Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಕಳೆದ 40 ವರ್ಷದಿಂದ ಕೂದಲಿಗೆ ಕತ್ತರಿ, ನೀರು ತೋರಿಸದ ಬಾಬಾ
ಪ್ರತಿಯೊಬ್ಬರು ತಮ್ಮ ಕೂದಲನ್ನು ದಿನನಿತ್ಯವೂ ತೊಳೆಯುವರು. ಹೀಗೆ ಮಾಡದೆ ಇದ್ದರೆ ಆಗ ವಾಸನೆ ಬಂದು ಕಿರಿಕಿರಿ ಆಗುವುದು. ಉದ್ದ ಕೂದಲು ಬಿಟ್ಟಿರುವಂತವರು ಇದನ್ನು ಸರಿಯಾಗಿ ಆರೈಕೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದರೆ ಇಲ್ಲೊಬ್ಬರು ಬಾಬಾ ತನ್ನ ಕೂದಲಿಗೆ ಕಳೆದ 40 ವರ್ಷಗಳಿಂದ ನೀರನ್ನೇ ತೋರಿಸಿಲ್ಲ ಎಂದರೆ ನಾವು ನಂಬಲೇಬೇಕು. ಕೂದಲನ್ನು ತೊಳೆಯುವುದು ದೂರದ ಮಾತು. ಇನ್ನು ಅವರು ತನ್ನ ಕೂದಲನ್ನು ಕಳೆದ 40 ವರ್ಷಗಳಿಂದ ಕತ್ತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಈ ವಿಚಿತ್ರ ಬಾಬಾ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

ಬಿಹಾರದ ಸಕಲ್ ದೇವ್ ಟುಡ್ಡು ಎಂಬ 63ರ ಹರೆಯದ ಬಾಬಾ ಕಳೆದ 40 ವರ್ಷಗಳಿಂದ ಕೂದಲು ಕತ್ತರಿಸಿಕೊಂಡಿಲ್ಲ ಮತ್ತು ತೊಳೆಯಲು ಇಲ್ಲ. ಈಗ ಅವರ ಕೂದಲು ಆರು ಅಡಿ ಉದ್ದಕ್ಕೆ ಬೆಳೆದಿದೆ. ಅವರು ತನ್ನ ಕೂದಲನ್ನು ಈಗ ತಲೆಗೆ ಒಂದು ಮುಂಡಾಸಿನಂತೆ ಬಳಸಿಕೊಳ್ಳುತ್ತಿದ್ದಾರೆ. ಒಂದು ದಿನ ರಾತ್ರಿ ಮಲಗಿದ್ದಾಗಲೇ ತನ್ನ ಕೂದಲು ನೆಯ್ದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಒಂದು ರಾತ್ರಿ ದೇವರು ತನ್ನ ಕನಸಿನಲ್ಲಿ ಬಂದರು ಮತ್ತು ಈ ಕೂದಲನ್ನು ಯಾವತ್ತಿಗೂ ಕತ್ತರಿಸಬೇಡ ಮತ್ತು ತೊಳೆಯಬೇಡ ಎಂದು ಹೇಳಿದ್ದರು. ಇದರ ಬಳಿಕ 40 ವರ್ಷ ಕಳೆದಿದೆ ಎಂದು ಸಕಲ್ ಅವರು ಹೇಳುತ್ತಾರೆ.
ಸಕಲ್ ಕೂದಲನ್ನು ಕತ್ತರಿಸಿದೆ ಮತ್ತು ತೊಳೆಯದೆ ಇದ್ದರೂ ಅವರು ಬಟ್ಟೆಯಿಂದ ಅದನ್ನು ಮುಚ್ಚಿಕೊಂಡಿರುತ್ತಾರೆ. ಇದು ನಾಲ್ಕು ದಶಕಗಳಿಂದ ತೊಳೆಯದೆ ಇರುವ ಕಾರಣದಿಂದಾದಿ ಅದು ಜಡೆಯಂತೆ ಪರಿವರ್ತನೆಗೊಂಡಿದೆ. ಸ್ಥಳೀಯರು ಅವರನ್ನು ತುಂಬಾ ಗೌರವ ನೀಡಿ ಮಹಾತ್ಮ ಜೀ ಎಂದು ಕರೆಯುತ್ತಾರೆ. ಇವರು ಮಕ್ಕಳಿಲ್ಲದ ದಂಪತಿಗೆ ಮದ್ದು ನೀಡುವಂತಹ ಕೆಲಸ ಮಾಡುವರು.
ಸಂತಾನಭಾಗ್ಯವಿಲ್ಲದ ದಂಪತಿಗೆ ಔಷಧಿ ನೀಡುವ ಇವರು ಇದಕ್ಕೆ ಮೊದಲು 31 ವರ್ಷಗಳ ಕಾಲ ಅರಣ್ಯ ಇಲಾಖೆಗೆ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ರೂಪಿಯಾ ದೇವಿ, ಮೂರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು ಹಾಗೂ ಏಳು ಮಂದಿ ಮೊಮ್ಮಕ್ಕಳಿದ್ದಾರೆ. ಇವರ ಕೂದಲಿನಿಂದ ಕುಟುಂಬದವರಿಗೆ ಯಾವುದೇ ಸಮಸ್ಯೆಯಾಗಿಲ್ಲ.
All Images courtesy: Barcroft



Click it and Unblock the Notifications




