Just In
- 2 min ago ವಾರ ಭವಿಷ್ಯ (ಏಪ್ರಿಲ್20-27) : ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- 3 hrs ago ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 12 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 12 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
Don't Miss
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಬೀರ್ ದಾಸ್ ಜನ್ಮದಿನ 2022: ಜೀವನಪಾಠ ಹೇಳಿರುವ ಕಬೀರ್ ದಾಸರ ಕೋಟ್ಸ್
ವೃತ್ತಿಯಿಂದ ನೇಕಾರರಾಗಿದ್ದ ಕಬೀರರು ಅನುಭಾವಿ ಕವಿಯಾದ ಅವರು ಇಂದಿಗೂ ತಮ್ಮ ಹಲವಾರು ಕವನಗಳ ಮೂಲಕ ಜೀವಂತವಾಗಿದ್ದಾರೆ ಮತ್ತು ಶತಮಾನಗಳಿಂದ ಅನ್ವೇಷಕರಿಗೆ ಸ್ಫೂರ್ತಿಯಾಗಿದ್ದಾರೆ. ಸಂತ ಕಬೀರ್ ದಾಸ್ ಅವರು ಕೇವಲ ಸಾಮಾಜಿಕ ಪಿಡುಗುಗಳ ವಿರುದ್ಧ ಮಾತ್ರವೇ ಸೆಣಸಲಿಲ್ಲ, ಜೊತೆಗೆ ಮಾನವತೆಯ ಪಾಠ ಮತ್ತು ವಿಶ್ವ ಪ್ರೇಮವನ್ನೂ ಬೋಧಿಸಿದರು. ಬೂಟಾಟಿಕೆ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಲ್ಲಿ ಭಕ್ತಿಯ ಬೀಜಗಳನ್ನು ಬಿತ್ತಿದರವರು ಕಬೀರರು.
ಇಂಥಾ ಮಹಾನ್ ಕವಿ ಕಬೀರ್ ದಾಸರು 1440ರ ಜೂನ್ 14ರಂದು ಜನಿಸಿದರು. ಇವರ ಜನ್ಮದಿನದ ವಿಶೇಷ ಕಬೀರರ ಸ್ಪೂರ್ತಿದಾಯಕ ಕೋಟ್ಸ್ಗಳನ್ನು ನೀಡಲಿದ್ದೇವೆ:
ದೇವರು ಎಂದರೇ ಯಾರು? ದೇವರು ಎಂದರೆ ನಮ್ಮ ಉಸಿರಾಟದೊಳಗಿನ ಉಸಿರು. - ಸಂತ ಕಬೀರ್ ದಾಸ
ನಮ್ಮ ಹೃದಯದಲ್ಲಿನ ದೀಪವನ್ನು ನೋಡಿದಾಗ ಜಗತ್ತಿನ ಎಲ್ಲಾ ಕತ್ತಲೆಯು ಮಾಯವಾಗುತ್ತದೆ. - ಸಂತ ಕಬೀರ್ ದಾಸ
ಸಾಕಷ್ಟು ಪರಿಶ್ರಮದ ನಂತರ ಸಂತೋಷದ ಸಾಗರಕ್ಕೆ ಬಂದಾಗ ಮತ್ತೆ ಬಾಯಾರಿಕೆಯಿಂದ ಹಿಂತಿರುಗಬೇಡಿ. - ಸಂತ ಕಬೀರ್ ದಾಸ
ದೇವರು ನನ್ನೊಳಗೂ ಇದ್ದಾನೆ, ದೇವರು ನಿನ್ನೊಳಗೂ ಇದ್ದಾನೆ. ಬದುಕು ಎನ್ನುವುದು ಪ್ರತಿಯೊಂದು ಅಣುವಿನಲ್ಲೂ ಇದೆ, ಅಹಃ ಬಿಟ್ಟು ಎಲ್ಲರೊಳಗೆ ಹಾಗೂ ನಮ್ಮೊಳಗಿನ ದೇವರನ್ನು ಕಾಣಿರಿ. - ಸಂತ ಕಬೀರ್ ದಾಸ
ಕುರುಡುತನವೇ ತುಂಬಿರುವ ಈ ಪ್ರಪಂಚದಲ್ಲಿ ನಾನು ಕನ್ನಡಿಯನ್ನು ಮಾರುತ್ತಿದ್ದೇನೆ. - ಸಂತ ಕಬೀರ್ ದಾಸ
ಈ ಜಗತ್ತಿನಲ್ಲಿ ನಿಮಗೆ ಸತ್ಯ ಬೇಕೆಂದರೆ ನಿಮ್ಮೊಳಗೆ ಅವಿತಿರುವ ರಹಸ್ಯವಾದ ಹಾಗೂ ನಿಜವಾದ ಶಬ್ಧವನ್ನು ಅಲಿಸಿರಿ, ಅದುವೇ ಸತ್ಯ. - ಸಂತ ಕಬೀರ್ ದಾಸ
ಹನಿಯು ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಸಮುದ್ರವು ಹನಿಯಲ್ಲಿ ವಿಲೀನಗೊಳ್ಳುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿದೆ. - ಸಂತ ಕಬೀರ್ ದಾಸ
ನೀವು ನಿಮ್ಮ ಹತ್ತಿರದ ಪ್ರೀತಿಪಾತ್ರರನ್ನು ನಿರಾಕರಿಸಿದ್ದೀರಿ ಮತ್ತು ಇತರರ ಬಗ್ಗೆ ಯೋಚಿಸುತ್ತಿದ್ದೀರಿ; ಇದರಿಂದಾಗಿ ನಿಮ್ಮ ಎಲ್ಲಾ ಕೆಲಸವೂ ವ್ಯರ್ಥವೇ. - ಸಂತ ಕಬೀರ್ ದಾಸ
ನೀನು ಎಲ್ಲೇ ಇದ್ದರೂ ಅದೇ ನಿನ್ನ ಆರಂಭದ ಹಾದಿ. - ಸಂತ ಕಬೀರ್ ದಾಸ
ಜೀವನದ ಸಾರವು ದೇವರನ್ನು ಸ್ಮರಿಸುವುದರಲ್ಲಿದೆ. - ಸಂತ ಕಬೀರ್ ದಾಸ
ನಾನು ಹಿಂದೂ ಅಲ್ಲ, ಮುಸಲ್ಮಾನನೂ ಅಲ್ಲ, ನಾನು ಈ ದೇಹ ಮಾತ್ರ. ಪಂಚಭೂತಗಳ ಸಾಕ್ಷಿ, ಸಂತೋಷ ಮತ್ತು ದುಃಖದ ನಡುವೆ ಬದುಕುವ ಆತ್ಮ. - ಸಂತ ಕಬೀರ್ ದಾಸ