Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ತೆಲಂಗಾಣ ಸ್ಟೈಲ್ ರೆಸ್ಟೋರೆಂಟ್

ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ, ಮುಖ್ಯವಾಗಿ ಬೆಂಗಳೂರಿನಲ್ಲಿ ಆಂಧ್ರ ಸ್ಟೈಲ್ ಫುಡ್, ಆಂಧ್ರ ಸ್ಟೈಲ್ ರೆಸ್ಟೋರೆಂಟು ಮತ್ತು ಹೋಟೆಲುಗಳಿವೆ. ಇಲ್ಲಿ ವಿಶೇಷವಾಗಿ ನಂದಿನಿ ಹೋಟೆಲುಗಳ ಸಮೂಹನ್ನು ಹೆಸರಿಸಬಹುದಾಗಿದೆ. ಬಾಳೆ ಎಲೆ ಮೇಲೆ ಫುಲ್ ಮೀಲ್ಸ್ ಸಸ್ಯಾಹಾರ ಮತ್ತು ಮಾಂಸಾಹಾರದ ರುಚಿಗಳನ್ನು ಬಡಿಸುವ ಪದ್ದತಿ ಆರಂಭಿಸಿದ್ದು ಇವೇ ಹೋಟೆಲುಗಳು.
ಈ ಹೋಟೆಲುಗಳು ಮೊದಮೊದಲು ಜನತೆಯನ್ನು ಆಕರ್ಷಿಸಿದರೂ ಈಚೆಗೆ ಅರ್ಧ ಬೆಂದ ಅನ್ನ ಮತ್ತು ಚಪ್ಪೆಚಪ್ಪೆ ಬಿರಿಯಾನಿ ಊಟ ಹಾಕುತ್ತಿರುವುದರಿಂದ ಜನ ಬೇಸತ್ತಿದ್ದಾರೆ. ಸದ್ಯಕ್ಕೆ ವಿಷಯ ಅದಲ್ಲ. ಪ್ರತ್ಯೇಕ ತೆಲಂಗಾಣ ರಾಜ್ಯ ವಿದ್ಯುಕ್ತವಾಗಿ ಅನಾವರಣಗೊಂಡರೆ ಬೆಂಗಳೂರಿನಲ್ಲಿ ತೆಲಂಗಾಣ ಹೋಟೆಲುಗಳು ಕಾಣಿಸುಕೊಳ್ಳುತ್ತವೆಯೇ ಎಂಬುದು ನಮ್ಮ ಕುತೂಹಲ. ಹಾಗೊಮ್ಮೆ ತೆಲಂಗಾಣ ರೆಸ್ಟೋರೆಂಟುಗಳು ಆರಂಭಗೊಂಡರೆ ಆಂಧ್ರ ಸ್ಟ್ಯೈಲ್ ಹೋಟೆಲುಗಳಿಗೆ ಸಖತ್ ಕಾಂಪಿಟಿಷನ್ ಒಡ್ಡುವುದು ಖಂಡಿತ.
ಕುತೂಹಲ ತಣಿಸಿಕೊಳ್ಳಲು ನಮ್ಮ ದಟ್ಸ್ ತೆಲುಗು ಡಾಟ್ ಕಾಂನ ಸಂಪಾದಕ ಶಾಂತಾರಾಂ ಅವರನ್ನು ಸಂಪರ್ಕಿಸಲಾಯಿತು. ಈ ಬಗ್ಗೆ ಅಧಿಕೃತವಾಗಿ ನಾನು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಕೈಚೆಲ್ಲಿದ್ದಾರೆ. ಇಂದು ಬೆಳಗಿನ ಜಾವವಷ್ಟೇ ಚಂದ್ರಶೇಖರರಾವ್ ಅವರು ಎಳನೀರು ಬ್ರೇಕ್ ಫಾಸ್ಟ್ ಮಾಡಿದ್ದಾರೆ. ನಂತರದ ಬೆಳವಣಿಗೆಗಳನ್ನು ಆನಂತರ ಈಮೇಲಿನಲ್ಲಿ ಕಳಿಸಲಾಗುವುದು ಎಂದಷ್ಟೇ ಹೇಳಿ ಅವರು ಫೋನ್ ಅಫ್ ಮಾಡಿದರು.



Click it and Unblock the Notifications