Latest Updates
-
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು?
ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಸನ್ಯಾಸಿ
ಸ್ವಯಂ ಘೋಷಿತ ದೇವಮಾನವರು ಹಾಗೂ ಕೆಲವೊಂದು ಗುರುಗಳಿಂದ ನಾವು ಆಧ್ಯಾತ್ಮಿಕವಾಗಿ ದೊಡ್ಡ ಸಾಧನೆ ಮಾಡಬಹುದು ಎಂದು ಭಾವಿಸಿರಬಹುದು. ಆದರೆ ನಾವು ಇಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೇವೆ. ಸನ್ಯಾಸಿಗಳು ಎಲ್ಲವನ್ನು ತ್ಯಜಿಸಿದವರು, ಅವರಿಗೆ ಕಾಮ, ಕ್ರೋಧ, ಮದ, ಮೋಹ, ಮತ್ಸರ ಎನ್ನುವುದು ಇರುವುದಿಲ್ಲ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಖಂಡಿತವಾಗಿಯೂ ತಪ್ಪು. ಸನ್ಯಾಸಿಗಳು ಕೂಡ ಕೆಲವೊಂದು ಸಲ ದೊಡ್ಡ ಮಟ್ಟದ ತಪ್ಪು ಮಾಡುತ್ತಾರೆ. ಅದರಲ್ಲೂ ಲೈಂಗಿಕ ವಿಚಾರದಲ್ಲೇ ಸನ್ಯಾಸಿಗಳು ದೊಡ್ಡ ತಪ್ಪು ಮಾಡಿಕೊಂಡು ಶಿಕ್ಷೆ ಕೂಡ ಅನುಭವಿಸುತ್ತಾರೆ. ಹಾಂಕಾಂಗ್ ನಲ್ಲಿ ಪ್ರಸಿದ್ಧ ಸನ್ಯಾಸಿಯೊಬ್ಬ ತಾಯಿ ಹಾಗೂ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯು ನಡೆದಿದೆ.

ಈ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ
57ರ ಹರೆಯದ ಸ್ವಯಂ ಘೋಷಿತ ಸನ್ಯಾಸಿಯಾಗಿರುವಂತಹ ಯುಯೆನ್ ಮಿಂಗ್ ಕುಯೆನ್ ಎಂಬಾತ ಮಹಿಳೆ ಹಾಗೂ ಆಕೆಯ ಮಗಳಿಗೆ ಕಿರುಕುಳ ನೀಡಿದ್ದಾನೆ. ಈತ ಕೆಲವೊಂದು ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುತ್ತಾನೆ ಮತ್ತು ಅಲ್ಲಿ ಆತ ತನ್ನ ಅನುಯಾಯಿಗಳಿಗೆ ಧಾರ್ಮಿಕ ಬೋಧನೆ ಮಾಡುತ್ತಾನೆ. ಆತನಿಂದ ಪರಿಹಾರ ಕೇಳಲು ತಾಯಿ ಹಾಗೂ ಮಗಳು ಕೂಡ ಬಂದಿದ್ದರು.

ಅವರಿಗೆ ದೆವ್ವ ಹಿಡಿದಿದೆ ಎಂದು ಹೇಳಿದ
ದೆವ್ವ ಬಿಡಿಸಲು ತನ್ನಲ್ಲಿ ಒಂದು ಒಳ್ಳೆಯ ತಂತ್ರ ಹಾಗೂ ಶಕ್ತಿ ಇದೆ ಎಂದು ಆತ ಹೇಳಿದ ಮತ್ತು ಇದರ ಪರಿಣಾಮವಾಗಿ ಆತ ದೆವ್ವಗಳೊಂದಿಗೆ ಮಾತನಾಡಿ ಅವುಗಳನ್ನು ಅವರ ದೇಹದಿಂದ ಓಡಿಸುತ್ತೇನೆ ಎಂದು ಹೇಳಿದ್ದ.

ದೆವ್ವಗಳೊಂದಿಗೆ ಮಾತನಾಡಲು ತನ್ನ ತಂತ್ರವು ತುಂಬಾ ಭಿನ್ನವಾಗಿದೆ ಎಂದು ಆತ ಹೇಳಿದ
ಸ್ವಯಂ ಘೋಷಿತ ಸನ್ಯಾಸಿಯು ದೆವ್ವಗಳನ್ನು ಓಡಿಸಲು ತನ್ನಲ್ಲಿ ವಿಶೇಷವಾದ ತಂತ್ರವಿದೆ ಎಂದು ಹೇಳುತ್ತಾನೆ ಮತ್ತು ಇದಕ್ಕಾಗಿ ಆತ ಅವರ ಸ್ತನಗಳು ಮತ್ತು ಜನನಾಂಗವನ್ನು ಮುದ್ದಾಡಬೇಕು ಎಂದು ಹೇಳುತ್ತಾನೆ.

ಆತನ ತಂತ್ರವನ್ನು ಹೀಗೆ ಹೇಳಲಾಯಿತು
ಆತ ಈ ರೀತಿಯ ತಂತ್ರವನ್ನು ಅರ್ಹಾತ್ ನಿಂದ ಕಲಿತಿರುವುದಾಗಿ ಹೇಳಿದ್ದಾನೆ. ಅರ್ಹಾತ್ ಎಂದರೆ ಒಬ್ಬ ವ್ಯಕ್ತಿಯಾಗಿದ್ದು, ಆತನು ನಿರ್ವಹನ ತಲುಪಿದ್ದಾಗಿ ಹೇಳಿದ್ದಾನೆ. ಹುಡುಗಿಯ ಸ್ತನಗಳು ಮತ್ತು ಜನನಾಂದಲ್ಲಿ ದೆವ್ವಗಳು ಮನೆ ಮಾಡಿಕೊಂಡಿದೆ ಮತ್ತು ಇವುಗಳು ಆಕೆಯನ್ನು ಅತ್ಯಾಚಾರ ಮಾಡುವ ಮೂಲಕ ಅಲ್ಲಿ ಹಾನಿಕಾರಕವಾಗಿದೆ ಎಂದು ಹೇಳಿದ್ದ.

ಆತನನ್ನು ತಪ್ಪಿತಸ್ಥನೆಂದು ಗುರುತಿಸಲಾಯಿತು
ಏಳು ತಿಂಗಳ ಕಾಲ ಮಹಿಳೆಗೆ ಆ ಸನ್ಯಾಸಿಯು ಕಿರುಕುಳ ನೀಡುತ್ತಲಿದ್ದ ಮತ್ತು ಆತನಲ್ಲಿ ನಂಬಿಕೆ ಇರಿಸಿಕೊಂಡಿದ್ದ ಕಾರಣದಿಂದಾಗಿ ಆತ ಒಂದು ಕಾರಣ ಹಿಡಿದುಕೊಂಡು ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ತಪ್ಪಿತಸ್ಥನೆಂದು ಹೇಳಿದರು ಮತ್ತು ಆತ ಹಲವಾರು ಬಾರಿ ಈ ರೀತಿ ಮಾಡಿದ್ದಾಗಿ ಆ ತಾಯಿ ಮತ್ತು ಮಗಳು ಒಪ್ಪಿಕೊಂಡಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.



Click it and Unblock the Notifications











