Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಮದುವೆ-ಮಕ್ಕಳು ವಿಳಂಬ, ಆರ್ಥಿಕ ತೊಂದರೆಗೆ ಪಿತೃದೋಷ ಕಾರಣವಾಗಿರಬಹುದೇ? ತಿಳಿಯುವುದು ಹೇಗೆ?
ಜ್ಯೋತಿಷ್ಯ ಪ್ರಕಾರ ಪಿತೃದೋಷವಿದ್ದರೆ ಅದು ಬಹುದೊಡ್ಡ ದೋಷವಾಗಿದೆ, ಇದರಿಂದ ಅನೇಕ ರೀತಿಯ ಸಮಸ್ಯೆಗಳು ಉಂಟಾಗುವುದು. ಆರ್ಥಿಕ, ಆರೋಗ್ಯ, ಮಕ್ಕಳ ಸಮಸ್ಯೆ ಮುಂತಾದ ತೊಂದರೆಗಳು ಉಂಟಾಗುವುದು.

ಪಿತೃದೋಷ ಎಂದರೇನು? ಪಿತೃದೋಷವಿದೆ ಎಂದು ಕಂಡು ಹಿಡಿಯುವುದು ಹೇಗೆ? ಕುಂಡಲಿಯಲ್ಲಿ ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ ಮುಂತಾದ ಅಂಶಗಳನ್ನು ಈ ಲೇಖನದಲ್ಲಿ ಹೇಳಲಾಗಿದೆ ನೋಡಿ:

ಪಿತೃದೋಷ ಎಂದರೇನು?
ಪೂರ್ವಜರ ಆಸೆಗಳನ್ನುಈಡೇರಿಸಿದಿದ್ದಾಗ, ಅವರಿಗೆ ಮೋಕ್ಷ ಸಿಗದಿದ್ದರೆ ಅಥವಾ ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಸರಿಯಿಲ್ಲದಿದ್ದರೆ ಅಥವಾ ಕೆಟ್ಟ ಕರ್ಮದಿಂದಾಗಿ ಹಲವಾರು ಸಮಸ್ಯೆಗಳು ಎದುರಾಗುವುದು. ಇದಕ್ಕೆ ಪಿತೃದೋಷ ಎಂದು ಕರೆಯಲಾಗುವುದು.

ಪಿತೃದೋಷ ಇದೆ ಎಂದು ತಿಳಿಯುವುದು ಹೇಗೆ?
ಪಿತೃದೋಷ ಇದೆ ಎಂದು ಈ ಎರಡು ರೀತಿಯಲ್ಲಿ ಕಂಡು ಹಿಡಿಯಲಾಗುವುದು
* ಕುಂಡಲಿನ ನೋಡಿದರೆ ಪಿತೃದೋಷ ಇದೆಯೇ ಎಂದು ತಿಳಿದು ಬರುತ್ತದೆ
* ಮನೆಯಲ್ಲಿ ಅಸ್ವಾಭಾವಿಕ ಸಾವು, ಬ್ರಹ್ಮಚಾರಿಯ ಸಾವು, ಮದುವೆಯಲ್ಲಿ ವಿಳಂಬ, ಸಂತಾನ ಭಾಗ್ಯ ಇಲ್ಲದಿರುವುದು ಈ ಎಲ್ಲಾ ಸಮಸ್ಯೆಗಳು ಕಂಡು ಬಂದರೆ ಪಿತೃದೋಷವಿದೆ ಎಂದು ಹೇಳಲಾಗುವುದು.

ಕುಂಡಲಿಯಲ್ಲಿ ಪಿತೃದೋಷವಿದೆ ಎಂದು ತಿಳಿಯುವುದು ಹೇಗೆ
ಕುಂಡಲಿಯಲ್ಲಿ ಸೂರ್ಯ 9ನೇ ಮನೆಯಲ್ಲಿ ಇದ್ದು, 9ನೇ ಮನೆಯನ್ನು ಆಳುತ್ತಿದ್ದರೆ, ಅದೇ ಮನೆಯಲ್ಲಿ ಬೇರೆ ಗ್ರಹ ಕೂಡ ಇದ್ದು ಅದರ ಸ್ಥಾನ ದುರ್ಬಲವಾಗಿದ್ದರೆ ಪಿತೃದೋಷವಿದೆ ಎಂದರ್ಥ.

