ಭದ್ರತಾ ಪಡೆಗಳ ಸಹಾಯದಿಂದ 21 ವರ್ಷದ ಬಳಿಕ ರಾಮನ ದೇವಾಲಯ ರೀ ಓಪನ್..!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲು ಹತ್ತು ಹಲವು ವರ್ಷ ಕಳೆದು ಹೋಗಿತ್ತು, ರಾಮ 14 ವರ್ಷಗಳ ಕಾಲ ವನವಾಸನ್ನೂ ಮುಗಿಸಿದ್ದ ಆದ್ರೆ ಇಲ್ಲೊಂದು ರಾಮ ಮಂದಿರ ಬರೋಬ್ಬರಿ 21 ವರ್ಷಗಳ ಬಳಿಕ ಮತ್ತೆ ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ಅಯೋಧ್ಯೆಯ ಮಂದಿರ ಮಾತ್ರವಲ್ಲ ದೇಶದಲ್ಲಿ ಇಂತಹ ಹಲವು ದೇವಾಲಯಗಳು ನಮ್ಮ ಮುಂದಿವೆ.

ಛತ್ತೀಸ್‌ಗಢದ ಹಳ್ಳಿಯೊಂದರಲ್ಲಿ 21 ವರ್ಷಗಳ ನಂತರ ಈ ರಾಮ ಮಂದಿರದ ಬಾಗಿಲು ತೆರೆಯಲಾಗಿದೆ. ಬಸ್ತಾರ್ ಗ್ರಾಮದ ರಾಮ ಮಂದಿರವು 21 ವರ್ಷಗಳ ನಂತರ ಪುನಃ ತೆರೆಯಲ್ಪಟ್ಟಿದೆ. ಮಾವೋವಾದಿ ನಾಯಕರ ಆದೇಶದ ಮೇರೆಗೆ ಮುಚ್ಚಲಾಗಿದ್ದ ಕೆರ್ಲಪೆಂಡಾ ಗ್ರಾಮದಲ್ಲಿ 21 ವರ್ಷಗಳ ಬಳಿಕ ಭದ್ರತಾ ಪಡೆಗಳು ದೇವಾಲಯವನ್ನು ಮತ್ತೆ ತೆರೆದಿದ್ದಾರೆ.

Ram Temple Re-Opened After 21 Years With The Help Of Security Forces

ಈ ದೂರದ ಗ್ರಾಮವು ಮಾವೋವಾದಿ ಪ್ರಾಬಲ್ಯದ ಪ್ರದೇಶದೊಳಗೆ ನೆಲೆಗೊಂಡಿದೆ, ಇದು ತಾಡ್ಮೆಟ್ಲಾದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ, ಅಲ್ಲಿ 2010 ರಲ್ಲಿ 76 ಸೈನಿಕರನ್ನು ಹತ್ಯೆ ಮಾಡಲಾಗಿತ್ತು ಮತ್ತು ಏಪ್ರಿಲ್ 2021 ರಲ್ಲಿ 22 ಸೈನಿಕರು ಕೊಲ್ಲಲ್ಪಟ್ಟ ಹಿದ್ಮಾ ಅವರ ಭದ್ರಕೋಟೆಯಾದ ತೆಕುಲ್‌ಗುಡಾಕ್ಕೆ ಹತ್ತಿರದಲ್ಲಿದೆ.

2003 ರಲ್ಲಿ, ಮಾವೋವಾದಿಗಳು ಅತ್ಯಂತ ಸಕ್ರಿಯವಾಗಿದ್ದಾಗ, ಅವರು ದೇವಸ್ಥಾನವನ್ನು ಮುಚ್ಚುವಂತೆ ಗ್ರಾಮಸ್ಥರಿಗೆ ಆದೇಶ ನೀಡಿದ್ದರು ಮತ್ತು ಯಾರೂ ಅದನ್ನು ತೆರೆಯಬಾರದು ಅಥವಾ ಪೂಜೆಗೆ ಭೇಟಿ ನೀಡಬಾರದು ಎಂದು ಎಚ್ಚರಿಸಿದರು. ಕಾರಣವೆಂದರೆ ಈ ಪ್ರದೇಶವು ಮಾವೋವಾದಿಗಳ ಪ್ರಮುಖ ವಲಯವಾಗಿತ್ತು, ಅಲ್ಲಿ ಅವರು ಶಿಬಿರಗಳನ್ನು ನಡೆಸುತ್ತಾರೆ, ಸಭೆಗಳನ್ನು ನಡೆಸುತ್ತಾರೆ ಮತ್ತು ಅದನ್ನು ಚಲನೆಗೆ ಕಾರಿಡಾರ್ ಆಗಿ ಬಳಸುತ್ತಾರೆ. ಹೀಗಾಗಿ ಜನರ ಓಡಾಟವಿದ್ದರೆ ಸಮಸ್ಯೆ ಎದುರಾಗುತ್ತದೆ ಎಂದು ಅವರು ಭಾವಿಸಿದ್ದರು. ಹೀಗಾಗಿ ಇದ್ದ ಒಂದು ದೇವಾಲಯವನ್ನು ಮುಚ್ಚಿಸಿದ್ದರು.

