Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಉದ್ಯೋಗ ಪಡೆಯಲು ಬಯಸುವವರು ಜ್ಯೋತಿಶಾಸ್ತ್ರದ ಈ ಟಿಪ್ಸ್ ಅನುಸರಿಸಿ
ಉದ್ಯೋಗಂ ಪುರುಷ ಲಕ್ಷಣಂ ಎಂಬ ಮಾತಿತ್ತು, ಈಗ ಪುರುಷನ ಸರಿಸಮಾನವಾಗಿ ಹೆಣ್ಣು ಸಹ ಮಾಡುತ್ತಿದ್ದಾಳೆ ಹಾಗೂ ಈಗಿನ ಪರಿಸ್ಥಿತಿಯಲ್ಲಿ ಮಾಡಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಎಲ್ಲರಿಗೂ ಕೆಲಸ ಹೇಗೆ ಸಾಧ್ಯ. ಆದ್ದರಿಂದ ಎಲ್ಲರೂ ಕೆಲಸದ ಹುಡುಗಾಟದಲ್ಲಿರುತ್ತಾರೆ.

ಆದರೆ ನಮ್ಮ ಪ್ರಯತ್ನದ ಜೊತೆಗೆ ದೈವದ ಕೃಪೆ ಸಹ ನಮ್ಮ ಮೇಲಿರಬೇಕು ಆಗ ಮಾತ್ರ ನಮಗೂ ಕೆಲಸ ಸಿಗಲು ಸಾಧ್ಯ. ಅದಕ್ಕಾಗಿ ಜ್ಯೋತಿಶಾಸ್ತ್ರದ ಪ್ರಕಾರ ಕೆಲವು ಸಲಹೆಗಳಿದೆ, ಅವುಗಳನ್ನು ಪಾಲಿಸಿದರೆ ನಮಗೆ ಬೇಗ ಉದ್ಯೋಗ ಸಿಗುತ್ತದೆ ಎನ್ನಲಾಗುತ್ತದೆ.
ಜ್ಯೋತಿಶಾಸ್ತ್ರದ ಪ್ರಕಾರ ನಮ್ಮ ಪ್ರಯತ್ನದ ಜೊತೆಗೆ ಏನು ಮಾಡಿದರೆ ಕೆಲಸ ಸಿಗುತ್ತದೆ ಮುಂದೆ ನೋಡೋಣ:

1. ಶನಿ ದೇವರನ್ನು ಪೂಜಿಸಿ
ಶನಿ ದೇವರನ್ನು ಆರಾಧಿಸಿ ಶನಿಯು ಜ್ಯೋತಿಷ್ಯದಲ್ಲಿ ದಾಸ್ಯದ ಪ್ರಮುಖ ಸೂಚಕವಾಗಿದೆ. ಅವರ ನಿಯಮಿತ ಪೂಜೆಯು ಉದ್ಯೋಗವನ್ನು ಆಶೀರ್ವದಿಸುತ್ತದೆ.

2. ಭಗವಾನ್ ಕಾಲ ಭೈರವನನ್ನು ಪೂಜಿಸಿ
ಭಗವಾನ್ ಕಾಲ ಭೈರವ ನಾಥನು ಭಗವಾನ್ ಶಿವನ ವಿಪರೀತ ರೂಪ. ಅವನ ಆರಾಧನೆಯು ಒಬ್ಬ ವ್ಯಕ್ತಿಯನ್ನು ಅವನ / ಅವಳ ಸಮಸ್ಯೆಗಳಿಂದ ತ್ವರಿತವಾಗಿ ಬಿಡುಗಡೆ ಮಾಡುತ್ತದೆ. ಅವನು ಶನಿಯ ಅಧಿಪತಿ ದೇವನೂ ಆಗಿರುವುದರಿಂದ ಅವನ ಆರಾಧನೆಯು ಉದ್ಯೋಗವನ್ನು ನೀಡುತ್ತದೆ.

3. ರುದ್ರ ಅಭಿಷೇಕವನ್ನು ಮಾಡಿ
ರುದ್ರ ಅಭಿಷೇಕವು ಭಗವಾನ್ ಶಿವನನ್ನು ಆರಾಧಿಸುವುದಾಗಿದೆ. ಅವನ ಆರಾಧನೆಯು ಒಬ್ಬ ವ್ಯಕ್ತಿಗೆ ಏನು ಬೇಕಾದರೂ ಪಡೆಯುವ ಶಕ್ತಿ-ಸಾಮರ್ಥ್ಯ ನೀಡುತ್ತದೆ. ಆದ್ದರಿಂಧ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ನಿಮಗೆ ಉದ್ಯೋಗ ಲಾಭದ ಸಾಧ್ಯತೆ ಇದೆ.

4. 10 ಮತ್ತು 6ನೇ ಮನೆ ಪೂಜಿಸಿ
ಜಾತಕದ ಹತ್ತನೇ ಮನೆ ಮತ್ತು ಆರನೇ ಮನೆಯನ್ನು ಆಳುವ ಗ್ರಹವನ್ನು ಪೂಜಿಸುವುದು ಎಲ್ಲಾ ಜಾತಕದವರಿಗೂ ವಿಶೇಷ ಲಾಭ ತಂದುಕೊಡುತ್ತದೆ. ಅದರಲ್ಲೂ ಉದ್ಯೋಗ ಪ್ರಾಪ್ತಿಯಲ್ಲಿ ಹತ್ತನೇ ಮನೆಯ ಯಜಮಾನನ ಆರಾಧನೆಯು ಬಹಳ ಪ್ರಯೋಜನಕಾರಿಯಾಗಿದೆ.

