Latest Updates
-
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು!
ಕೆಮ್ಮ, ಶೀತಾ, ಕಫಕ್ಕೆ ರಾಮಬಾಣ ಅಜ್ಜಿ ಮಾಡಿದ ಸ್ಪೆಷಲ್ ಕಷಾಯ !
ಇತ್ತೀಚಿಗೆ ಈ ಜ್ವರ, ಶೀತಾ, ಕೆಮ್ಮು ಹೇಳಿ ಕೇಳಿ ಬರೋದಿಲ್ಲ. ಯಾವಾಗ ಬೇಕಾದ್ರು ಜನರನ್ನು ವಕ್ಕರಿಸಿ ಬಿಡುತ್ತೆ. ಇವುಗಳು ಒಂದು ಸಾರಿ ಜನರ ಬೆನ್ನು ಹತ್ತಿ ಬಿಟ್ರೆ ಜಪ್ಪಯ್ಯ ಅಂದ್ರು ಹೋಗೋದೇ ಇಲ್ಲ. ಇಂತಹ ಸಂದರ್ಭದಲ್ಲಿ ಖಡಕ್ ಕಷಾಯ ಕುಡಿದ್ರೆ ಯಾವ ಡಾಕ್ಟರ್ ಬೇಡ. ಈ ಕೆಮ್ಮು, ಶೀತ, ಕಫಾ ಎಲ್ಲಾ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುತ್ತೆ.

ಆ ದಿನ ರಾತ್ರಿ ನನಗೆ ಕಣ್ಣು ತೆರೆಯಲು ಕಷ್ಟ ಆಗಿತ್ತು. ಏಕೆಂದರೆ ಜ್ವರ ನನ್ನನ್ನು ಅಷ್ಟರ ಮಟ್ಟಿಗೆ ಭಾದಿಸಿತ್ತು. ಮಾರನೇ ದಿನ ಡಾಕ್ಟರ್ ಬಳಿ ಹೋಗಿ ವಾಪಾಸ್ ಬಂದ ಮೇಲೆ ಜ್ವರ ಏನೋ ಕಡಿಮೆಯಾಗಿತ್ತು. ಆದರೆ ಕೆಮ್ಮು, ಕಫಾ ನನ್ನನ್ನು ಬಿಡದೇ ಕಾಡಿತ್ತು. ಆಗ ನನ್ನಜ್ಜಿ ಲೋಟದಲ್ಲಿ ಅದೇನೋ ತಂದು ಕೊಟ್ಟು ಕಣ್ಣು ಮುಚ್ಚಿ ಕುಡಿ ಅಂತ ಹೇಳಿದ್ರು. ಅಯ್ಯೋ ಆ ಅನುಭವ ಕಷ್ಟ ಕಷ್ಟ. ಆದ್ರೆ 5-6 ಬಾರಿ ಈ ಕಷಾಯ ಕುಡಿದ ಮೇಲೆ ಕೆಮ್ಮು ಹಾಗೂ ಕಫದ ಸಮಸ್ಯೆ ಸಂಪೂರ್ಣವಾಗಿ ಮಾಯವಾಗಿತ್ತು.
Recipe By: Shwetha Kumari
Recipe Type: Veg
Serves: 2
-
ಬೇಕಾಗುವ ಸಾಮಾಗ್ರಗಳು
- ಒಣ ಶುಂಠಿ- 1 ಇಂಚು (ಮಧ್ಯಮ ಗಾತ್ರ)
- ಕೇಸರಿ ಕಲ್ಲು ಸಕ್ಕರೆ - ರುಚಿಗೆ ತಕ್ಕಷ್ಟು
- ಸಂಬರ ಬಳ್ಳಿ ಅಥವಾ ದೊಡ್ಡಪತ್ರೆ(ಸಂಬರಬಳ್ಳಿ ಕಷಾಯ ಮಾಡುವಾಗ ನಮಗೆ ಸಿಗದ ಕಾರಣ ಬಳಸಿಲ್ಲ. ಆದರೆ ಇದನ್ನು ಬಳಸಿದರೆ ಉತ್ತಮ) - 3-4 ಎಲೆ
- ತುಳಸಿ - 5-6 ಎಲೆ
- ಕರಿಮೆಣಸು ಹುಡಿ - 1 ಚಮಚ
- ನೀರು - 1.5 ವರೆ ಗ್ಲಾಸ್
-
ಮಾಡುವ ವಿಧಾನ
* ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರನ್ನು ಬಿಸಿಯಾಗಲು ಇಡಿ
* ಈಗ ಒಣ ಶುಂಠಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ
* ಮೊದಲಿಗೆ ಕುಟ್ಟಿದ ಒಣಶುಂಠಿ, ಕೇಸರಿ ಕಲ್ಲು ಸಕ್ಕರೆ, ಕರಿಮೆಣಸು ಪುಡಿ, ದೊಡ್ಡ ಪತ್ರೆ ಎಲೆ, ತುಳಸಿ ಎಲೆಯನ್ನು ನೀರಿಗೆ ಸೇರಿಸಿ
* ಕಫ ಕರಗಲು ಕೇಸರಿ ಕಲ್ಲು ಸಕ್ಕರೆ ಉತ್ತಮ ಹೀಗಾಗಿ ಸಾಧ್ಯವಾದಷ್ಟು ಇದನ್ನೇ ಬಳಸಿ
*ಈಗ ಎಲ್ಲವನ್ನು ಹಾಕಿ ಸರಿ ಸುಮಾರು 15 ನಿಮಿಷ ಕುದಿಯಲು ಬಿಡಿ
* ಕುದಿದ ಮೇಲೆ ಇಳಿಸಿ ನಂತರ ಅದನ್ನು ಸೋಸಿ ಒಂದು ಗ್ಲಾಸ್ಗೆ ಹಾಕಿಕೊಳ್ಳಿ
* ಬಿಸಿ ಬಿಸಿ ಇರುವಾಗಲೇ ಈ ಕಷಾಯವನ್ನು ಕುಡಿಯಿರಿ
ಕೆಮ್ಮು, ಕಫಾ, ಶೀತ ಇರುವಾಗ ಪ್ರತಿನಿತ್ಯ ಎರಡು ಬಾರಿ ಇದನ್ನು ಕುಡಿದರೆ ಸಾಮಾನ್ಯವಾಗಿ 3-4 ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಇದಕ್ಕೆ ನೀವು ಸ್ವಲ್ಪ ಜೇನು ಕೂಡ ಸೇರಿಸಿ ಕುಡಿಯಬಹುದು
- People - 2
ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರನ್ನು ಬಿಸಿಯಾಗಲು ಇಡಿ

