Just In
Don't Miss
- News 2024ರ ಲೋಸಕಭೆ ಚುನಾವಣೆಗೆ ಮತ ಹಾಕುವುದು ಹೇಗೆ?
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Movies ''ಹೆಣ್ಮಕ್ಕಳು ಎಲ್ಲೆಲ್ಲೋ ಹೋದರು'' ಎಂದ ಶ್ರುತಿಗೆ ಮಹಿಳಾ ಆಯೋಗ ನೋಟಿಸ್ ; 07 ದಿನದ ಗಡುವು..!
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇಶಕ್ಕೆ ದೊರೆಯಾದ ಸುಯೋಗ್ಗೆ ಒಲಿದ ಯೋಗ
ಅದೃಷ್ಟ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದರೆ ಸಾಧಿಸಲು ಸಾಧ್ಯವಾಗದೇ ಇರುವಂತಹದ್ದು ಯಾವುದೂ ಇಲ್ಲ. ನೀವು ಅದೃಷ್ಟವನ್ನು ಹೊಂದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನೀವು ಕೋಟಿಗಳ ಒಡೆಯರಾಗಿರುತ್ತೀರಿ. ಇದಕ್ಕೆ ಸರಿಯಾದ ಉದಾಹರಣೆ ಯಾಗಿರುವವರು ಸುಯಾಶ್ ದೀಕ್ಷಿತ್ ಆಗಿದ್ದಾರೆ.
ಒಂದು
ಸ್ಥಳದ
ಕುರಿತು
ಇವರು
ಮಾಡಿದ
ಸಂಶೋಧನೆ
ಇಂದು
ಅವರನ್ನು
ಆ
ಭೂಮಿಗೆ
ಒಡೆಯನಾಗಿ
ಮಾಡಿದೆ.
"ಬಿರ್
ತವಾಲಿ"
ಎಂಬ
ಸ್ಥಳದ
ಮೇಲೆ
ಇವರು
ಸಂಶೋಧನೆಯನ್ನು
ನಡೆಸಿ
ಈಗ
ಅದನ್ನು
ತನ್ನ
ಸ್ವಂತದ್ದನ್ನಾಗಿ
ಮಾಡಿಕೊಂಡಿದ್ದಾರೆ.
ತಮ್ಮ
ಈ
ಯೋಜನೆಯ
ಕುರಿತು
ಅವರು
ಫೇಸ್ಬುಕ್ನಲ್ಲಿ
ವಿವರಗಳನ್ನು
ಹಂಚಿಕೊಂಡಿದ್ದು
ಈ
ಕುರಿತು
ಮತ್ತಷ್ಟು
ತಿಳಿಯೋಣ....
ಆರಂಭ
ಹೇಗಾಯಿತು
ನಾನು
ಸುಯಾಸ್
ದೀಕ್ಷಿತ್,
ನಾನು
ನನ್ನದೇ
ಆದ
ರಾಜ್ಯವನ್ನು
ಹೊಂದಿದ್ದೇನೆ
ಮತ್ತು
ಅದಕ್ಕೆ
"ದೀಕ್ಷಿತ್
ರಾಜ್ಯ"
ಎಂಬುದಾಗಿ
ಹೆಸರೂ
ಇರಿಸಿದ್ದೇನೆ.
ಹಕ್ಕುಸ್ವಾಮ್ಯವಿಲ್ಲದಿರುವ
ಬಿರ್
ತವಾಲಿಯನ್ನು
ನಾನು
ನನ್ನದಾಗಿ
ಮಾಡಿಕೊಂಡಿದ್ದು
ಇದನ್ನು
ನನ್ನ
ದೇಶ
ಮತ್ತು
ಜನತೆಯ
ಏಳಿಗೆಗಾಗಿ
ಮುಡಿಪಾಗಿರಿಸುತ್ತೇನೆ.
ಪ್ರಯಾಣ
ಈ
ಬಿರ್
ತವಾಲಿಯನ್ನು
ಕಂಡುಕೊಳ್ಳಲು
ದೀಕ್ಷಿತ್
ಮಾಡಿದ
ಪ್ರಯಾಣ
ಅಷ್ಟಿಷ್ಟಲ್ಲ.
