Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಮಹಿಳೆಯ ಖಾಸಗಿ ಭಾಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಸನ್ಯಾಸಿ
ಸ್ವಯಂ ಘೋಷಿತ ದೇವಮಾನವರು ಹಾಗೂ ಕೆಲವೊಂದು ಗುರುಗಳಿಂದ ನಾವು ಆಧ್ಯಾತ್ಮಿಕವಾಗಿ ದೊಡ್ಡ ಸಾಧನೆ ಮಾಡಬಹುದು ಎಂದು ಭಾವಿಸಿರಬಹುದು. ಆದರೆ ನಾವು ಇಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೇವೆ. ಸನ್ಯಾಸಿಗಳು ಎಲ್ಲವನ್ನು ತ್ಯಜಿಸಿದವರು, ಅವರಿಗೆ ಕಾಮ, ಕ್ರೋಧ, ಮದ, ಮೋಹ, ಮತ್ಸರ ಎನ್ನುವುದು ಇರುವುದಿಲ್ಲ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಖಂಡಿತವಾಗಿಯೂ ತಪ್ಪು. ಸನ್ಯಾಸಿಗಳು ಕೂಡ ಕೆಲವೊಂದು ಸಲ ದೊಡ್ಡ ಮಟ್ಟದ ತಪ್ಪು ಮಾಡುತ್ತಾರೆ. ಅದರಲ್ಲೂ ಲೈಂಗಿಕ ವಿಚಾರದಲ್ಲೇ ಸನ್ಯಾಸಿಗಳು ದೊಡ್ಡ ತಪ್ಪು ಮಾಡಿಕೊಂಡು ಶಿಕ್ಷೆ ಕೂಡ ಅನುಭವಿಸುತ್ತಾರೆ. ಹಾಂಕಾಂಗ್ ನಲ್ಲಿ ಪ್ರಸಿದ್ಧ ಸನ್ಯಾಸಿಯೊಬ್ಬ ತಾಯಿ ಹಾಗೂ ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಯು ನಡೆದಿದೆ.

ಈ ಬಗ್ಗೆ ನೀವು ಮತ್ತಷ್ಟು ತಿಳಿಯಿರಿ
57ರ ಹರೆಯದ ಸ್ವಯಂ ಘೋಷಿತ ಸನ್ಯಾಸಿಯಾಗಿರುವಂತಹ ಯುಯೆನ್ ಮಿಂಗ್ ಕುಯೆನ್ ಎಂಬಾತ ಮಹಿಳೆ ಹಾಗೂ ಆಕೆಯ ಮಗಳಿಗೆ ಕಿರುಕುಳ ನೀಡಿದ್ದಾನೆ. ಈತ ಕೆಲವೊಂದು ಆಧ್ಯಾತ್ಮಿಕ ಶಿಬಿರಗಳನ್ನು ನಡೆಸುತ್ತಾನೆ ಮತ್ತು ಅಲ್ಲಿ ಆತ ತನ್ನ ಅನುಯಾಯಿಗಳಿಗೆ ಧಾರ್ಮಿಕ ಬೋಧನೆ ಮಾಡುತ್ತಾನೆ. ಆತನಿಂದ ಪರಿಹಾರ ಕೇಳಲು ತಾಯಿ ಹಾಗೂ ಮಗಳು ಕೂಡ ಬಂದಿದ್ದರು.

ಅವರಿಗೆ ದೆವ್ವ ಹಿಡಿದಿದೆ ಎಂದು ಹೇಳಿದ
ದೆವ್ವ ಬಿಡಿಸಲು ತನ್ನಲ್ಲಿ ಒಂದು ಒಳ್ಳೆಯ ತಂತ್ರ ಹಾಗೂ ಶಕ್ತಿ ಇದೆ ಎಂದು ಆತ ಹೇಳಿದ ಮತ್ತು ಇದರ ಪರಿಣಾಮವಾಗಿ ಆತ ದೆವ್ವಗಳೊಂದಿಗೆ ಮಾತನಾಡಿ ಅವುಗಳನ್ನು ಅವರ ದೇಹದಿಂದ ಓಡಿಸುತ್ತೇನೆ ಎಂದು ಹೇಳಿದ್ದ.

ದೆವ್ವಗಳೊಂದಿಗೆ ಮಾತನಾಡಲು ತನ್ನ ತಂತ್ರವು ತುಂಬಾ ಭಿನ್ನವಾಗಿದೆ ಎಂದು ಆತ ಹೇಳಿದ
ಸ್ವಯಂ ಘೋಷಿತ ಸನ್ಯಾಸಿಯು ದೆವ್ವಗಳನ್ನು ಓಡಿಸಲು ತನ್ನಲ್ಲಿ ವಿಶೇಷವಾದ ತಂತ್ರವಿದೆ ಎಂದು ಹೇಳುತ್ತಾನೆ ಮತ್ತು ಇದಕ್ಕಾಗಿ ಆತ ಅವರ ಸ್ತನಗಳು ಮತ್ತು ಜನನಾಂಗವನ್ನು ಮುದ್ದಾಡಬೇಕು ಎಂದು ಹೇಳುತ್ತಾನೆ.

ಆತನ ತಂತ್ರವನ್ನು ಹೀಗೆ ಹೇಳಲಾಯಿತು
ಆತ ಈ ರೀತಿಯ ತಂತ್ರವನ್ನು ಅರ್ಹಾತ್ ನಿಂದ ಕಲಿತಿರುವುದಾಗಿ ಹೇಳಿದ್ದಾನೆ. ಅರ್ಹಾತ್ ಎಂದರೆ ಒಬ್ಬ ವ್ಯಕ್ತಿಯಾಗಿದ್ದು, ಆತನು ನಿರ್ವಹನ ತಲುಪಿದ್ದಾಗಿ ಹೇಳಿದ್ದಾನೆ. ಹುಡುಗಿಯ ಸ್ತನಗಳು ಮತ್ತು ಜನನಾಂದಲ್ಲಿ ದೆವ್ವಗಳು ಮನೆ ಮಾಡಿಕೊಂಡಿದೆ ಮತ್ತು ಇವುಗಳು ಆಕೆಯನ್ನು ಅತ್ಯಾಚಾರ ಮಾಡುವ ಮೂಲಕ ಅಲ್ಲಿ ಹಾನಿಕಾರಕವಾಗಿದೆ ಎಂದು ಹೇಳಿದ್ದ.

ಆತನನ್ನು ತಪ್ಪಿತಸ್ಥನೆಂದು ಗುರುತಿಸಲಾಯಿತು
ಏಳು ತಿಂಗಳ ಕಾಲ ಮಹಿಳೆಗೆ ಆ ಸನ್ಯಾಸಿಯು ಕಿರುಕುಳ ನೀಡುತ್ತಲಿದ್ದ ಮತ್ತು ಆತನಲ್ಲಿ ನಂಬಿಕೆ ಇರಿಸಿಕೊಂಡಿದ್ದ ಕಾರಣದಿಂದಾಗಿ ಆತ ಒಂದು ಕಾರಣ ಹಿಡಿದುಕೊಂಡು ಅವರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಆತನನ್ನು ತಪ್ಪಿತಸ್ಥನೆಂದು ಹೇಳಿದರು ಮತ್ತು ಆತ ಹಲವಾರು ಬಾರಿ ಈ ರೀತಿ ಮಾಡಿದ್ದಾಗಿ ಆ ತಾಯಿ ಮತ್ತು ಮಗಳು ಒಪ್ಪಿಕೊಂಡಿದ್ದರು. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಲು ಮರೆಯಬೇಡಿ.



Click it and Unblock the Notifications