Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ಅಡುಗೆ ,ಆರೋಗ್ಯ :ಶುಂಠಿ ಕಷಾಯವಲ್ಲ. ಸೂಪ್
ಅಡುಗೆ ಮನೆಯ ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಶುಂಠಿ ಹಾಗೂ ಮೆಣಸು ಸೇರಿಸಿ ಗರಮಾಗರಂ ಸೂಪ್ ಮಾಡೋಣ ಬನ್ನಿ, ಸಣ್ಣ ಪುಟ್ಟ ಕಾಯಿಲೆಗಳನ್ನು ದೂರಾಗಿಸಲು ಆರೋಗ್ಯ ವೃದ್ಧಿಗಾಗಿ ಈ ಸೂಪ್ ಆಗಾಗ ಕುಡಿಯುವುದು ಒಳ್ಳೆಯದು. ನೆಗಡಿಗಂತೂ ಉತ್ತಮ ಔಷಧಿ
ಮನಸ್ವಿನಿ. ನಾರಾವಿ
ಬೇಕಾಗುವ ಪದಾರ್ಥಗಳು:
ಒಣ ಶುಂಠಿ : 1 ಅಂಗುಲದಷ್ಟು ಉದ್ದದ ತುಂಡು
ಕರಿ ಮೆಣಸು: 1ಟೀ ಚಮಚ
ಜೀರಿಗೆ : 1 ಟೀ ಚಮಚ
ಕೊತ್ತಂಬರಿ ಬೀಜ (ಧನಿಯ): 1ಟೀ ಚಮಚ
ನಿಂಬೆ ಹಣ್ಣು : 1
ರುಚಿಗೆ ತಕ್ಕಷ್ಟು ಅಡುಗೆ ಉಪ್ಪು, ಬೆಲ್ಲ
ತಯಾರಿಸುವ ವಿಧಾನ: ಒಣ ಶುಂಠಿಯನ್ನು ತುಂಡು ಮಾಡಿ. ಕರಿಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ನಂತರ ಎಲ್ಲಾ ಮಿಶ್ರಣವನ್ನು ಚೂರ್ಣದ ಹದಕ್ಕೆ ನುಣ್ಣಗೆ ಮಾಡಿಕೊಳ್ಳಿ, ಹುರಳು ಕಲ್ಲಿನಲ್ಲಿ ಅಥವಾ ಕುಟ್ಟಾಣಿಯಲ್ಲಿ ಮಾಡಿದರೆ ಉತ್ತಮ. ಮಿಕ್ಸಿಗೆ ಹಾಕಿದರೆ ಚೂರ್ಣದ ಸ್ವರೂಪ ಹೋಗಿ ನಯವಾದ ಹಿಟ್ಟಾಗುವುದು ಖಂಡಿತ.
ನಾಲ್ಕು ಕಪ್ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿರುವಾಗ ನಿಂಬೆರಸ, ಉಪ್ಪು, ಪುಡಿಮಾಡಿದ ಬೆಲ್ಲ ಮತ್ತು ಮೇಲೆ ತಿಳಿಸಿದ ಚೂರ್ಣ ಮಿಶ್ರಣವನ್ನು ಹಾಕಿ. ಐದು ನಿಮಿಷ ಚೆನ್ನಾಗಿ ಕುದಿದ ನಂತರ ಕೆಳಕ್ಕಿಳಿಸಿ. ಬಿಸಿಯ ಹದವರಿತು ಕುಡಿಯಿರಿ. ಅಗತ್ಯವಿದ್ದರೆ ಹಾಲು ಬೆರೆಸಿ ಕುಡಿಯಬಹುದು. ಶೀತ, ಕೆಮ್ಮು, ದೇಹಾಲಸ್ಯ ದೂರಾಗಿಸಲು ದಿನಕ್ಕೊಂದು ಕಪ್ ನಂತೆ ಮೂರು ದಿನ ಸೇವಿಸಿದರೆ ಸಾಕು.



Click it and Unblock the Notifications