Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶನಿ ದೋಷದ ಕಷ್ಟಗಳಿಂದ ಪಾರಾಗಲು ಈ ಮಂತ್ರ 19000 ಬಾರಿ ಜಪಿಸಿ
ಜನರು ಶನಿದೋಷವೆಂದರೆ ಬೆಚ್ಚಿ ಬೀಳುತ್ತಾರೆ, ಅದಕ್ಕೆ ಕಾರಣ ಶನಿದೋಷ ಅಷ್ಟೊಂದು ಕಠಿಣವಾಗಿರುತ್ತದೆ. ಶನಿದೋಷವಿದ್ದರೆ ಜನರು ಅವಮಾನವನ್ನು ಎದುರಿಸಬೇಕಾಗುತ್ತದೆ, ಸಾಲು-ಸಾಲು ಕಷ್ಟಗಳು ಎದುರಾಗುವುದು, ಮಾಡುವ ಕೆಲಸದಲ್ಲಿ ಸರಿಯಾದ ಫಲ ಸಿಗುವುದಿಲ್ಲ, ವ್ಯವಹಾರದಲ್ಲಿ ನಷ್ಟವಾಗುವುದು ಹೀಗೆ ಅನೇಕ ಸಮಸ್ಯೆಗಳು ಉಂಟಾಗುವುದು, ಈ ಕಾರಣಕ್ಕೆ ಶನಿದೋಷವಿದ್ದರೆ ಅದಕ್ಕೆ ಪರಿಹಾರವೇನು ಎಂದು ತಿಳಿದುಕೊಳ್ಳಲು ಬಯಸುತ್ತಾರೆ.

ಅದರಲ್ಲೂ ಶನಿ ಮಹಾದಶವಿದ್ದರೆ ತುಂಬಾನೇ ಕಷ್ಟ ಅನುಭವಿಸುತ್ತಾರೆ, ಶನಿಮಹಾದಶವಿದ್ದರೆ ಈ ಬಗೆಯ ಸಮಸ್ಯೆಗಳು ಎದುರಾಗುವುದು
* ಖಿನ್ನತೆ
* ಯಶಸ್ಸಿ ಸಿಗಲು ಕಷ್ಟವಾಗುವುದು
* ಆರೋಗ್ಯ ಸಮಸ್ಯೆ ಉಂಟಾಗುವುದು
* ಮಕ್ಕಳಾಗದಿರುವ ಸಮಸ್ಯೆ ಉಂಟಾಗುವುದು
* ಒಂದು ಬಗೆಯ ಗೊಂದಲ
* ಬೇಗನೆ ಕೋಪ ಬರುವುದು
* ಅನೈತಿಕ ಸಂಬಂಧ, ತೇಜೋವಧೆ ಉಂಟಾಗುವುದು
ಶನಿದೋಷವಿರುವವರು 19000 ಜಪ ಮಾಡುವುದರಿಂದ ಪರಿಹಾರ ಸಿಗುವುದು
ನೀವು ಶನಿ ದೋಷವಿರುವವರು ಶನಿ ಮಂತ್ರಗಳನ್ನು 19000 ಜಪ ಮಾಡುವುದರಿಂದ ಶನಿದೋಷದಿಂದ ಪರಿಹಾರ ಪಡೆಯಬಹುದು.
ಆದರೆ ಜಪ ಮಾಡುವಾಗ ಈ ಅಂಶಗಳ ಕಡೆಗೆ ಗಮನ ನೀಡಬೇಕು
* ಸ್ಪಷ್ಟವಾದ ಉಚ್ಛಾರಣೆ ಮೂಲಕ ಜಪ ಮಾಡಬೇಕು.
* ನಿಮಗೆ ಒಂದೇ ಬಾರಿ ಶನಿ ಮಂತ್ರ 19000 ಮಾಡಲು ಕಷ್ಟವಾಗಬಹುದು, ನೀವು ಸಮಯ ಸಿಕ್ಕುವಾಗ 100 ಬಾರಿಯಂಯತೆ ಮಾಡಬಹುದು.
* ಶನಿ ಜಪವನ್ನು ನೀವು ಶನಿವಾರದಿಂದ ಪ್ರಾರಂಭಿಸಬೇಕು.
