Just In
- 1 hr ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 1 hr ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 2 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 3 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೃಷಭ ಹಾಗೂ ಮಿಥುನದಲ್ಲಿ ಬುಧ ವಕ್ರೀಯ ಚಲನೆ: 12 ರಾಶಿಗಳ ಮೇಲೆ ಇದರ ಪ್ರಭಾವ
ಇತ್ತೀಚೆಗೆ ಹಲವಾರು ಗ್ರಹಗಳು ವಕ್ರೀಯವಾಗಿ ಚಲಿಸಿವೆ, ಮೇ.23ಕ್ಕೆ ಶನಿ ವಕ್ರೀಯವಾಗಿ ಚಲಿಸಿದೆ, ಇದೀಗ ಬುಧ ವೃಷಭ ಹಾಗೂ ಮಿಥುನದಲ್ಲಿ ವಕ್ರೀಯವಾಗಿ ಚಲಿಸುವುದು. ಮಿಥುನದಲ್ಲಿ ಮೇ.26 ರಿಂದ ಜೂನ್ 3ರವರೆಗೆ, ವೃಷಭದಲ್ಲಿ ಜೂನ್ 3ರಿಂದ 22ರವರೆಗೆ ವಕ್ರೀಯವಾಗಿ ಚಲಿಸುವುದು.
ಗ್ರಹಗಳ ವಕ್ರೀಯ ಚಲನೆ ರಾಶಿಗಳ ಮೇಲೆ ಪ್ರಭಾವ ಬೀರುವುದು ಎಂದು ಜ್ಯೋತಿಷ್ಯ ಹೇಳುತ್ತದೆ. ಇದೀಗ ಬುಧನು ವೃಷಭ , ಮಿಥುನ ರಾಶಿಯಲ್ಲಿ ವಕ್ರೀಯವಾಗಿ ಚಲಿಸುವುದರಿಂದ ಗ್ರಹಗಳ ಮೇಲಾಗುವ ಪ್ರಭಾವವೇನು ಎಂದು ನೋಡೋಣ:
ಮೇಷ ರಾಶಿ:
ವೃಷಭ ಹಾಗೂ ಮಿಥುನ ರಾಶಿಯಲ್ಲಿ ಬುಧನ ವಕ್ರೀಯ ಚಲನೆ ಮೇಷ ರಾಶಿಯವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ತಲೆ ಹಾಗೂ ಕುತ್ತಿಗೆ ಸಂಬಂಧಿತ ಸಮಸ್ಯೆ ಕಾಣಬಹುದು. ವಿದ್ಯಾರ್ಥಿಗಳು ಹಾಗೂ ಯುವಕ/ಯುವತಿಯರು ಒತ್ತಡವನ್ನು ಅನುಭವಿಸಬಹುದು, ಆದರೆ ನಿಮ್ಮ ಕಠಿಣ ಪರಿಶ್ರಮ ವ್ಯರ್ಥವಾಗುವುದಿಲ್ಲ.
ಒಂದು ಪ್ರಯಾಣ ಮಾಡಬಹುದು, ಆದರೆ ಪ್ರಯಾಣ ಮಾಡುವಾಗ ಅಗ್ಯತ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಟಾರ್ಗೆಟ್ ಆಧಾರಿತ ಕೆಲಸ ಮಾಡುವವರು, ಸೇಲ್ಸ್ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು. ಸಹಭಾಗಿತ್ವದಲ್ಲಿ ಹಾಗೂ ಕಮೀಷನ್ ಆಧಾರಿತ ಕೆಲಸ ಮಾಡುವವರಿಗೆ ಇದು ಒಳ್ಳೆಯ ಸಮಯ. ಕೌಟಂಬಿಕ ಜೀವನ ಚೆನ್ನಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಖುಷಿ ಇರುತ್ತದೆ. ಅವಾಹಿತರಿಗೆ ಹೊಸ ಬಂಧ ಕೂಡಿ ಬರಲಿದೆ. ಇನ್ನು ಪ್ರೇಮಿಗಳ ಜೀವನದಲ್ಲಿ ಏರಳಿತ ಇರುತ್ತದೆ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ವೃಷಭ ರಾಶಿ
ತಲೆಗೆ ಪೆಟ್ಟಾಗದಂತೆ ಎಚ್ಚರವಹಿಸಿ. ಖಿನ್ನತೆ ಉಂಟಾದರೆ ಧ್ಯಾನ ಮಾಡಿ. ಒತ್ತಡ, ಬೇಸರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ತಾತ್ಕಾಲಿಕ ಪರಿಸ್ಥಿತಿಯಿಂದ ಒತ್ತಡಕ್ಕೆ ಒಳಗಾಗಬೇಡಿ.