* ಈಗ ಒಣ ಶುಂಠಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ

* ಮೊದಲಿಗೆ ಕುಟ್ಟಿದ ಒಣಶುಂಠಿ, ಕೇಸರಿ ಕಲ್ಲು ಸಕ್ಕರೆ, ಕರಿಮೆಣಸು ಪುಡಿ, ದೊಡ್ಡ ಪತ್ರೆ ಎಲೆ, ತುಳಸಿ ಎಲೆಯನ್ನು ನೀರಿಗೆ ಸೇರಿಸಿ

* ಕಫ ಕರಗಲು ಕೇಸರಿ ಕಲ್ಲು ಸಕ್ಕರೆ ಉತ್ತಮ ಹೀಗಾಗಿ ಸಾಧ್ಯವಾದಷ್ಟು ಇದನ್ನೇ ಬಳಸಿ

*ಈಗ ಎಲ್ಲವನ್ನು ಹಾಕಿ ಸರಿ ಸುಮಾರು 15 ನಿಮಿಷ ಕುದಿಯಲು ಬಿಡಿ

* ಕುದಿದ ಮೇಲೆ ಇಳಿಸಿ ನಂತರ ಅದನ್ನು ಸೋಸಿ ಒಂದು ಗ್ಲಾಸ್ಗೆ ಹಾಕಿಕೊಳ್ಳಿ

* ಬಿಸಿ ಬಿಸಿ ಇರುವಾಗಲೇ ಈ ಕಷಾಯವನ್ನು ಕುಡಿಯಿರಿ
ಕೆಮ್ಮು, ಕಫಾ, ಶೀತ ಇರುವಾಗ ಪ್ರತಿನಿತ್ಯ ಎರಡು ಬಾರಿ ಇದನ್ನು ಕುಡಿದರೆ ಸಾಮಾನ್ಯವಾಗಿ 3-4 ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.



Click it and Unblock the Notifications
