Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಒಂದು ಪ್ಲೇಟ್ ಇಡ್ಲಿಗೆ 500 ರೂ.: ಇದು ಸಾಮಾನ್ಯ ಇಡ್ಲಿಯಲ್ಲ!!
ದಕ್ಷಿಣ ಭಾರತದ ಪ್ರಸಿದ್ಧದ ತಿಂಡಿಯಲ್ಲಿ ಇಡ್ಲಿ ಮುಂಚೂಣಿಯಲ್ಲಿದೆ. ಇಡ್ಲಿ ಆರೋಗ್ಯಕ್ಕೆ ಬಹಳ ಉತ್ತಮ ಆಯ್ಕೆ. ಏಕೆಂದರೆ ಕಡಿಮೆ ಎಣ್ಣೆ ಬಳಸುವ ಕಾರಣ ಹಾಗೂ ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿರುವ ಕಾರಣ ಇಡ್ಲಿ ಎಲ್ಲರ ಫೇವರಿಟ್ ಫುಡ್ ಆಗಿದೆ.
ಹೋಟೆಲ್ನಲ್ಲಿ ಒಂದು ಪ್ಲೇಟ್ ಇಡ್ಲಿಗೆ ಹೆಚ್ಚೆಂದರೆ ನೀವು 30ರಿಂದ 50 ರೂಪಾಯಿ ನೀಡಿರಬಹುದು. ಅದಕ್ಕೂ ಹೆಚ್ಚೆಂದರೆ 100 ರೂಪಾಯಿವರೆಗೂ ನೀಡಿರಬಹುದು. ಆದ್ರೆ ಇಲ್ಲೊಂದು ಕಡೆ ಒಂದು ಪ್ಲೇಟ್ ಇಡ್ಲಿ ಬೆಲೆ ಬರೋಬ್ಬರಿ 500 ರೂಪಾಯಿಯಾಗಿದೆ.

ಇಡ್ಲಿ ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುವ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಹೀಗಾಗಿ ಜನ ಇಡ್ಲಿಯನ್ನ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಈ ಇಡ್ಲಿ ಬೆಲೆ ಮಾತ್ರ 500 ರೂಪಾಯಿಯಾಗಿದೆ. ಚೆನ್ನೈನ ಹೆಸರಾಂತ ಉಪಾಹಾರ ಗೃಹ ಅಡ್ಯಾರ್ ಆನಂದ ಭವನವು ರೂ 500 ಬೆಲೆಯ ವಿಶಿಷ್ಟವಾದ ಇಡ್ಲಿಯನ್ನು ನೀಡುತ್ತಿದೆ. ಬೆಲೆಯೂ ಹೆಚ್ಚಿರುವ ಕಾರಣಕ್ಕೆ ಸದ್ದು ಮಾಡುತ್ತಿದೆ.
ಈ ಇಡ್ಲಿಯ ವಿಶೇಷತೆ ಏನು ಗೊತ್ತಾ?
ಈ ಇಡ್ಲಿಗೆ ಸುಮ್ಮನೆ ಇಷ್ಟೊಂದು ದರ ಫಿಕ್ಸ್ ಮಾಡಿಲ್ಲ ಬದಲಾಗಿ, ಈ ಇಡ್ಲಿಗೆ ಪೌಷ್ಟಿಕ ಆಹಾರಗಳ ಸೇರಿಸಲಾಗುತ್ತದೆ. ಅಂದರೆ ಬಾದಾಮಿ, ಬೆರಿಹಣ್ಣು, ಆಲಿವ್ ಸೇರಿ ವಿವಿಧ ಡ್ರೈ ಫ್ರೂಟ್ಸ್ಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಇದೊಂದು ಪೌಷ್ಟಿಕಾಂಶ ಭರಿತ ಆಹಾರ ಆಗಿರೋದ್ರಿಂದ ಇದರ ಬೆಲೆ 500 ರೂಪಾಯಿ ಆಗಿದೆ.
@foodtastingmission ಎಂಬ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಈ ಇಡ್ಲಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅಂದಿನಿಂದ ಈ ವಿಡಿಯೋ ವೈರಲ್ ಆಗಿದೆ. ಜನ ಈ ಇಡ್ಲಿ ನೋಡಿ ಇಷ್ಟೊಂದು ಬೆಲೆ ಏಕೆ ಎಂದು ಬಾಯಿ ಮೇಲೆ ಬೆರಳಿಟ್ಟರೆ ಮತ್ತೆ ಕೆಲವರು ಇಡ್ಲಿ ಜೊತೆಗೆ ಅದನ್ನು ಹಾಕುವುದಕ್ಕಿಂತ, ಈ ಫ್ರೂಟ್ಸ್ಗಳನ್ನು ಇಡ್ಲಿ ಸವಿದ ಬಳಿಕವೂ ತಿನ್ನಬಹುದು. ಇದೊಂದು ಮಾರ್ಕೆಟಿಂಗ್ ಅಷ್ಟೇ ಎನ್ನುತ್ತಿದ್ದಾರೆ.
ಅದ್ಭುತ ರುಚಿಯ ಗೀ ರೈಸ್ 10 ನಿಮಿಷದಲ್ಲಿ..! ಸಿಂಪಲ್ ರೆಸಿಪಿ ಇಲ್ಲಿದೆ!
