Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಯಗ್ರೀವ ತಿಂಡಿ ಮಾಡೋದು ಹೇಗೆ? ಹಬ್ಬಕ್ಕೆ ಇದೇ ಸ್ಪೆಷಲ್...!
ಹಿಂದೂ ಪುರಾಣಗಳಲ್ಲಿ ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಪ್ರಾಮುಖ್ಯತೆ, ಪುರಾಣ ಕಥೆ ಇದೆ. ಹಾಗೆ ಆ ಆಚರಣೆಗಳ ಹಿಂದೆ ಕಾರಣಗಳು ಸಹ ಇರುತ್ತವೆ. ಇನ್ನು ಶ್ರಾವಣ ಮಾಸ ಆರಂಭವಾದರೆ ಹಬ್ಬಗಳು ಆರಂಭವಾಗುತ್ತದೆ. ಹಬ್ಬಗಳಲ್ಲಿ ಪೂಜೆ, ದೇವಾಲಯ ಭೇಟಿ ಹೀಗೆ ಹಲವು ಕಾರ್ಯಗಳು ನಡೆಯುತ್ತವೆ. ಇನ್ನು ಹಬ್ಬ ಅಂದ್ರೆ ಅಲ್ಲಿ ಊಟ, ತಿಂಡಿಯೂ ವಿಶೇಷವಾಗಿರುತ್ತೆ.
ಇನ್ನು ಹಬ್ಬದಲ್ಲಿ ಪೂಜೆಗೆ ನೈವೇದ್ಯ ಮಾಡಲು ಬಳಸುವ ಹಯಗ್ರೀವ ನೋಡಿರುತ್ತೀರಿ, ಅದರ ರುಚಿ ಅಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಹಯಗ್ರೀವ ಮಾಡಿ ಹಬ್ಬದ ಊಟದಲ್ಲಿ ಸವಿಯೋದು ಸಹ ಇದೆ. ಆದ್ರೆ ಹಲವು ದೇವಾಲಯದಲ್ಲಿ ಈ ಹಯಗ್ರೀವ ಪ್ರಸಾದವಾಗಿ ನೀಡಲಾಗುತ್ತದೆ. ಇನ್ನು ವಿಷ್ಣುವಿನ ಕುದುರೆಯೊಂದರ ಹೆಸರು ಸಹ ಹಯಗ್ರೀವ.

ಆದ್ರೆ ಈ ಹಯಗ್ರೀವ ನೈವೇದ್ಯಕ್ಕೆ ಅತ್ಯುತ್ತಮ ಪ್ರಸಾದವಂತೆ. ಹೀಗಾಗಿ ನಾವಿಂದು ಈ ಹಯಗ್ರೀವ ಮಾಡುವುದು ಹೇಗೆ ಎಂಬುದನ್ನು ನೋಡೋಣ. ಹಯಗ್ರೀವ ಮಾಡಲು ಬೇಕಾಗುವ ಪದಾರ್ಥಗಳೇನು? ಹಯಗ್ರೀವ ಮಾಡುವುದು ಹೇಗೆ? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಯಗ್ರೀವ ಮಾಡಲು ಬೇಕಾಗುವ ಪದಾರ್ಥಗಳು
- ಕಡ್ಲೆಬೇಳೆ - 1 ಕಪ್
- ಬೆಲ್ಲ - 1 ಕಪ್
- ಒಣಕೊಬ್ಬರಿ - ಕಾಲು ಕಪ್
- ಲವಂಗ - 2
- ಏಲಕ್ಕಿ - 2
- ತುಪ್ಪ -1 ಟೇಬಲ್ ಸ್ಪೂನ್
- ಗಸಗಸೆ -1 ಟೀ ಸ್ಪೂನ್
ಹಯಗ್ರೀವ ಮಾಡುವುದು ಹೇಗೆ?
