Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮಂಗಳಮುಖಿಯರ ಬಗ್ಗೆ ತಿಳಿಯಬೇಕಾದ ಸತ್ಯಾಸತ್ಯತೆಗಳು
ನಗರಗಳಲ್ಲಿ ಕೆಲವೊಂದು ಕಡೆಗಳಲ್ಲಿ ಮಂಗಳಮುಖಿಯರನ್ನು ನೋಡಿರಬಹುದು. ಮಂಗಳಮುಖಿಯರ ಬಗ್ಗೆ ಸಾಮಾನ್ಯ ಜನರಲ್ಲಿ ಇಂದಿಗೂ ಕೆಲವೊಂದು ರಹಸ್ಯ ಪ್ರಶ್ನೆಗಳು ಇವೆ. ಇಂತಹ ಕೆಲವು ಪ್ರಶ್ನೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಮಂಗಳಮುಖಿಯರ ಬಗ್ಗೆ ಇತಿಹಾಸಗಳಲ್ಲೂ ಉಲ್ಲೇಖವಿದೆ.
ಮಹಾಭಾರತದಲ್ಲೂ ಮಂಗಳಮುಖಿಯ ಬಗ್ಗೆ ಉಲ್ಲೇಖವಿದೆ. ಇಸ್ಲಾಂನ ಗ್ರಂಥಗಳಲ್ಲೂ ಮಂಗಳಮುಖಿಯರ ಉಲ್ಲೇಖವಿದೆ. ಮುಘಲ್ ಸಾಮ್ರಾಜ್ಯದಲ್ಲಿ ಮಂಗಳಮುಖಿಯರಿದ್ದರು. ಹಿಂದೂ ಪುರಾಣಗಳಲ್ಲಿ ಮಂಗಳಮುಖಿಯರ ಕೆಲವು ಆಚರಣೆಗಳ ಉಲ್ಲೇಖವಿದೆ. ಆದರೆ ಇದನ್ನು ಮುಸ್ಲಿಮರು ಕೂಡ ಆಚರಿಸಿಕೊಂಡು ಬಂದಿದ್ದಾರೆ.

ಕಠಿಣ ಪರಿಶ್ರಮದಿಂದ ಹಣ ಗಳಿಸುತ್ತಿದ್ದರು
ಇಂದಿನ ದಿನಗಳಲ್ಲಿ ಮಂಗಳಮುಖಿಯರು ಹೆಚ್ಚಾಗಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ. ಆದರೆ ಹಿಂದಿನ ಕಾಲದಲ್ಲಿ ತುಂಬಾ ಕಠಿಣ ಪರಿಶ್ರಮದಿಂದ ಅವರು ಜೀವನ ಸಾಗಿಸುತ್ತಿದ್ದರು. ಶ್ರೀಮಂತ ಮಹಿಳೆಯರಿಗೆ ರಕ್ಷಕರಾಗಿ ಅಥವಾ ಕೆಲಸದವರಾಗಿ ತುಂಬಾ ಕಠಿಣ ಪರಿಶ್ರಮದಿಂದ ಹಣ ಸಂಪಾದನೆ ಮಾಡುತ್ತಿದ್ದರು. ರಾಜಮನೆತನದವರು ಹೆಚ್ಚಾಗಿ ಮಂಗಳಮುಖಿಯರ ಮೇಲೆ ಭರವಸೆಯನ್ನಿಡುತ್ತಿದ್ದರು.

ತುಂಬಾ ಸಂಭ್ರಮದ ಮರುಜನ್ಮದ ಸಮಾರಂಭ
ಮಂಗಳಮುಖಿ ಜನಿಸಿದಾಗ ಮರುಜನ್ಮ ಸಮಾರಂಭ ಆಯೋಜಿಸಲಾಗುವುದು. ಇದನ್ನು ನಿರ್ವಹಣ ಸಮಾರಂಭವೆಂದೂ ಕರೆಯಲಾಗುವುದು. ಪುರುಷರ ಬಾಹ್ಯ ಲೈಂಗಿಕ ಅಂಗಗಳಾದ ಶಿಶ್ನ ಹಾಗು ವೃಷಣ ತೆಗೆದುಹಾಕಲಾಗುವುದು. ಇದರ ಮೂಲಕ ಪುರುಷನನ್ನು ನಪುಂಸಕನಾಗಿ ಪರಿವರ್ತಿಸಲಾಗುವುದು.

ವಿಶೇಷ ಆಹಾರ
ಸಮರ್ಥ ಮಂಗಳಮುಖಿಯಾಗುವ ಮೊದಲು ಮಂಗಳಮುಖಿಯರು ವಿಶೇಷ ಆಹಾರಕ್ರಮ ಪಾಲಿಸಬೇಕಾಗುವುದು. ಕೆಲವೊಂದು ರೀತಿಯ ನಿರ್ಬಂಧಗಳೊಂದಿಗೆ ಪ್ರಸವದ ಬಳಿಕ ಮಹಿಳೆಯರು ಅನುಸರಿಸುವಂತಹ ನಿರ್ಬಂಧದ ಸಮಯ ಕಳೆಯಬೇಕು. ಶಸ್ತ್ರಚಿಕಿತ್ಸೆಯ 40 ದಿನಗಳ ಮೊದಲು ಇದನ್ನು ನಡೆಸಲಾಗುವುದು.

ಮಂಗಳಮುಖಿಯರಲ್ಲಿ ಅತಿಮಾನುಷ ಸಾಮರ್ಥ್ಯ
ಭವಿಷ್ಯ ನೋಡುವಂತಹ ಸಾಮರ್ಥ್ಯವು ಮಂಗಳಮುಖಿಯರಲ್ಲಿ ಇರುವುದು ಎಂದು ನಂಬಲಾಗಿದೆ. ಅವರಿಗೆ ತಮ್ಮ ಸಾವಿನ ಬಗ್ಗೆ ಮೊದಲೇ ತಿಳಿದುಬರುವುದು ಎನ್ನಲಾಗಿದೆ.

ಸಾವು ತುಂಬಾ ನಿಗೂಢ
ಮಂಗಳಮುಖಿಯರ ಸಾವಿನ ಶೋಕಾಚರಣೆಯಲ್ಲಿ ತೊಡಗಿಕೊಳ್ಳುವ ಮಂದಿ ಕೆಲವೇ ಕೆಲವು ಮಂದಿ. ಯಾಕೆಂದರೆ ಇದು ತುಂಬಾ ಗೌಪ್ಯ ಸಮಾರಂಭವಾಗಿರುವುದು. ಮಂಗಳಮುಖಿಯರ ಸಾವಿನ ಕಾರ್ಯಗಳನ್ನು ರಾತ್ರಿ ವೇಳೆ ನಡೆಸಲಾಗುತ್ತದೆ.



Click it and Unblock the Notifications
