Latest Updates
-
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಕಬೀರ್ ದಾಸ್ ಜನ್ಮದಿನ 2022: ಜೀವನಪಾಠ ಹೇಳಿರುವ ಕಬೀರ್ ದಾಸರ ಕೋಟ್ಸ್
ವೃತ್ತಿಯಿಂದ ನೇಕಾರರಾಗಿದ್ದ ಕಬೀರರು ಅನುಭಾವಿ ಕವಿಯಾದ ಅವರು ಇಂದಿಗೂ ತಮ್ಮ ಹಲವಾರು ಕವನಗಳ ಮೂಲಕ ಜೀವಂತವಾಗಿದ್ದಾರೆ ಮತ್ತು ಶತಮಾನಗಳಿಂದ ಅನ್ವೇಷಕರಿಗೆ ಸ್ಫೂರ್ತಿಯಾಗಿದ್ದಾರೆ. ಸಂತ ಕಬೀರ್ ದಾಸ್ ಅವರು ಕೇವಲ ಸಾಮಾಜಿಕ ಪಿಡುಗುಗಳ ವಿರುದ್ಧ ಮಾತ್ರವೇ ಸೆಣಸಲಿಲ್ಲ, ಜೊತೆಗೆ ಮಾನವತೆಯ ಪಾಠ ಮತ್ತು ವಿಶ್ವ ಪ್ರೇಮವನ್ನೂ ಬೋಧಿಸಿದರು. ಬೂಟಾಟಿಕೆ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಲ್ಲಿ ಭಕ್ತಿಯ ಬೀಜಗಳನ್ನು ಬಿತ್ತಿದರವರು ಕಬೀರರು.
ಇಂಥಾ ಮಹಾನ್ ಕವಿ ಕಬೀರ್ ದಾಸರು 1440ರ ಜೂನ್ 14ರಂದು ಜನಿಸಿದರು. ಇವರ ಜನ್ಮದಿನದ ವಿಶೇಷ ಕಬೀರರ ಸ್ಪೂರ್ತಿದಾಯಕ ಕೋಟ್ಸ್ಗಳನ್ನು ನೀಡಲಿದ್ದೇವೆ:

ದೇವರು ಎಂದರೇ ಯಾರು? ದೇವರು ಎಂದರೆ ನಮ್ಮ ಉಸಿರಾಟದೊಳಗಿನ ಉಸಿರು. - ಸಂತ ಕಬೀರ್ ದಾಸ
ನಮ್ಮ ಹೃದಯದಲ್ಲಿನ ದೀಪವನ್ನು ನೋಡಿದಾಗ ಜಗತ್ತಿನ ಎಲ್ಲಾ ಕತ್ತಲೆಯು ಮಾಯವಾಗುತ್ತದೆ. - ಸಂತ ಕಬೀರ್ ದಾಸ
ಸಾಕಷ್ಟು ಪರಿಶ್ರಮದ ನಂತರ ಸಂತೋಷದ ಸಾಗರಕ್ಕೆ ಬಂದಾಗ ಮತ್ತೆ ಬಾಯಾರಿಕೆಯಿಂದ ಹಿಂತಿರುಗಬೇಡಿ. - ಸಂತ ಕಬೀರ್ ದಾಸ
ದೇವರು ನನ್ನೊಳಗೂ ಇದ್ದಾನೆ, ದೇವರು ನಿನ್ನೊಳಗೂ ಇದ್ದಾನೆ. ಬದುಕು ಎನ್ನುವುದು ಪ್ರತಿಯೊಂದು ಅಣುವಿನಲ್ಲೂ ಇದೆ, ಅಹಃ ಬಿಟ್ಟು ಎಲ್ಲರೊಳಗೆ ಹಾಗೂ ನಮ್ಮೊಳಗಿನ ದೇವರನ್ನು ಕಾಣಿರಿ. - ಸಂತ ಕಬೀರ್ ದಾಸ
ಕುರುಡುತನವೇ ತುಂಬಿರುವ ಈ ಪ್ರಪಂಚದಲ್ಲಿ ನಾನು ಕನ್ನಡಿಯನ್ನು ಮಾರುತ್ತಿದ್ದೇನೆ. - ಸಂತ ಕಬೀರ್ ದಾಸ
ಈ ಜಗತ್ತಿನಲ್ಲಿ ನಿಮಗೆ ಸತ್ಯ ಬೇಕೆಂದರೆ ನಿಮ್ಮೊಳಗೆ ಅವಿತಿರುವ ರಹಸ್ಯವಾದ ಹಾಗೂ ನಿಜವಾದ ಶಬ್ಧವನ್ನು ಅಲಿಸಿರಿ, ಅದುವೇ ಸತ್ಯ. - ಸಂತ ಕಬೀರ್ ದಾಸ
ಹನಿಯು ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಸಮುದ್ರವು ಹನಿಯಲ್ಲಿ ವಿಲೀನಗೊಳ್ಳುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿದೆ. - ಸಂತ ಕಬೀರ್ ದಾಸ
ನೀವು ನಿಮ್ಮ ಹತ್ತಿರದ ಪ್ರೀತಿಪಾತ್ರರನ್ನು ನಿರಾಕರಿಸಿದ್ದೀರಿ ಮತ್ತು ಇತರರ ಬಗ್ಗೆ ಯೋಚಿಸುತ್ತಿದ್ದೀರಿ; ಇದರಿಂದಾಗಿ ನಿಮ್ಮ ಎಲ್ಲಾ ಕೆಲಸವೂ ವ್ಯರ್ಥವೇ. - ಸಂತ ಕಬೀರ್ ದಾಸ
ನೀನು ಎಲ್ಲೇ ಇದ್ದರೂ ಅದೇ ನಿನ್ನ ಆರಂಭದ ಹಾದಿ. - ಸಂತ ಕಬೀರ್ ದಾಸ
ಜೀವನದ ಸಾರವು ದೇವರನ್ನು ಸ್ಮರಿಸುವುದರಲ್ಲಿದೆ. - ಸಂತ ಕಬೀರ್ ದಾಸ
ನಾನು ಹಿಂದೂ ಅಲ್ಲ, ಮುಸಲ್ಮಾನನೂ ಅಲ್ಲ, ನಾನು ಈ ದೇಹ ಮಾತ್ರ. ಪಂಚಭೂತಗಳ ಸಾಕ್ಷಿ, ಸಂತೋಷ ಮತ್ತು ದುಃಖದ ನಡುವೆ ಬದುಕುವ ಆತ್ಮ. - ಸಂತ ಕಬೀರ್ ದಾಸ



Click it and Unblock the Notifications









