Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
BBK12: ಮತ್ತೊಂದು ಎಲಿಮಿನೇಷನ್; ಈ ವಾರ ಹೊರಗೆ ಬರೋದು ಯಾರು?
ಬಿಗ್ಬಾಸ್ ಸೀಸನ್ 12 ದಿನದಿಂದ ದಿನಕ್ಕೆ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಈಗಾಗಲೇ 48 ದಿನ ಪೂರೈಸಿ ಶೋ ಮುಂದುವರೆಯುತ್ತಿದೆ. ಈ ವಾರದ ಕಿಚ್ಚನ ಪಂಚಾಯ್ತಿ ಕಳೆಕಟ್ಟಿದೆ. ಶನಿವಾರ(ನವೆಂಬರ್ 15) ಗಿಲ್ಲಿ, ರಕ್ಷಿತಾ, ರಾಶಿಕಾ, ರಿಷಾ ಗೌಡಗೆ ಸುದೀಪ್ ಸರಿಯಾಗಿ ಕ್ಲಾಸ್ ತಗೊಂಡಿದ್ದಾರೆ. ಇಬ್ಬರೂ ಸೇಫ್ ಕೂಡ ಆಗಿದ್ದಾರೆ.
ಈ ಬಾರಿ ಯಾರು ಬಿಗ್ಬಾಸ್ ಮನೆಯಿಂದ ಹೊರಬರುತ್ತಾರೆ ಎನ್ನುವುದು ನಿಜಕ್ಕೂ ಕುತೂಹಲ ಮೂಡಿಸಿದೆ. ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಮಾಳು ಆಯ್ಕೆಯಂತೆ ಜಾಹ್ನವಿ, ಅಶ್ವಿನಿ ಗೌಡ, ದೃವಂತ್, ರಾಶಿಕಾ, ರಕ್ಷಿತಾ, ಕಾಕ್ರೋಚ್ ಸುಧಿ ಅವರನ್ನು ನಾಮಿನೇಟ್ ಮಾಡಿದ್ದರು. ಗಲ್ಲಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಕಳೆದ ವಾರವೇ ರಿಷಾ ಗೌಡ ನೇರವಾಗಿ ನಾಮಿನೇಟ್ ಆಗಿದ್ದರು. ಇನ್ನು ರಘು ಕೂಡ ಈ ಲಿಸ್ಟ್ ಸೇರಿದ್ದು ಗೊತ್ತೇಯಿದೆ.

ನಿನ್ನೆ ಮೊದಲು ಅಶ್ವಿನಿ ಗೌಡ ಹಾಗೂ ರಕ್ಷಿತಾ ಸೇಫ್ ಆಗಿರುವುದನ್ನು ಸುದೀಪ್ ಹೇಳಿದ್ದರು. ಇನ್ನುಳಿದಂತೆ ರಘು, ದೃವಂತ್, ಜಾಹ್ನವಿ, ರಾಶಿಕಾ, ಸುಧಿ, ರಿಷಾ ಗೌಡ ನಾಮಿನೇಟ್ ಲಿಸ್ಟ್ನಲ್ಲಿದ್ದಾರೆ. ಈ ಆರು ಜನರಲ್ಲಿ ಯಾರು ಈ ವಾರ ಬಿಗ್ಬಾಸ್ ಜರ್ನಿ ಮುಗಿಸಿ ಮನೆಗೆ ವಾಪಸ್ ಬರುತ್ತಾರೆ ಎಂದು ಕಾದು ನೋಡಬೇಕಿದೆ.
ಪ್ರಬಲ ಸ್ಪರ್ಧಿಗಳೇ ನಾಮಿನೇಟ್ ಲಿಸ್ಟ್ನಲ್ಲಿ ಇರುವುದು ವಿಪರ್ಯಾಸ. ಹಾಗಾಗಿ ಯಾರು ಎಲಿಮಿನೇಟ್ ಆಗಬಹುದು ಎನ್ನುವುದೇ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಎನಿಸಿದೆ. 'ಸೂಪರ್ ಸಂಡೇ ವಿತ್ ಸುದೀಪ' ಹೊಸ ಪ್ರೋಮೊ ಕೂಡ ಬಂದು ವೈರಲ್ ಆಗ್ತಿದೆ. ಕಿಚ್ಚನ ರೀತಿ ಗಿಲ್ಲಿ ಮಾತನಾಡಿ ಎಲ್ಲರನ್ನು ರಂಜಿಸಿದ್ದಾರೆ. ಈವತ್ತಿನ ಎಪಿಸೋಡ್ನಲ್ಲಿ ವೀಕ್ಷಕರಿಗೆ ಭರ್ಜರಿ ಮನರಂಜನೆ ಕಾಯ್ತಿದೆ. ಜೊತೆಗೆ ಎಲಿಮಿನೇಷನ್ ಶಾಕ್ ಕೂಡ ಇದೆ.
