Just In
- 1 hr ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 5 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 14 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 14 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Movies Sathya ; ಸತ್ಯಾ ತವರು ಮನೆಗೆ ಅವಮಾನ ಮಾಡಿದ ಕೀರ್ತನ..!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಳೆದ 40 ವರ್ಷದಿಂದ ಕೂದಲಿಗೆ ಕತ್ತರಿ, ನೀರು ತೋರಿಸದ ಬಾಬಾ
ಪ್ರತಿಯೊಬ್ಬರು ತಮ್ಮ ಕೂದಲನ್ನು ದಿನನಿತ್ಯವೂ ತೊಳೆಯುವರು. ಹೀಗೆ ಮಾಡದೆ ಇದ್ದರೆ ಆಗ ವಾಸನೆ ಬಂದು ಕಿರಿಕಿರಿ ಆಗುವುದು. ಉದ್ದ ಕೂದಲು ಬಿಟ್ಟಿರುವಂತವರು ಇದನ್ನು ಸರಿಯಾಗಿ ಆರೈಕೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದರೆ ಇಲ್ಲೊಬ್ಬರು ಬಾಬಾ ತನ್ನ ಕೂದಲಿಗೆ ಕಳೆದ 40 ವರ್ಷಗಳಿಂದ ನೀರನ್ನೇ ತೋರಿಸಿಲ್ಲ ಎಂದರೆ ನಾವು ನಂಬಲೇಬೇಕು. ಕೂದಲನ್ನು ತೊಳೆಯುವುದು ದೂರದ ಮಾತು. ಇನ್ನು ಅವರು ತನ್ನ ಕೂದಲನ್ನು ಕಳೆದ 40 ವರ್ಷಗಳಿಂದ ಕತ್ತರಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಈ ವಿಚಿತ್ರ ಬಾಬಾ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.
ಬಿಹಾರದ ಸಕಲ್ ದೇವ್ ಟುಡ್ಡು ಎಂಬ 63ರ ಹರೆಯದ ಬಾಬಾ ಕಳೆದ 40 ವರ್ಷಗಳಿಂದ ಕೂದಲು ಕತ್ತರಿಸಿಕೊಂಡಿಲ್ಲ ಮತ್ತು ತೊಳೆಯಲು ಇಲ್ಲ. ಈಗ ಅವರ ಕೂದಲು ಆರು ಅಡಿ ಉದ್ದಕ್ಕೆ ಬೆಳೆದಿದೆ. ಅವರು ತನ್ನ ಕೂದಲನ್ನು ಈಗ ತಲೆಗೆ ಒಂದು ಮುಂಡಾಸಿನಂತೆ ಬಳಸಿಕೊಳ್ಳುತ್ತಿದ್ದಾರೆ. ಒಂದು ದಿನ ರಾತ್ರಿ ಮಲಗಿದ್ದಾಗಲೇ ತನ್ನ ಕೂದಲು ನೆಯ್ದುಕೊಂಡಿದೆ ಎಂದು ಅವರು ಹೇಳಿದ್ದಾರೆ. ಒಂದು ರಾತ್ರಿ ದೇವರು ತನ್ನ ಕನಸಿನಲ್ಲಿ ಬಂದರು ಮತ್ತು ಈ ಕೂದಲನ್ನು ಯಾವತ್ತಿಗೂ ಕತ್ತರಿಸಬೇಡ ಮತ್ತು ತೊಳೆಯಬೇಡ ಎಂದು ಹೇಳಿದ್ದರು. ಇದರ ಬಳಿಕ 40 ವರ್ಷ ಕಳೆದಿದೆ ಎಂದು ಸಕಲ್ ಅವರು ಹೇಳುತ್ತಾರೆ.
ಸಕಲ್ ಕೂದಲನ್ನು ಕತ್ತರಿಸಿದೆ ಮತ್ತು ತೊಳೆಯದೆ ಇದ್ದರೂ ಅವರು ಬಟ್ಟೆಯಿಂದ ಅದನ್ನು ಮುಚ್ಚಿಕೊಂಡಿರುತ್ತಾರೆ. ಇದು ನಾಲ್ಕು ದಶಕಗಳಿಂದ ತೊಳೆಯದೆ ಇರುವ ಕಾರಣದಿಂದಾದಿ ಅದು ಜಡೆಯಂತೆ ಪರಿವರ್ತನೆಗೊಂಡಿದೆ. ಸ್ಥಳೀಯರು ಅವರನ್ನು ತುಂಬಾ ಗೌರವ ನೀಡಿ ಮಹಾತ್ಮ ಜೀ ಎಂದು ಕರೆಯುತ್ತಾರೆ. ಇವರು ಮಕ್ಕಳಿಲ್ಲದ ದಂಪತಿಗೆ ಮದ್ದು ನೀಡುವಂತಹ ಕೆಲಸ ಮಾಡುವರು.
ಸಂತಾನಭಾಗ್ಯವಿಲ್ಲದ ದಂಪತಿಗೆ ಔಷಧಿ ನೀಡುವ ಇವರು ಇದಕ್ಕೆ ಮೊದಲು 31 ವರ್ಷಗಳ ಕಾಲ ಅರಣ್ಯ ಇಲಾಖೆಗೆ ಕೆಲಸ ಮಾಡುತ್ತಿದ್ದರು. ಅವರಿಗೆ ಪತ್ನಿ ರೂಪಿಯಾ ದೇವಿ, ಮೂರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳು ಹಾಗೂ ಏಳು ಮಂದಿ ಮೊಮ್ಮಕ್ಕಳಿದ್ದಾರೆ. ಇವರ ಕೂದಲಿನಿಂದ ಕುಟುಂಬದವರಿಗೆ ಯಾವುದೇ ಸಮಸ್ಯೆಯಾಗಿಲ್ಲ.
All Images courtesy: Barcroft