Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಕಬೀರ್ ದಾಸ್ ಜನ್ಮದಿನ 2022: ಜೀವನಪಾಠ ಹೇಳಿರುವ ಕಬೀರ್ ದಾಸರ ಕೋಟ್ಸ್
ವೃತ್ತಿಯಿಂದ ನೇಕಾರರಾಗಿದ್ದ ಕಬೀರರು ಅನುಭಾವಿ ಕವಿಯಾದ ಅವರು ಇಂದಿಗೂ ತಮ್ಮ ಹಲವಾರು ಕವನಗಳ ಮೂಲಕ ಜೀವಂತವಾಗಿದ್ದಾರೆ ಮತ್ತು ಶತಮಾನಗಳಿಂದ ಅನ್ವೇಷಕರಿಗೆ ಸ್ಫೂರ್ತಿಯಾಗಿದ್ದಾರೆ. ಸಂತ ಕಬೀರ್ ದಾಸ್ ಅವರು ಕೇವಲ ಸಾಮಾಜಿಕ ಪಿಡುಗುಗಳ ವಿರುದ್ಧ ಮಾತ್ರವೇ ಸೆಣಸಲಿಲ್ಲ, ಜೊತೆಗೆ ಮಾನವತೆಯ ಪಾಠ ಮತ್ತು ವಿಶ್ವ ಪ್ರೇಮವನ್ನೂ ಬೋಧಿಸಿದರು. ಬೂಟಾಟಿಕೆ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಲ್ಲಿ ಭಕ್ತಿಯ ಬೀಜಗಳನ್ನು ಬಿತ್ತಿದರವರು ಕಬೀರರು.
ಇಂಥಾ ಮಹಾನ್ ಕವಿ ಕಬೀರ್ ದಾಸರು 1440ರ ಜೂನ್ 14ರಂದು ಜನಿಸಿದರು. ಇವರ ಜನ್ಮದಿನದ ವಿಶೇಷ ಕಬೀರರ ಸ್ಪೂರ್ತಿದಾಯಕ ಕೋಟ್ಸ್ಗಳನ್ನು ನೀಡಲಿದ್ದೇವೆ:

ದೇವರು ಎಂದರೇ ಯಾರು? ದೇವರು ಎಂದರೆ ನಮ್ಮ ಉಸಿರಾಟದೊಳಗಿನ ಉಸಿರು. - ಸಂತ ಕಬೀರ್ ದಾಸ
ನಮ್ಮ ಹೃದಯದಲ್ಲಿನ ದೀಪವನ್ನು ನೋಡಿದಾಗ ಜಗತ್ತಿನ ಎಲ್ಲಾ ಕತ್ತಲೆಯು ಮಾಯವಾಗುತ್ತದೆ. - ಸಂತ ಕಬೀರ್ ದಾಸ
ಸಾಕಷ್ಟು ಪರಿಶ್ರಮದ ನಂತರ ಸಂತೋಷದ ಸಾಗರಕ್ಕೆ ಬಂದಾಗ ಮತ್ತೆ ಬಾಯಾರಿಕೆಯಿಂದ ಹಿಂತಿರುಗಬೇಡಿ. - ಸಂತ ಕಬೀರ್ ದಾಸ
ದೇವರು ನನ್ನೊಳಗೂ ಇದ್ದಾನೆ, ದೇವರು ನಿನ್ನೊಳಗೂ ಇದ್ದಾನೆ. ಬದುಕು ಎನ್ನುವುದು ಪ್ರತಿಯೊಂದು ಅಣುವಿನಲ್ಲೂ ಇದೆ, ಅಹಃ ಬಿಟ್ಟು ಎಲ್ಲರೊಳಗೆ ಹಾಗೂ ನಮ್ಮೊಳಗಿನ ದೇವರನ್ನು ಕಾಣಿರಿ. - ಸಂತ ಕಬೀರ್ ದಾಸ
ಕುರುಡುತನವೇ ತುಂಬಿರುವ ಈ ಪ್ರಪಂಚದಲ್ಲಿ ನಾನು ಕನ್ನಡಿಯನ್ನು ಮಾರುತ್ತಿದ್ದೇನೆ. - ಸಂತ ಕಬೀರ್ ದಾಸ
ಈ ಜಗತ್ತಿನಲ್ಲಿ ನಿಮಗೆ ಸತ್ಯ ಬೇಕೆಂದರೆ ನಿಮ್ಮೊಳಗೆ ಅವಿತಿರುವ ರಹಸ್ಯವಾದ ಹಾಗೂ ನಿಜವಾದ ಶಬ್ಧವನ್ನು ಅಲಿಸಿರಿ, ಅದುವೇ ಸತ್ಯ. - ಸಂತ ಕಬೀರ್ ದಾಸ
ಹನಿಯು ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಸಮುದ್ರವು ಹನಿಯಲ್ಲಿ ವಿಲೀನಗೊಳ್ಳುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿದೆ. - ಸಂತ ಕಬೀರ್ ದಾಸ
ನೀವು ನಿಮ್ಮ ಹತ್ತಿರದ ಪ್ರೀತಿಪಾತ್ರರನ್ನು ನಿರಾಕರಿಸಿದ್ದೀರಿ ಮತ್ತು ಇತರರ ಬಗ್ಗೆ ಯೋಚಿಸುತ್ತಿದ್ದೀರಿ; ಇದರಿಂದಾಗಿ ನಿಮ್ಮ ಎಲ್ಲಾ ಕೆಲಸವೂ ವ್ಯರ್ಥವೇ. - ಸಂತ ಕಬೀರ್ ದಾಸ
ನೀನು ಎಲ್ಲೇ ಇದ್ದರೂ ಅದೇ ನಿನ್ನ ಆರಂಭದ ಹಾದಿ. - ಸಂತ ಕಬೀರ್ ದಾಸ
ಜೀವನದ ಸಾರವು ದೇವರನ್ನು ಸ್ಮರಿಸುವುದರಲ್ಲಿದೆ. - ಸಂತ ಕಬೀರ್ ದಾಸ
ನಾನು ಹಿಂದೂ ಅಲ್ಲ, ಮುಸಲ್ಮಾನನೂ ಅಲ್ಲ, ನಾನು ಈ ದೇಹ ಮಾತ್ರ. ಪಂಚಭೂತಗಳ ಸಾಕ್ಷಿ, ಸಂತೋಷ ಮತ್ತು ದುಃಖದ ನಡುವೆ ಬದುಕುವ ಆತ್ಮ. - ಸಂತ ಕಬೀರ್ ದಾಸ



Click it and Unblock the Notifications