5. ಕಾಗೆಗಳಿಗೆ ಆಹಾರ ನೀಡಿ
ಬೇಗ ಕೆಲಸ ಸಿಗಲು ಸುಲಭ ಉಪಾಯವೆಂದರೆ ಕಾಗೆಗಳಿಗೆ ಆಹಾರ. ನೀವು ಕಾಗೆಗಳಿಗೆ ಏನು ಬೇಕಾದರೂ ನೀಡಬಹುದಾದರೂ, ಬೇಯಿಸಿದ ಅನ್ನವನ್ನು ನೀಡುವುದು ಹೆಚ್ಚು ಪ್ರಯೋಜನಕಾರಿ. ಈ ಜ್ಯೋತಿಷ್ಯ ಪರಿಹಾರವು ಜಾತಕದಲ್ಲಿ ಶನಿಯ ದುಷ್ಪರಿಣಾಮಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉತ್ತಮ ಅವಕಾಶಗಳನ್ನು ಪಡೆಯಲು ಸಹಾಯ ಮಾಡುತ್ತದೆ.

6. ಶನಿ ದೇವಸ್ಥಾನಕ್ಕೆ ಭೇಟಿ ನೀಡಿ, ಅರಳಿ ಮರಕ್ಕೆ ದೀಪ ಹಚ್ಚಿ
ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ಪ್ರತಿದಿನ ಶನಿ ದೇವಸ್ಥಾನಕ್ಕೆ ಭೇಟಿ ನೀಡಿ ಶನಿ ದೇವರನ್ನು ಪೂಜಿಸಿ. ಅಲ್ಲದೆ, ಅರಳಿ ಮರದಲ್ಲಿ ದೀಪವನ್ನು ಬೆಳಗಿಸಿ. ಜೊತೆಗೆ ಪವಿತ್ರ ಕೆಂಪು ದಾರವನ್ನು ಮರದ ಸುತ್ತಲೂ ಮೂರು ಬಾರಿ ಕಟ್ಟಿಕೊಳ್ಳಿ ಮತ್ತು ನಿಮ್ಮ ಕನಸಿನ ಕೆಲಸಕ್ಕಾಗಿ ಹಾರೈಸಿ. ಈ ಪರಿಹಾರವು ನಿಜವಾಗಿಯೂ ತ್ವರಿತ ಫಲಿತಾಂಶಗಳನ್ನು ತೋರಿಸುತ್ತದೆ.

7. ಶನಿ ಸ್ತ್ರೋತ್ರವನ್ನು ಪಠಿಸಿ
ಶನಿ ದೇವರನ್ನು ನ್ಯಾಯದ ದೇವರು ಎಂದೂ ಕರೆಯುತ್ತಾರೆ ಏಕೆಂದರೆ ಅವನು ವ್ಯಕ್ತಿಯ / ಅವಳ ಕಾರ್ಯಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ತಮ್ಮ ಜಾತಕದಲ್ಲಿ ಶನಿ ದೇವರ ಉತ್ತಮ ಸ್ಥಾನವನ್ನು ಹೊಂದಿರದ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಯಶಸ್ವಿಯಾಗುವುದಿಲ್ಲ. ಶನಿದೇವನ ಮಹಾದಶಾ ನಿಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರದಂತೆ ತಡೆಯಲು ಶನಿ ಸ್ತ್ರೋತ್ರವನ್ನು ಪಠಿಸಬೇಕು.

8. ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಿ
ಶನಿ ದೇವರು ಕಪ್ಪು ಬಣ್ಣವನ್ನು ಇಷ್ಟಪಡುತ್ತಾನೆ ಎಂದು ನಂಬಲಾಗಿದೆ ಮತ್ತು ಆದ್ದರಿಂದ ಉದ್ಯೋಗವನ್ನು ಹುಡುಕುತ್ತಿರುವ ಜನರು ಕಪ್ಪು ಬಣ್ಣದ ಬಟ್ಟೆ ಅಥವಾ ಶೂಗಳು, ಹೊದಿಕೆಗಳು ಅಥವಾ ಛತ್ರಿಗಳಂತಹ ಉಪಯುಕ್ತ ವಸ್ತುಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಈ ಪರಿಹಾರವು ಜಾತಕದಿಂದ ಶನಿ ದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

9. ಸೂರ್ಯನಿಗೆ ನೀರನ್ನು ಅರ್ಪಿಸಿ
ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಸ್ನಾನದ ನಂತರ ಸೂರ್ಯನಿಗೆ ನೀರನ್ನು ಅರ್ಪಿಸುವುದು ಸಹ ಪ್ರಯೋಜನಕಾರಿ. ತಾಮ್ರದ ಪಾತ್ರೆಯಲ್ಲಿ, ಸ್ವಲ್ಪ ನೀರು ಮತ್ತು ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ ಮತ್ತು ನಂತರ ಅದನ್ನು ಸೂರ್ಯನಿಗೆ ಅರ್ಪಿಸಿ.
ಸೂರ್ಯನಿಗೆ ನೀರನ್ನು ಅರ್ಪಿಸುವಾಗ, 'ಓಂ ಹ್ರೀಂ ಸೂರ್ಯಯೇ ನಮಃ' ಎಂಬ ಮಂತ್ರವನ್ನು 11 ಬಾರಿ ಜಪಿಸಿ. ದೀರ್ಘಕಾಲದವರೆಗೆ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಈ ಪರಿಹಾರವು ಪ್ರಯೋಜನಕಾರಿಯಾಗಿದೆ.



Click it and Unblock the Notifications