Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಮಂಗಳಮುಖಿಯರ ಬಗ್ಗೆ ತಿಳಿಯಬೇಕಾದ ಸತ್ಯಾಸತ್ಯತೆಗಳು
ನಗರಗಳಲ್ಲಿ ಕೆಲವೊಂದು ಕಡೆಗಳಲ್ಲಿ ಮಂಗಳಮುಖಿಯರನ್ನು ನೋಡಿರಬಹುದು. ಮಂಗಳಮುಖಿಯರ ಬಗ್ಗೆ ಸಾಮಾನ್ಯ ಜನರಲ್ಲಿ ಇಂದಿಗೂ ಕೆಲವೊಂದು ರಹಸ್ಯ ಪ್ರಶ್ನೆಗಳು ಇವೆ. ಇಂತಹ ಕೆಲವು ಪ್ರಶ್ನೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಮಂಗಳಮುಖಿಯರ ಬಗ್ಗೆ ಇತಿಹಾಸಗಳಲ್ಲೂ ಉಲ್ಲೇಖವಿದೆ.
ಮಹಾಭಾರತದಲ್ಲೂ ಮಂಗಳಮುಖಿಯ ಬಗ್ಗೆ ಉಲ್ಲೇಖವಿದೆ. ಇಸ್ಲಾಂನ ಗ್ರಂಥಗಳಲ್ಲೂ ಮಂಗಳಮುಖಿಯರ ಉಲ್ಲೇಖವಿದೆ. ಮುಘಲ್ ಸಾಮ್ರಾಜ್ಯದಲ್ಲಿ ಮಂಗಳಮುಖಿಯರಿದ್ದರು. ಹಿಂದೂ ಪುರಾಣಗಳಲ್ಲಿ ಮಂಗಳಮುಖಿಯರ ಕೆಲವು ಆಚರಣೆಗಳ ಉಲ್ಲೇಖವಿದೆ. ಆದರೆ ಇದನ್ನು ಮುಸ್ಲಿಮರು ಕೂಡ ಆಚರಿಸಿಕೊಂಡು ಬಂದಿದ್ದಾರೆ.

ಕಠಿಣ ಪರಿಶ್ರಮದಿಂದ ಹಣ ಗಳಿಸುತ್ತಿದ್ದರು
ಇಂದಿನ ದಿನಗಳಲ್ಲಿ ಮಂಗಳಮುಖಿಯರು ಹೆಚ್ಚಾಗಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ತುಂಬಾ ಕಠಿಣ ಪರಿಶ್ರಮದಿಂದ ಅವರು ಜೀವನ ಸಾಗಿಸುತ್ತಿದ್ದರು. ಶ್ರೀಮಂತ ಮಹಿಳೆಯರಿಗೆ ರಕ್ಷಕರಾಗಿ ಅಥವಾ ಕೆಲಸದವರಾಗಿ ತುಂಬಾ ಕಠಿಣ ಪರಿಶ್ರಮದಿಂದ ಹಣ ಸಂಪಾದನೆ ಮಾಡುತ್ತಿದ್ದರು. ರಾಜಮನೆತನದವರು ಹೆಚ್ಚಾಗಿ ಮಂಗಳಮುಖಿಯರ ಮೇಲೆ ಭರವಸೆಯನ್ನಿಡುತ್ತಿದ್ದರು.

ತುಂಬಾ ಸಂಭ್ರಮದ ಮರುಜನ್ಮದ ಸಮಾರಂಭ
ಮಂಗಳಮುಖಿ ಜನಿಸಿದಾಗ ಮರುಜನ್ಮ ಸಮಾರಂಭ ಆಯೋಜಿಸಲಾಗುವುದು. ಇದನ್ನು ನಿರ್ವಹಣ ಸಮಾರಂಭವೆಂದೂ ಕರೆಯಲಾಗುವುದು. ಪುರುಷರ ಬಾಹ್ಯ ಲೈಂಗಿಕ ಅಂಗಗಳಾದ ಶಿಶ್ನ ಹಾಗು ವೃಷಣ ತೆಗೆದುಹಾಕಲಾಗುವುದು. ಇದರ ಮೂಲಕ ಪುರುಷನನ್ನು ನಪುಂಸಕನಾಗಿ ಪರಿವರ್ತಿಸಲಾಗುವುದು.

ವಿಶೇಷ ಆಹಾರ
ಸಮರ್ಥ ಮಂಗಳಮುಖಿಯಾಗುವ ಮೊದಲು ಮಂಗಳಮುಖಿಯರು ವಿಶೇಷ ಆಹಾರಕ್ರಮ ಪಾಲಿಸಬೇಕಾಗುವುದು. ಕೆಲವೊಂದು ರೀತಿಯ ನಿರ್ಬಂಧಗಳೊಂದಿಗೆ ಪ್ರಸವದ ಬಳಿಕ ಮಹಿಳೆಯರು ಅನುಸರಿಸುವಂತಹ ನಿರ್ಬಂಧದ ಸಮಯ ಕಳೆಯಬೇಕು. ಶಸ್ತ್ರಚಿಕಿತ್ಸೆಯ 40 ದಿನಗಳ ಮೊದಲು ಇದನ್ನು ನಡೆಸಲಾಗುವುದು.

ಮಂಗಳಮುಖಿಯರಲ್ಲಿ ಅತಿಮಾನುಷ ಸಾಮರ್ಥ್ಯ
ಭವಿಷ್ಯ ನೋಡುವಂತಹ ಸಾಮರ್ಥ್ಯವು ಮಂಗಳಮುಖಿಯರಲ್ಲಿ ಇರುವುದು ಎಂದು ನಂಬಲಾಗಿದೆ. ಅವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ತಿಳಿದುಬರುವುದು ಎನ್ನಲಾಗಿದೆ.

ಸಾವು ತುಂಬಾ ನಿಗೂಢ
ಮಂಗಳಮುಖಿಯರ ಸಾವಿನ ಶೋಕಾಚರಣೆಯಲ್ಲಿ ತೊಡಗಿಕೊಳ್ಳುವ ಮಂದಿ ಕೆಲವೇ ಕೆಲವು ಮಂದಿ. ಯಾಕೆಂದರೆ ಇದು ತುಂಬಾ ಗೌಪ್ಯ ಸಮಾರಂಭವಾಗಿರುವುದು. ಮಂಗಳಮುಖಿಯರ ಸಾವಿನ ಕಾರ್ಯಗಳನ್ನು ರಾತ್ರಿ ವೇಳೆ ನಡೆಸಲಾಗುತ್ತದೆ.



Click it and Unblock the Notifications