Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಜ್ಯೇಷ್ಠ ಪೂರ್ಣಿಮಾ ವ್ರತ 2021: ಪೂಜಾ ವಿಧಿ ಹಾಗೂ ಈ ದಿನದ ವಿಶೇಷವೇನು?
ಹಿಂದೂ ಧರ್ಮದಲ್ಲಿ ಜ್ಯೇಷ್ಠ ಮಾಸವೇ ತುಂಬಾ ವಿಶೇಷವಾದದ್ದು. ಈ ತಿಂಗಳಿನಲ್ಲಿ ಗಂಗಾ ದಸರಾ, ನಿರ್ಜಲ ಏಕಾದಶಿ ಹೀಗೆ ಅನೇಕ ವಿಶೇಷ ದಿನಗಳಿವೆ, ಅದರಲ್ಲೊಂದು ಜ್ಯೇಷ್ಠ ಪೂರ್ಣಿಮಾ. ಈ ವರ್ಷ ಜ್ಯೇಷ್ಠ ಪೂರ್ಣಿಮಾ ಜೂನ್ 24ರಂದು ಬಂದಿದೆ. ಜ್ಯೇಷ್ಠ ಪೂರ್ಣಿಮಾ ದಿನ ವಿಷ್ಣು ಹಾಗೂ ಶಿವನನ್ನು ಪೂಜಿಸಲಾಗುವುದು. ಈ ದಿನ ಪವಿತ್ರ ನದಿಯಲ್ಲಿ ಅಥವಾ ಸ್ನಾನದ ನೀರಿನಲ್ಲಿ ಗಂಗಾಜಲ ಹಾಕಿ ಸ್ನಾನ ಮಾಡಿ ಉಪವಾಸವಿದ್ದು ವಿಷ್ಣುವಿನ ಆರಾಧನೆ ಮಾಡಲಾಗುವುದು.
ಈ ದಿನದ ವಿಶೇಷತೆ, ಶುಭ ಮುಹೂರ್ತ ಹಾಗೂ ಪೂಜಾ ವಿಧಿ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನೋಡಿ.

ಜ್ಯೇಷ್ಠ ಪೂರ್ಣಿಮಾ ವ್ರತ 2021: ದಿನಾಂಕ ಮತ್ತು ಸಮಯ
ಪೂರ್ಣಿಮಾ ಪ್ರಾರಂಭ: ಜೂನ್ 23, ಮುಂಜಾನೆ 02:02ಕ್ಕೆ
ಪೂರ್ಣಿಮಾ ಮುಕ್ತಾಯ: ಜೂನ್ 24 ಮಧ್ಯಾಹ್ನ 10:39ರವರೆಗೆ
ಸೂರ್ಯೋದಯ: ಬೆಳಗ್ಗೆ 06:25ಕ್ಕೆ
ಸೂರ್ಯಾಸ್ತ: ಸಂಜೆ 06:16ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತ 2021: ಶುಭ ಮುಹೂರ್ತ
ಬ್ರಹ್ಮ ಮುಹೂರ್ತ ಬೆಳಗ್ಗೆ 04:48ರಿಂದ 05:36ರವರೆಗೆ
ಅಭಿಜಿತ್ ಮುಹೂರ್ತ ಬೆಳಗ್ಗೆ 11:57ರಿಂದ ಮಧ್ಯಾಹ್ನ 12:44ರವರೆಗೆ
ಗೋಧೂಳಿ ಮುಹೂರ್ತ ಸಂಜೆ 06:05ರವರೆಗೆ 06:29ರವರೆಗೆ
ಅಮೃತ ಕಾಲ ರಾತ್ರಿ 11:26ರಿಂದ 12:52ರವರೆಗೆ
ರವಿ ಯೋಗ ಜೂನ್ 25, 06:25ರಿಂದ 7:41ರವರೆಗೆ

ಜ್ಯೇಷ್ಠ ಪೂರ್ಣಿಮಾ ವ್ರತದ ಮಹತ್ವ
ಇದು ತುಂಬಾ ಪವಿತ್ರವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ಹಾಗೂ ಶಿವನ ಭಕ್ತರು ಉಪವಾಸವಿದ್ದು ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಶುಭ ಫಲ ಉಂಟಾಗುವುದು ಹಾಗೂ ಪಾಪಗಳಿಂದ ಮುಕ್ತಿ ಸಿಗುವುದು ಎಂಬ ನಂಬಿಕೆ ಇದೆ. ಈ ದಿನ ಅಗ್ಯತವಿರುವವರಿಗೆ ಆಹಾರ ಮತ್ತು ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ಪೂಜಾ ವಿಧಿ
* ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಬೇಕು.
* ವಿಷ್ಣು ಹಾಗೂ ಶಿವನನ್ನು ಆರಾಧಿಸಬೇಕು.
* ವಿಷ್ಣುವಿಗೆ ತುಳಸಿಯನ್ನು ಶಿವನಿಗೆ ಬಿಲ್ವೆ ಪತ್ರೆಯನ್ನು ಅರ್ಪಿಸಬೇಕು.
* ಕೆಲವರು ಉಪವಾಸ ಮಾಡಿದರೆ, ಇನ್ನು ಕೆಲವರು ಈ ದಿನದಂದು ಸಾತ್ವಿಕ ಆಹರಗಳನ್ನಷ್ಟೇ ಸೇವಿಸುತ್ತಾರೆ.
* ಚಂದ್ರನಿಗೆ ಹಾಲು ಮತ್ತು ಜೇನಿನಿಂದ ಆರ್ಘ್ಯ ಸಲ್ಲಿಸಬೇಕು.
* ವಿಷ್ಣು ಲಕ್ಷ್ಮಿ ಜೊತೆಗೆ ಆಲದ ಮರದಲ್ಲಿ ನೆಲೆಸಿರುತ್ತಾನೆ ನಂಬಿಕೆ ಇದೆ, ಆದ್ದರಿಂದ ಈ ದಿನ ಆಲದ ಮರಕ್ಕೆ ನೀರು ಹಾಗೂ ಹಾಲು ಅರ್ಪಿಸಲಾಗುವುದು.
ಈ ರೀತಿ ಜ್ಯೇಷ್ಠ ಪೂರ್ಣಿಮಾ ಆಚರಿಸಿದರೆ ಅವರ ಬದುಕಿನಲ್ಲಿ ಸಂತೋಷ, ಸಮೃದ್ಧಿ ನೆಲೆಸುವುದು.



Click it and Unblock the Notifications