Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 1 hr ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 14 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Technology Google Maps: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ! ಹತ್ತಿರದ EV ಚಾರ್ಜಿಂಗ್ ಸ್ಟೇಷನ್ ಸರ್ಚ್ ಬಲು ಸುಲಭ
- Movies ಹರ್ಷಿಕಾ ಪೂಣಚ್ಚ- ಭುವನ್ ಪೊನ್ನಣ್ಣ ಮೇಲೆ ಹಲ್ಲೆ; "ನಮ್ಮ ಬೆಂಗಳೂರಿನಲ್ಲಿ ನಾವು ಎಷ್ಟು ಸುರಕ್ಷಿತ?" ಎಂದ ನಟಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಟಿ ತಿಂಗಳ ಸ್ಪೆಷಲ್: ಮಂಗಳೂರು ಕುಡುತ ಚಟ್ನಿ ರೆಸಿಪಿ
ಮಳೆಗಾಲದಲ್ಲಿ ದೇಹ ತಂಪಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಕಾಲದಲ್ಲಿ ಕುಡುತ ಚಟ್ನಿ ಮಾಡುತ್ತಾರೆ. ಹುರುಳಿ ಚಟ್ನಿಯನ್ನೇ ತುಳುವಿನಲ್ಲಿ ಕುಡುತ ಚಟ್ನಿ ಎಂದು ಕರೆಯಲಾಗಿದ್ದು, ಇದು ದೇಹವನ್ನು ಬೆಚ್ಚಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು, ಗರ್ಭಿಣಿಯರಿಗೆ ಬಹಳ ಮುಖ್ಯವಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಕುಡುತ ಚಟ್ನಿ ಮಾಡುವ ವಿಧಾನವನ್ನು ಇಂದು ನೋಡೋಣ.
Recipe By: Shreeraksha
Recipe Type: Vegetarian
Serves: 4
-
ಬೇಕಾಗುವ ಪದಾರ್ಥಗಳು:
1/2 ಕಪ್ ಹುರುಳಿ ಕಾಳು
1 ಕಪ್ ಈರುಳ್ಳಿ
2 ಲವಂಗ ಬೆಳ್ಳುಳ್ಳಿ
ಕರಿಬೇವಿನ ಎಲೆಗಳು
4 ಒಣ ಕೆಂಪು ಮೆಣಸಿನಕಾಯಿ
2 ಚಮಚ ಜೀರಿಗೆ
1/2 ಚಮಚ ಕೊತ್ತಂಬರಿ ಬೀಜ
1/2 ಚಮಚ ಬೆಲ್ಲ
2 ಚಮಚ ತಾಜಾ ತೆಂಗಿನಕಾಯಿ
1 ಚಮಚ ಹುಣಸೆ ನೀರು
2 ಟೀಸ್ಪೂನ್ ಎಣ್ಣೆ
ಇಂಗು
ಉಪ್ಪು , ರುಚಿಗೆ
ಒಗ್ಗರಣೆಗೆ- ಸಾಸಿವೆ, ಉದ್ದಿನ ಬೇಳೆ
-
ಹುರಳಿ ಕಲು ಚಟ್ನಿ ರೆಸಿಪಿ ಮಾಡುವುದು ಹೇಗೆ:
- ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕರಿಬೇವಿನ ಎಲೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜಗಳ್ನು ಸೇರಿಸಿ, ಕೈಯಾಡಿಸಿ.
- ನಂತರ, ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ.
- ಅದು ಮುಗಿದ ನಂತರ ಅದಕ್ಕೆ ಹುರುಳಿ ಕಾಳು ಸೇರಿಸಿ, ಅದು ಉಬ್ಬುವವರೆಗೆ ಫ್ರೈ ಮಾಡಿ. ಒಮ್ಮೆ ಮಾಡಿದ ನಂತರ ಸ್ಟವ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
- ನಂತರ ಮಿಕ್ಸಿ ಜಾರ್ ಗೆ ಈ ಹುರಿದ ಮಿಶ್ರಣ ಹಾಕಿ ಅದಕ್ಕೆ ಬೆಲ್ಲ, ತೆಂಗಿನಕಾಯಿ ಮತ್ತು ಹುಣಸೆಹಣ್ಣು ಸೇರಿಸಿ, ನಯವಾದ ಪೇಸ್ಟ್ ಮಾಡಿ. ಒಂದು ತಟ್ಟೆಗೆ ಹಾಕಿಕೊಳ್ಳಿ.
- ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನಬೇಳೆ ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಕರಿಬೇವಿನ ಎಲೆಗಳು, ಒಣ ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ. ಸ್ಟವ್ ಆಫ್ ಮಾಡಿ. ಇದನ್ನು ಹುರಳಿ ಕಾಳು ಚಟ್ನಿಯ ಮೇಲೆ ನಿಧಾನವಾಗಿ ಸೇರಿಸಿ ಬಡಿಸಿ.
- ಇದನ್ನು ಇಡ್ಲಿ, ದೋಸೆ, ಗಂಜಿ ಮೊದಲಾದವುಗಳೊಂದಿಗೆ ಸೇರಿಸಿ ತಿನ್ನಬಹುದು.
- People - 4 ಜನ
- ಎನರ್ಜಿ - 27 ಕ್ಯಾ
- ಕೊಬ್ಬು - 1.3ಗ್ರಾ
- ಪ್ರೋಟೀನ್ - 1.1ಗ್ರಾ
- ಕಾರ್ಬೋಹೈಡ್ರೇಟ್ - 2.8 ಗ್ರಾ
- ಫೈಬರ್ - 0.4ಗ್ರಾ