Latest Updates
-
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ?
ಜ್ಯೇಷ್ಠ ಪೂರ್ಣಿಮಾ ವ್ರತ 2021: ಪೂಜಾ ವಿಧಿ ಹಾಗೂ ಈ ದಿನದ ವಿಶೇಷವೇನು?
ಹಿಂದೂ ಧರ್ಮದಲ್ಲಿ ಜ್ಯೇಷ್ಠ ಮಾಸವೇ ತುಂಬಾ ವಿಶೇಷವಾದದ್ದು. ಈ ತಿಂಗಳಿನಲ್ಲಿ ಗಂಗಾ ದಸರಾ, ನಿರ್ಜಲ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ, ಅದರಲ್ಲೊಂದು ಜ್ಯೇಷ್ಠ ಪೂರ್ಣಿಮಾ. ಈ ವರ್ಷ ಜ್ಯೇಷ್ಠ ಪೂರ್ಣಿಮಾ ಜೂನ್ 24ರಂದು ಬಂದಿದೆ. ಜ್ಯೇಷ್ಠ ಪೂರ್ಣಿಮಾ ದಿನ ವಿಷ್ಣು ಹಾಗೂ ಶಿವನನ್ನು ಪೂಜಿಸಲಾಗುವುದು. ಈ ದಿನ ಪವಿತ್ರ ನದಿಯಲ್ಲಿ ಅಥವಾ ಸ್ನಾನದ ನೀರಿನಲ್ಲಿ ಗಂಗಾಜಲ ಹಾಕಿ ಸ್ನಾನ ಮಾಡಿ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನದ ವಿಶೇಷತೆ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೋಡಿ.

ಜ್ಯೇಷ್ಠ ಪೂರ್ಣಿಮಾ ವ್ರತ 2021: ದಿನಾಂಕ ಮತ್ತು ಸಮಯ
ಪೂರ್ಣಿಮಾ ಪ್ರಾರಂಭ: ಜೂನ್ 23, ಮುಂಜಾನೆ 02:02ಕ್ಕೆ
ಪೂರ್ಣಿಮಾ ಮುಕ್ತಾಯ: ಜೂನ್ 24 ಮಧ್ಯಾಹ್ನ 10:39ರವರೆಗೆ
ಸೂರ್ಯೋದಯ: ಬೆಳಗ್ಗೆ 06:25ಕ್ಕೆ
ಸೂರ್ಯಾಸ್ತ: ಸಂಜೆ 06:16ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತ 2021: ಶುಭ ಮುಹೂರ್ತ
ಬ್ರಹ್ಮ ಮುಹೂರ್ತ ಬೆಳಗ್ಗೆ 04:48ರಿಂದ 05:36ರವರೆಗೆ
ಅಭಿಜಿತ್ ಮುಹೂರ್ತ ಬೆಳಗ್ಗೆ 11:57ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:05ರವರೆಗೆ 06:29ರವರೆಗೆ
ಅಮೃತ ಕಾಲ ರಾತ್ರಿ 11:26ರಿಂದ 12:52ರವರೆಗೆ
ರವಿ ಯೋಗ ಜೂನ್ 25, 06:25ರಿಂದ 7:41ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತದ ಮಹತ್ವ
ಇದು ತುಂಬಾ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಹಾಗೂ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶುಭ ಫಲ ಉಂಟಾಗುವುದು ಹಾಗೂ ಪಾಪಗಳಿಂದ ಮುಕ್ತಿ ಸಿಗುವುದು ಎಂಬ ನಂಬಿಕೆ ಇದೆ. ಈ ದಿನ ಅಗ್ಯತವಿರುವವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.
* ವಿಷ್ಣು ಹಾಗೂ ಶಿವನನ್ನು ಆರಾಧಿಸಬೇಕು.
* ವಿಷ್ಣುವಿಗೆ ತುಳಸಿಯನ್ನು ಶಿವನಿಗೆ ಬಿಲ್ವೆ ಪತ್ರೆಯನ್ನು ಅರ್ಪಿಸಬೇಕು.
* ಕೆಲವರು ಉಪವಾಸ ಮಾಡಿದರೆ, ಇನ್ನು ಕೆಲವರು ಈ ದಿನದಂದು ಸಾತ್ವಿಕ ಆಹರಗಳನ್ನಷ್ಟೇ ಸೇವಿಸುತ್ತಾರೆ.
* ಚಂದ್ರನಿಗೆ ಹಾಲು ಮತ್ತು ಜೇನಿನಿಂದ ಆರ್ಘ್ಯ ಸಲ್ಲಿಸಬೇಕು.
* ವಿಷ್ಣು ಲಕ್ಷ್ಮಿ ಜೊತೆಗೆ ಆಲದ ಮರದಲ್ಲಿ ನೆಲೆಸಿರುತ್ತಾನೆ ನಂಬಿಕೆ ಇದೆ, ಆದ್ದರಿಂದ ಈ ದಿನ ಆಲದ ಮರಕ್ಕೆ ನೀರು ಹಾಗೂ ಹಾಲು ಅರ್ಪಿಸಲಾಗುವುದು.
ಈ ರೀತಿ ಜ್ಯೇಷ್ಠ ಪೂರ್ಣಿಮಾ ಆಚರಿಸಿದರೆ ಅವರ ಬದುಕಿನಲ್ಲಿ ಸಂತೋಷ, ಸಮೃದ್ಧಿ ನೆಲೆಸುವುದು.



Click it and Unblock the Notifications
