ವಿಧುರ ನೀತಿಯನ್ನು ಪಾಲಿಸಿದವನಿಗೆ ಜೀವನದಲ್ಲಿ ಖುಷಿ, ಯಶಸ್ಸು ಖಂಡಿತ

ಮನುಷ್ಯ ಜೀವನದಲ್ಲಿ ಖುಷಿಯಾಗಿರೋದಕ್ಕೆ ಏನೆಲ್ಲಾ ಮಾಡುತ್ತಾನೆ. ಹಣ, ಆಸ್ತಿ, ಅಂತಸ್ತು ಎಲ್ಲವನ್ನೂ ಸಂಪಾದನೆ ಮಾಡುತ್ತಾನೆ. ಸ್ನೇಹಿತರ, ಸಂಬಂಧಿಕರ ಪ್ರೀತಿ, ವಿಶ್ವಾಸ ಗಳಿಸೋದಕ್ಕೆ ಪ್ರಯತ್ನಿಸುತ್ತಾನೆ. ಆದರೂ ಕೂಡ ಕೆಲವೊಂದು ಸಲ ತನ್ನ ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳೋದ್ರಲ್ಲಿ ಸೋತು ಹೋಗುತ್ತಾನೆ.

ಮಹಾಭಾರತ ಕಾಲದ ಮಹಾನ್‌ ಚಿಂತಕ ಹಾಗೂ ವಿಧ್ವಾಂಸನಾಗಿದ್ದ ವಿಧುರನ ಬಗ್ಗೆ ನಿಮ್ಮಗೆಲ್ಲಾ ಗೊತ್ತೇ ಇದೆ. ಈತ ಪ್ರಮುಖ ರಾಜಕೀಯ ಶಾಸ್ತ್ರಜ್ಞನು ಹೌದು.

Vidur Neeti : People Who Have These Qualities Will Get Happiness In Life in Kannada

ಈತನು ರೂಪಿಸಿದ ನೀತಿಗಳು ಇಂದಿಗೂ ಜನ ಜೀವನಕ್ಕೆ ದಾರಿ ದೀಪವಾಗಿದೆ. ಇನ್ನೂ ಜೀವನದಲ್ಲಿ ಖುಷಿಯಾಗಿರೋದಕ್ಕೂ ವಿಧುರನು ಕೆಲವೊಂದು ನೀತಿಗಳನ್ನು ರೂಪಿಸಿದ್ದಾನೆ. ಅವುಗಳು ಯಾವುದು ಅನ್ನೋದನ್ನ ತಿಳಿಯೋಣ.

1. ಜ್ಞಾನ

ವಿಧುರನ ಪ್ರಕಾರ ಜ್ಞಾನ ಅನ್ನೋದು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ನಮ್ಮಲ್ಲಿ ಅಗಾಧ ಜ್ಞಾನವಿದ್ದಾಗ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ನಮ್ಮ ಜ್ಞಾನವನ್ನು ಉಪಯೋಗಿಸಿ ಸುಲಭವಾಗಿ ಆಚೆ ಬರಬಹುದು. ಇನ್ನೂ ಯಾವ ವ್ಯಕ್ತಿ ಜ್ಞಾನ ಸಂಪಾದಿಸುತ್ತಾನೋ ಆತ ಸಮಾಜದಲ್ಲಿ ಉತ್ತಮ ಗೌರವ ಪಡೆಯುತ್ತಾನೆ, ಇತರರಿಗೆ ಮಾರ್ಗದಶನ ಮಾಡಬಹುದು ಹಾಗೂ ಸ್ವಯಂಪೂರ್ಣ ಬದುಕನ್ನು ಕಟ್ಟಿಕೊಳ್ಳಬಹುದು. ಇಂತಹ ವ್ಯಕ್ತಿ ಯಶಸ್ವಿಯೂ ಆಗುತ್ತಾನೆ. ಜೀವನದಲ್ಲಿ ತುಂಬಾನೇ ಖುಷಿಯಾಗಿಯೂ ಇರುತ್ತಾನೆ.

2. ಧೈರ್ಯ

ವಿಧುರ ನೀತಿಯ ಪ್ರಕಾರ ಯಾವ ವ್ಯಕ್ತಿಗೆ ಭಯ ಇರೋದಿಲ್ಲವೋ ಆತ ಏನು ಕೆಲಸ ಮಾಡಬೇಕಾದರೂ ದೈರ್ಯದಿಂದ ಮುನ್ನುಗ್ಗುತ್ತಾನೆ. ಬೇರೆಯವರಿಗಾಗಿ ಕಾಯೋದಿಲ್ಲ. ಭಯ ಇದ್ದಾಗ ಮಾತ್ರ ಇನ್ನೊಬ್ಬರ ಮೇಲೆ ಅವಲಂಬಿತವಾಗಲೇ ಬೇಕಾಗುತ್ತದೆ. ಹೀಗಾಗಿ ಯಾರು ದೈರ್ಯವಂತನಾಗಿರುತ್ತಾನೋ ಆತ ಯಶಸ್ವಿಯಾಗುತ್ತಾನೆ. ಹಾಗೂ ಜೀವನದಲ್ಲಿ ಖುಷಿಯಾಗಿರುತ್ತಾನೆ.

