Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ದಾಳಿಂಬೆ ಸಿಪ್ಪೆ ಬಿಸಾಡುವ ಮುನ್ನ ಯೋಚಿಸಿ!
ದಾಳಿಂಬೆಯ ಆಕರ್ಷಕ ಬಣ್ಣವನ್ನು ನೋಡಿದಾಗಲೆ ಬಾಯಲ್ಲಿ ನೀರೂರುತ್ತದೆ. ಅಲ್ಲದೆ ದಾಳಿಂಬೆಯನ್ನು ತಿನ್ನುವುದು ಆರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು.ದಾಳಿಂಬೆ ಕೊಂಡು ದಾಳಿಂಬೆಯ ಬೀಜಗಳನ್ನು ತಿಂದು ಅದರ ಸಿಪ್ಪೆಯನ್ನು ಬಿಸಾಡುವವರೆ ಹೆಚ್ಚು. ಇನ್ನು ಮುಂದೆ ಹಾಗೆ ಬಿಸಾಡಬೇಡಿ! ಏಕೆಂದರೆ ಇದರಲ್ಲಿ ತಿರುಳಿಗಿಂತ ಸಿಪ್ಪೆಯಲ್ಲಿ ಪೋಷಕಾಂಶಗಳು ಅಧಿಕವಿರುತ್ತದೆ. ಆದ್ದರಿಂದ ಸಿಪ್ಪೆಯನ್ನು ಒಣಗಿಸಿ ಇಡಬೇಕು. ಹೀಗೆ ಒಣಗಿಸಿಟ್ಟ ದಾಳಿಂಬೆ ಸಿಪ್ಪೆಯಿಂದ ತಂಬುಳಿ ಮಾಡಿ ಕುಡಿದರೆ ಬಾಯಿಗೆ ರುಚಿ ಮತ್ತು ಸೆಕೆಯಲ್ಲಿ ದೇಹದ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ಬೇಕಾಗುವ ಸಾಮಾಗ್ರಿಗಳು:
* ದಾಳಿಂಬೆ ಸಿಪ್ಪೆ
* ತೆಂಗಿನ ತುರಿ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಇಟ್ಟುಕೊಳ್ಳಬೇಕು.
2. ತಂಬುಳಿ ಮಾಡುವಾಗ ಸಿಪ್ಪೆಯನ್ನು ತುಪ್ಪದಲ್ಲಿ ಹುರಿಯಬೇಕು.
3. ನಂತರ ಇದನ್ನು ತುರಿಯ ಜೊತೆ ರುಬ್ಬಬೇಕು (ಗಮನಿಸಬೇಕಾದ ಅಂಶವೆಂದರೆ ದಾಳಿಂಬೆ ಸಿಪ್ಪೆಯನ್ನು ಅತ್ಯಲ್ಪ ಪ್ರಮಾಣದಲ್ಲಿ ಬಳಸಬೇಕು, ಇಲ್ಲದಿದ್ದರೆ ಒಗರಾಗುತ್ತದೆ).
4. ಈಗ ಇದಕ್ಕೆ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್ನಿಂದ ತಿರುಗಿಸಬೇಕು. ಈಗ ಬಾಯಾರಿಕೆಯಾದಾಗ ಕುಡಿಯಲು ರುಚಿಕರ ಮತ್ತು ಆರೋಗ್ಯಕರವಾದ ತಂಬುಳಿ ರೆಡಿ.
ಈ ರೀತಿ ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಕೂಡ ತಯಾರಿಸಬಹುದು. ಇತರ ತಂಪು ಪಾನೀಯ ಕುಡಿಯುವ ಬದಲು ಈ ರೀತಿ ಮಾಡಿ ಕುಡಿದರೆ ರುಚಿಯ ಜೊತೆ ಆರೋಗ್ಯಕ್ಕೆ ಒಳ್ಳೆಯದು. ರೋಗ ನಿರೋಧಕ ಸಾಮರ್ಥ್ಯ ಕೂಡ ಹೆಚ್ಚಾಗುವುದು.



Click it and Unblock the Notifications