ನಿಮ್ಮ ಭಾವನೆಗಳಲ್ಲಿ ಈ ಸಮಯದಲ್ಲಿ ಅನೇಕ ಬದಲಾವಣೆಗಳು ಕಂಡು ಬರಬಹುದು. ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಹೆಚ್ಚು ತರ್ಕಕ್ಕೆ ಹೋಗಬೇಡಿ. ಈ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಯಾವುದೇ ಡಾಕ್ಯೂಮೆಂಟ್ ಮಾಡುವಾಗ ತುಂಬಾ ಎಚ್ಚರವಹಿಸಬೇಕು. ಯಾರಿಂದ ಸಾಲ ಪಡೆಯುವುದು, ಕೊಡುವುದು ಮಾಡಬೇಡಿ, ಆದರೆ ಬ್ಯಾಂಕ್ನಲ್ಲಿ ಲೋನ್ಗಾಗಿ ಪ್ರಯತ್ನಿಸಬಹುದು.
ಪರಿಹಾರ: ಪ್ರತಿದಿನ ಶಿವ ಮಂತ್ರ ಹೇಳಿ, ದುರ್ಗೆಯ ಸ್ತೋತ್ರ ಹೇಳಿ
ಮಿಥುನ ರಾಶಿ
ಮಿಥುನ ರಾಶಿಯವರು ಈ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಹುದು, ಆದರೆ ನಿಮ್ಮ ಆರೋಗ್ಯದ ಕಡೆ ತುಂಬಾ ಗಮನ ನೀಡಬೇಕು. ಅದರಲ್ಲೂ ಗರ್ಭಿಣಿಯರು ತುಂಬಾ ಎಚ್ಚರಿಕೆವಹಿಸಬೇಕು. ಏನೇ ಆರೋಗ್ಯ ಸಮಸ್ಯೆಯಿದ್ದರೆ ಕೂಡಲೇ ವೈದ್ಯರನ್ನು ಕಾಣಿ.
ಈ ಸಮಯದಲ್ಲಿ ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಅನುಭವಿಗಳ ಸಲಹೆ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಟ್ರಿಪ್ ಹೋಗುವುದಾದರೆ ಅಗ್ಯತ ಮುನ್ನೆಚ್ಚರಿಕೆವಹಿಸಿ.
ವ್ಯವಹಾರಕ್ಕೆ ಸಮಯ ಚೆನ್ನಾಗಿದೆ. ಉದ್ಯೋಗ ಅವಕಾಶಗಳು ಹೆಚ್ಚಾಗುವುದು. ಸಂಬಂಧದ ಬಗ್ಗೆ ಹೇಳುವುದಾದರೆ ಸ್ವಲ್ಪ ಒತ್ತಡ ಸಾಧ್ಯ. ಇಮ್ಮ ಮಾತಿನ ಮೇಲೆ ನಿಗಾ ಇರಲಿ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ತ್ವಚೆ ಸಂಬಂಧಿಸಿದ ಸಮಸ್ಯೆ ಕಾಣಬಹುದು, ಅಲ್ಲದೆ ಈ ಸಮಯದಲ್ಲಿ ಹೊರಗಡೆ ಹೋಗುವಾಗ ತುಂಬಾ ಮುನ್ನೆಚ್ಚರಿಕೆವಹಿಸಬೇಕು. ತಾಯಂದಿರು ಆಹಾರಕ್ರಮದ ಕಡೆ ಗಮನ ಹರಿಸಿ. ಹಣದ ಖರ್ಚು ಹೆಚ್ಚಬಹುಉದ, ವೃತ್ತಿ ಜೀವನದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಳ್ಳಬೇಡಿ, ಯಾವುದೇ ಗೊಂದಲವಿದ್ದರೆ ಸೂಕ್ತ ವ್ಉಕ್ತಿಯ ಸಲಹೆ ಪಡೆಯಿರಿ. ವೃತ್ತಿಗೆ ಸಂಬಂಧಿಸಿದಂತೆ ಹಲವು ಅವಕಾಶಗಳು ಸಿಗಬಹುದು. ಲೇವಾದೇವಿ ಅವರಿಂದ ಹಣ ಸಾಲಪಡೆಯಬೇಡಿ. ಯಾವುದೇ ಸ್ಕೀಮ್ನಲ್ಲಿ ಹಣ ಹೂಡಿಕೆ ಮಾಡಬೇಡಿ. ಸಹೋದರನೊಂದಿಗೆ ಆಸ್ತಿಗೆ ಸಂಬಂಧಿಸಿದ ವೈಮನಸ್ಸು ಇದ್ದರೆ ಈ ಅವಧಿಯಲ್ಲಿ ಎಲ್ಲವೂ ಸರಿಯಾಗುವುದು.
