Latest Updates
-
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ!
ಕಬೀರ್ ದಾಸ್ ಜನ್ಮದಿನ 2022: ಜೀವನಪಾಠ ಹೇಳಿರುವ ಕಬೀರ್ ದಾಸರ ಕೋಟ್ಸ್
ವೃತ್ತಿಯಿಂದ ನೇಕಾರರಾಗಿದ್ದ ಕಬೀರರು ಅನುಭಾವಿ ಕವಿಯಾದ ಅವರು ಇಂದಿಗೂ ತಮ್ಮ ಹಲವಾರು ಕವನಗಳ ಮೂಲಕ ಜೀವಂತವಾಗಿದ್ದಾರೆ ಮತ್ತು ಶತಮಾನಗಳಿಂದ ಅನ್ವೇಷಕರಿಗೆ ಸ್ಫೂರ್ತಿಯಾಗಿದ್ದಾರೆ. ಸಂತ ಕಬೀರ್ ದಾಸ್ ಅವರು ಕೇವಲ ಸಾಮಾಜಿಕ ಪಿಡುಗುಗಳ ವಿರುದ್ಧ ಮಾತ್ರವೇ ಸೆಣಸಲಿಲ್ಲ, ಜೊತೆಗೆ ಮಾನವತೆಯ ಪಾಠ ಮತ್ತು ವಿಶ್ವ ಪ್ರೇಮವನ್ನೂ ಬೋಧಿಸಿದರು. ಬೂಟಾಟಿಕೆ ವಿರುದ್ಧ ಧ್ವನಿ ಎತ್ತಿದರು ಮತ್ತು ಜನರಲ್ಲಿ ಭಕ್ತಿಯ ಬೀಜಗಳನ್ನು ಬಿತ್ತಿದರವರು ಕಬೀರರು.
ಇಂಥಾ ಮಹಾನ್ ಕವಿ ಕಬೀರ್ ದಾಸರು 1440ರ ಜೂನ್ 14ರಂದು ಜನಿಸಿದರು. ಇವರ ಜನ್ಮದಿನದ ವಿಶೇಷ ಕಬೀರರ ಸ್ಪೂರ್ತಿದಾಯಕ ಕೋಟ್ಸ್ಗಳನ್ನು ನೀಡಲಿದ್ದೇವೆ:

ದೇವರು ಎಂದರೇ ಯಾರು? ದೇವರು ಎಂದರೆ ನಮ್ಮ ಉಸಿರಾಟದೊಳಗಿನ ಉಸಿರು. - ಸಂತ ಕಬೀರ್ ದಾಸ
ನಮ್ಮ ಹೃದಯದಲ್ಲಿನ ದೀಪವನ್ನು ನೋಡಿದಾಗ ಜಗತ್ತಿನ ಎಲ್ಲಾ ಕತ್ತಲೆಯು ಮಾಯವಾಗುತ್ತದೆ. - ಸಂತ ಕಬೀರ್ ದಾಸ
ಸಾಕಷ್ಟು ಪರಿಶ್ರಮದ ನಂತರ ಸಂತೋಷದ ಸಾಗರಕ್ಕೆ ಬಂದಾಗ ಮತ್ತೆ ಬಾಯಾರಿಕೆಯಿಂದ ಹಿಂತಿರುಗಬೇಡಿ. - ಸಂತ ಕಬೀರ್ ದಾಸ
ದೇವರು ನನ್ನೊಳಗೂ ಇದ್ದಾನೆ, ದೇವರು ನಿನ್ನೊಳಗೂ ಇದ್ದಾನೆ. ಬದುಕು ಎನ್ನುವುದು ಪ್ರತಿಯೊಂದು ಅಣುವಿನಲ್ಲೂ ಇದೆ, ಅಹಃ ಬಿಟ್ಟು ಎಲ್ಲರೊಳಗೆ ಹಾಗೂ ನಮ್ಮೊಳಗಿನ ದೇವರನ್ನು ಕಾಣಿರಿ. - ಸಂತ ಕಬೀರ್ ದಾಸ
ಕುರುಡುತನವೇ ತುಂಬಿರುವ ಈ ಪ್ರಪಂಚದಲ್ಲಿ ನಾನು ಕನ್ನಡಿಯನ್ನು ಮಾರುತ್ತಿದ್ದೇನೆ. - ಸಂತ ಕಬೀರ್ ದಾಸ
ಈ ಜಗತ್ತಿನಲ್ಲಿ ನಿಮಗೆ ಸತ್ಯ ಬೇಕೆಂದರೆ ನಿಮ್ಮೊಳಗೆ ಅವಿತಿರುವ ರಹಸ್ಯವಾದ ಹಾಗೂ ನಿಜವಾದ ಶಬ್ಧವನ್ನು ಅಲಿಸಿರಿ, ಅದುವೇ ಸತ್ಯ. - ಸಂತ ಕಬೀರ್ ದಾಸ
ಹನಿಯು ಸಮುದ್ರದಲ್ಲಿ ವಿಲೀನಗೊಳ್ಳುತ್ತದೆ ಎಂದು ಎಲ್ಲರಿಗೂ ತಿಳಿದಿದೆ, ಆದರೆ ಸಮುದ್ರವು ಹನಿಯಲ್ಲಿ ವಿಲೀನಗೊಳ್ಳುತ್ತದೆ ಎಂದು ಕೆಲವರಿಗೆ ಮಾತ್ರ ತಿಳಿದಿದೆ. - ಸಂತ ಕಬೀರ್ ದಾಸ
ನೀವು ನಿಮ್ಮ ಹತ್ತಿರದ ಪ್ರೀತಿಪಾತ್ರರನ್ನು ನಿರಾಕರಿಸಿದ್ದೀರಿ ಮತ್ತು ಇತರರ ಬಗ್ಗೆ ಯೋಚಿಸುತ್ತಿದ್ದೀರಿ; ಇದರಿಂದಾಗಿ ನಿಮ್ಮ ಎಲ್ಲಾ ಕೆಲಸವೂ ವ್ಯರ್ಥವೇ. - ಸಂತ ಕಬೀರ್ ದಾಸ
ನೀನು ಎಲ್ಲೇ ಇದ್ದರೂ ಅದೇ ನಿನ್ನ ಆರಂಭದ ಹಾದಿ. - ಸಂತ ಕಬೀರ್ ದಾಸ
ಜೀವನದ ಸಾರವು ದೇವರನ್ನು ಸ್ಮರಿಸುವುದರಲ್ಲಿದೆ. - ಸಂತ ಕಬೀರ್ ದಾಸ
ನಾನು ಹಿಂದೂ ಅಲ್ಲ, ಮುಸಲ್ಮಾನನೂ ಅಲ್ಲ, ನಾನು ಈ ದೇಹ ಮಾತ್ರ. ಪಂಚಭೂತಗಳ ಸಾಕ್ಷಿ, ಸಂತೋಷ ಮತ್ತು ದುಃಖದ ನಡುವೆ ಬದುಕುವ ಆತ್ಮ. - ಸಂತ ಕಬೀರ್ ದಾಸ



Click it and Unblock the Notifications









