Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶ್ರಾವಣ ವಿನಾಯಕ ಚತುರ್ಥಿ 2023 : ಶುಭ ಮುಹೂರ್ತ, ಆಚರಣೆ ಹೇಗಿರಬೇಕು?
ಶ್ರಾವಣ ಮಾಸದ ಕೊನೆಯ ಗಣೇಶ ಚತುರ್ಥಿಯನ್ನು ಆಗಸ್ಟ್ 20 ರಂದು ಆಚರಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ. ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಮತ್ತು ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ.

ಶ್ರಾವಣ ಮಾಸದ ವಿನಾಯಕ ಚತುರ್ಥಿಯ ದಿನದಂದು ಉಪವಾಸ ಆಚರಿಸಲಾಗುತ್ತದೆ. ಮತ್ತು ಆ ದಿನ ಗಣೇಶನನ್ನು ಪೂಜಿಸಲಾಗುತ್ತದೆ. ಈ ದಿನದ ಗಣೇಶನಿಗಾಗಿ ಉಪವಾಸವನ್ನು ಮಾಡೋದ್ರಿಂದ ನಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಾಗುತ್ತಂತೆ. ಮತ್ತು ಗಣೇಶನು ಮನೆಯಲ್ಲಿ ಸಂಪತ್ತು ಮತ್ತು ಧಾನ್ಯಗಳಿಂದ ತುಂಬಿರುವಂತೆ ಆಶೀರ್ವದಿಸುತ್ತಾನಂತೆ. ಅಷ್ಟಕ್ಕೂ ಈ ಉಪವಾಸವನ್ನು ಯಾವಾಗ ಆಚರಣೆ ಮಾಡಲಾಗುತ್ತೆ? ಪೂಜಾ ಮಹತ್ವವೇನು? ಆಚರಣಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.
ವಿನಾಯಕ ಚತುರ್ಥಿಯ ಶುಭ ಸಮಯ ಯಾವುದು?
ಪಂಚಾಂಗದ ಪ್ರಕಾರ ಆಗಸ್ಟ್ 19ರಂದು ರಾತ್ರಿ 10.19ಕ್ಕೆ ವಿನಾಯಕ ಚತುರ್ಥಿ ಆರಂಭವಾಗಲಿದೆ. ಇದು ಆಗಸ್ಟ್ 21 ರಂದು ರಾತ್ರಿ 12.21 ಕ್ಕೆ ಕೊನೆಗೊಳ್ಳುತ್ತದೆ. ಇನ್ನೂ ವಿನಾಯಕ ಚತುರ್ಥಿ ಉಪವಾಸವನ್ನು ಆಗಸ್ಟ್ 20 ರಂದು ಆಚರಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಗಣೇಶನ ಪೂಜೆಯನ್ನು ಮಧ್ಯಾಹ್ನದ ಸಮಯದಲ್ಲಿ ಮಾಡಲಾಗುತ್ತದೆ. ಆಗಸ್ಟ್ 20 ರಂದು ಬೆಳಿಗ್ಗೆ 11.26 ರಿಂದ ಮಧ್ಯಾಹ್ನ 1.58 ರವರೆಗೆ ಪೂಜೆಗೆ ಶುಭ ಮುಹೂರ್ತವಿರುತ್ತದೆ. ಈ ಸಮಯದಲ್ಲಿ ಪೂಜೆ ಮಾಡೋದ್ರಿಂದ ಒಳ್ಳೆಯದಾಗುತ್ತಂತೆ.
ಶ್ರಾವಣ ಚತುರ್ಥಿಯ ಮಹತ್ವವೇನು?
ಶ್ರಾವಣ ಮಾಸದಲ್ಲಿ ಶಿವನ ಜೊತೆಗೆ ಆತನ ಮಗ ಎಂದು ಕರೆಯಲ್ಪಡುವ ಗಣೇಶನ ಪೂಜೆಗೂ ವಿಶೇಷ ಪ್ರಾಮುಖ್ಯತೆ ಇದೆ. ಗಣೇಶನ ಆರಾಧನೆಯ ಸಂದರ್ಭದಲ್ಲಿ ದೇವರಿಗೆ ಗರಿಕೆಯನ್ನು ಅರ್ಪಿಸಿ. ಇದರ ಜೊತೆಗೆ ಮೋದಕ, ಲಡ್ಡೂಗಳನ್ನು ಅರ್ಪಿಸುವುದು ವಿಶೇಷ ಮಹತ್ವವನ್ನು ಹೊಂದಿದೆ.
ಶ್ರಾವಣ ವಿನಾಯಕ ಚತುರ್ಥಿಯ ಆಚರಣೆಗಳು ಹೇಗಿರುತ್ತೆ?
ಶ್ರಾವಣ ವಿನಾಯಕ ಚತುರ್ಥಿಯ ದಿನದಂದು ಮುಂಜಾನೆಯೇ ಸ್ನಾನ ಮಾಡಿ ವಿನಾಯಕನ ಸಂಕಲ್ಪ ಮಾಡಬೇಕು. ಆ ನಂತರ ಕೆಂಪು ಬಟ್ಟೆಯನ್ನು ಕೆಳಗೆ ಹಾಕಿ ಅದರ ಮೇಲೆ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು. ದೇವರಿಗೆ ಗರಿಕೆ, ಪುಷ್ಪ, ಪಂಚಮೇವ, ಪಂಚಾಮೃತ, ಅನ್ನವನ್ನು ಅರ್ಪಿಸಿ. ಇದರ ಜೊತೆಗೆ ಮೋದಕ ಮೋತಿಚೂರ್ ಲಡ್ಡುಗಳನ್ನು ಅರ್ಪಿಸಿ. ಮತ್ತು ನಂತರ ಗಣೇಶನ ಮಂತ್ರಗಳೊಂದಿಗೆ ಆರತಿ ಮಾಡಿ. ನಂತರ ಪ್ರಸಾದವನ್ನು ಎಲ್ಲರಿಗೂ ವಿತರಣೆ ಮಾಡಿ.



Click it and Unblock the Notifications