ಪರಿಹಾರ: ಶಿವ ಮಂತ್ರ ದಿನಾ ಪಠಿಸಿ.
ಸಿಂಹ ರಾಶಿ
ಆರೋಗ್ಯಕ್ಕೆ ಸಂಬಂಧಿಸಿದಂತೆ ಬೆನ್ನು ನೋವು, ಕಾಲು ನೋವು, ಪಾದಗಳಲ್ಲಿ ನೋವು ಕಂಡು ಬರುವುದು. ಮಾನಸಿಕ ಸಮಸ್ಯೆಯಿದ್ದರೆ ತುಂಬಾ ಎಚ್ಚರವಹಿಸಬೇಕು.
ನಿಮ್ಮ ವೃತ್ತಿ ಗ್ರಾಫ್ ಬಗ್ಗೆ ನಿಮಗೆ ಏನೂ ಗೊತ್ತಾಗುವುದಿಲ್ಲ. ಯಾರಾದರೂ ನಿಮಗೆ ಸಲಹೆ ನೀಡಿದರೆ ನೀವು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಸಹೋದ್ಯೋಗಿಯೊಂದಿಗೆ ತರ್ಕಕ್ಕೆ ಹೋಗಬೇಡಿ.
ಉದ್ಯೋಗ ಅವಕಾಶಿಗಳಿಗೆ ಉತ್ತಮ ಅವಕಾಶ ಸಿಗಬಹುದು. ಇನ್ನು ಈ ಸಮಯದಲ್ಲಿಇರುವ ಉದ್ಯೋಗವನ್ನು ಬಿಡದಿರುವುದು ಒಳ್ಳೆಯದು. ಕುಟುಂಬ ವ್ಯವಹಾರ ಮಾಡುತ್ತಿರುವವರಿಗೆ ಈ ಸಮಯ ಒಳ್ಳೆಯದಿದೆ. ಉದ್ಯಮಿಗಳು ಕೆಲಸಗಾರರೊಂದಿಗೆ ತರ್ಕ ಮಾಡದಿರುವುದು ಒಳ್ಳೆಯದು. ನಿಮ್ಮ ಹಠಿಮಾರಿತನದಿಂದ ನಿನಗೆ ನಷ್ಟವೇ ಆಗುವುದು. ಹೊಸ ಉದ್ಯೋಗಕ್ಕೆ ಹೂಡಿಕೆ ಮಾಡುವುದು ಒಳ್ಳೆಯದು. ನಿಮ್ಮ ಮಾತಿನಿಂದ ಯಾರನ್ನೂ ನೋಯಿಸಬೇಡಿ.
ಪರಿಹಾರ: ಪ್ರತಿದಿನ ವಿಷ್ಣು ಮಂತ್ರ ಪಠಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಚರ್ಮ ಸಂಬಂಧಿಸಿದ ಸಮಸ್ಯೆ, ನಿದ್ರಾಹೀನತೆ, ತಲೆ ನೋವು ಮುಂತಾದ ಆರೋಗ್ಯ ಸಂಬಂಧಿಸಿದ ಸಮಸ್ಯ ಕಾಣಬಹುದು. ನಿಮ್ಮ ಆರೋಗ್ಯದ ಕಡೆ ಗಮನ ನೀಡಿ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದ ಚಿಂತೆ ಕಾಡಬಹುದು. ಅವಶ್ಯಕ ಕಾರ್ಯವನ್ನು ಪೂರ್ಣಗೊಳಿಸಲು ಕೆಲವೊಂದು ಪರಿಹಾರವೂ ನಿಮಗೆ ಕಾಣುವುದು, ಆದರೂ ಈ ಸಮಯದಲ್ಲಿ ಸಾಕಷ್ಟು ಒತ್ತಡಕ್ಕೆ ಒಳಗಾಗುತ್ತೀರಿ, ಸರಿಯಾಗಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಫಲ ಸಿಗುವುದು. ಕೇಸ್ ಸಂಬಂಧಿತ ವಿವಾದ ಮತ್ತಷ್ಟು ಲೇಟ್ ಆಗಬಹುದು. ಹಣದ ಸಂಗ್ರಹಣೆಗೆ ಅಥವಾ ಹಣವನ್ನು ಹಿಂಪಡೆಯಲು ನೀವು ಸಾಕಷ್ಟು ಶ್ರಮ ಪಡಬೇಕಾಗುವುದು.
