Latest Updates
-
ಬಿಸಿಲಿನಲ್ಲಿ ಮದುವೆ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ 5 ಬದಲಾವಣೆಗಳನ್ನು ಮರೆಯಬೇಡಿ! -
ದೆಹಲಿ ಧೂಳಿನ ಬಿರುಗಾಳಿ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 500 ರೂಪಾಯಿಯ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ಸಾಲ ತೀರಿಸಿಕೊಳ್ಳಲು ತನ್ನ 29 ಅಂಡಾಣುಗಳನ್ನು ಮಾರಿದ ವಿದ್ಯಾರ್ಥಿನಿ!!
ಐಷಾರಾಮಿ ಜೀವನ ನಡೆಸಲು ಇಂದಿನ ಯುವ ಜನತೆಯು ಕಠಿಣ ಪರಿಶ್ರಮ ಪಡುವ ಬದಲು ತುಂಬಾ ಸುಲಭ ದಾರಿ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ. ಯಾಕೆಂದರೆ ಯುವ ಜನರಿಗೆ ಪರಿಶ್ರಮದಿಂದ ಸಿಗುವಂತಹ ಯಶಸ್ಸು ಮತ್ತು ಅಡ್ಡ ದಾರಿಯಿಂದ ಸಿಗುವಂತಹ ಯಶಸ್ಸಿಗೆ ವ್ಯತ್ಯಾಸವೇ ಗೊತ್ತಿಲ್ಲ. ಐ ಫೋನ್ ಖರೀದಿ ಮಾಡಲು ವ್ಯಕ್ತಿಯೊಬ್ಬ ತನ್ನ ಕಿಡ್ನಿ ಮಾರಿರುವ, ಐಫೋನ್ ಆಸೆಯಿಂದಾಗಿ ತನ್ನ ಅಂಡಾಣುಗಳನ್ನು ಮಾರಲು ಹೋಗಿ ಪ್ರಾಣ ಕಳೆದುಕೊಂಡಿರುವ ಯುವತಿ ಬಗ್ಗೆ ನಾವು ಈ ವಿಭಾಗದಲ್ಲಿ ಈಗಾಗಲೇ ಓದಿಕೊಂಡಿದ್ದೇವೆ. ಈಗ ನೀವು ಇಂತಹ ಇನ್ನೊಂದು ಘಟನೆ ಬಗ್ಗೆ ತಿಳಿಯಬೇಕಾಗಿದೆ. ಇಲ್ಲೊಬ್ಬಳು ಯುವತಿಯು ತನ್ನ ಸಾಲ ತೀರಿಸಿಕೊಳ್ಳಲು 29 ಅಂಡಾಣುಗಳನ್ನು ಮಾರಿರುವಳು. ಅನಸ್ತೇಸಿಯಾ ಕೂಡ ನೀಡದೆ ಆಕೆಯ ಅಂಡಾಣುಗಳನ್ನು ತೆಗೆಯಲಾಗಿದೆ. ಈ ಯುವತಿಯ ದುರಂತ ಕಥೆ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿ...

ಸಾಲ ಮರುಪಾವತಿ ಮಾಡಲು ಬಯಸಿದ್ದರು
ಚೀನಾದ ಹುಬೆಯಿ ಪ್ರಾಂತ್ಯದ ವುಹಾನ್ ಎನ್ನುವಲ್ಲಿನ ಹೆಸರು ಹೇಳಲು ಇಚ್ಛಿಸದೆ ಬಯಸದ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಯುವತಿಯೊಬ್ಬಳು ತನ್ನ ಅಂಡಾಣುಗಳನ್ನು ಮಾರಿ, ಅದರಿಂದ ಬರುವ ಹಣದಿಂದ ಸಾಲ ಮರುಪಾವತಿ ಮಾಡಲು ಬಯಸಿದ್ದರು. ಯಾಕೆಂದರೆ ಆಕೆ ಆನ್ ಲೈನ್ ನಲ್ಲಿ ಸಾಲ ಪಡೆದು ಅದರಿಂದ ಕಂಗಾಲು ಆಗಿದ್ದರು.

ಅಂಡಾಣು ಉತ್ಪತ್ತಿ ಮಾಡಲು ಆಕೆಗ ಇಂಜೆಕ್ಷನ್ ನೀಡಲಾಯಿತು
ಶಸ್ತ್ರಚಿಕಿತ್ಸೆ ಮೊದಲು ಅಂಡೋತ್ಪತ್ತಿಯು ಹೆಚ್ಚಾಗುವಂತೆ ಮಾಡಲು ಆಕೆಗೆ ಸುಮಾರು 22 ದಿನಗಳ ಕಾಲ ಇಂಜೆಕ್ಷನ್ ನೀಡಲಾಯಿತು ಎಂದು ಯುವತಿಯು ಬಹಿರಂಗಪಡಿಸಿರುವಳು. 29 ಅಂಡಾಣುವನ್ನು ತೆಗೆಯಲು ಆಕೆ ಎರಡು ಸಲ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇದರ ಬಳಿಕ ಆಕೆ ಕಾನೂನು ಬಾಹಿರ ಫಲವತ್ತತೆ ಕ್ಲಿನಿಕ್ ನಡೆಸುವವರಿಗೆ ಇದನ್ನು ಮಾರಿದಳು.

ಆಕೆಗೆ ಅನಸ್ತೇಸಿಯಾ ಕೂಡ ನೀಡಲಿಲ್ಲ
ಆಸ್ಪತ್ರೆಯಲ್ಲಿ ಯುವತಿಗೆಯ ದೈಹಿಕ ಪರೀಕ್ಷೆಗಳನ್ನು ಮಾಡಲಾಯಿತು. ಆದರೆ ಕಾನೂನು ಬಾಹಿರವಾಗಿರುವಂತಹ ಕ್ಲಿನಿಕ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಾನೂನು ಬಾಹಿರ ಕ್ಲಿನಿಕ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದ್ದ ಕಾರಣದಿಂದಾಗಿ ಯುವತಿಗೆ ಪ್ರಜ್ಞೆ ತಪ್ಪುವಂತಹ ಔಷಧಿ ಕೂಡ ನೀಡಲಾಗಿಲ್ಲ ಎಂದು ಆಕೆ ಹೇಳಿಕೊಂಡಿರುವಳು.

ಅಂಡಾಣು ಮಾರುವಂತೆ ಪ್ರೋತ್ಸಾಹಿಸಲಾಗುತ್ತಿದೆ!
ಮಹಿಳೆಯರು ತಮ್ಮ ಅಂಡಾಣುಗಳನ್ನು ದಾನ ಮಾಡಿ ಎಂದು ಹೇಳುವಂತಹ ಹಲವಾರು ಜಾಹೀರಾತುಗಳು ಮತ್ತು ಹೋರ್ಡಿಂಗ್ ಗಳು ಸುತ್ತಲೂ ಇದೆ. ಹಣದ ಕೊರತೆ ಇರುವಂತಹ ಮಹಿಳೆಯರು ಇಲ್ಲೊಮ್ಮೆ ನೋಡಿ. ಇಲ್ಲಿ ನಿಮಗೆ ಹಣವನ್ನು ನಗದು ರೂಪದಲ್ಲಿ ಗಳಿಸುವಂತಹ ಅವಕಾಶವು ಇರುವುದು. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ಗೆ ಹಾಕಿಬಿಡಿ.



Click it and Unblock the Notifications