ರಾಶಿಕಾ ಹಾಗೂ ರಿಷಾ ಇಬ್ಬರಲ್ಲಿ ಒಬ್ಬರು ಬಿಗ್ಬಾಸ್ ಆಟವನ್ನು ಈ ವಾರ ಮುಗಿಸಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ಬಿಗ್ಬಾಸ್ನಲ್ಲಿ ಊಹಿಸಿದಂತೆ ಏನು ನಡೆಯಲ್ಲ. ನಿನ್ನೆಯ ಎಪಿಸೋಡ್ ಕೊಂಚ ಕಾವು ಏರಿದ್ದು ಗೊತ್ತೇಯಿದೆ. ತಪ್ಪಾಗಿ ಮಾತನಾಡುವವರಿಗೆ ತಪ್ಪಾಗಿ ನಡೆದುಕೊಳ್ಳುವವರಿಗೆ ಕಿಚ್ಚಿನ ಮಾತಿನ ಚಾಟಿ ಏಟು ಬಿದ್ದಿದೆ. ಒಟ್ಟು 19 ಮಂದಿ ಬಿಗ್ಬಾಸ್ ಮನೆ ಒಳಗೆ ಹೋಗಿದ್ದರು. ಮಿನಿ ಫಿನಾಲೆ ವೀಕ್ನಲ್ಲಿ ಮೂವರು ಹೊರಬಂದಿದ್ದರು. ಮೂವರು ವೈಲ್ಡ್ಕಾರ್ಡ್ ಎಂಟ್ರಿ ಪಡೆದಿದ್ದರು.
ಕಳೆದ ವಾರ ಚಂದ್ರಪ್ರಭ ಎಲಿಮಿನೇಟ್ ಆಗಿ ಅಚ್ಚರಿ ಮೂಡಿಸಿದ್ದರು. ಅದಕ್ಕೂ ಮುನ್ನ ಮಲ್ಲಮ್ಮ ಮನೆಯಿಂದ ಹೊರ ಬಂದಿದ್ದರು. ಇದೀಗ 15 ಮಂದಿ ಮನೆಯಲ್ಲಿ ಇದ್ದಾರೆ. ಇವತ್ತು ಒಬ್ಬರ ಸಂಖ್ಯೆ ಕಮ್ಮಿ ಆಗಲಿದೆ. ಮಿನಿ ಫಿನಾಲೆ ಬಳಿಕ ಒಂದು ವಾರ ಎಲಿಮಿನೇಷನ್ ಇರಲಿಲ್ಲ. ಸದ್ಯಕ್ಕೆ ವೈಲ್ಡ್ಕಾರ್ಡ್ ಎಂಟ್ರಿ ಸ್ಪರ್ಧಿ ರಘು ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕಳೆದ ವಾರ ಮಾಳು ಕ್ಯಾಪ್ಟನ್ ಆಗಿ ಮನೆ ಮಂದಿಯ ಅಸಮಾಧಾನಕ್ಕೆ ಗುರಿಯಾಗಿದ್ದರು.
ಬಿಗ್ಬಾಸ್ ಆಟ ಇನ್ನು 50 ದಿನ ಬಾಕಿಯಿದೆ. ಗಿಲ್ಲಿ ಟ್ರೋಫಿ ಗೆಲ್ತಾರೆ ಎಂದು ಸಾಕಷ್ಟು ಜನ ಭಾವಿಸಿದ್ದಾರೆ. ಗಿಲ್ಲಿ ಮುಂದೆ ಉಳಿದವರೆಲ್ಲಾ ಗೌಣ ಆಗಿಬಿಟ್ಟಿದ್ದಾರೆ ಎನ್ನಬಹುದು. ಇನ್ನುಳಿದಂತೆ ದೃವಂತ್ ಈಗ ಖಡಕ್ ಆಟ ಶುರು ಮಾಡಿದ್ದಾರೆ. ಇತ್ತೀಚೆಗೆ ಅಶ್ವಿನಿ ಮನೆ ಮಂದಿಯ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
Credit: Filmibeat



Click it and Unblock the Notifications