ಲೋನ್ ಅಥವಾ ವೀಸಾಕ್ಕೆ ಪ್ರಯತ್ನಿಸುವುದಾದರೆ ಸ್ವಲ್ಪ ಕಾಯಬೇಕಾಗುವುದು. ಚಿನ್ನ, ಬೆಳ್ಳಿ, ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಲು ಅವಸರ ಪಡಬೇಡಿ. ನೀವು ಈಗಾಗಲೇ ಬೇರೆ ಕಡೆ ಹೂಡಿಕೆ ಮಾಡಿದ್ದರೆ ತುಂಬಾ ಎಚ್ಚರವಹಿಸಿ. ಯಾರನ್ನೂ ಟೀಕೆ ಮಾಡಲು ಹೋಗದಿರಿ. ವೈವಾಹಿಕ ಸಂಬಂಧದಲ್ಲಿ ನೀವು ತುಂಬಾ ಎಚ್ಚರವಹಿಸಬೇಕು. ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಪೋಷಕರ ಆರೋಗ್ಯದಲ್ಲಿ ಕುಸಿತ ಕಾಣುವ ಸಾದ್ಯತೆ ಇದೆ. ಮಕ್ಕಳ ವರ್ತನೆ ಬೇಸರ ತರಬಹುದು, ಆದರೆ ಅವರ ವರ್ತನೆ ಕಾರಣ ತಿಳಿಯಲು ಪ್ರಯತ್ನಿಸಿ, ಪರಿಹಾರ ಸಿಗುವುದು.
ಪರಿಹಾರ: ಪ್ರತಿದಿನ ವಿಷ್ಣು ಮಂತ್ರ ಪಠಿಸಿ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಎದೆ ನೋವು, ಹೊಟ್ಟೆ ಸಂಬಂಧಿಸಿದ ಸಮಸ್ಯೆ, ಯೂರಿನರಿ ಸಮಸ್ಯೆ ಕಾಡಬಹುದು, ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆವಹಿಸಿ. ವಿದ್ಯಾರ್ಥಿಗಳು ಕೆಲ ಸಮಸ್ಯೆ ಎದುರಿಸಬೇಕಾಗುವುದು ಆದರೆ ಚಿಂತಿಸಬೇಕಾಗಿಲ್ಲ, ಕೆಟ್ಟ ಸಮಯ ತುಂಬಾ ದಿನ ಇರುವುದಿಲ್ಲ.
ಗರ್ಭಿಣಿಯರಿಗೆ ಅಧಿಕ ಖರ್ಚು ಬರುವುದು, ನಿಮ್ಮ ಆರೋಗ್ಯದ ಕಡೆ ಗಮನ ನೀಡಿ.
ಉದ್ಯೋಗಿಗಳಿಗೆ ಉತ್ತಮ ಸಮಯವಾಗಿದೆ, ಬಡ್ತಿ ಸಿಗುವುದು, ಉದ್ಯಮಿಗಳಿಗೂ ಒಳ್ಳೆಯ ಸಮಯವಾಗಿದೆ. ಆಸ್ತಿ ಸಂಬಂಧಿಸಿದ ಕೇಸ್, ಕೋರ್ಟ್ ಕೇಸ್ನಲ್ಲಿ ವಿಳಂಬ ಉಂಟಾಗಬಹುದು. ವೈಯಕ್ತಿಕ ಹಾಗೂ ಪ್ರೀತಿ ಜೀವನ ಚೆನ್ನಾಗಿರುತ್ತದೆ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಕಾಲು ಹಾಗೂ ತ್ವಚೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು, ಕುಟುಂಬದ ಸದಸ್ಯರಲ್ಲೂ ಅನಾರೋಗ್ಯ ಕಂಡು ಬರುವುದು, ನೀವು ಆರೋಗ್ಯದ ಕಡೆ ಗಮನ ಹರಿಸಬೇಕಾಗಿದೆ.