319
ಕಿಮೀನಷ್ಟು
ಇವರು
ಸಂಚರಿಸಿದ್ದು
800
ಸ್ಕ್ವೇರ್
ಫೀಟ್
ಭೂಮಿಯನ್ನು
ಯಾವುದೇ
ದೇಶ
ಹೊಂದಿಲ್ಲ
ಎಂಬುದನ್ನು
ಕಂಡುಕೊಂಡಿದ್ದಾರೆ.
ಇದು
ಮರುಭೂಮಿಯಲ್ಲಿದ್ದರೂ
ಇಲ್ಲಿ
ಜನರು
ಬದುಕಬಹುದಾಗಿದೆ.
ಈ
ಭೂಮಿಯಲ್ಲಿ
ಬೆಳೆಯನ್ನು
ಬೆಳೆಯಬಹುದಾಗಿದೆ.
ಅವರು
ಬೀಜವನ್ನು
ನೆಟ್ಟು
ಅದಕ್ಕೆ
ನೀರುಣಿಸುವ
ಚಿತ್ರವನ್ನು
ಪೋಸ್ಟ್
ಮಾಡಿದ್ದಾರೆ.
ಪ್ರಯಾಣದ
ಕುರಿತು
ಅಬು
ಸಿಂಬಲ್ನಿಂದ
ಬೆಳಗ್ಗೆ
4
ಕ್ಕೆ
ನನ್ನ
ಪ್ರಯಾಣ
ಆರಂಭವಾಗಿತ್ತು.
ಸ್ಥಳೀಯ
ಚಾಲಕ
ಮುಸ್ತಫಾರ
ಸಹಾಯದಿಂದ
ನಾನು
ಕಾರು
ಮತ್ತು
ಚಾಲನೆಯ
ಸಹಾಯವನ್ನು
ಪಡೆದುಕೊಂಡೆ.
ನನ್ನ
ಯೋಜನೆಯನ್ನು
ಮೊದಲು
ಅವರಿಗೆ
ತಿಳಿಸಿದಾಗ
ಮೊದಲು
ಅವರು
ನನಗೆ
ಹುಚ್ಚು
ಎಂದುಕೊಂಡಿದ್ದರು.
ಆದರೂ
ನನ್ನ
ಸಾಹಸಕ್ಕೆ
ಅವರು
ಬೆಂಬಲವನ್ನು
ನೀಡಿದರು.
ಅವರು
ಪ್ರಯಾಣ
ಮಾಡಿದ
ಸ್ಥಳವು
ಈಜಿಪ್ಟ್
ಮಿಲಿಟರಿಯ
ರಕ್ಷಣೆಯಲ್ಲಿತ್ತು.
ಭಯೋತ್ಪಾದಕರ
ದಾಳಿಯಿಂದಾಗಿ
ಶೂಟ್
ಏಂಡ್
ಸೈಟ್
ಆದೇಶ
ಜಾರಿಯಲ್ಲಿತ್ತು.
ಅದಾಗ್ಯೂ
ಇವರು
ಅನುಮತಿಯನ್ನು
ಪಡೆದುಕೊಂಡು
ಈ
ಸ್ಥಳವನ್ನು
ಅವಲೋಕಿಸಲು
ಮುಂದಾದರು.
ಮಿಲಿಟರಿ
ಸ್ಥಳದ
ಫೋಟೋವನ್ನು
ತೆಗೆಯುವಂತಿಲ್ಲ,
ಅದೇ
ದಿನ
ಮರಳಿ
ಬರಬೇಕು
ಮತ್ತು
ಬೆಲೆಬಾಳುವ
ವಸ್ತುಗಳನ್ನು
ತೆಗೆದುಕೊಂಡು
ಹೋಗುವಂತಿಲ್ಲ
ಎಂಬುದು
ಷರತ್ತಾಗಿತ್ತು.
ಆರು ತಾಸುಗಳ ಕಾಲ ನಾವು ಪ್ರಯಾಣ ಮಾಡಿದೆವು ನಮಗೆ ಶಿಖರಗಳು, ಒಣ ಭೂಮಿ ಪ್ರಯಾಣದ ಸಮಯದಲ್ಲಿ ಕಂಡುಬಂದಿತು. ನನ್ನ ಸ್ಥಳೀಯ ಗೆಳತಿಯ ಬಳಿ ಬೆಲೆಬಾಳುವ ವಸ್ತುಗಳನ್ನು ಇರಿಸಿ ಮಧ್ಯರಾತ್ರಿಯೊಳಗೆ ಬರದೇ ಇದ್ದರೆ ಪೊಲೀಸರಿಗೆ ತಿಳಿಸುವಂತೆ ವಿನಂತಿಸಿದೆವು.
