Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಜ್ಯೇಷ್ಠ ಪೂರ್ಣಿಮಾ ವ್ರತ 2021: ಪೂಜಾ ವಿಧಿ ಹಾಗೂ ಈ ದಿನದ ವಿಶೇಷವೇನು?
ಹಿಂದೂ ಧರ್ಮದಲ್ಲಿ ಜ್ಯೇಷ್ಠ ಮಾಸವೇ ತುಂಬಾ ವಿಶೇಷವಾದದ್ದು. ಈ ತಿಂಗಳಿನಲ್ಲಿ ಗಂಗಾ ದಸರಾ, ನಿರ್ಜಲ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ, ಅದರಲ್ಲೊಂದು ಜ್ಯೇಷ್ಠ ಪೂರ್ಣಿಮಾ. ಈ ವರ್ಷ ಜ್ಯೇಷ್ಠ ಪೂರ್ಣಿಮಾ ಜೂನ್ 24ರಂದು ಬಂದಿದೆ. ಜ್ಯೇಷ್ಠ ಪೂರ್ಣಿಮಾ ದಿನ ವಿಷ್ಣು ಹಾಗೂ ಶಿವನನ್ನು ಪೂಜಿಸಲಾಗುವುದು. ಈ ದಿನ ಪವಿತ್ರ ನದಿಯಲ್ಲಿ ಅಥವಾ ಸ್ನಾನದ ನೀರಿನಲ್ಲಿ ಗಂಗಾಜಲ ಹಾಕಿ ಸ್ನಾನ ಮಾಡಿ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನದ ವಿಶೇಷತೆ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೋಡಿ.

ಜ್ಯೇಷ್ಠ ಪೂರ್ಣಿಮಾ ವ್ರತ 2021: ದಿನಾಂಕ ಮತ್ತು ಸಮಯ
ಪೂರ್ಣಿಮಾ ಪ್ರಾರಂಭ: ಜೂನ್ 23, ಮುಂಜಾನೆ 02:02ಕ್ಕೆ
ಪೂರ್ಣಿಮಾ ಮುಕ್ತಾಯ: ಜೂನ್ 24 ಮಧ್ಯಾಹ್ನ 10:39ರವರೆಗೆ
ಸೂರ್ಯೋದಯ: ಬೆಳಗ್ಗೆ 06:25ಕ್ಕೆ
ಸೂರ್ಯಾಸ್ತ: ಸಂಜೆ 06:16ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತ 2021: ಶುಭ ಮುಹೂರ್ತ
ಬ್ರಹ್ಮ ಮುಹೂರ್ತ ಬೆಳಗ್ಗೆ 04:48ರಿಂದ 05:36ರವರೆಗೆ
ಅಭಿಜಿತ್ ಮುಹೂರ್ತ ಬೆಳಗ್ಗೆ 11:57ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:05ರವರೆಗೆ 06:29ರವರೆಗೆ
ಅಮೃತ ಕಾಲ ರಾತ್ರಿ 11:26ರಿಂದ 12:52ರವರೆಗೆ
ರವಿ ಯೋಗ ಜೂನ್ 25, 06:25ರಿಂದ 7:41ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತದ ಮಹತ್ವ
ಇದು ತುಂಬಾ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಹಾಗೂ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶುಭ ಫಲ ಉಂಟಾಗುವುದು ಹಾಗೂ ಪಾಪಗಳಿಂದ ಮುಕ್ತಿ ಸಿಗುವುದು ಎಂಬ ನಂಬಿಕೆ ಇದೆ. ಈ ದಿನ ಅಗ್ಯತವಿರುವವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.
* ವಿಷ್ಣು ಹಾಗೂ ಶಿವನನ್ನು ಆರಾಧಿಸಬೇಕು.
* ವಿಷ್ಣುವಿಗೆ ತುಳಸಿಯನ್ನು ಶಿವನಿಗೆ ಬಿಲ್ವೆ ಪತ್ರೆಯನ್ನು ಅರ್ಪಿಸಬೇಕು.
* ಕೆಲವರು ಉಪವಾಸ ಮಾಡಿದರೆ, ಇನ್ನು ಕೆಲವರು ಈ ದಿನದಂದು ಸಾತ್ವಿಕ ಆಹರಗಳನ್ನಷ್ಟೇ ಸೇವಿಸುತ್ತಾರೆ.
* ಚಂದ್ರನಿಗೆ ಹಾಲು ಮತ್ತು ಜೇನಿನಿಂದ ಆರ್ಘ್ಯ ಸಲ್ಲಿಸಬೇಕು.
* ವಿಷ್ಣು ಲಕ್ಷ್ಮಿ ಜೊತೆಗೆ ಆಲದ ಮರದಲ್ಲಿ ನೆಲೆಸಿರುತ್ತಾನೆ ನಂಬಿಕೆ ಇದೆ, ಆದ್ದರಿಂದ ಈ ದಿನ ಆಲದ ಮರಕ್ಕೆ ನೀರು ಹಾಗೂ ಹಾಲು ಅರ್ಪಿಸಲಾಗುವುದು.
ಈ ರೀತಿ ಜ್ಯೇಷ್ಠ ಪೂರ್ಣಿಮಾ ಆಚರಿಸಿದರೆ ಅವರ ಬದುಕಿನಲ್ಲಿ ಸಂತೋಷ, ಸಮೃದ್ಧಿ ನೆಲೆಸುವುದು.



Click it and Unblock the Notifications