ಕೆಲಸದಲ್ಲಿ ನಿಧಾನಗತಿ ನಿಮ್ಮಲ್ಲಿ ಕೋಪ, ಹತಾಶೆ ಮೂಡಿಸಬಹುದು. ಧ್ಯಾನ ಅಭ್ಯಾಸ ಮಾಡಿ, ಒಳ್ಳೆಯ ಆಲೋಚನೆ ಮಾಡಿ, ಆರೋಗ್ಯಕರ ಆಹಾರ ಸೇವಿಸಿ.
ಸಾಮಾಜಿಕವಾಗಿಯೂ ಈ ಸಮಯದಲ್ಲಿ ಏರಳಿತ ಕಂಡು ಬರುವುದು. ಗೊಂದಲದಿಂದ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು, ನಿಮ್ಮ ವೃತ್ತಿ ಬಗೆಯೂ ಗೊಂದಲ ಇರಬಹುದು. ವಿದೇಶಕ್ಕೆ ಹೋಗ ಬಯಸುವವರು, ವಿದ್ಯಾಭ್ಯಾಸ ಮಾಡ ಬಯಸುವವರು ಸ್ವಲ್ಪ ವಿಳಂಬವಾಗುವುದು.
ಕೆಲವರಿಗೆ ಈ ಸಮಯದಲ್ಲಿ ಅಧಿಕ ಖರ್ಚು ಬರಬಹುದು, ಹಿರಿಯ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳಿ. ವೈವಾಹಿಕ ಜೀವನದಲ್ಲೂ ಕೆಲವೊಂದು ಏರಳಿತ ಉಂಟಾಗುವುದು.
ಪರಿಹಾರ: ಪ್ರತಿದಿನ ಗಣೇಶ ಮಂತ್ರ ಪಠಿಸಿ.
ಧನು ರಾಶಿ
ವೀಸಾ ಅಥವಾ ಲೋನ್ಗೆ ಅರ್ಜಿ ಸಲ್ಲಿಸಿದವರಿಗೆ ಅದು ಸಿಗಲಿದೆ. ವಿದೇಶಕ್ಕೆ ಹೋಗ ಬಯಸುವವರಿಗೂ ಒಳ್ಳೆಯ ಸಮಯವಿದು. ಪೋಷಕರ ಸಂಪೂರ್ಣ ಬೆಂಬಲ ಸಿಗುವುದು.
ಪ್ರೀತಿ ಹಾಗೂ ವೈವಾಹಿಕ ಜೀವನದಲ್ಲಿ ಕೆಲವೊಂದು ಏರಳಿತ ಇರುತ್ತದೆ. ಅಲ್ಲದೆ ಧನು ರಾಶಿಯವರಲ್ಲಿ ಕೆಲವರಿಗೆ ಆರೋಗ್ಯ ಸಂಬಂಧಿತ ಸಮಸ್ಯೆ ಎದುರಾಗಬಹುದು, ಕೂಡಲೇ ವೈದ್ಯರನ್ನು ಕಾಣಿ,
ನೀವು ನಿಮ್ಮ ಹಾಗೂ ಕುಟುಂಬದ ಆರೋಗ್ಯಕ್ಕಾಗಿ ಹೆಚ್ಚಿ ಹಣ ಖರ್ಚು ಮಾಡಬೇಕಾಗುವುದು, ಉದ್ಯೋಗ ಅವಕಾಶಕ್ಕೆ ಕಾಯುತ್ತಿರುವವರಿಗೆ ಸ್ವಲ್ಪ ನಿರಾಸೆ ಉಂಟಾಗಬಹುದು, ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಕುಸಿತ ಉಂಟಾಗುವ ಸಾಧ್ಯತೆ ಇದೆ.
ಪರಿಹಾರ: ಪ್ರತಿದಿನ ದತ್ತೇತ್ರೇಯ ಮಂತ್ರ ಪಠಿಸಿ.
ಮಕರ ರಾಶಿ
ಕೈ, ಭುಜ, ಗಂಟಲಿಗೆ ಸಂಬಂಧಿಸಿದ ಸಮಸ್ಯೆ, ಗಾಲ್ ಬ್ಲೇಡರ್, ಕೆಮ್ಮು ಈ ರೀತಿಯ ಸಮಸ್ಯೆ ಎದುರಾಗಬಹುದು, ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಬರಬಹುದು.