ಮಾವೋವಾದಿಗಳು ಹುಟ್ಟುಹಾಕಿದ ಭಯವು ಎಷ್ಟು ತೀವ್ರವಾಗಿದೆಯೆಂದರೆ, ಒಮ್ಮೆ ಅವರು ಗ್ರಾಮಸ್ಥರಿಗೆ ದೇವಾಲಯದಿಂದ ದೂರವಿರಲು ಆದೇಶಿಸಿದ ಬಳಿಕ ಆ ದೇವಾಲಯದ ಬಳಿ ಹಳ್ಳಿಯ ಒಬ್ಬನಿಗೆ ಮಾತ್ರ ಪ್ರವೇಶವಿತ್ತು. ಆತ ಪ್ರತಿ ದಿನ ದೇವಾಲಯದ ಬಾಗಿಲ ಬಳಿ ಒಂದು ದೀಪ ಹಚ್ಚಿ ತೆರಳಬೇಕಿತ್ತು. ಈ ವೇಳೆ ಘಂಟೆ ಶಬ್ಧವನ್ನೂ ಸಹ ಮಾಡುವಂತಿರಲಿಲ್ಲ.

ಆದರೆ ಅಂತಿಮವಾಗಿ ಈಗ ಭದ್ರತಾ ಪಡೆಯ ಸಹಾಯದಿಂದ ದೇವಾಲಯವನ್ನು ತೆರೆಯಲಾಗಿದೆ. ಅಲ್ಲದೆ ವಿಶೇದ ಪೂಜೆಯೂ ನೆರವೇರಿದೆ. ಇತ್ತೀಚೆಗೆ, ಮಾರ್ಚ್ 11 ರಂದು ಕೆರ್ಲಪೆಂಡಾ ಮತ್ತು ಲಖಪಾಲ್ ಗ್ರಾಮಗಳ ನಡುವೆ CRPF ಶಿಬಿರವನ್ನು ಸ್ಥಾಪಿಸಲಾಯಿತು. ಶಿಬಿರದ ಸ್ಥಾಪನೆಯ ನಂತರ, ಸ್ಥಳೀಯ ಬುಡಕಟ್ಟು ಜನರು ಭದ್ರತಾ ಸಿಬ್ಬಂದಿಯನ್ನು ಸಂಪರ್ಕಿಸಿ ದೇವಾಲಯವನ್ನು ಪುನಃ ತೆರೆಯಲು ಅವರ ಸಹಾಯವನ್ನು ಕೇಳಿದರು.

21 ವರ್ಷಗಳ ನಂತರ ಮೊದಲ ಬಾರಿಗೆ ಸೂರ್ಯನ ಬೆಳಕು ಪ್ರವೇಶಿಸಲು ಬಾಗಿಲು ತೆರೆದಿದ್ದರಿಂದ, ಭಾರಿ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಮತ್ತು ಪೊಲೀಸ್ ಅಧಿಕಾರಿಗಳ ಕಾವಲು ಇದ್ದ ದೇವಾಲಯದಲ್ಲಿ ಶನಿವಾರ ಹೆಚ್ಚಿನ ಸಂಖ್ಯೆಯ ಸ್ಥಳೀಯರು ಜಮಾಯಿಸಿದರು. ದೇವಾಲಯವನ್ನು ಸ್ವಚ್ಛಗೊಳಿಸಲಾಯಿತು ಮತ್ತು ರಾಮ, ಮಾತಾ ಸೀತಾ ಮತ್ತು ಲಕ್ಷ್ಮಣನ ಅಮೃತಶಿಲೆಯ ವಿಗ್ರಹಗಳನ್ನು ಪೂಜಿಸಲಾಯಿತು.

ಈ ದೇವಾಲಯವೂ ರಾಜರ ಕಾಲದಲ್ಲಿ ನಿರ್ಮಾಣಗೊಂಡಿತ್ತು ಎನ್ನಲಾಗಿದೆ. ಈ ದೇವಾಲಯದೊಳಗೆ ರಾಮ, ಲಕ್ಷ್ಮಣ ಮತ್ತು ಸೀತೆ ನಿಂತಿರುವ ಭಂಗಿಯಲ್ಲಿದ್ದಾರೆ. ರಾಮ, ಲಕ್ಷ್ಮಣರು ಕೈಯಲ್ಲಿ ಬಿಲ್ಲು ಹಿಡಿದು ಗಂಭೀರವಾಗಿದ್ದು, ಅವರು ವನವಾಸದ ದಿನದಲ್ಲಿ ಕಳೆದ ದಿನಗಳನ್ನು ಇಲ್ಲಿ ನೆನೆಯಲಾಗಿದೆ. ಸದ್ಯ 21 ವರ್ಷದ ಬಳಿಕ ಈ ದೇವಾಲಯ ಮತ್ತೆ ಬಾಗಿಲು ತೆರೆದಿದ್ದು, ಸ್ಥಳೀಯರು ಶ್ರೀರಾಮನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

English summary

Ram Temple Re-Opened After 21 Years With The Help Of Security Forces..!

After 21 years in a village of Chhattisgarh, the doors of this Ram Mandir have been opened. Ram Mandir in Bastar village has reopened after 21 years
Story first published: Tuesday, April 9, 2024, 14:30 [IST]
X
Desktop Bottom Promotion