Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕೊಡಗಿನಲ್ಲಿ ಬಿದಿರು ಕಣಿಲೆ ಬೇಟೆ: ಈಗ ನೆನಪು ಮಾತ್ರ...

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ದೊಡ್ಡವರೆನ್ನದೆ ಬಿಡುವು ಸಿಕ್ಕಾಗ ಕಣಿಲೆ ಹುಡುಕುತ್ತಾ ಬಿದಿರು ಮೆಳೆಗಳ ಬಳಿ ಸುಳಿಯುವುದು ರೂಢಿಯಾಗಿತ್ತು. ಅದರಲ್ಲಿಯೂ ಶಾಲೆಗೆ ರಜೆ ಸಿಕ್ಕಿತೆಂದರೆ ಮಕ್ಕಳು ಕಣಿಲೆ ಬೇಟೆಯಲ್ಲಿ ನಿರತರಾಗಿ ಬಿಡುತ್ತಿದ್ದರು.
ಅಕ್ಕಿ ರೊಟ್ಟಿ ಕಣಿಲೆ ಪಲ್ಯ: ಆಗಿನ ಕಾಲದಲ್ಲಿ ಎಲ್ಲೆಡೆ ಯಥೇಚ್ಛವಾಗಿ ಬಿದಿರು ಮೆಳೆಗಳಿದ್ದವು. ಹಾಗಾಗಿ ಬಿದಿರುಗಳು ಮನೆಗೆ ಕಚ್ಚಾವಸ್ತುವಾಗಿಯೂ, ದನಗಳಿಗೆ ಮೇವಾಗಿಯೂ ಮಳೆಗಾಲದಲ್ಲಿ ರುಚಿಕರ ತರಕಾರಿಯಾಗಿಯೂ ಬಳಕೆಯಾಗುತ್ತಿತ್ತು. ಮಳೆ ಬೀಳುತ್ತಿದ್ದಂತೆಯೇ ಬಿದಿರು ಮೆಳೆಗಳಿಂದ ಹೊರ ಬರುತ್ತಿದ್ದ ಕಣಿಲೆಯನ್ನು ಕತ್ತರಿಸಿ ಮನೆಗೆ ತಂದು ಅದರ ಎಳೆಯ ಭಾಗವನ್ನು ಚಿಕ್ಕದಾಗಿ ಕತ್ತರಿಸಿ ಬಳಿಕ ಅದನ್ನು ನೀರಿನಲ್ಲಿ ನೆನೆಯಲು ಹಾಕಲಾಗುತ್ತಿತ್ತು ಮೂರು ದಿನಗಳು ಕಳೆದ ಬಳಿಕ ತೆಗೆದು ಶುದ್ಧ ನೀರಿನಿಂದ ತೊಳೆದು ಬಳಿಕ ಸಾರು, ಪಲ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ಬೆಳಗ್ಗಿನ ಉಪಹಾರಕ್ಕೆ ಅಕ್ಕಿ ರೊಟ್ಟಿಯೊಂದಿಗೆ ಕಣಿಲೆ ಪಲ್ಯವನ್ನು ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತಿತ್ತು. ಇನ್ನು ಕಣಿಲೆಯಿಂದ ಉಪ್ಪಿನಕಾಯಿ, ಪತ್ರೋಡೆ. ಉಂಡೆಕಾಳು ಸೇರಿದಂತೆ ಹಲವಾರು ಖಾದ್ಯವನ್ನು ತಯಾರಿಸಲಾಗುತ್ತಿತ್ತು.
ಕೊಡಗಿನಲ್ಲಿ ಮಳೆಗಾಲದಲ್ಲಿ ಕಣಿಲೆ ಪ್ರಮುಖ ತರಕಾರಿಯಾಗಿ ಬಳಕೆಯಾಗಲು ಕಾರಣವೂ ಇತ್ತು. ಮಳೆ ಪ್ರಾರಂಭವಾಗಿ ಇಡೀ ವಾತಾವರಣವೇ ಶೀತಮಯವಾಗಿರುತ್ತಿದ್ದುದರಿಂದ ದೇಹವನ್ನು ಬಿಸಿಯಾಗಿಡಲು ಉಷ್ಣವಾಗಿರುವಂತಹ ಆಹಾರವೇ ಬೇಕಾಗುತ್ತಿತ್ತು. ಹಾಗಾಗಿ ಕಣಿಲೆ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದ್ದರಿಂದ ಅದರಲ್ಲಿ ಉಷ್ಣದ ಗುಣಾಂಶ ಹೆಚ್ಚಾಗಿರುತ್ತಿದ್ದರಿಂದ ಜನಪ್ರಿಯವಾಗಿತ್ತು.
ಅರಣ್ಯ ಉತ್ಪನ್ನ ಬಳಕೆ: ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿದ್ದುದರಿಂದ ಎಲ್ಲರೂ ಭತ್ತದ ಕೃಷಿಯನ್ನೇ ಅವಲಂಭಿಸಿದ್ದರು. ಹಾಗಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಂದರೆ ಜೂನ್ ತಿಂಗಳಿನಿಂದ ಕೆಲಸಗಳು ಆರಂಭವಾದರೆ ಮುಗಿಯುತ್ತಿದ್ದದ್ದು ಸೆಪ್ಟಂಬರ್ ವೇಳೆಗೆ. ಈ ಸಂದರ್ಭ ಮನೆಯಿಂದ ಹೊರಹೋಗಿ ಪೇಟೆಯಿಂದ ತರಕಾರಿಗಳನ್ನು ತರುವುದು ಸುಲಭದ ಕೆಲಸವಾಗಿರಲಿಲ್ಲ. ಪಟ್ಟಣಕ್ಕೆ ಹೋಗಲು ವಾಹನದ ಸೌಕರ್ಯವೂ ಇರುತ್ತಿರಲಿಲ್ಲ. ಇದ್ದರೂ ಮಳೆಯಿಂದಾಗಿ ಸಂಪರ್ಕವೇ ಕಡಿದು ಹೋಗುತ್ತಿತ್ತು. ಅಷ್ಟೇ ಅಲ್ಲ ಮನೆಯ ಸುತ್ತಲೂ ತರಕಾರಿ ಬೆಳೆಯೋಣವೆಂದರೆ ಮಳೆ ಬಂದು ಕೊಳೆತು ಹೋಗುತ್ತಿತ್ತು. ಈ ಸಂದರ್ಭ ಮನೆಯ ಸುತ್ತ, ಕಾಡಿನಲ್ಲಿ ಸಿಗುವ ವಸ್ತುಗಳನ್ನೇ ಆಹಾರ ಪದಾರ್ಥಗಳಾಗಿ ಬಳಸಲಾಗುತ್ತಿತ್ತು. ಕಾಡಿನಲ್ಲಿ ಸಿಗುವ ಹಲವಾರು ಗಿಡಮೂಲಿಕೆಗಳಲ್ಲಿ ಔಷಧೀಯ ಗುಣಗಳಿರುವುದರಿಂದ ಇವತ್ತಿಗೂ ಅದನ್ನು ವರ್ಷಕ್ಕೊಮ್ಮೆಯಾದರೂ ಬಳಸುವುದು ರೂಢಿಯಾಗಿದೆ.
ಬಿದಿರು ನಾಶ: ಕಳೆದ ಎರಡು ದಶಕಗಳಲ್ಲಿ ಕೊಡಗು ಸಂಪೂರ್ಣ ಬದಲಾಗಿದೆ. ಕೇರಳದಿಂದ ಶುಂಠಿ ಕೃಷಿ ಮಾಡಲು ಬಂದವರು ಕೊಡಗಿನಲ್ಲಿದ್ದ ಕಾಡುಗಳನ್ನು ಎಕರೆಗಿಷ್ಟು ಎಂಬಂತೆ ಹಣ ನೀಡಿ ಪಡೆದು ಅಲ್ಲಿದ್ದ ಬಿದಿರು ಕಾಡುಗಳನ್ನು ಕಡಿದು ಕೃಷಿ ಮಾಡಿದರು. ಹೀಗಾಗಿ ದನ ಮೇಯುತ್ತಾ, ಬಿದಿರು ಮೆಳೆಗಳಿಂದ ಕೂಡಿದ ಕಾಡು ನಾಶವಾಗಿ ಬಳಿಕ ಅಲ್ಲಿ ಕಾಫಿ ತೋಟಗಳು ತಲೆ ಎತ್ತಿದವು. ಇದರಿಂದ ಶೇಕಡ ಐವತ್ತರಷ್ಟು ಬಿದಿರು ಮೆಳೆಗಳು ನಾಶವಾದವು ಹೀಗಾಗಿ ಪಟ್ಟಣಗಳಲ್ಲಿ ಕಣಿಲೆ ಖರೀದಿಸಿ ಮನೆಗೆ ಕೊಂಡೊಯ್ಯುವಂತಾಯಿತು.
ಇನ್ನು ಕಣಿಲೆ ಕಷ್ಟ ಸಾಧ್ಯ: ಇದೆಲ್ಲದರ ನಡುವೆ ಈ ವರ್ಷ ಬಿದಿರು ಹೂಬಿಟ್ಟು ಮೆಳೆಗಳು ಸಾಯುತ್ತಿರುವುದರಿಂದ ಇನ್ನು ಕಣಿಲೆ ಇಲ್ಲಿನವರಿಗೆ ಸಿಗಬೇಕಾದರೆ ಐದಾರು ವರ್ಷಗಳೇ ಬೇಕಾಗುತ್ತದೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ. ಬಿದಿರು ಹೂ ಬಿಟ್ಟಿರುವುದರಿಂದ ಕಣಿಲೆ ಮಾತ್ರವಲ್ಲದೆ, ಆನೆಗಳಿಗೂ ಆಹಾರದ ಕೊರತೆ ಕಾಣಿಸಿಕೊಳ್ಳಲಿದ್ದು, ಅವು ಕಾಡಿನಿಂದ ನೇರವಾಗಿ ಕೃಷಿ ಭೂಮಿಗೆ ಬರುವ ಸಾಧ್ಯತೆಯೂ ಇಲ್ಲದಿಲ್ಲ.



Click it and Unblock the Notifications