ಮೊದಲು ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎರಡು ಕಪ್ ನೀರು ಹಾಕಿಕೊಳ್ಳಿ. ಈಗ ನೀರು ಬಿಸಿ ಮಾಡಿಕೊಳ್ಳಿ. ನೀರು ಬಿಸಿಯಾದಾಗ ಅದಕ್ಕೆ 1 ಕಪ್ ಕಡಲೆ ಬೇಳೆ ತೊಳೆದುಕೊಂಡು ಈ ಕುಕ್ಕರ್ಗೆ ಹಾಕಿ. ಬಳಿಕ ಮುಚ್ಚಳ ಮುಚ್ಚಿ 4 ಸೀಟಿ ಹೊಡೆಸಿಕೊಳ್ಳಿ, ಈಗ ಕುಕ್ಕರ್ ತಣ್ಣಗಾಗಲು ಬಿಟ್ಟು ನಂತರ ಅದರಲ್ಲಿ ಬೆಂದಿರುವ ಕಡಲೇ ಬೇಳೆಯನ್ನು ಬಿಟ್ಟು ನೀರು ಹೊರಗೆ ಹಾಕಿ.
ಈಗ ಮತ್ತೊಂದು ಪಾತ್ರೆಯ ಒಲೆ ಮೇಲೆ ಇಟ್ಟು 1 ಕಪ್ ಪುಡಿ ಮಾಡಿದ ಬೆಲ್ಲವನ್ನು ಹಾಕಿಕೊಂಡು ಬೆಲ್ಲ ಕರಗಲು ಸ್ವಲ್ಪ ನೀರು ಸಹ ಹಾಕಿ ಕರಗಲು ಬಿಡಿ. ಒಂದು ಎಳೆಯ ಪಾಕ ಎನ್ನುವಂತಹ ಹದಕ್ಕೆ ಬರುವಂತೆ ಇದನ್ನು ಮಾಡಿಕೊಳ್ಳಿ. ಬೆಲ್ಲ ಕರಗಿದ ಬಳಿಕ ಪುಡಿ ಏಲಕ್ಕಿ, ಲವಂಗ ಜಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೇಯಿಸಿಕೊಂಡಿರುವ ಕಡಲೆ ಬೇಳೆ ಹಾಕಿ ಮಿಕ್ಸ್ ಮಾಡಿ.
ಈ ಬೇಳೆಯನ್ನ ಸುಮಾರು 5 ನಿಮಿಷ ಬೆಲ್ಲದ ಪಾಕದಲ್ಲಿ ಬೇಯಲು ಬಿಡಬೇಕು. ಆಗಾಗ ಕೈ ಆಡಿಸುತ್ತಿರಿ. ಈಗ ಒಂದು ಸಣ್ಣ ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪ, ಒಣ ಕೊಬ್ಬರಿ ಪೀಸ್ಗಳು ಅಥವಾ ತುರಿದ ಕಾಯಿಯನ್ನು ಹಾಕಿ ತುಪ್ಪದಲ್ಲಿ ಒಂದು ನಿಮಿಷ ಫ್ರೈ ಮಾಡಿ, ನಂತರ ಕೊನೆಯಲ್ಲಿ ಗಸೆಗಸೆ ಹಾಕಿ ಬಿಸಿ ಮಾಡಿಕೊಂಡು ಬಾಣಲೆಯಲ್ಲಿರುವ ಬೆಲ್ಲದ ಪಾಕದಲ್ಲರುವ ಕಡಲೆ ಬೇಳೆಗೆ ಹಾಕಿ ಮಿಕ್ಸ್ ಮಾಡಿ.
ನಂತರ ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಈ ವೇಳೆ ಒಲೆ ಆಫ್ ಮಾಡಿಕೊಂಡಿರಿ. ಇಷ್ಟಾದರೆ ನಿಮ್ಮ ಮುಂದೆ ನೈವೇದ್ಯಕ್ಕೆ ಈ ಹಯಗ್ರೀವ ರೆಡಿಯಾಗುತ್ತದೆ. ಈ ಪ್ರಸಾದವನ್ನು ನೀವು ಸಹ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ನೋಡಿ, ಇದನ್ನು ಊಟದಲ್ಲಿ ಸಿಹಿಯಾಗಿಯೂ ಬಳಸಬಹುದು, ಆರೋಗ್ಯಕ್ಕೂ ಬಹಳ ಒಳ್ಳೆಯ ಖಾದ್ಯ ಇದಾಗಿದೆ.



Click it and Unblock the Notifications
