Just In
- 7 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 7 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 8 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 10 hrs ago ಶುಕ್ರ ಮೀನ ರಾಶಿಗೆ ಸಂಚರಿಸಿದಾಗ ಈ 5 ರಾಶಿಗಳ ಮೇಲೆ ಬೀರಲಿದೆ ಒಳ್ಳೆಯ ಪ್ರಭಾವ
Don't Miss
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Automobiles ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವರ್ಷ 'ನಾಲ್ಕು ರಾಶಿಯವರು' ವರ್ಷ ಪೂರ್ತಿ ಸಂತೋಷವಾಗಿರುತ್ತಾರೆ
ಜೀವನದಲ್ಲಿ ಸದಾ ಸಂತೋಷ ತುಂಬಿರಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಅಂದುಕೊಂಡಂತೆ ಯಾರ ಜೀವನವೂ ಇರುವುದಿಲ್ಲ. ಕಷ್ಟ ನೋವು ಎನ್ನುವುದನ್ನು ಅನುಭವಿಸಲೇ ಬೇಕಾಗುತ್ತದೆ. ವ್ಯಕ್ತಿಯ ಜೀವನದಲ್ಲಿ ನೋವು ಎನ್ನುವುದು ಜೀವನದ ಪಾಠವನ್ನು ಕಲಿಸುತ್ತದೆ. ಹಾಗೆಯೇ ಸಂತೋಷ ಎನ್ನುವುದು ಜೀವನದ ಭರವಸೆಯನ್ನು ಹೆಚ್ಚಿಸುತ್ತದೆ. ಬದುಕಿಗೆ ನೋವು ನಲಿವು ಎನ್ನುವುದು ಸಮ ಪ್ರಮಾಣದಲ್ಲಿ ದೊರೆತರೆ ವ್ಯಕ್ತಿ ಸಂತೃಪ್ತ ಜೀವನವನ್ನು ಅನುಭವಿಸುತ್ತಾನೆ ಎನ್ನಲಾಗುವುದು. ಬದುಕಲ್ಲಿ ಅನುಭವಿಸುವ ಪ್ರತಿಯೊಂದು ಸನ್ನಿವೇಶ ಹಾಗೂ ಅನುಭವಗಳು ನಮ್ಮ ರಾಶಿಚಕ್ರಗಳಿಗೆ ಅನುಗುಣವಾಗಿ ಇರುತ್ತವೆ ಎನ್ನಲಾಗುವುದು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಗ್ರಹಗತಿಗಳ ಸಂಚಾರ ಹೆಚ್ಚು ಹಿತಕರ ಪರಿಣಾಮವನ್ನು ಉಂಟುಮಾಡುತ್ತೆ ಎಂದು ಹೇಳಲಾಗುತ್ತದೆ. ಗ್ರಹಗಳು ತಮ್ಮ ಮನೆಯನ್ನು ಬದಲಾಯಿಸಿ ಇನ್ನೊಂದು ಮನೆಯ ಪ್ರವೇಶ ಪಡೆಯುವುದರಿಂದ ವ್ಯಕ್ತಿಯ ಅದೃಷ್ಟ ಹಾಗೂ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತರುತ್ತದೆ ಎನ್ನಲಾಗುವುದು. ಅಂತೆಯೇ ಈ ವರ್ಷದ ಗ್ರಹಗತಿಗಳ ಬದಲಾವಣೆ ಅಥವಾ ಸಂಚಾರದ ಪ್ರತಿಫಲವಾಗಿ ಕೆಲವು ರಾಶಿಚಕ್ರಗಳು ಹೆಚ್ಚು ಸಂತೋಷದ ಕ್ಷಣಗಳನ್ನು ಅನುಭವಿಸಲಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವರ ಸಂತೋಷ ಹೇಗೆ ಒದಗಿ ಬರುವುದು ಎನ್ನುವುದನ್ನು ತಿಳಿಯಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ....
ಮಿಥುನ
ಈ ರಾಶಿಯವರಿಗೆ ಈ ವರ್ಷ ತಮ್ಮ ಸ್ವಾತಂತ್ರ್ಯವನ್ನು ಆನಂದಿಸುವ ಸಮಯ ಎಂದು ಹೇಳಲಾಗುತ್ತದೆ. ಇವರು ಈ ವರ್ಷ ಸಾಧ್ಯವಾದಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು.
ಮಿಥುನ
ವರ್ಷದುದ್ದಕ್ಕೂ ಹೆಚ್ಚು ಸ್ವಾತಂತ್ರ್ಯವನ್ನು ಅನುಭವಿಸುವುದರಿಂದ ಅವರ ವೈಯಕ್ತಿಕ ಕೆಲಸ ಅಥವಾ ವಿಚಾರಗಳಿಗೆ ಹೆಚ್ಚು ಒತ್ತನ್ನು ನೀಡಲು ಅವಕಾಶವಿರುತ್ತದೆ. ಈ ಹಿಂದೆ ಅನುಭವಿಸದಂತಹ ಹಾಗೂ ಊಹಿಸಿರದಂತಹ ಅದೃಷ್ಟ ಹಾಗೂ ಸಂತಸ ದೊರೆಯುವುದು.
