Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುಟ್ಕಾ ಸೇವಿಸಿ ಮನೆ ತುಂಬಾ ಉಗಿಯುವ ಪತ್ನಿ..ಪೊಲೀಸರ ಮೊರೆ ಹೋದ ಪತಿ.!
ಇತ್ತೀಚಿನ ದಿನಗಳಲ್ಲಿ ಗುಟ್ಕಾ, ಪಾನ್ ಮಸಾಲಾ ಸೇವಿಸುವವರ ಸಂಖ್ಯೆ ಏರುತ್ತಲೇ ಇದೆ. ಅದ್ರಲ್ಲೂ ನಮ್ಮ ನಿಮ್ಮ ಸುತ್ತ ಎಷ್ಟು ಮಂದಿ ಈ ಚಟಗಳಿಗೆ ದಾಸರಾಗಿರುತ್ತಾರೆ ಒಮ್ಮೆ ಯೋಚಿಸಿ, ಯುವ ಸಮುದಾಯವಂತು ಗುಟ್ಕಾ, ತಂಬಾಕು, ಪಾನ್ ಮಸಾಲಾಗಳಿಲ್ಲದೆ ಒಂದು ದಿನ ದಿನ ಕೂಡ ಇರಲು ಸಾಧ್ಯವಿಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ.
ಈ ಗುಟ್ಕಾ, ಪಾನ್ ಮಸಾಲಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಸೇವಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ, ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಯುವತಿಯರು, ಮಹಿಳೆಯರು ಸಹ ಇದೊಂದು ಫ್ಯಾಷನ್ ಎನ್ನುವಂತೆ ಸೇವಿಸಲು ಆರಂಭಿಸಿದ್ದಾರೆ. ಇದೇ ರೀತಿ ಪಾಸ್ ಮಸಾಲಾ ಸೇವಿಸುತ್ತಿದ್ದ ಮಹಿಳೆಯ ಪತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಉತ್ತರ ಪ್ರದೇಶದ ಕುಟುಂಬಕ್ಕೆ ಗುಟ್ಕಾ ಈಗ ಅಕ್ಷರಶಃ ಶತ್ರುವಾಗಿದೆ. ಪತ್ನಿಯ ಗುಟ್ಕಾ ಅಭ್ಯಾಸದ ವಿರುದ್ಧ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ದಾಖಲಿಸಿದ್ದಾನೆ. ಹಾಗಾದ್ರೆ ಪತಿ ಯಾಕೆ ತನ್ನ ಪತ್ನಿ ವಿರುದ್ಧವೇ ಠಾಣೆ ಮೆಟ್ಟಿಲೇರಿದ್ದಾನೆ, ಅಷ್ಟಕ್ಕೂ ಗುಟ್ಕಾದಿಂದ ಆದ ಸಮಸ್ಯೆ ಏನಂತ ನೀವೆ ಓದಿ.
ಗುಟ್ಟಾಗಿ ಗುಟ್ಕಾ ಸೇವಿಸುವ ಪತ್ನಿ
ಇಲ್ಲಿನ ಆಗ್ರಾದಲ್ಲಿ ವಾಸವಿರುವ ಕುಟುಂಬ ಒಂದು ವರ್ಷದ ಹಿಂದೆ ಛಟ್ಟಾ ಗ್ರಾಮದ ಮಹಿಳೆಯನ್ನು ಮಗನೊಂದಿಗೆ ವಿವಾಹ ಮಾಡಿ ಕರೆತಂದಿತ್ತು. ಆಕೆ ತನ್ನ ತಲೆ ಮೇಲೆ ಸೆರಗು ಹಾಕಿಕೊಂಡು ಗುಟ್ಕಾ ಅಗಿಯುತ್ತಿದ್ದಳು, ಈ ಅಭ್ಯಾಸ ಬಿಡಿಸಲು ಪತಿ ಹಲವು ಬಾರಿ ಪ್ರಯತ್ನಿಸಿದ್ದ, ಆದರೆ ಅದು ಸಾಧ್ಯವಾಗಲಿಲ್ಲ. ಪತ್ನಿಯ ಮನೆಯವರಿಗೂ ದೂರು ನೀಡಿದ್ದ ಆದರೂ ಪ್ರಯೋಜನವಾಗಲಿಲ್ಲ. ಆಕೆ ಗುಟ್ಕಾ ಸೇವಿಸುವುದು ಮಾತ್ರವಲ್ಲ ಮನೆಕೆಲಸ ಮಾಡುವಾಗ ಎಲ್ಲೆಂದರಲ್ಲಿ ಗುಟ್ಕಾವನ್ನು ಉಗಿದು ಗಲೀಜು ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಪೊಲೀಸರ ಮೊರೆ ಹೋದ ಪತಿ
ಪತ್ನಿಗೆ ಗುಟ್ಕಾ ಸೇವಿಸುವುದನ್ನು ಬಿಡಿಸಲು ಹಲವು ಬಾರಿ ಯತ್ನಿಸಿ ಸೋತಿದ್ದ ಪತಿ ಬಳಿಕ ಕುಟುಂಬ ಸಮಾಲೋಚಕರ ಬಳಿಯೂ ಕರೆದೊಯ್ದಿದ್ದ ಅಲ್ಲಿಯೂ ಮಾತುಕತೆ ನಡೆದು ಗಲಾಟೆಗೆ ಕಾರಣವಾಗಿತ್ತು. ಇದಾದ ಬಳಿಕ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಲು ಮುಂದಾದಾಗ ಪೊಲೀಸರು ಮಾತುಕತೆಗೆ ಮುಂದಾದಾಗಲು ಪತ್ನಿ ಮಾತು ಕೇಳಲು ಸಿದ್ದರಿರಲಿಲ್ಲ. ಹೀಗಾಗಿ ಆತ ವಕೀಲರ ಭೇಟಿಯಾಗಿದ್ದ.
