Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ತೆಲಂಗಾಣ ಸ್ಟೈಲ್ ರೆಸ್ಟೋರೆಂಟ್

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಆಂಧ್ರ ಸ್ಟೈಲ್ ಫುಡ್, ಆಂಧ್ರ ಸ್ಟೈಲ್ ರೆಸ್ಟೋರೆಂಟು ಮತ್ತು ಹೋಟೆಲುಗಳಿವೆ. ಇಲ್ಲಿ ವಿಶೇಷವಾಗಿ ನಂದಿನಿ ಹೋಟೆಲುಗಳ ಸಮೂಹನ್ನು ಹೆಸರಿಸಬಹುದಾಗಿದೆ. ಬಾಳೆ ಎಲೆ ಮೇಲೆ ಫುಲ್ ಮೀಲ್ಸ್ ಸಸ್ಯಾಹಾರ ಮತ್ತು ಮಾಂಸಾಹಾರದ ರುಚಿಗಳನ್ನು ಬಡಿಸುವ ಪದ್ದತಿ ಆರಂಭಿಸಿದ್ದು ಇವೇ ಹೋಟೆಲುಗಳು.
ಈ ಹೋಟೆಲುಗಳು ಮೊದಮೊದಲು ಜನತೆಯನ್ನು ಆಕರ್ಷಿಸಿದರೂ ಈಚೆಗೆ ಅರ್ಧ ಬೆಂದ ಅನ್ನ ಮತ್ತು ಚಪ್ಪೆಚಪ್ಪೆ ಬಿರಿಯಾನಿ ಊಟ ಹಾಕುತ್ತಿರುವುದರಿಂದ ಜನ ಬೇಸತ್ತಿದ್ದಾರೆ. ಸದ್ಯಕ್ಕೆ ವಿಷಯ ಅದಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ವಿದ್ಯುಕ್ತವಾಗಿ ಅನಾವರಣಗೊಂಡರೆ ಬೆಂಗಳೂರಿನಲ್ಲಿ ತೆಲಂಗಾಣ ಹೋಟೆಲುಗಳು ಕಾಣಿಸುಕೊಳ್ಳುತ್ತವೆಯೇ ಎಂಬುದು ನಮ್ಮ ಕುತೂಹಲ. ಹಾಗೊಮ್ಮೆ ತೆಲಂಗಾಣ ರೆಸ್ಟೋರೆಂಟುಗಳು ಆರಂಭಗೊಂಡರೆ ಆಂಧ್ರ ಸ್ಟ್ಯೈಲ್ ಹೋಟೆಲುಗಳಿಗೆ ಸಖತ್ ಕಾಂಪಿಟಿಷನ್ ಒಡ್ಡುವುದು ಖಂಡಿತ.
ಕುತೂಹಲ ತಣಿಸಿಕೊಳ್ಳಲು ನಮ್ಮ ದಟ್ಸ್ ತೆಲುಗು ಡಾಟ್ ಕಾಂನ ಸಂಪಾದಕ ಶಾಂತಾರಾಂ ಅವರನ್ನು ಸಂಪರ್ಕಿಸಲಾಯಿತು. ಈ ಬಗ್ಗೆ ಅಧಿಕೃತವಾಗಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಕೈಚೆಲ್ಲಿದ್ದಾರೆ. ಇಂದು ಬೆಳಗಿನ ಜಾವವಷ್ಟೇ ಚಂದ್ರಶೇಖರರಾವ್ ಅವರು ಎಳನೀರು ಬ್ರೇಕ್ ಫಾಸ್ಟ್ ಮಾಡಿದ್ದಾರೆ. ನಂತರದ ಬೆಳವಣಿಗೆಗಳನ್ನು ಆನಂತರ ಈಮೇಲಿನಲ್ಲಿ ಕಳಿಸಲಾಗುವುದು ಎಂದಷ್ಟೇ ಹೇಳಿ ಅವರು ಫೋನ್ ಅಫ್ ಮಾಡಿದರು.



Click it and Unblock the Notifications
