Latest Updates
-
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್
ಕುಡಿದ ಅಮಲಿನಲ್ಲಿ ನಾಯಿಮರಿಯ ಮೇಲೆ ಅತ್ಯಾಚಾರ ಮಾಡಿದ ಪಾಪಿ...
ಪತ್ರಿಕೆಗಳಲ್ಲಿ ಆಗಾಗ ವೃದ್ಧರು, ಚಿಕ್ಕ ಮಕ್ಕಳು ಅಥವಾ ಅಸಹಾಯಕರ ಮೇಲೆ ಕಾಮುಕರು ಎರಗಿ ಅತ್ಯಾಚಾರ ನಡೆಸಿದ ಬಗ್ಗೆ ವರದಿಗಳು ಬರುತ್ತಲೇ ಇರುತ್ತವೆ. ಈ ವರದಿಗಳನ್ನು ಓದಿದಾಗ ರಕ್ತ ಕುದಿಯುತ್ತದೆ. ಈ ಕಾಮುಕರು ಮನುಷ್ಯರ ಮೇಲೆ ಮಾತ್ರವಲ್ಲ ಬಡಪ್ರಾಣಿಗಳ ಮೇಲೂ ತಮ್ಮ ಕಾಮುಕದೃಷ್ಟಿ ಬೀರುತ್ತಾರೆ. ಇವರ ಕೃತ್ಯಗಳು ಮಾನವತೆಯನ್ನೇ ನಾಚಿಕೆಗೀಡುಮಾಡುತ್ತವೆ.
ಇತ್ತೀಚಿನ ಘಟನೆಯೊಂದರಲ್ಲಿ, ಅದೂ ನಮ್ಮ ಭಾರತದಲ್ಲಿಯೇ, ಪಾನಮತ್ತ ವ್ಯಕ್ತಿಯೊಬ್ಬ ನಾಯಿಮರಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ವರದಿಯಾಗಿದ್ದು ಇದರ ಪರಿಣಾಮವಾಗಿ ರಕ್ತಸ್ರಾವ ಹಾಗೂ ಆಘಾತದಿಂದ ಈ ನಾಯಿಮರಿ ಸತ್ತೇ ಹೋಗಿದ್ದು ಮಾತ್ರ ಮನುಕುಲವೇ ತಲೆತಗ್ಗಿಸಬೇಕಾದ ನಾಚಿಕೆಗೇಡಿನ ವಿಷಯವಾಗಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ....

ಈ ವ್ಯಕ್ತಿ ಒಬ್ಬ ಟ್ಯಾಕ್ಸಿ ಡ್ರೈವರ್
ದೆಹಲಿಯ ನಿವಾಸಿಯಾಗಿರುವ ಮೂವತ್ತನಾಲ್ಕು ವರ್ಷ ವಯಸ್ಸಿನ ಈ ವ್ಯಕ್ತಿ ಟ್ಯಾಕ್ಸಿ ಚಾಲಕನಾಗಿದ್ದು ನಾಯಿಮರಿಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ರಸ್ತೆಯಲ್ಲಿ ಸಾಯಲು ಬಿಟ್ಟು ತೆರಳಿದ್ದಾನೆ. ಈ ಸಮಯದಲ್ಲಿ ಈತ ಪಾನಮತ್ತನಾಗಿದ್ದು ತನ್ನ ತೃಶೆಯನ್ನು ಪೂರೈಸಿಕೊಳ್ಳಲು ನಾಯಿಮರಿಯನ್ನು ಬಳಸಿಕೊಂಡಿದ್ದಾನೆ.

ಗೋಣಿ ಚೀಲದಲ್ಲಿ ತ್ಯಜಿಸಲ್ಪಟ್ಟ ನಾಯಿಮರಿ
ಅತ್ಯಾಚಾರದ ಸಮಯದಲ್ಲಿ ನಾಯಿಮರಿಯ ದೇಹದಿಂದ ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೇ ತನ್ನ ಕೆಲಸ ಮುಂದುವರೆಸಿದ ಈ ವ್ಯಕ್ತಿ ತನ್ನ ಕೆಲಸವಾದ ಬಳಿಕ ನಾಯಿಮರಿಯನ್ನು ಗೋಣಿಚೀಲದಲ್ಲಿ ಹಾಕಿ ಪಕ್ಕದ ಒಣ ಚರಂಡಿಯಲ್ಲಿ ಎಸೆದಿದ್ದಾನೆ. ಇದಕ್ಕೆ ಇವನ ಸಹೋದರನೂ ಸಹಕರಿಸಿದ್ದಾನೆ.

ಈತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ
ಈ ಸ್ಥಳದ ನಿವಾಸಿಯಾಗಿದ್ದ ಪ್ರಾಣಿಗಳ ಬಗ್ಗೆ ದಯೆ ತೋರುವ ವ್ಯಕ್ತಿಯೊಬ್ಬರು ಈ ನಾಯಿಮರಿಯನ್ನು ಹುಡುಕುತ್ತಾ ಬಂದಾಗ ಗೋಣಿಚೀಲದಲ್ಲಿ ನಾಯಿಮರಿ ಸತ್ತು ಬಿದ್ದುದ್ದನ್ನು ಕಂಡರು. ಆಗ ಅಲ್ಲಿಯೇ ಇದ್ದ ಆ ಟ್ಯಾಕ್ಸಿ ಚಾಲಕನಲ್ಲಿ ಈ ನಾಯಿಮರಿ ಹೇಗೆ ಸತ್ತಿತು ಎಂದು ಕೇಳಿದಾದ ಪಾನಮತ್ತ ಈ ವ್ಯಕ್ತಿ ಯಾವುದೇ ನಾಚಿಕೆಯಿಲ್ಲದೇ ತನ್ನ ಕೃತ್ಯವನ್ನು ಬಣ್ಣಿಸಿ ಬಳಿಕ ಅಲ್ಲಿಂದ ತೆರಳಿದ್ದಾನೆ.

ಈ ವಕ್ತಿ ಇಂದಿಗೂ ನಾಪತ್ತೆಯಾಗಿದ್ದಾನೆ
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮತ್ತಲ ಜನರೆಲ್ಲಾ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನಾಯಿಮರಿಯನ್ನು ಬಳಿಕ ಆಸ್ಪತ್ರೆಗೆ ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಯಿಮರಿ ತೀವ್ರ ರಕ್ತಸ್ರಾವ ಹಾಗೂ ಮಾನಸಿಕ ಆಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಇಂತಹ ಜನರು ತಮ್ಮೊಂದಿಗೆ ಇದ್ದಾರೆಯೇ?
ಆದರೆ ಈ ವ್ಯಕ್ತಿ ಅಲ್ಲಿಂದ ಜಾಗ ಖಾಲಿ ಮಾಡಿದ್ದು ಇದುವರೆಗೆ ಯಾವುದೇ ಪತ್ತೆಯಿಲ್ಲ. ಈ ಘಟನೆ ನಾವು ಯಾವ ಲೋಕದಲ್ಲಿ ಜೀವಿಸುತ್ತಿದ್ದೇವೆ ಎಂದು ಚಿಂತನೆ ಮಾಡುವಂತಾಗಿದೆ.



Click it and Unblock the Notifications