3. ಸರಳತೆ

ವಿಧುರ ನೀತಿಯ ಪ್ರಕಾರ ಎಷ್ಟು ದೊಡ್ಡ ವ್ಯಕ್ತಿಯಾರೂ ಆತನಲ್ಲಿ ಸರಳತೆ ಅನ್ನೋದು ಇರಲೇಬೇಕಾಗುತ್ತದೆ. ಯಾರೇ ಆದರೂ ಸರಿ ಹಣ ಅಥವಾ ಅಧಿಕಾರದ ದರ್ಪ ತೋರಲೇಬಾರದು. ಇದ್ಯಾವುದು ಜೀವನದಲ್ಲಿ ಶಾಶ್ವತ ಅಲ್ಲ. ಹೀಗಾಗಿ ಯಾರು ಕಡೇವರೆಗೂ ಸರಳತೆಯಿಂದ ಜೀವನವನ್ನು ನಡೆಸುತ್ತಾನೋ ಆತ ಯಶಸ್ಸು ಸಾಧಿಸುತ್ತಾನೆ ಹಾಗೆಯೇ ಖುಷಿಯಾಗಿರುತ್ತಾನೆ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.

4. ನಿಯಂತ್ರಣ

ವಿಧುರನ ಪ್ರಕಾರ ಜೀವನದಲ್ಲಿ ಎಲ್ಲಾ ವಿಚಾರಗಳ ಮೇಲೆ ಯಾರಿಗೆ ನಿಯಂತ್ರಣ ಇರುತ್ತದೋ ಅವನಿಗೆ ಎಂದಿಗೂ ಸೋಲಿಲ್ಲ. ಕೋಪ, ಖುಷಿ, ದು:ಖ, ಮಾತು ಹೀಗೆ ಎಲ್ಲದರ ಮೇಲೆ ನಿಯಂತ್ರಣ ಹೊಂದಿರುವವನು ಮಾತ್ರ ಯಶಸ್ಸು ಸಾಧಿಸೋದಕ್ಕೆ ಸಾಧ್ಯ. ಹೀಗಾಗಿ ಜೀವನದ ಬಂಡಿಯನ್ನು ಸಂತೋಷದಿಂದ ಸಾಗಿಸಬೇಕೆಂದರೆ ಅದ್ರಲ್ಲಿ ನಿಯಂತ್ರಣ ಅನ್ನೋ ಕೀಲಿ ಇರಲೇಬೇಕು.

5. ಸರಿ ಹಾಗೂ ತಪ್ಪುಗಳ ಬಗ್ಗೆ ಅರಿತುಕೊಳ್ಳಿ

ವಿಧುರನ ಪ್ರಕಾರ ನಾವು ಯಾವಾಗ ನೈತಿಕವಾಗಿ ಬದುಕುತ್ತೇವೋ ಆಗ ಮಾತ್ರ ನಮಗೆ ಯಶಸ್ಸು ಒಲಿಯೋದಕ್ಕೆ ಸಾಧ್ಯ. ಯಾವ ವ್ಯಕ್ತಿಯು ಬುದ್ಧಿವಂತಿಕೆ ಹಾಗೂ ಜ್ಞಾನವನ್ನು ಬಳಸಿಕೊಂಡು ಸರಿ-ತಪ್ಪುಗಳನ್ನು ಗುರುತಿಸುವ ಶಕ್ತಿ ಹೊಂದಿರುತ್ತಾನೋ ಆ ವ್ಯಕ್ತಿ ಯಾವತ್ತಿಗೂ ತನ್ನ ನಿರ್ಧಾರಗಳಿಂದ ಪಶ್ಚಾತಾಪ ಪಡೋದಿಲ್ಲ. ಹಾಗೂ ಖುಷಿಯಾದ ಜೀವನವನ್ನು ಸಾಗಿಸುತ್ತಾನೆ.

ಜೀವನದಲ್ಲಿ ಖುಷಿಯಾಗಿರಬೇಕೆಂದರೆ ನೂರಾರು ಮಾರ್ಗಗಳಿದೆ. ಆದರೆ ಅವೆಲ್ಲಾ ನಿಮಗೆ ಶಾಶ್ವತ ಖುಷಿಯನ್ನು ನೀಡುತ್ತವೆ ಎಂಬ ಗ್ಯಾರಂಟಿ ಇಲ್ಲ. ಹೀಗಾಗಿ ವಿಧುರನ ಈ ನೀತಿಗಳನ್ನು ಪಾಲಿಸಿದರೆ ಜೀವನದುದ್ದಕ್ಕೂ ಮನುಷ್ಯ ಖುಷಿಯಾಗಿರಬಹುದು.

English summary

Vidur Neeti : People Who Have These Qualities Will Get Happiness In Life in Kannada

According to vidur niti people who have these qualities will get happiness in life. Read More.
Story first published: Friday, March 31, 2023, 11:30 [IST]
X
Desktop Bottom Promotion