Just In
Don't Miss
- News ಲೋಕಸಭಾ ಚುನಾವಣೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್ಡಿಕೆ ಮೇಕೆದಾಟು ಅಸ್ತ್ರ
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ
ಬೇಕಾದ ಪದಾರ್ಥಗಳು : ಒಣ ಶುಂಠಿ - ಕಿರುಬೆರಳಿನಷ್ಟು | ಕರಿ ಮೆಣಸು, ಜೀರಿಗೆ, ಕೊತ್ತಂಬರಿ ಬೀಜ (ಹವೀಜ) ಒಂದೊಂದು ಚಮಚ | ಒಂದು ನಿಂಬೆ ಹಣ್ಣು | ಉಪ್ಪು ಮತ್ತು ತುಣುಕು ಬೆಲ್ಲ | ಕೆಂಪು ಕಲ್ಲುಸಕ್ಕರೆ (ಬೇಕಿದ್ದರೆ).
ತಯಾರಿಸುವ ವಿಧಾನ :
ಒಣ ಶುಂಠಿಯನ್ನು ತುಂಡು ಮಾಡಿ ಅಥವಾ ಜಜ್ಜಿಕೊಳ್ಳಿ. ಕರಿಮೆಣಸು, ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ಪತ್ಯೇಕವಾಗಿ ಹುರಿದಿಟ್ಟುಕೊಂಡು ಅದಕ್ಕೆ ಒಣ ಶುಂಠಿ ಹಾಕಿ ಒರಳು ಕಲ್ಲಿನಲ್ಲಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ. ನಗರಗಳಲ್ಲಿ ಜನರು ಅಪಾರ್ಟ್ ಮೆಂಟ್ ಸೇರಿಕೊಂಡಿರುವುದರಿಂದ ಒರಳು ಕಲ್ಲಿರುವುದು ಅನುಮಾನವೇ. ಆದ್ದರಿಂದ ಮಿಕ್ಸಿ ಉಪಯೋಗಿಸಿ ಪರವಾಗಿಲ್ಲ. ಈ ಪುಡಿ ಮಾಡಿಟ್ಟುಕೊಂಡ ಮಿಶ್ರಣವನ್ನು ಬಾಟಲಲ್ಲಿ ತೆಗೆದಿಟ್ಟುಕೊಂಡು ಯಾವಾಗ ಬೇಕೆಂದಾಗ ಕಷಾಯ ತಯಾರಿಸಲು ಉಪಯೋಗಿಸಬಹುದು.
ಸ್ಟೌ ಮೇಲೆ ನಾಲ್ಕು ಕಪ್ಪಿನಷ್ಟು ನೀರಿಟ್ಟು ಕುದಿಸಿ. ನೀರು ಕುದಿಯುತ್ತಿರುವಾಗಲೇ ನಿಂಬೆ ಹಣ್ಣಿನ ರಸ, ಉಪ್ಪು, ಪುಡಿ ಮಾಡಿದ ಬೆಲ್ಲ ಮತ್ತು ಮೇಲೆ ತಯಾರಿಸಿಕೊಂಡ ಪುಡಿಯನ್ನು ಹಾಕಿ ಮತ್ತು ಹತ್ತು ನಿಮಿಷ ಕುದಿಸಿ. ಶುಂಠಿ ಕಷಾಯ ಸಿಹಿಯಾಗಿರಬೇಕಿದ್ದರೆ ಕುದಿಸುವಾಗ ಕೆಂಪು ಕಲ್ಲುಸಕ್ಕರೆ ಸೇರಿಸಬಹುದು. ಕುದಿಸಿ ಇಳಿಸಿದ ನಂತರ ಸೋಸಿಕೊಂಡು ಬಿಸಿಯಿರುವಾಗಲೇ ಹಾಲು ಸೇರಿಸಿ ಅಥವಾ ಹಾಲು ಸೇರಿಸದೆಯೇ ಕುಡಿಯಿರಿ.
ಈ ಒಣ ಶುಂಠಿ ಕಷಾಯ ನೆಗಡಿಗೆ ರಾಮಬಾಣ. ಇದಕ್ಕೆ ಉತ್ತರ ಕರ್ನಾಟಕದಲ್ಲಿ ಅಲ್ಲಾ ಕಾಡೆ ಅಂತಲೂ ಕರೆಯುತ್ತಾರೆ. ಬಿಸಿಯಿರುವಾಗಲೇ ದಿನಕ್ಕೆರಡು ಬಾರಿ ಹೀರಿದರೆ ನೆಗಡಿ ಗಡಿಬಿಡಿಯಿಂದ ಮಾಯವಾಗಿರುತ್ತದೆ. ಇದಕ್ಕೆ ಒಂದು ಕಡ್ಡಿಯಷ್ಟು ಜೇಷ್ಠಮಧುವನ್ನು ಸೇರಿಸಿ ಕುದಿಸಿದರೆ ಕೆಮ್ಮು ಕೂಡ ಕಡಿಮೆಯಾಗುತ್ತದೆ. ಕೆಮ್ಮು ಮತ್ತು ನೆಗಡಿಗಾಗಿ ಔಷಧಿಗಳನ್ನು ತೆಗೆದುಕೊಳ್ಳುವ ಬದಲು ಈ ಕಷಾಯವನ್ನು ಅವಲಂಬಿಸುವುದು ಉತ್ತಮ, ಏನಂತೀರಿ?