ಮಕ್ಕಳ ಆರೋಗ್ಯದ ಕಡೆ ಗಮನ ನೀಡಿ, ವೃತ್ತಿ ಜೀವನದಲ್ಲಿನ ಅಸ್ಥಿರತೆ ಚಿಂತೆ ಹೆಚ್ಚಿಸುವುದು. ವಿದ್ಯಾರ್ಥಿಗಳು ಚಿಂತೆ ಮಾಡದೆ ತಮ್ಮ ಗುರಿಯತ್ತ ಗಮನ ಹರಿಸಲು ಸೂಚಿಸಲಾಗಿದೆ. ವ್ಯವಹಾರಸ್ಥರು ತಮ್ಮ ವ್ಯವಹಾರ ವಿಸ್ತರಿಸಬಹುದು, ವ್ಯವಹಾರ ಸಂಬಂಧದಲ್ಲಿ ಜಗಳ ಕಾಣಬಹುದು.
ಈ ಸಮಯದಲ್ಲಿ ಹೂಡಿಕೆ ಬಗ್ಗೆ ಎಚ್ಚರವಿರಲಿ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಕುಂಭ ರಾಶಿ
ಈ ರಾಶಿಯವರಲ್ಲಿ ಹೊಟ್ಟೆ ಸಂಬಂಧಿಸಿದ ಸಮಸ್ಯೆ, ಉಸಿರಾಟದ ಸಮಸ್ಯೆ, ಮೂಳೆ ಸಮಸ್ಯೆ, ಎದೆ ನೋವು ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಅಸ್ತಮಾ ಇರುವವರು ಈ ಸಮಯದಲ್ಲಿ ತುಂಬಾನೇ ಎಚ್ಚರವಹಿಸಬೇಕು.
ವೃತ್ತಿ ಜೀವನದಲ್ಲಿ ಅನುಕೂಲಕರ ಬದಲಾವಣೆ ಸಾಧ್ಯ. ವ್ಯವಹಾರಸ್ಥರು ಈ ಸಮಯದಲ್ಲಿ ತುಂಬಾನೇ ಪ್ಲ್ಯಾನ್ ಮಾಡಬೇಕಾಗುತ್ತದೆ.
ಸ್ಟಾಕ್ ಮಾರ್ಕೆಟ್ ಹಾಗೂ ಹಣ ನೀಡುವುದರ ಬಗ್ಗೆ ಎಚ್ಚರ ವಹಿಸಿ, ಯಾವುದೇ ಕೆಲಸಕ್ಕೆ ಕೈ ಹಾಕುವ ಮುನ್ನ ಪರಿಣಿತರ ಸಲಹೆ ಪಡೆಯಿರಿ.
ಸಂಬಂಧದ ಬಗ್ಗೆ ಹೇಳುವುದಾದರೆ ಪ್ರೇಮಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ವೈವಾಹಿಕ ಜೀವನವೂ ಚೆನ್ನಾಗಿರುತ್ತದೆ.
ಪರಿಹಾರ: ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ಸಮಯ ಉತ್ತಮವಾಗಿದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆಯಿದ್ದರೆ ಅದು ಕಡಿಮೆಯಾಗುವುದು, ಆರೋಗ್ಯದಲ್ಲಿ ಸುಧಾರಣೆ ಕಾಣುವುದು.
ಈ ಸಮಯದಲ್ಲಿ ಹಣದ ಖರ್ಚು ಹೆಚ್ಚುವುದರಿಂದ ನೀವು ಈ ಕುರಿತು ಚಿಂತಿಸುವಿರಿ, ಸ್ಕೀಮ್ ಅಥವಾ ಇತರ ಕಡೆ ಹೂಡಿಕೆ ಮಾಡುವುದಾದರೆ ತಜ್ಞರ ಸಲಹೆ ಪಡೆಯಿರಿ.
ಹೊಸ ಉದ್ಯೋಗ ಅಥವಾ ವ್ಯವಹಾರಕ್ಕೆ ಉತ್ತಮ ಅವಧಿಯಾಗಿದೆ. ಈ ಸಮಯದಲ್ಲಿ ಕೆಲ ಶುಭ ಕಾರ್ಯಗಳಲ್ಲಿ ಕೂಡ ಭಾಗವಹಿಸುವಿರಿ, ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಕೂಡ ಒಳ್ಳೆಯ ಸುದ್ದಿ ಪಡೆಯಬಹುದು.
ಪೋಷಕರೊಂದಿಗೆ ಸಂಬಂಧ ಚೆನ್ನಾಗಿರುತ್ತದೆ, ಪ್ರೇಮ ಹಾಗೂ ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚುವುದು.
ಪರಿಹಾರ: ಪ್ರತಿದಿನ ಗಣೇಶ ಮಂತ್ರ ಪಠಿಸಿ.