ನಾನು ಬರುವುದರ ಮುಂಚೆಯೇ ಸಾಕಷ್ಟು ಜನ ಈ ಸ್ಥಳಕ್ಕೆ ಬಂದು ಹೋಗಿದ್ದಾರೆ ಆದರೆ ಈಗ ಈ ಭೂಮಿ ನನ್ನದಾಗಿದೆ. 2 ಸ್ಥಳಗಳಲ್ಲಿ ನಾವು ಧ್ವಜವನ್ನು ನೆಟ್ಟಿದ್ದೇವೆ. ಕೆಓಡಿ ಕ್ಯಾಪಿಟಲ್ ಎಂದು ನಾವು ಇದನ್ನು ಕರೆದಿದ್ದೇವೆ. ನಮ್ಮ ಪ್ರಯಾಣದ ಸಮಯದಲ್ಲಿ ಕಾರು ಕೈಕೊಟ್ಟರೆ, ನೀಡಿದ ಸಮಯವನ್ನು ನಾವು ಮುಗಿಸಿದರೆ ಎಂಬ ಆತಂಕ ಕೂಡ ಇತ್ತು. ಆದರೆ ನಮ್ಮ ಧೈರ್ಯದ ಮುಂದೆ ನಮ್ಮ ಆತಂಕ ದೂರಾಯಿತು.
ಕೆಓಡಿ
ಕುರಿತು
ಹೆಸರು:
ಕಿಂಗ್ಡಮ್
ಆಫ್
ದೀಕ್ಷಿತ್
ಫ್ಲ್ಯಾಗ್:
ಪ್ರಸ್ತುತ
ಜನಸಂಖ್ಯೆ:
1
ರಾಜಧಾನಿ:
ಸುಯಾಶ್ಪುರ್
ಆಡಳಿತಾಗರ:
ಕಿಂಗ್
ಸುಯಾಶ್
1
ಸ್ಥಾಪನೆಯ
ದಿನಾಂಕ:
ನವೆಂಬರ್
5,
2017
ರಾಷ್ಟ್ರೀಯ ಪ್ರಾಣಿ: ಹಲ್ಲಿ
ನನ್ನ ತಂದೆಯೇ ಅಧ್ಯಕ್ಷರು
ಸುಯೋಗ್ ದೀಕ್ಷಿತ್ ಆಗಿರು ನಾನು ಇಂದಿನಿಂದ ಮಿಲಿಟರಿಯ ಮುಖ್ಯಸ್ಥ ಮತ್ತು ಪ್ರಧಾನಿಯಾಗಿದ್ದೇನೆ. ಇತರ ಪೋಸ್ಟ್ಗಳಿಗಾಗಿ ನಾವು ಅಪ್ಲಿಕೇಶನ್ಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನನ್ನ ತಂದೆಯೇ ಕೆಓಡಿ ಅಧ್ಯಕ್ಷರಾಗಿದ್ದು ಅವರಿಗೆ ಜನ್ಮದಿನದ ಉಡುಗೊರೆಯಾಗಿ ಇದನ್ನು ನೀಡುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯ ಅಪ್ಪ! ಜೀವನದಲ್ಲಿ ಏನಾದರೂ ಸಾಧಿಸಲೇ ಬೇಕು, ಇಲ್ಲದಿದ್ದರೆ ನಿಮ್ಮ ಜೀವನ ವ್ಯರ್ಥವಾಗಿಬಿಡುತ್ತದೆ.
ನಾನು ಹೇಳುತ್ತಿರುವುದು ಹಾಸ್ಯವಲ್ಲ
ನಾನು ಒಂದು ದೇಶಕ್ಕೆ ಒಡೆಯನಾಗಿದ್ದೇನೆ ಮತ್ತು ಯುಎನ್ಗೆ ಈ ಕುರಿತು ಮೇಲ್ ಬರೆಯುತ್ತೇನೆ.