Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶ್ರಾವಣ ವಿನಾಯಕ ಚತುರ್ಥಿ 2023 : ಶುಭ ಮುಹೂರ್ತ, ಆಚರಣೆ ಹೇಗಿರಬೇಕು?
ಶ್ರಾವಣ ಮಾಸದ ಕೊನೆಯ ಗಣೇಶ ಚತುರ್ಥಿಯನ್ನು ಆಗಸ್ಟ್ 20 ರಂದು ಆಚರಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಮತ್ತು ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.

ಶ್ರಾವಣ ಮಾಸದ ವಿನಾಯಕ ಚತುರ್ಥಿಯ ದಿನದಂದು ಉಪವಾಸ ಆಚರಿಸಲಾಗುತ್ತದೆ. ಮತ್ತು ಆ ದಿನ ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನದ ಗಣೇಶನಿಗಾಗಿ ಉಪವಾಸವನ್ನು ಮಾಡೋದ್ರಿಂದ ನಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಾಗುತ್ತಂತೆ. ಮತ್ತು ಗಣೇಶನು ಮನೆಯಲ್ಲಿ ಸಂಪತ್ತು ಮತ್ತು ಧಾನ್ಯಗಳಿಂದ ತುಂಬಿರುವಂತೆ ಆಶೀರ್ವದಿಸುತ್ತಾನಂತೆ. ಅಷ್ಟಕ್ಕೂ ಈ ಉಪವಾಸವನ್ನು ಯಾವಾಗ ಆಚರಣೆ ಮಾಡಲಾಗುತ್ತೆ? ಪೂಜಾ ಮಹತ್ವವೇನು? ಆಚರಣಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.
ವಿನಾಯಕ ಚತುರ್ಥಿಯ ಶುಭ ಸಮಯ ಯಾವುದು?
ಪಂಚಾಂಗದ ಪ್ರಕಾರ ಆಗಸ್ಟ್ 19ರಂದು ರಾತ್ರಿ 10.19ಕ್ಕೆ ವಿನಾಯಕ ಚತುರ್ಥಿ ಆರಂಭವಾಗಲಿದೆ. ಇದು ಆಗಸ್ಟ್ 21 ರಂದು ರಾತ್ರಿ 12.21 ಕ್ಕೆ ಕೊನೆಗೊಳ್ಳುತ್ತದೆ. ಇನ್ನೂ ವಿನಾಯಕ ಚತುರ್ಥಿ ಉಪವಾಸವನ್ನು ಆಗಸ್ಟ್ 20 ರಂದು ಆಚರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಗಣೇಶನ ಪೂಜೆಯನ್ನು ಮಧ್ಯಾಹ್ನದ ಸಮಯದಲ್ಲಿ ಮಾಡಲಾಗುತ್ತದೆ. ಆಗಸ್ಟ್ 20 ರಂದು ಬೆಳಿಗ್ಗೆ 11.26 ರಿಂದ ಮಧ್ಯಾಹ್ನ 1.58 ರವರೆಗೆ ಪೂಜೆಗೆ ಶುಭ ಮುಹೂರ್ತವಿರುತ್ತದೆ. ಈ ಸಮಯದಲ್ಲಿ ಪೂಜೆ ಮಾಡೋದ್ರಿಂದ ಒಳ್ಳೆಯದಾಗುತ್ತಂತೆ.
ಶ್ರಾವಣ ಚತುರ್ಥಿಯ ಮಹತ್ವವೇನು?
ಶ್ರಾವಣ ಮಾಸದಲ್ಲಿ ಶಿವನ ಜೊತೆಗೆ ಆತನ ಮಗ ಎಂದು ಕರೆಯಲ್ಪಡುವ ಗಣೇಶನ ಪೂಜೆಗೂ ವಿಶೇಷ ಪ್ರಾಮುಖ್ಯತೆ ಇದೆ. ಗಣೇಶನ ಆರಾಧನೆಯ ಸಂದರ್ಭದಲ್ಲಿ ದೇವರಿಗೆ ಗರಿಕೆಯನ್ನು ಅರ್ಪಿಸಿ. ಇದರ ಜೊತೆಗೆ ಮೋದಕ, ಲಡ್ಡೂಗಳನ್ನು ಅರ್ಪಿಸುವುದು ವಿಶೇಷ ಮಹತ್ವವನ್ನು ಹೊಂದಿದೆ.
ಶ್ರಾವಣ ವಿನಾಯಕ ಚತುರ್ಥಿಯ ಆಚರಣೆಗಳು ಹೇಗಿರುತ್ತೆ?
ಶ್ರಾವಣ ವಿನಾಯಕ ಚತುರ್ಥಿಯ ದಿನದಂದು ಮುಂಜಾನೆಯೇ ಸ್ನಾನ ಮಾಡಿ ವಿನಾಯಕನ ಸಂಕಲ್ಪ ಮಾಡಬೇಕು. ಆ ನಂತರ ಕೆಂಪು ಬಟ್ಟೆಯನ್ನು ಕೆಳಗೆ ಹಾಕಿ ಅದರ ಮೇಲೆ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ದೇವರಿಗೆ ಗರಿಕೆ, ಪುಷ್ಪ, ಪಂಚಮೇವ, ಪಂಚಾಮೃತ, ಅನ್ನವನ್ನು ಅರ್ಪಿಸಿ. ಇದರ ಜೊತೆಗೆ ಮೋದಕ ಮೋತಿಚೂರ್ ಲಡ್ಡುಗಳನ್ನು ಅರ್ಪಿಸಿ. ಮತ್ತು ನಂತರ ಗಣೇಶನ ಮಂತ್ರಗಳೊಂದಿಗೆ ಆರತಿ ಮಾಡಿ. ನಂತರ ಪ್ರಸಾದವನ್ನು ಎಲ್ಲರಿಗೂ ವಿತರಣೆ ಮಾಡಿ.



Click it and Unblock the Notifications
