Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಅಡುಗೆ ,ಆರೋಗ್ಯ :ಶುಂಠಿ ಕಷಾಯವಲ್ಲ. ಸೂಪ್
ಅಡುಗೆ ಮನೆಯ ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಶುಂಠಿ ಹಾಗೂ ಮೆಣಸು ಸೇರಿಸಿ ಗರಮಾಗರಂ ಸೂಪ್ ಮಾಡೋಣ ಬನ್ನಿ, ಸಣ್ಣ ಪುಟ್ಟ ಕಾಯಿಲೆಗಳನ್ನು ದೂರಾಗಿಸಲು ಆರೋಗ್ಯ ವೃದ್ಧಿಗಾಗಿ ಈ ಸೂಪ್ ಆಗಾಗ ಕುಡಿಯುವುದು ಒಳ್ಳೆಯದು. ನೆಗಡಿಗಂತೂ ಉತ್ತಮ ಔಷಧಿ
ಮನಸ್ವಿನಿ. ನಾರಾವಿ
ಬೇಕಾಗುವ ಪದಾರ್ಥಗಳು:
ಒಣ ಶುಂಠಿ : 1 ಅಂಗುಲದಷ್ಟು ಉದ್ದದ ತುಂಡು
ಕರಿ ಮೆಣಸು: 1ಟೀ ಚಮಚ
ಜೀರಿಗೆ : 1 ಟೀ ಚಮಚ
ಕೊತ್ತಂಬರಿ ಬೀಜ (ಧನಿಯ): 1ಟೀ ಚಮಚ
ನಿಂಬೆ ಹಣ್ಣು : 1
ರುಚಿಗೆ ತಕ್ಕಷ್ಟು ಅಡುಗೆ ಉಪ್ಪು, ಬೆಲ್ಲ
ತಯಾರಿಸುವ ವಿಧಾನ: ಒಣ ಶುಂಠಿಯನ್ನು ತುಂಡು ಮಾಡಿ. ಕರಿಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ನಂತರ ಎಲ್ಲಾ ಮಿಶ್ರಣವನ್ನು ಚೂರ್ಣದ ಹದಕ್ಕೆ ನುಣ್ಣಗೆ ಮಾಡಿಕೊಳ್ಳಿ, ಹುರಳು ಕಲ್ಲಿನಲ್ಲಿ ಅಥವಾ ಕುಟ್ಟಾಣಿಯಲ್ಲಿ ಮಾಡಿದರೆ ಉತ್ತಮ. ಮಿಕ್ಸಿಗೆ ಹಾಕಿದರೆ ಚೂರ್ಣದ ಸ್ವರೂಪ ಹೋಗಿ ನಯವಾದ ಹಿಟ್ಟಾಗುವುದು ಖಂಡಿತ.
ನಾಲ್ಕು ಕಪ್ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿರುವಾಗ ನಿಂಬೆರಸ, ಉಪ್ಪು, ಪುಡಿಮಾಡಿದ ಬೆಲ್ಲ ಮತ್ತು ಮೇಲೆ ತಿಳಿಸಿದ ಚೂರ್ಣ ಮಿಶ್ರಣವನ್ನು ಹಾಕಿ. ಐದು ನಿಮಿಷ ಚೆನ್ನಾಗಿ ಕುದಿದ ನಂತರ ಕೆಳಕ್ಕಿಳಿಸಿ. ಬಿಸಿಯ ಹದವರಿತು ಕುಡಿಯಿರಿ. ಅಗತ್ಯವಿದ್ದರೆ ಹಾಲು ಬೆರೆಸಿ ಕುಡಿಯಬಹುದು. ಶೀತ, ಕೆಮ್ಮು, ದೇಹಾಲಸ್ಯ ದೂರಾಗಿಸಲು ದಿನಕ್ಕೊಂದು ಕಪ್ ನಂತೆ ಮೂರು ದಿನ ಸೇವಿಸಿದರೆ ಸಾಕು.



Click it and Unblock the Notifications