Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಸನ್ಯಾಸಿ
ಸ್ವಯಂ ಘೋಷಿತ ದೇವಮಾನವರು ಹಾಗೂ ಕೆಲವೊಂದು ಗುರುಗಳಿಂದ ನಾವು ಆಧ್ಯಾತ್ಮಿಕವಾಗಿ ದೊಡ್ಡ ಸಾಧನೆ ಮಾಡಬಹುದು ಎಂದು ಭಾವಿಸಿರಬಹುದು. ಆದರೆ ನಾವು ಇಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೇವೆ. ಸನ್ಯಾಸಿಗಳು ಎಲ್ಲವನ್ನು ತ್ಯಜಿಸಿದವರು, ಅವರಿಗೆ ಕಾಮ, ಕ್ರೋಧ, ಮದ, ಮೋಹ, ಮತ್ಸರ ಎನ್ನುವುದು ಇರುವುದಿಲ್ಲ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಖಂಡಿತವಾಗಿಯೂ ತಪ್ಪು. ಸನ್ಯಾಸಿಗಳು ಕೂಡ ಕೆಲವೊಂದು ಸಲ ದೊಡ್ಡ ಮಟ್ಟದ ತಪ್ಪು ಮಾಡುತ್ತಾರೆ. ಅದರಲ್ಲೂ ಲೈಂಗಿಕ ವಿಚಾರದಲ್ಲೇ ಸನ್ಯಾಸಿಗಳು ದೊಡ್ಡ ತಪ್ಪು ಮಾಡಿಕೊಂಡು ಶಿಕ್ಷೆ ಕೂಡ ಅನುಭವಿಸುತ್ತಾರೆ. ಹಾಂಕಾಂಗ್ ನಲ್ಲಿ ಪ್ರಸಿದ್ಧ ಸನ್ಯಾಸಿಯೊಬ್ಬ ತಾಯಿ ಹಾಗೂ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯು ನಡೆದಿದೆ.

ಈ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ
57ರ ಹರೆಯದ ಸ್ವಯಂ ಘೋಷಿತ ಸನ್ಯಾಸಿಯಾಗಿರುವಂತಹ ಯುಯೆನ್ ಮಿಂಗ್ ಕುಯೆನ್ ಎಂಬಾತ ಮಹಿಳೆ ಹಾಗೂ ಆಕೆಯ ಮಗಳಿಗೆ ಕಿರುಕುಳ ನೀಡಿದ್ದಾನೆ. ಈತ ಕೆಲವೊಂದು ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುತ್ತಾನೆ ಮತ್ತು ಅಲ್ಲಿ ಆತ ತನ್ನ ಅನುಯಾಯಿಗಳಿಗೆ ಧಾರ್ಮಿಕ ಬೋಧನೆ ಮಾಡುತ್ತಾನೆ. ಆತನಿಂದ ಪರಿಹಾರ ಕೇಳಲು ತಾಯಿ ಹಾಗೂ ಮಗಳು ಕೂಡ ಬಂದಿದ್ದರು.

ಅವರಿಗೆ ದೆವ್ವ ಹಿಡಿದಿದೆ ಎಂದು ಹೇಳಿದ
ದೆವ್ವ ಬಿಡಿಸಲು ತನ್ನಲ್ಲಿ ಒಂದು ಒಳ್ಳೆಯ ತಂತ್ರ ಹಾಗೂ ಶಕ್ತಿ ಇದೆ ಎಂದು ಆತ ಹೇಳಿದ ಮತ್ತು ಇದರ ಪರಿಣಾಮವಾಗಿ ಆತ ದೆವ್ವಗಳೊಂದಿಗೆ ಮಾತನಾಡಿ ಅವುಗಳನ್ನು ಅವರ ದೇಹದಿಂದ ಓಡಿಸುತ್ತೇನೆ ಎಂದು ಹೇಳಿದ್ದ.

ದೆವ್ವಗಳೊಂದಿಗೆ ಮಾತನಾಡಲು ತನ್ನ ತಂತ್ರವು ತುಂಬಾ ಭಿನ್ನವಾಗಿದೆ ಎಂದು ಆತ ಹೇಳಿದ
ಸ್ವಯಂ ಘೋಷಿತ ಸನ್ಯಾಸಿಯು ದೆವ್ವಗಳನ್ನು ಓಡಿಸಲು ತನ್ನಲ್ಲಿ ವಿಶೇಷವಾದ ತಂತ್ರವಿದೆ ಎಂದು ಹೇಳುತ್ತಾನೆ ಮತ್ತು ಇದಕ್ಕಾಗಿ ಆತ ಅವರ ಸ್ತನಗಳು ಮತ್ತು ಜನನಾಂಗವನ್ನು ಮುದ್ದಾಡಬೇಕು ಎಂದು ಹೇಳುತ್ತಾನೆ.

ಆತನ ತಂತ್ರವನ್ನು ಹೀಗೆ ಹೇಳಲಾಯಿತು
ಆತ ಈ ರೀತಿಯ ತಂತ್ರವನ್ನು ಅರ್ಹಾತ್ ನಿಂದ ಕಲಿತಿರುವುದಾಗಿ ಹೇಳಿದ್ದಾನೆ. ಅರ್ಹಾತ್ ಎಂದರೆ ಒಬ್ಬ ವ್ಯಕ್ತಿಯಾಗಿದ್ದು, ಆತನು ನಿರ್ವಹನ ತಲುಪಿದ್ದಾಗಿ ಹೇಳಿದ್ದಾನೆ. ಹುಡುಗಿಯ ಸ್ತನಗಳು ಮತ್ತು ಜನನಾಂದಲ್ಲಿ ದೆವ್ವಗಳು ಮನೆ ಮಾಡಿಕೊಂಡಿದೆ ಮತ್ತು ಇವುಗಳು ಆಕೆಯನ್ನು ಅತ್ಯಾಚಾರ ಮಾಡುವ ಮೂಲಕ ಅಲ್ಲಿ ಹಾನಿಕಾರಕವಾಗಿದೆ ಎಂದು ಹೇಳಿದ್ದ.

ಆತನನ್ನು ತಪ್ಪಿತಸ್ಥನೆಂದು ಗುರುತಿಸಲಾಯಿತು
ಏಳು ತಿಂಗಳ ಕಾಲ ಮಹಿಳೆಗೆ ಆ ಸನ್ಯಾಸಿಯು ಕಿರುಕುಳ ನೀಡುತ್ತಲಿದ್ದ ಮತ್ತು ಆತನಲ್ಲಿ ನಂಬಿಕೆ ಇರಿಸಿಕೊಂಡಿದ್ದ ಕಾರಣದಿಂದಾಗಿ ಆತ ಒಂದು ಕಾರಣ ಹಿಡಿದುಕೊಂಡು ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ತಪ್ಪಿತಸ್ಥನೆಂದು ಹೇಳಿದರು ಮತ್ತು ಆತ ಹಲವಾರು ಬಾರಿ ಈ ರೀತಿ ಮಾಡಿದ್ದಾಗಿ ಆ ತಾಯಿ ಮತ್ತು ಮಗಳು ಒಪ್ಪಿಕೊಂಡಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.



Click it and Unblock the Notifications











