Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಅಡುಗೆ ,ಆರೋಗ್ಯ :ಶುಂಠಿ ಕಷಾಯವಲ್ಲ. ಸೂಪ್
ಅಡುಗೆ ಮನೆಯ ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಶುಂಠಿ ಹಾಗೂ ಮೆಣಸು ಸೇರಿಸಿ ಗರಮಾಗರಂ ಸೂಪ್ ಮಾಡೋಣ ಬನ್ನಿ, ಸಣ್ಣ ಪುಟ್ಟ ಕಾಯಿಲೆಗಳನ್ನು ದೂರಾಗಿಸಲು ಆರೋಗ್ಯ ವೃದ್ಧಿಗಾಗಿ ಈ ಸೂಪ್ ಆಗಾಗ ಕುಡಿಯುವುದು ಒಳ್ಳೆಯದು. ನೆಗಡಿಗಂತೂ ಉತ್ತಮ ಔಷಧಿ
ಮನಸ್ವಿನಿ. ನಾರಾವಿ
ಬೇಕಾಗುವ ಪದಾರ್ಥಗಳು:
ಒಣ ಶುಂಠಿ : 1 ಅಂಗುಲದಷ್ಟು ಉದ್ದದ ತುಂಡು
ಕರಿ ಮೆಣಸು: 1ಟೀ ಚಮಚ
ಜೀರಿಗೆ : 1 ಟೀ ಚಮಚ
ಕೊತ್ತಂಬರಿ ಬೀಜ (ಧನಿಯ): 1ಟೀ ಚಮಚ
ನಿಂಬೆ ಹಣ್ಣು : 1
ರುಚಿಗೆ ತಕ್ಕಷ್ಟು ಅಡುಗೆ ಉಪ್ಪು, ಬೆಲ್ಲ
ತಯಾರಿಸುವ ವಿಧಾನ: ಒಣ ಶುಂಠಿಯನ್ನು ತುಂಡು ಮಾಡಿ. ಕರಿಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ನಂತರ ಎಲ್ಲಾ ಮಿಶ್ರಣವನ್ನು ಚೂರ್ಣದ ಹದಕ್ಕೆ ನುಣ್ಣಗೆ ಮಾಡಿಕೊಳ್ಳಿ, ಹುರಳು ಕಲ್ಲಿನಲ್ಲಿ ಅಥವಾ ಕುಟ್ಟಾಣಿಯಲ್ಲಿ ಮಾಡಿದರೆ ಉತ್ತಮ. ಮಿಕ್ಸಿಗೆ ಹಾಕಿದರೆ ಚೂರ್ಣದ ಸ್ವರೂಪ ಹೋಗಿ ನಯವಾದ ಹಿಟ್ಟಾಗುವುದು ಖಂಡಿತ.
ನಾಲ್ಕು ಕಪ್ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿರುವಾಗ ನಿಂಬೆರಸ, ಉಪ್ಪು, ಪುಡಿಮಾಡಿದ ಬೆಲ್ಲ ಮತ್ತು ಮೇಲೆ ತಿಳಿಸಿದ ಚೂರ್ಣ ಮಿಶ್ರಣವನ್ನು ಹಾಕಿ. ಐದು ನಿಮಿಷ ಚೆನ್ನಾಗಿ ಕುದಿದ ನಂತರ ಕೆಳಕ್ಕಿಳಿಸಿ. ಬಿಸಿಯ ಹದವರಿತು ಕುಡಿಯಿರಿ. ಅಗತ್ಯವಿದ್ದರೆ ಹಾಲು ಬೆರೆಸಿ ಕುಡಿಯಬಹುದು. ಶೀತ, ಕೆಮ್ಮು, ದೇಹಾಲಸ್ಯ ದೂರಾಗಿಸಲು ದಿನಕ್ಕೊಂದು ಕಪ್ ನಂತೆ ಮೂರು ದಿನ ಸೇವಿಸಿದರೆ ಸಾಕು.



Click it and Unblock the Notifications