಗಳಿಗೆ ಒಳ್ಳೆಯದು: ಹುರುಳಿಕಾಳು ಅಸ್ತಮಾ ರೋಗಿಗಳಿಗೆ ತುಂಬಾನೇ
ಪ್ರಯೋಜನಕಾರಿ, ಇದು ಉಸಿರಟದ ತೊಂದರೆ ಉಂಟಾಗದಂತೆ ತಡೆಗಟ್ಟಲು ಸಹಾಯ
ಮಾಡುತ್ತದೆ.



Click it and Unblock the Notifications