ಪಿತೃದೋಷಕ್ಕೆ ಸೂಕ್ತ ಪರಿಹಾರವೇನು?
ಮದುವೆ ವಿಳಂಬವಾದರೆ, ಮಕ್ಕಳಾಗದಿದ್ದರೆ
ಮದುವೆ ತುಂಬಾ ತಡವಾಗಿದ್ದರೆ, ಮದುವೆಯಾಗಿ ತುಂಬಾ ಸಮಯ ಮಕ್ಕಳಾಗದಿದ್ದರೆ ಬಲಿ ಪೂಜೆ, ತ್ರಿಪಿಂಡಿ ಪೂಜೆ, ತಿಲಾ ಹೋಮಾ ಮಾಡಿಸಿ.

ಪಿತೃ ದೋಷ ನಿವಾರಣೆಗೆ ಯಾವ ಮಂತ್ರ ಹೇಳಬೇಕು?
ಓಂ ಶ್ರೀಂ ಸರ್ವ ಪಿತೃ ದೋಷ ನಿವಾರಣಾಯ ಕ್ಲೇಷಂ ಹನ್ ಹನ್ ಸುಖ್, ಶಾಂತಿಂ ದೇಹಿ ಪಥ್ ಸ್ವಾಹಾ'.

ಪಿತೃ ಪೂಜೆ ಜೊತೆಗೆ ದೇವತಾ ಪೂಜೆಯನ್ನೂ ಮಾಡಬಹುದೇ?
ಪಿತೃ ಪೂಜೆಯನ್ನು ವರ್ಷದಲ್ಲಿ ಒಂದು ದಿನ ಅಷ್ಟೇ ಮಾಡುವುದು. ಕೆಲವೊಂದು ಪುಣ್ಯ ಕ್ಷೇತ್ರಗಳಲ್ಲಿ ಪಿತೃ ಪೂಜೆ ಮಾಡಲಾಗುವುದು. ಅಲ್ಲಿ ಹೋಗಿ ತರ್ಪಣ ಅರ್ಪಿಸಿ.

ಪಿತೃದೋಷಕ್ಕೆ ಕಾರಣವೇನು?
* ಕುಂಡಲಿಯಲ್ಲಿ ಗ್ರಹಗಳ ಸ್ಥಾನ ಸರಿಯಾಗಿ ಇಲ್ಲದಿದ್ದರೆ
* ಪೂರ್ಜಜರ ಶಾಪ
* ನಿಮ್ಮದೇ ಕರ್ಮಫಲ

ಯಾವಾಗ ಪಿತೃದೋಚ ಪೂಜೆ ಮಾಡಲಾಗುವುದು
ಕೃಷ್ಣ ಪಕ್ಷ ಪಂಚಮಿಯಿಂದ ಅಮವಾಸ್ಯೆಯವರೆಗೆ, ಶುಕ್ಲ ಪಕ್ಷ ಅಷ್ಟಯಿಂದ ಪೂರ್ಣಿಮೆಯವರೆಗೆ ಮಾಡಲಾಗುವುದು.
ಶುಕ್ಲ ಪಕ್ಷದಲ್ಲಿ 15 ದಿನ ಪಿತೃಪಕ್ಷವಿದೆ.

ಪಿತೃದೋಷದಿಂದ ಮುಕ್ತಿ ಪಡೆಯಬಹುದೇ?
ವೈದಿಕ ಶಾಸ್ತ್ರದ ಪ್ರಕಾರ ಸರಿಯಾದ ಪೂಜೆ ಮಾಡಿದರೆ ಪಿತೃದೋಷ ಹೋಗಲಾಡಿಸಬಹುದು. ಹಿರಿಯರನ್ನು ಗೌರವಿಸಿ, ಅವರನ್ನು ಚೆನ್ನಾಗಿ ನೋಡಿಕೊಳ್ಳಿ, ಇದರಿಂದಲೂ ಪಿತೃದೋಷದಿಂದ ಮುಕ್ತಿ ಪಡೆಯಬಹುದು.
ಅನ್ನ ದಾನ, ಧನ ದಾನ ಇವುಗಳನ್ನು ಮಾಡಿ. ಪಿತೃ ದೋಷ ನಿವಾರಣೆಗೆ ಮಂತ್ರವನ್ನು ಪಠಿಸಿ.
ಪಿತೃದೋಷ ನಿವಾರಣೆಗೆ ಸರಿಯಾದ ಜಾಗ ಯಾವುದು?
ಕರ್ನಾಟಕದಲ್ಲಿ ಗೋಕರ್ಣ, ಕಾವೇರಿಯಲ್ಲಿ ಮಾಡಲಾಗುವುದು.



Click it and Unblock the Notifications
