Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಬ್ರೇಕ್ ಫಾಸ್ಟ್ ಗೆ ಸ್ವಾದಿಷ್ಟ ಹೆಸರು ಕಾಳಿನ ಉಪ್ಪಿಟ್ಟಿರಲಿ

ಉಪ್ಪಿಟ್ಟಿಗೆ ಬೇಕಾಗುವ ಸಾಮಾನು: ಒಂದು ಕಪ್ ಮೊಳಕೆಒಡೆದ ಹೆಸರು ಕಾಳು, 1 1/2 ಕಪ್ ಹುರಿದ ರವೆ, 3 ಕಪ್ ನೀರು, ಸಾಸಿವೆ, ಎಣ್ಣೆ, 1/2 ಚಮಚ ಜೀರಿಗೆ, 1/2 ಚಮಚ ಉದ್ದಿನ ಬೇಳೆ, 1/2 ಚಮಚ ಕಡಲಡ ಬೇಳೆ, 1/2 ಚಮಚ ಮೆಣಸಿನ ಪುಡಿ, 3 ಹಸಿರು ಮೆಣಸಿನಕಾಯಿ, 1/2 ಕಪ್ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ನಿಂಬೆರಸ, ತೆಂಗಿನ ತುರಿ, ಕೊತ್ತಂಬರಿ
ಹೆಸರು ಕಾಳಿನ ಉಪ್ಪಿಟ್ಟು ಮಾಡುವುದು ಹೇಗೆ?
* ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕಡಲೆ ಬೇಳೆ, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ, ಕರಿಬೇವು ಎಲ್ಲವನ್ನೂ ಹಾಕಿ ಕೆಲ ಸೆಕೆಂಡುಗಳ ಕಾಲ ಹುರಿದುಕೊಳ್ಳಬೇಕು.
* ಅದಕ್ಕೆ 3 ಕಪ್ ನೀರು ಬೆರೆಸಿ ಕುದಿಯಲು ಬಿಡಬೇಕು.
* ಪಾತ್ರೆಯೊಂದರಲ್ಲಿ 10 ನಿಮಿಷ ಮೊಳಕೆ ಒಡೆದ ಹೆಸರು ಕಾಳನ್ನು ಬೇಯಿಸಿ ಬಾಣಲೆಯ ಮಿಶ್ರಣಕ್ಕೆ ಬೆರೆಸಬೇಕು.
* ಈ ಮಿಶ್ರಣ ಕುದಿಯಲು ಆರಂಭಿಸುತ್ತಿದ್ದಂತೆ ರವೆಯನ್ನು ನಿಧಾನವಾಗಿ ಹಾಕಬೇಕು. ಹಾಗೆಯೇ ಸಣ್ಣ ಉರಿಯಲ್ಲಿ 5 ನಿಮಿಷ ಬಿಟ್ಟು ಉರಿಯನ್ನು ಆರಿಸಬೇಕು.
* ಕೊನೆಗೆ ಕೆಲವು ಹನಿ ನಿಂಬೆರಸ ಹಾಕಿ ಅದರ ಮೇಲೆ ಕೊತ್ತಂಬರಿ, ತೆಂಗಿನ ತುರಿ ಬೆರೆಸಿ ತಿರುಗಿಸಿದರೆ ರುಚಿರುಚಿಯಾದ ಹೆಸರು ಕಾಳಿನ ಉಪ್ಪಿಟ್ಟು ತಿನ್ನಲು ರೆಡಿಯಾಗಿರುತ್ತೆ.



Click it and Unblock the Notifications
