Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಹಸಿರು ಮೆಣಸಿನಕಾಯಿ ಚಟ್ನಿ

ಬೇಕಾದ ಸಾಮಗ್ರಿಗಳು:
* ಹೆಚ್ಚು ಖಾರವಿಲ್ಲದ ಹಸಿರು ಮೆಣಸಿನ ಕಾಯಿಗಳು: 10-15
* ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು: ಹಸಿರು ಮೆಣಸಿನ ಕಾಯಿಯ ಪ್ರಮಾಣದಷ್ಟೇ ಇದ್ದರೆ ಒಳ್ಳೆಯದು. 10-15 ಮೆಣಸಿನ ಕಾಯಿಗಳಿಗೆ 30-40 ಬೆಳ್ಳುಳ್ಳಿ ಎಸಳುಗಳು.
* ಹಸಿ ಕೊತ್ತಂಬರಿ ಸೊಪ್ಪು: ಒಂದು ಹಿಡಿಯಷ್ಟು
* ಜೀರಿಗೆ: ಒಂದು ಸಣ್ಣ ಚಮಚ
* ಮೆಂತ್ಯ: ಒಂದು ಸಣ್ಣ ಚಮಚ
* (ಕಡಲೆ ಕಾಯಿ) ಎಣ್ಣೆ : ಒಂದು ಸಣ್ಣ ಬಟ್ಟಲು
* ಪುಡಿ ಉಪ್ಪು: ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮೆಂತ್ಯ, ಜೀರಿಗೆ ಹಾಕಿ ಘಮ್ಮೆನ್ನುವಂತೆ ಕರಿದು ಅದಕ್ಕೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಬೇಕು. ಬೆಳ್ಳುಳ್ಳಿ ಎಸಳುಗಳು ಕೆಂಬಣ್ಣಕ್ಕೆ ಬಂದ ಮೇಲೆ ಹಸಿರು ಮೆಣಸಿನ ಕಾಯಿಗಳನ್ನು ಹಾಕಿ ಒಮ್ಮೆ ತಿರುವಿ, ಬಾಣಲೆಯ ಮೇಲೆ ತಟ್ಟೆ ಮುಚ್ಚಿ ಮಂದ ಉರಿಯಲ್ಲಿ ಎಣ್ಣೆಯಲ್ಲೇ ಬೇಯಲು ಬಿಡಬೇಕು. ಹಸಿರುಮೆಣಸಿನ ಕಾಯಿ ಬೆಂದ ಮೇಲೆ ಹೆಚ್ಚಿಟ್ಟುಕೊಂಡ ಕೊತ್ತಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ತಟ್ಟೆ ಮುಚ್ಚಿ ಮಂದ ಉರಿಯಲ್ಲಿ ಬಿಡಬೇಕು. ಐದು ನಿಮಿಷದ ನಂತರ ಬಾಣಲೆಯನ್ನು ಒಲೆಯ ಮೇಲಿಂದ ಇಳಿಸಿ ಆರಿಕೊಳ್ಳಲು ಬಿಡಬೇಕು.
ಪೂರ್ತಿ ತಣ್ಣಗಾದ ಮೇಲೆ ಸ್ವಲ್ಪ ಹಸಿ ಎಣ್ಣೆಯನ್ನು ಹಾಕಿ ಬಾಣಲೆಯಲ್ಲಿರುವ ಪದಾರ್ಥಗಳನ್ನು ಸಾಧ್ಯವಿದ್ದಲ್ಲಿ ಹಸೆ ಕಲ್ಲಿನ ಮೇಲೆ ಅರೆ ಬರೆ ಅರೆಯಬೇಕು. ಕಲ್ಲು ಲಭ್ಯವಿಲ್ಲದಿದ್ದಲ್ಲಿ ಮಿಕ್ಸಿಯಲ್ಲಿ ಹಾಕಿ ಒಂದು ಸುತ್ತು ತಿರುವಬೇಕು. ಪೂರ್ತಿ ನುಣ್ಣಗೆ ಮಾಡಬಾರದು. ಕುಟ್ಟಾಣಿಯ ಕುಟ್ಟುವ ಕಲ್ಲಿನ ಸಹಾಯದಿಂದಲೂ ಬಾಣಲೆಯಲ್ಲೇ ಮೆಣಸಿನಾಕಾಯಿ, ಬೆಳ್ಳುಳ್ಳಿಗಳು ಅರೆಬರೆ ನುಣ್ಣಗಾಗುವಂತೆ ಮಾಡಬಹುದು.
ಬೆಣ್ಣೆ, ಖಾರದ ಮೆಣಸಿನ ಕಾಯಿ ಚಟ್ನಿ, ರೊಟ್ಟಿ, ಚಪಾತಿಯ ಜೊತೆ ಹೇಳಿ ಮಾಡಿಸಿದ ಜೋಡಿ. ಮೆಣಸಿನ ಕಾಯಿ ಚಟ್ನಿ ತಿಂದ ಮೇಲೆ ಮೊಸರು ತಿನ್ನುವುದು ಮರೆಯಬಾರದು ಅಷ್ಟೆ. ಇಲ್ಲದಿದ್ದಲ್ಲಿ ಕೆಲವರಿಗೆ ಹೊಟ್ಟೆ ಉರಿ ಹತ್ತಿಕೊಳ್ಳಬಹುದು. ದಾವಣಗೆರೆಯ ಕಡೆ ಜೋಳದ ರೊಟ್ಟಿಯ ಜೊತೆ ಈ ಚಟ್ನಿ ಮಾಡುತ್ತಾರೆ (ಮೆಂತ್ಯ, ಜೀರಿಗೆ ಹಾಕುವುದಿಲ್ಲ). ಸುಟ್ಟ ಬದನೆ ಕಾಯಿಯನ್ನು ಇದರ ಜೊತೆ ಬೆರೆಸಿದರೂ ಚೆನ್ನಾಗಿರುತ್ತದೆ. ಮಹಾರಾಷ್ಟ್ರದಲ್ಲೂ ಚಪಾತಿ, ಜೋಳದ ರೊಟ್ಟಿಗಳ ಜೊತೆ ಉಪಯೋಗಿಸುತ್ತಾರೆ. ತಂಗಳು ಪೆಟ್ಟಿಗೆಯಲ್ಲಿಟ್ಟರೆ, ವಾರ, ಹದಿನೈದು ದಿವಸ ಕೆಡುವುದಿಲ್ಲ.



Click it and Unblock the Notifications