Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೆಲಂಗಾಣ ಸ್ಟೈಲ್ ರೆಸ್ಟೋರೆಂಟ್

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಆಂಧ್ರ ಸ್ಟೈಲ್ ಫುಡ್, ಆಂಧ್ರ ಸ್ಟೈಲ್ ರೆಸ್ಟೋರೆಂಟು ಮತ್ತು ಹೋಟೆಲುಗಳಿವೆ. ಇಲ್ಲಿ ವಿಶೇಷವಾಗಿ ನಂದಿನಿ ಹೋಟೆಲುಗಳ ಸಮೂಹನ್ನು ಹೆಸರಿಸಬಹುದಾಗಿದೆ. ಬಾಳೆ ಎಲೆ ಮೇಲೆ ಫುಲ್ ಮೀಲ್ಸ್ ಸಸ್ಯಾಹಾರ ಮತ್ತು ಮಾಂಸಾಹಾರದ ರುಚಿಗಳನ್ನು ಬಡಿಸುವ ಪದ್ದತಿ ಆರಂಭಿಸಿದ್ದು ಇವೇ ಹೋಟೆಲುಗಳು.
ಈ ಹೋಟೆಲುಗಳು ಮೊದಮೊದಲು ಜನತೆಯನ್ನು ಆಕರ್ಷಿಸಿದರೂ ಈಚೆಗೆ ಅರ್ಧ ಬೆಂದ ಅನ್ನ ಮತ್ತು ಚಪ್ಪೆಚಪ್ಪೆ ಬಿರಿಯಾನಿ ಊಟ ಹಾಕುತ್ತಿರುವುದರಿಂದ ಜನ ಬೇಸತ್ತಿದ್ದಾರೆ. ಸದ್ಯಕ್ಕೆ ವಿಷಯ ಅದಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ವಿದ್ಯುಕ್ತವಾಗಿ ಅನಾವರಣಗೊಂಡರೆ ಬೆಂಗಳೂರಿನಲ್ಲಿ ತೆಲಂಗಾಣ ಹೋಟೆಲುಗಳು ಕಾಣಿಸುಕೊಳ್ಳುತ್ತವೆಯೇ ಎಂಬುದು ನಮ್ಮ ಕುತೂಹಲ. ಹಾಗೊಮ್ಮೆ ತೆಲಂಗಾಣ ರೆಸ್ಟೋರೆಂಟುಗಳು ಆರಂಭಗೊಂಡರೆ ಆಂಧ್ರ ಸ್ಟ್ಯೈಲ್ ಹೋಟೆಲುಗಳಿಗೆ ಸಖತ್ ಕಾಂಪಿಟಿಷನ್ ಒಡ್ಡುವುದು ಖಂಡಿತ.
ಕುತೂಹಲ ತಣಿಸಿಕೊಳ್ಳಲು ನಮ್ಮ ದಟ್ಸ್ ತೆಲುಗು ಡಾಟ್ ಕಾಂನ ಸಂಪಾದಕ ಶಾಂತಾರಾಂ ಅವರನ್ನು ಸಂಪರ್ಕಿಸಲಾಯಿತು. ಈ ಬಗ್ಗೆ ಅಧಿಕೃತವಾಗಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಕೈಚೆಲ್ಲಿದ್ದಾರೆ. ಇಂದು ಬೆಳಗಿನ ಜಾವವಷ್ಟೇ ಚಂದ್ರಶೇಖರರಾವ್ ಅವರು ಎಳನೀರು ಬ್ರೇಕ್ ಫಾಸ್ಟ್ ಮಾಡಿದ್ದಾರೆ. ನಂತರದ ಬೆಳವಣಿಗೆಗಳನ್ನು ಆನಂತರ ಈಮೇಲಿನಲ್ಲಿ ಕಳಿಸಲಾಗುವುದು ಎಂದಷ್ಟೇ ಹೇಳಿ ಅವರು ಫೋನ್ ಅಫ್ ಮಾಡಿದರು.



Click it and Unblock the Notifications











