Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಅಡುಗೆ ,ಆರೋಗ್ಯ :ಶುಂಠಿ ಕಷಾಯವಲ್ಲ. ಸೂಪ್
ಅಡುಗೆ ಮನೆಯ ಪ್ರಮುಖ ಸಾಂಬಾರು ಪದಾರ್ಥಗಳಲ್ಲಿ ಒಂದಾದ ಶುಂಠಿ ಹಾಗೂ ಮೆಣಸು ಸೇರಿಸಿ ಗರಮಾಗರಂ ಸೂಪ್ ಮಾಡೋಣ ಬನ್ನಿ, ಸಣ್ಣ ಪುಟ್ಟ ಕಾಯಿಲೆಗಳನ್ನು ದೂರಾಗಿಸಲು ಆರೋಗ್ಯ ವೃದ್ಧಿಗಾಗಿ ಈ ಸೂಪ್ ಆಗಾಗ ಕುಡಿಯುವುದು ಒಳ್ಳೆಯದು. ನೆಗಡಿಗಂತೂ ಉತ್ತಮ ಔಷಧಿ
ಮನಸ್ವಿನಿ. ನಾರಾವಿ
ಬೇಕಾಗುವ ಪದಾರ್ಥಗಳು:
ಒಣ ಶುಂಠಿ : 1 ಅಂಗುಲದಷ್ಟು ಉದ್ದದ ತುಂಡು
ಕರಿ ಮೆಣಸು: 1ಟೀ ಚಮಚ
ಜೀರಿಗೆ : 1 ಟೀ ಚಮಚ
ಕೊತ್ತಂಬರಿ ಬೀಜ (ಧನಿಯ): 1ಟೀ ಚಮಚ
ನಿಂಬೆ ಹಣ್ಣು : 1
ರುಚಿಗೆ ತಕ್ಕಷ್ಟು ಅಡುಗೆ ಉಪ್ಪು, ಬೆಲ್ಲ
ತಯಾರಿಸುವ ವಿಧಾನ: ಒಣ ಶುಂಠಿಯನ್ನು ತುಂಡು ಮಾಡಿ. ಕರಿಮೆಣಸು, ಜೀರಿಗೆ, ಕೊತ್ತಂಬರಿ ಬೀಜ ಇವುಗಳನ್ನು ಪ್ರತ್ಯೇಕವಾಗಿ ಹುರಿದಿಟ್ಟುಕೊಳ್ಳಿ. ನಂತರ ಎಲ್ಲಾ ಮಿಶ್ರಣವನ್ನು ಚೂರ್ಣದ ಹದಕ್ಕೆ ನುಣ್ಣಗೆ ಮಾಡಿಕೊಳ್ಳಿ, ಹುರಳು ಕಲ್ಲಿನಲ್ಲಿ ಅಥವಾ ಕುಟ್ಟಾಣಿಯಲ್ಲಿ ಮಾಡಿದರೆ ಉತ್ತಮ. ಮಿಕ್ಸಿಗೆ ಹಾಕಿದರೆ ಚೂರ್ಣದ ಸ್ವರೂಪ ಹೋಗಿ ನಯವಾದ ಹಿಟ್ಟಾಗುವುದು ಖಂಡಿತ.
ನಾಲ್ಕು ಕಪ್ ನೀರನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿರುವಾಗ ನಿಂಬೆರಸ, ಉಪ್ಪು, ಪುಡಿಮಾಡಿದ ಬೆಲ್ಲ ಮತ್ತು ಮೇಲೆ ತಿಳಿಸಿದ ಚೂರ್ಣ ಮಿಶ್ರಣವನ್ನು ಹಾಕಿ. ಐದು ನಿಮಿಷ ಚೆನ್ನಾಗಿ ಕುದಿದ ನಂತರ ಕೆಳಕ್ಕಿಳಿಸಿ. ಬಿಸಿಯ ಹದವರಿತು ಕುಡಿಯಿರಿ. ಅಗತ್ಯವಿದ್ದರೆ ಹಾಲು ಬೆರೆಸಿ ಕುಡಿಯಬಹುದು. ಶೀತ, ಕೆಮ್ಮು, ದೇಹಾಲಸ್ಯ ದೂರಾಗಿಸಲು ದಿನಕ್ಕೊಂದು ಕಪ್ ನಂತೆ ಮೂರು ದಿನ ಸೇವಿಸಿದರೆ ಸಾಕು.



Click it and Unblock the Notifications











