Just In
- 11 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 12 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 12 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 14 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಡಿದ ಅಮಲಿನಲ್ಲಿ ನಾಯಿಮರಿಯ ಮೇಲೆ ಅತ್ಯಾಚಾರ ಮಾಡಿದ ಪಾಪಿ...
ಪತ್ರಿಕೆಗಳಲ್ಲಿ ಆಗಾಗ ವೃದ್ಧರು, ಚಿಕ್ಕ ಮಕ್ಕಳು ಅಥವಾ ಅಸಹಾಯಕರ ಮೇಲೆ ಕಾಮುಕರು ಎರಗಿ ಅತ್ಯಾಚಾರ ನಡೆಸಿದ ಬಗ್ಗೆ ವರದಿಗಳು ಬರುತ್ತಲೇ ಇರುತ್ತವೆ. ಈ ವರದಿಗಳನ್ನು ಓದಿದಾಗ ರಕ್ತ ಕುದಿಯುತ್ತದೆ. ಈ ಕಾಮುಕರು ಮನುಷ್ಯರ ಮೇಲೆ ಮಾತ್ರವಲ್ಲ ಬಡಪ್ರಾಣಿಗಳ ಮೇಲೂ ತಮ್ಮ ಕಾಮುಕದೃಷ್ಟಿ ಬೀರುತ್ತಾರೆ. ಇವರ ಕೃತ್ಯಗಳು ಮಾನವತೆಯನ್ನೇ ನಾಚಿಕೆಗೀಡುಮಾಡುತ್ತವೆ.
ಇತ್ತೀಚಿನ ಘಟನೆಯೊಂದರಲ್ಲಿ, ಅದೂ ನಮ್ಮ ಭಾರತದಲ್ಲಿಯೇ, ಪಾನಮತ್ತ ವ್ಯಕ್ತಿಯೊಬ್ಬ ನಾಯಿಮರಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದ್ದು ಇದರ ಪರಿಣಾಮವಾಗಿ ರಕ್ತಸ್ರಾವ ಹಾಗೂ ಆಘಾತದಿಂದ ಈ ನಾಯಿಮರಿ ಸತ್ತೇ ಹೋಗಿದ್ದು ಮಾತ್ರ ಮನುಕುಲವೇ ತಲೆತಗ್ಗಿಸಬೇಕಾದ ನಾಚಿಕೆಗೇಡಿನ ವಿಷಯವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....
ಈ ವ್ಯಕ್ತಿ ಒಬ್ಬ ಟ್ಯಾಕ್ಸಿ ಡ್ರೈವರ್
ದೆಹಲಿಯ ನಿವಾಸಿಯಾಗಿರುವ ಮೂವತ್ತನಾಲ್ಕು ವರ್ಷ ವಯಸ್ಸಿನ ಈ ವ್ಯಕ್ತಿ ಟ್ಯಾಕ್ಸಿ ಚಾಲಕನಾಗಿದ್ದು ನಾಯಿಮರಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ರಸ್ತೆಯಲ್ಲಿ ಸಾಯಲು ಬಿಟ್ಟು ತೆರಳಿದ್ದಾನೆ. ಈ ಸಮಯದಲ್ಲಿ ಈತ ಪಾನಮತ್ತನಾಗಿದ್ದು ತನ್ನ ತೃಶೆಯನ್ನು ಪೂರೈಸಿಕೊಳ್ಳಲು ನಾಯಿಮರಿಯನ್ನು ಬಳಸಿಕೊಂಡಿದ್ದಾನೆ.
ಗೋಣಿ ಚೀಲದಲ್ಲಿ ತ್ಯಜಿಸಲ್ಪಟ್ಟ ನಾಯಿಮರಿ
ಅತ್ಯಾಚಾರದ ಸಮಯದಲ್ಲಿ ನಾಯಿಮರಿಯ ದೇಹದಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ತನ್ನ ಕೆಲಸ ಮುಂದುವರೆಸಿದ ಈ ವ್ಯಕ್ತಿ ತನ್ನ ಕೆಲಸವಾದ ಬಳಿಕ ನಾಯಿಮರಿಯನ್ನು ಗೋಣಿಚೀಲದಲ್ಲಿ ಹಾಕಿ ಪಕ್ಕದ ಒಣ ಚರಂಡಿಯಲ್ಲಿ ಎಸೆದಿದ್ದಾನೆ. ಇದಕ್ಕೆ ಇವನ ಸಹೋದರನೂ ಸಹಕರಿಸಿದ್ದಾನೆ.
ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ
ಈ ಸ್ಥಳದ ನಿವಾಸಿಯಾಗಿದ್ದ ಪ್ರಾಣಿಗಳ ಬಗ್ಗೆ ದಯೆ ತೋರುವ ವ್ಯಕ್ತಿಯೊಬ್ಬರು ಈ ನಾಯಿಮರಿಯನ್ನು ಹುಡುಕುತ್ತಾ ಬಂದಾಗ ಗೋಣಿಚೀಲದಲ್ಲಿ ನಾಯಿಮರಿ ಸತ್ತು ಬಿದ್ದುದ್ದನ್ನು ಕಂಡರು. ಆಗ ಅಲ್ಲಿಯೇ ಇದ್ದ ಆ ಟ್ಯಾಕ್ಸಿ ಚಾಲಕನಲ್ಲಿ ಈ ನಾಯಿಮರಿ ಹೇಗೆ ಸತ್ತಿತು ಎಂದು ಕೇಳಿದಾದ ಪಾನಮತ್ತ ಈ ವ್ಯಕ್ತಿ ಯಾವುದೇ ನಾಚಿಕೆಯಿಲ್ಲದೇ ತನ್ನ ಕೃತ್ಯವನ್ನು ಬಣ್ಣಿಸಿ ಬಳಿಕ ಅಲ್ಲಿಂದ ತೆರಳಿದ್ದಾನೆ.
ಈ ವಕ್ತಿ ಇಂದಿಗೂ ನಾಪತ್ತೆಯಾಗಿದ್ದಾನೆ
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮತ್ತಲ ಜನರೆಲ್ಲಾ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನಾಯಿಮರಿಯನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿಮರಿ ತೀವ್ರ ರಕ್ತಸ್ರಾವ ಹಾಗೂ ಮಾನಸಿಕ ಆಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಇಂತಹ ಜನರು ತಮ್ಮೊಂದಿಗೆ ಇದ್ದಾರೆಯೇ?
ಆದರೆ ಈ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡಿದ್ದು ಇದುವರೆಗೆ ಯಾವುದೇ ಪತ್ತೆಯಿಲ್ಲ. ಈ ಘಟನೆ ನಾವು ಯಾವ ಲೋಕದಲ್ಲಿ ಜೀವಿಸುತ್ತಿದ್ದೇವೆ ಎಂದು ಚಿಂತನೆ ಮಾಡುವಂತಾಗಿದೆ.