ಇದೊಂದು ಸೂಪರ್ ಫುಡ್ ರೀತಿಯ ಆಹಾರವಾಗಿದೆ. ಇದರಲ್ಲಿ ಎಲ್ಲಾ ವಿಟಮಿನ್, ಪೋಷಕಾಂಶ ಸೇರಿದಂತೆ ವಿವಿಧ ಆರೋಗ್ಯಕರ ಅಂಶಗಳು ಸೇರಿರುವುದರಿಂದಾಗಿ ಎಲ್ಲಾ ವರ್ಗದವರಿಗೂ ಇದೊಂದು ಅತ್ಯುತ್ತಮ ಆಹಾರವಾಗಿದೆ. ಈ ಇಡ್ಲಿ ಸಂಪೂರ್ಣ ಪ್ಯಾಕೇಜ್ ರೀತ ಇದ್ದು, ಎಲ್ಲಾ ರೀತಿಯ ಪೋಷಕಾಂಶವು ಇದರಲ್ಲಿ ಬೆರೆತಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ.
ಅಡ್ಯಾರ್ ಆನಂದ ಭವನ ಆರಂಭಗೊಂಡಿದ್ದು ಹೇಗೆ?
1960 ರ ದಶಕದ ಆರಂಭದಲ್ಲಿ ಕೆ.ಎಸ್ ತಿರುಪತಿ ರಾಜಾ ಎಂಬಾತ ತಮಿಳುನಾಡಿನ ಮಧುರೈ ಬಳಿಯ ರಾಜಪಾಳ್ಯಂ ಪಟ್ಟಣದಲ್ಲಿ ಗುರು ಸ್ವೀಟ್ಸ್ ಎಂಬ ಸಣ್ಣ ಸಿಹಿತಿಂಡಿ ಅಂಗಡಿಯನ್ನು ತೆರೆದಿದ್ದರು. ಕೃಷಿಕ ಕುಟುಂಬದಿಂದ ಬಂದ ತಿರುಪತಿ ರಾಜಾ ಪತ್ನಿ ಮುತ್ತುಲಕ್ಷ್ಮಿ ಅವರ ಸಹಾಯದಿಂದ, ಗುರು ಸ್ವೀಟ್ಸ್ ಗೋಧಿ ಹಲ್ವಾ, ಲಡ್ಡು, ಜಹಾಂಗೀರ್, ಬಾದುಶಾ ಮತ್ತು ಪ್ರಸಿದ್ಧ ಮೈಸೂರು ಪಾಕ್ನಂತಹ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
1978 ರಲ್ಲಿ, ನನ್ನ ತಂದೆ ಮಲ್ಲೇಶ್ವರಂ ಬಳಿ ಬೆಂಗಳೂರಿನಲ್ಲಿ ಶ್ರೀನಿವಾಸ ಸ್ವೀಟ್ಸ್ ಎಂಬ ಮತ್ತೊಂದು ಸಿಹಿತಿಂಡಿ ಅಂಗಡಿಯನ್ನು ತೆರೆದರು ಎಂದು ತಿರುಪತಿ ರಾಜರ ಕಿರಿಯ ಮಗ 58 ವರ್ಷದ ಕೆಟಿ ಶ್ರೀನಿವಾಸ ರಾಜ ಹೇಳುತ್ತಾರೆ. ಶ್ರೀನಿವಾಸ ಸ್ವೀಟ್ಸ್, ಹಿಂದಿನ ಅಂಗಡಿಗಿಂತ ಭಿನ್ನವಾಗಿತ್ತು. ಆದರೆ 1980 ರ ಹೊತ್ತಿಗೆ ಹಿರಿಯ ಸಹೋದರ ಕೆಟಿ ವೆಂಕಟೇಶನ್ ಚೆನ್ನೈನ ರಾಯಪುರಂನಲ್ಲಿ ಶ್ರೀ ಆನಂದ್ ಭವನ್ ಎಂಬ ಮತ್ತೊಂದು ಸಿಹಿತಿಂಡಿ ಮತ್ತು ಖಾರದ ಅಂಗಡಿಯನ್ನು ಸ್ಥಾಪಿಸಿದರು.
ಬಳಿಕ 1988ರಲ್ಲಿ ಇದೇ ಅಂಗಡಿಗೆ ಮರು ನಾಮಕರಣ ಮಾಡಲಾಗಿತ್ತು, ಅದಕ್ಕೆ ಅಡ್ಯಾರ್ ಆನಂದ ಭವನ ಎಂದು ಹೆಸರಿಡಲಾಗಿತ್ತು. ಈಗ ಈ ಹೋಟೆಲ್ ದೊಡ್ಡ ಉದ್ಯಮವಾಗಿ ಬೆಳೆದಿದೆ. ಜೊತೆಗೆ ವಾರ್ಷಿಕವಾಗಿ ಬರೋಬ್ಬರಿ 800 ಕೋಟಿ ರೂಪಾಯಿ ವಹಿವಾಟು ನಡೆಸುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಮಲೇಷಿಯಾ, ಯುಎಸ್, ಸಿಂಗಾಪುರ್ನಲ್ಲಿಯೂ ಮಳಿಗೆಗಳಿವೆ.



Click it and Unblock the Notifications










