Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಒಂದು ಪ್ಲೇಟ್ ಇಡ್ಲಿಗೆ 500 ರೂ.: ಇದು ಸಾಮಾನ್ಯ ಇಡ್ಲಿಯಲ್ಲ!!
ದಕ್ಷಿಣ ಭಾರತದ ಪ್ರಸಿದ್ಧದ ತಿಂಡಿಯಲ್ಲಿ ಇಡ್ಲಿ ಮುಂಚೂಣಿಯಲ್ಲಿದೆ. ಇಡ್ಲಿ ಆರೋಗ್ಯಕ್ಕೆ ಬಹಳ ಉತ್ತಮ ಆಯ್ಕೆ. ಏಕೆಂದರೆ ಕಡಿಮೆ ಎಣ್ಣೆ ಬಳಸುವ ಕಾರಣ ಹಾಗೂ ಜೀರ್ಣಕ್ರಿಯೆಗೂ ಇದು ಸಹಕಾರಿಯಾಗಿರುವ ಕಾರಣ ಇಡ್ಲಿ ಎಲ್ಲರ ಫೇವರಿಟ್ ಫುಡ್ ಆಗಿದೆ.
ಹೋಟೆಲ್ನಲ್ಲಿ ಒಂದು ಪ್ಲೇಟ್ ಇಡ್ಲಿಗೆ ಹೆಚ್ಚೆಂದರೆ ನೀವು 30ರಿಂದ 50 ರೂಪಾಯಿ ನೀಡಿರಬಹುದು. ಅದಕ್ಕೂ ಹೆಚ್ಚೆಂದರೆ 100 ರೂಪಾಯಿವರೆಗೂ ನೀಡಿರಬಹುದು. ಆದ್ರೆ ಇಲ್ಲೊಂದು ಕಡೆ ಒಂದು ಪ್ಲೇಟ್ ಇಡ್ಲಿ ಬೆಲೆ ಬರೋಬ್ಬರಿ 500 ರೂಪಾಯಿಯಾಗಿದೆ.

ಇಡ್ಲಿ ಸಾಮಾನ್ಯವಾಗಿ ಕಡಿಮೆ ಬೆಲೆಗೆ ಸಿಗುವ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಹೀಗಾಗಿ ಜನ ಇಡ್ಲಿಯನ್ನ ಹೆಚ್ಚು ಇಷ್ಟಪಡುತ್ತಾರೆ. ಆದ್ರೆ ಈ ಇಡ್ಲಿ ಬೆಲೆ ಮಾತ್ರ 500 ರೂಪಾಯಿಯಾಗಿದೆ. ಚೆನ್ನೈನ ಹೆಸರಾಂತ ಉಪಾಹಾರ ಗೃಹ ಅಡ್ಯಾರ್ ಆನಂದ ಭವನವು ರೂ 500 ಬೆಲೆಯ ವಿಶಿಷ್ಟವಾದ ಇಡ್ಲಿಯನ್ನು ನೀಡುತ್ತಿದೆ. ಬೆಲೆಯೂ ಹೆಚ್ಚಿರುವ ಕಾರಣಕ್ಕೆ ಸದ್ದು ಮಾಡುತ್ತಿದೆ.
ಈ ಇಡ್ಲಿಯ ವಿಶೇಷತೆ ಏನು ಗೊತ್ತಾ?
ಈ ಇಡ್ಲಿಗೆ ಸುಮ್ಮನೆ ಇಷ್ಟೊಂದು ದರ ಫಿಕ್ಸ್ ಮಾಡಿಲ್ಲ ಬದಲಾಗಿ, ಈ ಇಡ್ಲಿಗೆ ಪೌಷ್ಟಿಕ ಆಹಾರಗಳ ಸೇರಿಸಲಾಗುತ್ತದೆ. ಅಂದರೆ ಬಾದಾಮಿ, ಬೆರಿಹಣ್ಣು, ಆಲಿವ್ ಸೇರಿ ವಿವಿಧ ಡ್ರೈ ಫ್ರೂಟ್ಸ್ಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಇದೊಂದು ಪೌಷ್ಟಿಕಾಂಶ ಭರಿತ ಆಹಾರ ಆಗಿರೋದ್ರಿಂದ ಇದರ ಬೆಲೆ 500 ರೂಪಾಯಿ ಆಗಿದೆ.
@foodtastingmission ಎಂಬ ಇನ್ಸ್ಸ್ಟಾಗ್ರಾಮ್ ಖಾತೆಯಲ್ಲಿ ಈ ಇಡ್ಲಿಯ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅಂದಿನಿಂದ ಈ ವಿಡಿಯೋ ವೈರಲ್ ಆಗಿದೆ. ಜನ ಈ ಇಡ್ಲಿ ನೋಡಿ ಇಷ್ಟೊಂದು ಬೆಲೆ ಏಕೆ ಎಂದು ಬಾಯಿ ಮೇಲೆ ಬೆರಳಿಟ್ಟರೆ ಮತ್ತೆ ಕೆಲವರು ಇಡ್ಲಿ ಜೊತೆಗೆ ಅದನ್ನು ಹಾಕುವುದಕ್ಕಿಂತ, ಈ ಫ್ರೂಟ್ಸ್ಗಳನ್ನು ಇಡ್ಲಿ ಸವಿದ ಬಳಿಕವೂ ತಿನ್ನಬಹುದು. ಇದೊಂದು ಮಾರ್ಕೆಟಿಂಗ್ ಅಷ್ಟೇ ಎನ್ನುತ್ತಿದ್ದಾರೆ.