* ಶನಿವಾರ ಶನಿದೇವಾಲಯಕ್ಕೆ ಹೋಗಿ ಶನಿದೇವರಿಗೆ ಪ್ರಾರ್ಥನೆ ಮಾಡಿ, ಸಾಸಿವೆಯೆಣ್ಣೆ ಅರ್ಪಿಸಿ ನಂತರ ಮಂತ್ರ ಜಪ ಮಾಡಬೇಕು.
* ಶನಿಜಪ ಮಾಡುವುದರಿಂದ ಧನಾತ್ಮಕ ಶಕ್ತಿ ನಿಮ್ಮನ್ನು ಆವರಿಸುವುದರಿಂದ ಋಣಾತ್ಮಕ ಶಕ್ತಿ ದೂರಾಗುವುದು.
ಈ ಶನಿ ಮಂತ್ರ ಪಠಿಸಿ.
ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ ಓಂ ಐಂಗ್ ಹ್ರಿಂಗ್ ಶ್ರೀಂಗ್ ಶಂಗ್ ಶನೈಶ್ಚರಾಯ ನಮಃ ಓಂ ಓಂ ಹಿಂ ಶಂ ಶನಯೇ ನಮಃ ಓಂ ಶಂ ಶನೈಶ್ಚರಾಯ ನಮಃ
ಶನಿದೋಷ ನಿವಾರಣೆಗೆ ಇತರ ಪರಿಹಾರಗಳು
* ಶನಿವಾರ ಉಪವಾಸವಿದ್ದು ಶನಿದೇವನನ್ನು ಆರಾಧಿಸಿ
* ನಿರ್ಗತಿಕರಿಗೆ ನಿಮ್ಮಿಂದಾದ ಸಹಾಯ ಮಾಡಿ
* ನೀಲಮಣಿ ಧರಿಸಿ
* ಶನಿ ಮಾಲೆ ಧರಿಸಿ (14 ಮುಖಿ, ಸಪ್ತಮುಖಿ ಅಥವಾ 36 ಮುಖಿ ರುದ್ರಾಕ್ಷಿ ಮಾಲೆ ಧರಿಸಿ)
* ಶನಿವಾರ ಕಪ್ಪು ಎಳ್ಳು ದಾನ ಮಾಡಿ
* ಶನಿಯ ಉಂಗುರ ಧರಿಸಿ (ಶನಿ ಸಿಂಗಾಪುರ ಗ್ರಾಮದಲ್ಲಿರುವ ದೇವಾಲಯದಲ್ಲಿ ಸಿಗುವುದು)
ಜೊತೆಗೆ ಹನುಮಾನ್ ಚಾಲೀಸ ಪಠಿಸಿ: ಶನಿದೋಷದಿಂದ ಪಾರಾಗಲು ಹನುಮಂತನ ಪೂಜೆ ಮಾಡಿ, ಹನುಮಂತನ ಭಕ್ತರಿಗೆ ಶನಿ ತೊಂದರೆ ಕೊಡುವುದಿಲ್ಲ, ಈ ಕಾರಣ ಹನುಮಾನ್ ಚಾಲೀಸ ಪಠಿಸುವುದರಿಂದ ಮೂಲಕ ಶನಿಯ ಕಾಟದಿಂದ ಪಾರಾಗಬಹುದು.
ಶನಿ ಏಕಾಶರಿ ಮಂತ್ರ
"ಓಂ ಶಂ ಶನೈಶ್ಚರಾಯ ನಮಃ
ಶನಿ ಗಾಯತ್ರಿ ಮಂತ್ರ
"ಓಂ ಶನೈಶ್ಚರಾಯ ವಿದ್ಮಹೇ ಸೂರ್ಯಪುತ್ರಾಯ ಧೀಮಹೀ ತನ್ನೋ ಮಂದಃ ಪ್ರಚೋದಯಾತ್"
ಸಾಡೇಸಾತಿ ಶನಿ ಮಂತ್ರ
"ಶ್ರೀ ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ"
"ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಪಿತಯೇ ಶನ್ಯೋರಭಿಸ್ತವಂತು ನಃ, ಓಂ ಶಂ ಶನೈಶ್ಚರಾಯ ನಮಃ"
ಶನಿ ವೈದಿಕ ಮಂತ್ರ
"ಓಂ ಶನ್ನೋ ದೇವಿರಭಿಷ್ಟ್ದಾಪೋ ಭವಂತು ಪಿತಯೇ"



Click it and Unblock the Notifications
