Latest Updates
-
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!!
ಮಕ್ಕಳೇ! ಊಟದ ವಿಷಯದಲ್ಲಿ ಗಡಿಬಿಡಿ ಪಡಬಾರದು..!
ಇಂದಿನ ಆಧುನಿಕ ಜೀವನ ಪದ್ಧತಿ ಅಂತೆಯೇ ಆಹಾರ ಪದ್ಧತಿ ಕೂಡ ಮಕ್ಕಳಲ್ಲಿ ಅನಾರೋಗ್ಯಕರ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ಜಂಕ್ ಆಹಾರಗಳಿಗೆ ಮಕ್ಕಳು ಎಷ್ಟು ಪ್ರಭಾವಿತರಾಗಿದ್ದಾರೆ ಎಂದರೆ ಮನೆಯಲ್ಲಿ ಮಾಡಿದ ತಿಂಡಿ ತಿನಿಸುಗಳು ಮಕ್ಕಳಿಗೆ ಈಗೀಗ ರುಚಿಸುವುದೇ ಇಲ್ಲ ಎಂಬಂತಾಗಿದೆ. ಪಿಜಾ, ಬರ್ಗರ್ನಂತಹ ಆಹಾರಗಳೇ ಅವರುಗಳ ಹೊಟ್ಟೆ ತುಂಬಿಸುತ್ತಿದೆ. ಆದರೆ ಇವರುಗಳ ಆಹಾರ ಅಭ್ಯಾಸವನ್ನು ನಾವು ಬದಲಾಯಿಸಿದರೆ ಮಕ್ಕಳೂ ಕೂಡ ಆರೋಗ್ಯಪೂರ್ಣ ಆಹಾರವನ್ನೇ ತಮ್ಮ ದೈನಂದಿನ ಜೀವನದಲ್ಲಿ ಸೇವಿಸುವುದು ಖಂಡಿತ.

ಮಕ್ಕಳು ಸಾವಧಾನದಿಂದ ಅಸ್ಥೆಯಿಂದ ಊಟ ತಿಂಡಿಗಳನ್ನು ಮಾಡಿದಲ್ಲಿ ಆರೋಗ್ಯಪೂರ್ಣ ಆಹಾರ ಸೇವನೆಯತ್ತ ಅವರು ಆಕರ್ಷಿತರಾಗುತ್ತಾರೆ ಮತ್ತು ಆರೋಗ್ಯಪೂರ್ಣ ತೂಕದಿಂದ ಅವರು ನಳನಳಿಸುವುದು ಖಂಡಿತ ಎಂಬುದಾಗಿ ಅಧ್ಯಯನವೊಂದು ತಿಳಿಸಿದೆ. ರಸ್ತೆಬದಿಯ ಆಹಾರಕ್ಕೆ ಮುಗಿಬೀಳುವ ಮುನ್ನ ಇರಲಿ ಕಟ್ಟೆಚ್ಚರ
ಈ ಅಧ್ಯಯನದ ಪ್ರಕಾರ ಆರೋಗ್ಯ ತಜ್ಞರು ಹೇಳುವಂತೆ 300 ಮಕ್ಕಳಿರುವ ಎರಡು ತಂಡಗಳನ್ನು ರಚಿಸಿ ಅವರು ಈ ಅಧ್ಯಯನವನ್ನು ಕೈಗೊಂಡು ಸಾವಧಾನ ಆಹಾರ ಸೇವನೆ ಕ್ರಮಕ್ಕೆ ಒತ್ತು ನೀಡಿದ್ದಾರೆ.
ಒಂದು ಗುಂಪಿನ ಮಕ್ಕಳಿಗೆ ತಮಗೆ ಬೇಕಾದ್ದನ್ನು ಸೇವಿಸುವಂತೆ ತಿಳಿಸಿ ಇನ್ನೊಂದು ಗುಂಪಿನ ಮಕ್ಕಳಿಗೆ ಸಾವಧಾನ ಆಹಾರ ಅಭ್ಯಾಸಗಳನ್ನು ಮಾಡಿಸಲಾಯಿತು. ಅದರಂತೆ ಸಾವಧಾನವಾಗಿ ಊಟ ಮಾಡುವವರು ತಾವು ಸೇವಿಸುವ ಆಹಾರದ ಕಡೆಗೆ ಗಮನ ನೀಡುತ್ತಾ ತಮಗೆ ಬಡಿಸಿದ ಆಹಾರದ ಅರಿವನ್ನು ಅರಿತುಕೊಂಡರು. ಅವರಲ್ಲಿ ಜೀರ್ಣಶಕ್ತಿ ಸುಧಾರಣೆಯಾಯಿತು ಮತ್ತು ಇತರ ಗುಂಪಿಗೆ ಹೋಲಿಸಿದಾಗ ಹೆಚ್ಚಿನ ಪೋಷಕಾಂಶಗಳನ್ನು ಅವರು ಪಡೆದುಕೊಂಡರು.
ಸಾವಧಾನ ಊಟದ ಕ್ರಮವನ್ನು ರೂಢಿಸಿಕೊಂಡ ಮಕ್ಕಳು ಆರೋಗ್ಯ ಪೂರ್ಣ ಆಹಾರವನ್ನೇ ತಮ್ಮ ಆಯ್ಕೆಯನ್ನಾಗಿಸಿಕೊಂಡಿದ್ದಾರೆ. ಮಕ್ಕಳಿಗೆ ಆರೋಗ್ಯಕರ ಆಹಾರಕ್ಕಿಂತ ಅನಾರೋಗ್ಯಕರ ಆಹಾರವೇ ಹೆಚ್ಚು ಹಿಡಿಸುತ್ತದೆ. ಆದರೆ ಸಾವಧಾನ ಊಟದ ರೀತಿಯನ್ನು ಅವರು ಮೆಚ್ಚಿಕೊಂಡಲ್ಲಿ ಆರೋಗ್ಯಪೂರ್ಣ ಆಹಾರವನ್ನೇ ಅವರು ಮೆಚ್ಚಿಕೊಳ್ಳುತ್ತಾರೆ.
ಆದ್ದರಿಂದ ತಜ್ಞರು ಹೇಳುವಂತೆ ಮಕ್ಕಳು ಸಾವಧಾನವಾಗಿ ಆಹಾರವನ್ನು ಸೇವಿಸುವುದರಿಂದ ಪೋಷಕಾಂಶಗಳ ಕೊರತೆಯನ್ನು ಅವರು ಎದುರಿಸುವುದಿಲ್ಲ ಅಂತೆಯೇ ದೈನಂದಿನ ಚಟುವಟಿಕೆಗಳನ್ನು ಅವರು ನಿರ್ವಹಿಸಿಕೊಳ್ಳುತ್ತಾ ಕೊಬ್ಬಿಲ್ಲದ ದೇಹವನ್ನು ಪಡೆದುಕೊಳ್ಳುತ್ತಾರೆ.



Click it and Unblock the Notifications














