Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹಸಿರು ಮೆಣಸಿನಕಾಯಿ ಚಟ್ನಿ

ಬೇಕಾದ ಸಾಮಗ್ರಿಗಳು:
* ಹೆಚ್ಚು ಖಾರವಿಲ್ಲದ ಹಸಿರು ಮೆಣಸಿನ ಕಾಯಿಗಳು: 10-15
* ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು: ಹಸಿರು ಮೆಣಸಿನ ಕಾಯಿಯ ಪ್ರಮಾಣದಷ್ಟೇ ಇದ್ದರೆ ಒಳ್ಳೆಯದು. 10-15 ಮೆಣಸಿನ ಕಾಯಿಗಳಿಗೆ 30-40 ಬೆಳ್ಳುಳ್ಳಿ ಎಸಳುಗಳು.
* ಹಸಿ ಕೊತ್ತಂಬರಿ ಸೊಪ್ಪು: ಒಂದು ಹಿಡಿಯಷ್ಟು
* ಜೀರಿಗೆ: ಒಂದು ಸಣ್ಣ ಚಮಚ
* ಮೆಂತ್ಯ: ಒಂದು ಸಣ್ಣ ಚಮಚ
* (ಕಡಲೆ ಕಾಯಿ) ಎಣ್ಣೆ : ಒಂದು ಸಣ್ಣ ಬಟ್ಟಲು
* ಪುಡಿ ಉಪ್ಪು: ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ :
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮೆಂತ್ಯ, ಜೀರಿಗೆ ಹಾಕಿ ಘಮ್ಮೆನ್ನುವಂತೆ ಕರಿದು ಅದಕ್ಕೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಬಾಡಿಸಬೇಕು. ಬೆಳ್ಳುಳ್ಳಿ ಎಸಳುಗಳು ಕೆಂಬಣ್ಣಕ್ಕೆ ಬಂದ ಮೇಲೆ ಹಸಿರು ಮೆಣಸಿನ ಕಾಯಿಗಳನ್ನು ಹಾಕಿ ಒಮ್ಮೆ ತಿರುವಿ, ಬಾಣಲೆಯ ಮೇಲೆ ತಟ್ಟೆ ಮುಚ್ಚಿ ಮಂದ ಉರಿಯಲ್ಲಿ ಎಣ್ಣೆಯಲ್ಲೇ ಬೇಯಲು ಬಿಡಬೇಕು. ಹಸಿರುಮೆಣಸಿನ ಕಾಯಿ ಬೆಂದ ಮೇಲೆ ಹೆಚ್ಚಿಟ್ಟುಕೊಂಡ ಕೊತ್ತಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆ ತಟ್ಟೆ ಮುಚ್ಚಿ ಮಂದ ಉರಿಯಲ್ಲಿ ಬಿಡಬೇಕು. ಐದು ನಿಮಿಷದ ನಂತರ ಬಾಣಲೆಯನ್ನು ಒಲೆಯ ಮೇಲಿಂದ ಇಳಿಸಿ ಆರಿಕೊಳ್ಳಲು ಬಿಡಬೇಕು.
ಪೂರ್ತಿ ತಣ್ಣಗಾದ ಮೇಲೆ ಸ್ವಲ್ಪ ಹಸಿ ಎಣ್ಣೆಯನ್ನು ಹಾಕಿ ಬಾಣಲೆಯಲ್ಲಿರುವ ಪದಾರ್ಥಗಳನ್ನು ಸಾಧ್ಯವಿದ್ದಲ್ಲಿ ಹಸೆ ಕಲ್ಲಿನ ಮೇಲೆ ಅರೆ ಬರೆ ಅರೆಯಬೇಕು. ಕಲ್ಲು ಲಭ್ಯವಿಲ್ಲದಿದ್ದಲ್ಲಿ ಮಿಕ್ಸಿಯಲ್ಲಿ ಹಾಕಿ ಒಂದು ಸುತ್ತು ತಿರುವಬೇಕು. ಪೂರ್ತಿ ನುಣ್ಣಗೆ ಮಾಡಬಾರದು. ಕುಟ್ಟಾಣಿಯ ಕುಟ್ಟುವ ಕಲ್ಲಿನ ಸಹಾಯದಿಂದಲೂ ಬಾಣಲೆಯಲ್ಲೇ ಮೆಣಸಿನಾಕಾಯಿ, ಬೆಳ್ಳುಳ್ಳಿಗಳು ಅರೆಬರೆ ನುಣ್ಣಗಾಗುವಂತೆ ಮಾಡಬಹುದು.
ಬೆಣ್ಣೆ, ಖಾರದ ಮೆಣಸಿನ ಕಾಯಿ ಚಟ್ನಿ, ರೊಟ್ಟಿ, ಚಪಾತಿಯ ಜೊತೆ ಹೇಳಿ ಮಾಡಿಸಿದ ಜೋಡಿ. ಮೆಣಸಿನ ಕಾಯಿ ಚಟ್ನಿ ತಿಂದ ಮೇಲೆ ಮೊಸರು ತಿನ್ನುವುದು ಮರೆಯಬಾರದು ಅಷ್ಟೆ. ಇಲ್ಲದಿದ್ದಲ್ಲಿ ಕೆಲವರಿಗೆ ಹೊಟ್ಟೆ ಉರಿ ಹತ್ತಿಕೊಳ್ಳಬಹುದು. ದಾವಣಗೆರೆಯ ಕಡೆ ಜೋಳದ ರೊಟ್ಟಿಯ ಜೊತೆ ಈ ಚಟ್ನಿ ಮಾಡುತ್ತಾರೆ (ಮೆಂತ್ಯ, ಜೀರಿಗೆ ಹಾಕುವುದಿಲ್ಲ). ಸುಟ್ಟ ಬದನೆ ಕಾಯಿಯನ್ನು ಇದರ ಜೊತೆ ಬೆರೆಸಿದರೂ ಚೆನ್ನಾಗಿರುತ್ತದೆ. ಮಹಾರಾಷ್ಟ್ರದಲ್ಲೂ ಚಪಾತಿ, ಜೋಳದ ರೊಟ್ಟಿಗಳ ಜೊತೆ ಉಪಯೋಗಿಸುತ್ತಾರೆ. ತಂಗಳು ಪೆಟ್ಟಿಗೆಯಲ್ಲಿಟ್ಟರೆ, ವಾರ, ಹದಿನೈದು ದಿವಸ ಕೆಡುವುದಿಲ್ಲ.



Click it and Unblock the Notifications