ಪತಿ ಮೇಲೆ ಆರೋಪ ಹೊರಿಸಿದ ಪತ್ನಿ
ಪತ್ನಿಯನ್ನು ಆತ ಪೊಲೀಸರ ಮುಂದೆ ಆಪ್ತ ಸಮಾಲೋಚಕರ ಮುಂದೆ ಕರೆತಂದಾಗೆಲ್ಲ ಆಕೆ ಪತಿ ವಿರುದ್ಧ ಆರೋಪ ಮಾಡುತ್ತಿದ್ದಳು. ಆತ ದೈಹಿಕವಾಗಿ ಹಲ್ಲೆ ಮಾಡುತ್ತಾನೆ. ಮಕ್ಕಳಾಗಲಿಲ್ಲ ಎಂದು ಹೊಡೆದು ಮನೆಯಿಂದ ಹೊರಹಾಕುವ ಯತ್ನ ಮಾಡಿದ್ದಾರೆ, ಆತನಿಗೆ ಮತ್ತೊಬ್ಬ ಮಹಿಳೆಯ ಜೊತೆ ಅಕ್ರಮ ಸಂಬಂಧವಿದೆ, ಆತನ ಮೊಬೈಲ್ನಲ್ಲಿ ಹತ್ತಾರು ಹುಡುಗಿಯರ ಮೊಬೈಲ್ ನಂಬರ್ಗಳಿವೆ ಹೀಗೆ ಹತ್ತಾರು ಆರೋಪ ಮಾಡುತ್ತಿದ್ದಳು.
ಮನೆಯಿಂದ ಹೊರಹಾಕಲು ಸುಳ್ಳು ಆರೋಪ
ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಗಂಡನನ್ನೇ ಆರೋಪಿಯನ್ನಾಗಿ ಮಾಡಿದಳು. ನನಗೆ ಮಕ್ಕಳಾಗಲಿಲ್ಲ ಎಂದು ಮನೆಯವರು ಸೇರಿ ಹೊರಹಾಕಲು ಮುಂದಾಗಿದ್ದಾರೆ. ಹೀಗಾಗಿ ನಾನು ಗುಟ್ಕಾ ಸೇವಿಸುವುದಾಗಿ ಕಥೆ ಕಟ್ಟಿದ್ದಾರೆ. ನಾನು ಗುಟ್ಕಾ ಸೇವಿಸುವುದಿಲ್ಲ ಎಂದು ಆಕೆಯ ಆರೋಪವಾಗಿದೆ.
ಸಿಗರೇಟ್ ಸೇದಿದ ಅತ್ತೆ ಮದುವೆ ಕ್ಯಾನ್ಸಲ್
ಉತ್ತರ ಪ್ರದೇಶದ ಸಂಬಾಲ್ನಲ್ಲಿ ನಡೆದಿರುವ ಮತ್ತೊಂದು ಘಟನೆಯಲ್ಲಿ ಮದುವೆಯೇ ಮುರಿದುಬಿದ್ದಿದೆ. ಮದುವೆಯ ದಿನ ಅತ್ತೆ ಸಿಗರೇಟ್ ಸೇದುವುದು ಮಾತ್ರವಲ್ಲ ಡ್ಯಾನ್ಸ್ ಮಾಡಿದ್ದನ್ನು ಕಂಡ ಸೊಸೆ ಮದುವೆಯೇ ಬೇಡ ಎಂದು ಹೊರಟು ಹೋಗಿದ್ದಾಳೆ. ಮದುವೆ ಹಿಂದಿನ ದಿನ ನಡೆಯುತ್ತಿದ್ದ ಶಾಸ್ತ್ರದಲ್ಲಿ ವರನ ತಾಯಿ ಕೈಯಲ್ಲಿ ಸಿಗರೇಟ್ ಹಿಡಿದು ಡ್ಯಾನ್ಸ್ ಮಾಡುತ್ತಿದ್ದಳು, ಇದನ್ನು ನೋಡಿದ ವಧು ಮದುವೆ ಕ್ಯಾನ್ಸಲ್ ಮಾಡಿ ತೆರಳಿದ್ದಾಳೆ.



Click it and Unblock the Notifications