ಅದ್ಭುತ ರುಚಿಯ ಗೀ ರೈಸ್ 10 ನಿಮಿಷದಲ್ಲಿ..! ಸಿಂಪಲ್ ರೆಸಿಪಿ ಇಲ್ಲಿದೆ!
ಇದೊಂದು ಸೂಪರ್ ಫುಡ್ ರೀತಿಯ ಆಹಾರವಾಗಿದೆ. ಇದರಲ್ಲಿ ಎಲ್ಲಾ ವಿಟಮಿನ್, ಪೋಷಕಾಂಶ ಸೇರಿದಂತೆ ವಿವಿಧ ಆರೋಗ್ಯಕರ ಅಂಶಗಳು ಸೇರಿರುವುದರಿಂದಾಗಿ ಎಲ್ಲಾ ವರ್ಗದವರಿಗೂ ಇದೊಂದು ಅತ್ಯುತ್ತಮ ಆಹಾರವಾಗಿದೆ. ಈ ಇಡ್ಲಿ ಸಂಪೂರ್ಣ ಪ್ಯಾಕೇಜ್ ರೀತ ಇದ್ದು, ಎಲ್ಲಾ ರೀತಿಯ ಪೋಷಕಾಂಶವು ಇದರಲ್ಲಿ ಬೆರೆತಿದೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ.
ಅಡ್ಯಾರ್ ಆನಂದ ಭವನ ಆರಂಭಗೊಂಡಿದ್ದು ಹೇಗೆ?
1960 ರ ದಶಕದ ಆರಂಭದಲ್ಲಿ ಕೆ.ಎಸ್ ತಿರುಪತಿ ರಾಜಾ ಎಂಬಾತ ತಮಿಳುನಾಡಿನ ಮಧುರೈ ಬಳಿಯ ರಾಜಪಾಳ್ಯಂ ಪಟ್ಟಣದಲ್ಲಿ ಗುರು ಸ್ವೀಟ್ಸ್ ಎಂಬ ಸಣ್ಣ ಸಿಹಿತಿಂಡಿ ಅಂಗಡಿಯನ್ನು ತೆರೆದಿದ್ದರು. ಕೃಷಿಕ ಕುಟುಂಬದಿಂದ ಬಂದ ತಿರುಪತಿ ರಾಜಾ ಪತ್ನಿ ಮುತ್ತುಲಕ್ಷ್ಮಿ ಅವರ ಸಹಾಯದಿಂದ, ಗುರು ಸ್ವೀಟ್ಸ್ ಗೋಧಿ ಹಲ್ವಾ, ಲಡ್ಡು, ಜಹಾಂಗೀರ್, ಬಾದುಶಾ ಮತ್ತು ಪ್ರಸಿದ್ಧ ಮೈಸೂರು ಪಾಕ್ನಂತಹ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.
1978 ರಲ್ಲಿ, ನನ್ನ ತಂದೆ ಮಲ್ಲೇಶ್ವರಂ ಬಳಿ ಬೆಂಗಳೂರಿನಲ್ಲಿ ಶ್ರೀನಿವಾಸ ಸ್ವೀಟ್ಸ್ ಎಂಬ ಮತ್ತೊಂದು ಸಿಹಿತಿಂಡಿ ಅಂಗಡಿಯನ್ನು ತೆರೆದರು ಎಂದು ತಿರುಪತಿ ರಾಜರ ಕಿರಿಯ ಮಗ 58 ವರ್ಷದ ಕೆಟಿ ಶ್ರೀನಿವಾಸ ರಾಜ ಹೇಳುತ್ತಾರೆ. ಶ್ರೀನಿವಾಸ ಸ್ವೀಟ್ಸ್, ಹಿಂದಿನ ಅಂಗಡಿಗಿಂತ ಭಿನ್ನವಾಗಿತ್ತು. ಆದರೆ 1980 ರ ಹೊತ್ತಿಗೆ ಹಿರಿಯ ಸಹೋದರ ಕೆಟಿ ವೆಂಕಟೇಶನ್ ಚೆನ್ನೈನ ರಾಯಪುರಂನಲ್ಲಿ ಶ್ರೀ ಆನಂದ್ ಭವನ್ ಎಂಬ ಮತ್ತೊಂದು ಸಿಹಿತಿಂಡಿ ಮತ್ತು ಖಾರದ ಅಂಗಡಿಯನ್ನು ಸ್ಥಾಪಿಸಿದರು.
ಬಳಿಕ 1988ರಲ್ಲಿ ಇದೇ ಅಂಗಡಿಗೆ ಮರು ನಾಮಕರಣ ಮಾಡಲಾಗಿತ್ತು, ಅದಕ್ಕೆ ಅಡ್ಯಾರ್ ಆನಂದ ಭವನ ಎಂದು ಹೆಸರಿಡಲಾಗಿತ್ತು. ಈಗ ಈ ಹೋಟೆಲ್ ದೊಡ್ಡ ಉದ್ಯಮವಾಗಿ ಬೆಳೆದಿದೆ. ಜೊತೆಗೆ ವಾರ್ಷಿಕವಾಗಿ ಬರೋಬ್ಬರಿ 800 ಕೋಟಿ ರೂಪಾಯಿ ವಹಿವಾಟು ನಡೆಸುತ್ತದೆ. ಭಾರತದಲ್ಲಿ ಮಾತ್ರವಲ್ಲದೆ ಮಲೇಷಿಯಾ, ಯುಎಸ್, ಸಿಂಗಾಪುರ್ನಲ್ಲಿಯೂ ಮಳಿಗೆಗಳಿವೆ.



Click it and Unblock the Notifications