ಸಿಂಹ
ಈ ರಾಶಿಯವರು ಈ ವರ್ಷ ತಮ್ಮದೇ ಆದ ನಂಬಿಕೆಯೊಂದಿಗೆ ಒಳಿತನ್ನು ಹೊಂದುವರು. ಇವರು ತಮ್ಮ ಅಹಂಕಾರವನ್ನು ಪರಿಶೀಲಿಸಿಕೊಂಡರೆ ಅಥವಾ ಹಿಡಿತದಲ್ಲಿಟ್ಟುಕೊಂಡರೆ ಕಾಡಿನ ರಾಜ ಎನ್ನುವಂತೆ ಬದುಕಬಹುದು. ಇವರು ತಮ್ಮದೇ ಆದ ಗುರಿಯೊಂದಿಗೆ ಕೆಲಸವನ್ನು ನಿರ್ವಹಿಸುತ್ತಾರೆ.
ಸಿಂಹ
ಇದು ಹಿಂದೆಂದೂ ಕಾಣದಂತಹ ಜಯವನ್ನು ಪಡೆದುಕೊಳ್ಳುವರು. ಇವರು ತಮ್ಮ ಸಾಧನೆ ಹಾಗೂ ಕೆಲಸದ ನಡುವೆ ಭವಿಷ್ಯದ ವಿಚಾರವಾಗಿಯೂ ಹೆಚ್ಚಿನ ಗಮನ ನೀಡಬೇಕಾಗುವುದು.
ತುಲಾ
ಈ ವರ್ಷ ಈ ರಾಶಿಯವರು ಜೀವನದಲ್ಲಿ ಶಾಂತಿಯನ್ನು ಪಡೆದುಕೊಳ್ಳುತ್ತಾರೆ. ಇದು ಅವರಿಗೆ ಹೆಚ್ಚಿನ ಸಂತೋಷವನ್ನು ನೀಡುವುದು. ಹಿಂದಿನ ವರ್ಷದಲ್ಲಿ ಹೆಚ್ಚು ಅಸ್ತವ್ಯಸ್ತವಾದ ಪರಿಸ್ಥಿತಿಗಳನ್ನು ಹೊಂದಿದ್ದರು. ಆದರೆ ಈ ವರ್ಷ ಮಾತ್ರ ಇವರಿಗೆ ಹೆಚ್ಚಿನ ಸಂತೋಷ ಲಭ್ಯವಾಗುವುದು.
ತುಲಾ
ಇವರು ಈ ಹಿಂದೆ ಅನುಭವಿಸಿದ ಕಷ್ಟದ ಸ್ಥಿತಗಳಿಂದ ಕಲಿತ ಮಾಡವನ್ನು ನೆನಪಿಸಿಕೊಳ್ಳುವರು. ಈ ಹಿಂದೆ ಮಾಡಿದ ತಪ್ಪುಗಳನ್ನು ಮುಂದುವರಿಸಬಾರದು ಎನ್ನುವುದನ್ನು ಇವರು ಅರಿಯಬೇಕು. ಆಗ ಕಷ್ಟದ ಸ್ಥಿತಿಯು ಶಮನಗೊಳ್ಳುವುದು.
ಧನು
ಈ ರಾಶಿಯವರಿಗೆ ಈ ವರ್ಷ ಹೊಸ ಅನುಭವವನ್ನು ನೀಡಲಿದೆ. ಉತ್ತಮ ಅವಕಾಶಗಳು ಹಾಗೂ ಸ್ಥಿತಿಗತಿಗಳು ವೈಯಕ್ತಿಕ ಏಳಿಗೆಗೆ ಸಹಾಯ ಮಾಡುವುದು. ಮುಂಬರುವ ತಿಂಗಳಲ್ಲಿ ದೊಡ್ಡ ಚಲನೆಯನ್ನು ಕಾಣಲಿದ್ದಾರೆ. ಹಿಂದಿನ ವರ್ಷದಲ್ಲಿ ಕಂಡ ಸ್ಥಿತಿ ಹಾಗೂ ಅನುಭವಗಳನ್ನು ಅವರು ನೆನಪಿಸಿಕೊಳ್ಳುವರು.
ಧನು
ಅಲ್ಲದೆ ಜೀವನದ ಬಗ್ಗೆ ಹೆಚ್ಚು ಆಶಾವಾದಿಗಳಾಗಿರುತ್ತಾರೆ. ಇದು ಇವರನ್ನು ದೀರ್ಘ ಕೆಲಸ ಹಾಗೂ ಉತ್ತಮ ಗುರಿ ಸಾಧನೆಗೆ ಸಹಾಯ ಮಾಡುವುದು. ಹಾಗಾಗಿ ವರ್ಷ ಪೂರ್ತಿ ಸಂತೋಷವನ್ನು ಅನುಭವಿಸುವರು ಎಂದು ಹೇಳಲಾಗುವುದು.