Latest Updates
-
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬ್ರೇಕ್ ಫಾಸ್ಟ್ ಗೆ ಸ್ವಾದಿಷ್ಟ ಹೆಸರು ಕಾಳಿನ ಉಪ್ಪಿಟ್ಟಿರಲಿ

ಉಪ್ಪಿಟ್ಟಿಗೆ ಬೇಕಾಗುವ ಸಾಮಾನು: ಒಂದು ಕಪ್ ಮೊಳಕೆಒಡೆದ ಹೆಸರು ಕಾಳು, 1 1/2 ಕಪ್ ಹುರಿದ ರವೆ, 3 ಕಪ್ ನೀರು, ಸಾಸಿವೆ, ಎಣ್ಣೆ, 1/2 ಚಮಚ ಜೀರಿಗೆ, 1/2 ಚಮಚ ಉದ್ದಿನ ಬೇಳೆ, 1/2 ಚಮಚ ಕಡಲಡ ಬೇಳೆ, 1/2 ಚಮಚ ಮೆಣಸಿನ ಪುಡಿ, 3 ಹಸಿರು ಮೆಣಸಿನಕಾಯಿ, 1/2 ಕಪ್ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ನಿಂಬೆರಸ, ತೆಂಗಿನ ತುರಿ, ಕೊತ್ತಂಬರಿ
ಹೆಸರು ಕಾಳಿನ ಉಪ್ಪಿಟ್ಟು ಮಾಡುವುದು ಹೇಗೆ?
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು ಎಲ್ಲವನ್ನೂ ಹಾಕಿ ಕೆಲ ಸೆಕೆಂಡುಗಳ ಕಾಲ ಹುರಿದುಕೊಳ್ಳಬೇಕು.
* ಅದಕ್ಕೆ 3 ಕಪ್ ನೀರು ಬೆರೆಸಿ ಕುದಿಯಲು ಬಿಡಬೇಕು.
* ಪಾತ್ರೆಯೊಂದರಲ್ಲಿ 10 ನಿಮಿಷ ಮೊಳಕೆ ಒಡೆದ ಹೆಸರು ಕಾಳನ್ನು ಬೇಯಿಸಿ ಬಾಣಲೆಯ ಮಿಶ್ರಣಕ್ಕೆ ಬೆರೆಸಬೇಕು.
* ಈ ಮಿಶ್ರಣ ಕುದಿಯಲು ಆರಂಭಿಸುತ್ತಿದ್ದಂತೆ ರವೆಯನ್ನು ನಿಧಾನವಾಗಿ ಹಾಕಬೇಕು. ಹಾಗೆಯೇ ಸಣ್ಣ ಉರಿಯಲ್ಲಿ 5 ನಿಮಿಷ ಬಿಟ್ಟು ಉರಿಯನ್ನು ಆರಿಸಬೇಕು.
* ಕೊನೆಗೆ ಕೆಲವು ಹನಿ ನಿಂಬೆರಸ ಹಾಕಿ ಅದರ ಮೇಲೆ ಕೊತ್ತಂಬರಿ, ತೆಂಗಿನ ತುರಿ ಬೆರೆಸಿ ತಿರುಗಿಸಿದರೆ ರುಚಿರುಚಿಯಾದ ಹೆಸರು ಕಾಳಿನ ಉಪ್ಪಿಟ್ಟು ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications