Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಚಿರತೆಯನ್ನೇ ಹೆದರಿಸಿ ಓಡಿಸಿದ ಮಂಗಗಳು: ವೀಡಿಯೋ ಆಯ್ತು ವೈರಲ್
ಚಿರತೆಯನ್ನು ನೋಡಿದರೆ ಸಾಕು ಉಳಿದ ಚಿಕ್ಕ ಪ್ರಾಣಿಗಳು ಅದರಿಂದ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗುತ್ತವೆ, ಚಿರತೆ ಗುರಿಯಿಂದ ತಪ್ಪಿಸಿಕೊಳ್ಳುವುದು ಕಷ್ಟ ಎಂಬುವುದು ಕಾಡಿನಲ್ಲಿರುವ ಪ್ರಾಣಿಗಳಿಗೆ ಗೊತ್ತಿರುತ್ತದೆ, ಆದ್ದರಿಂದ ಚಿರತೆ ಕಂಡರೆ ಪ್ರಾಣಿಗಳು ಚೆಲ್ಲಾಪಿಲ್ಲಿಗಳಾಗಿ ಓಡಲಾರಂಭಿಸುತ್ತದೆ, ಆದರೆ ಕಾಡಿನ ಪ್ರಾಣಿಗಳು ಎಲ್ಲಾ ಸಂದರ್ಭದಲ್ಲಿಯೂ ಈ ರೀತಿ ವರ್ತಿಸುತ್ತದೆ ಎಂದು ಹೇಳಲಾಗುವುದಿಲ್ಲ ಎಂಬುವುದಕ್ಕೆ ಈ ವೀಡಿಯೋನೇ ಸಾಕ್ಷಿ.

ಈ ವೀಡಿಯೋವನ್ನು ದಕ್ಷಿಣ ಆಫ್ರಿಕಾದಲ್ಲಿ ತೆಗೆದಿದ್ದು ಎಂದು ಹೇಳಲಾಗುತ್ತಿದೆ, ಇದೀಗ ಈ ವೀಡಿಯೋ ಸಾಮಾಜಿಕ ತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಬಬೂನ್ಸ್ ಅಂದರೆ ದಕ್ಷಿಣ ಆಫ್ರಿಕದಲ್ಲಿ ಕಂಡು ಬರುವ ದೊಡ್ಡ ಜಾತಿಯ ಮಂಗಗಳು, ಈ ಬಬೂನ್ಸ್ ಬಲಿಷ್ಠವಾದ ಚಿರತೆಯನ್ನು ಕಚ್ಚಿ ಓಡಿಸುತ್ತಿರುವ ದೃಶ್ಯ ಇದಾಗಿದೆ.
ಒಗ್ಗಟ್ಟಿನಲ್ಲಿ ಬಲವಿದೆ
ತಮ್ಮ ಶತ್ರು ಎಷ್ಟೋ ಬಲಿಷ್ಠನಾಗಿರಲಿ ನಾವೆಲ್ಲಾ ಒಟ್ಟಾಗಿ ನಿಂತರೆ ಸೋಲಿಸುವುದು ಸುಲಭ ಎಂಬುವುದಕ್ಕೆ ಈ ವೀಡಿಯೋ ಒಂದು ಉದಾಹರಣೆ, ಈ ಕಾರಣಕ್ಕೆ ಇರಬಹುದು ನೆಟ್ಟಿಗರಿಗೆ ಈ ವೀಡಿಯೋ ತುಂಬಾನೇ ಇಷ್ಟವಾಗಿದ್ದು ವೀಡಿಯೋ ವೈರಲ್ ಆಗುತ್ತಿದೆ.
ಬಬೂನ್ಸ್ ಗುಂಪುವೊಂದು ತಮ್ಮ ಪಾಡಿಗೆ ತಾವು ರಸ್ತೆ ಮಧ್ಯದಲ್ಲಿ ಆಟ ಆಡುತ್ತಿತ್ತು, ಆ ರಸ್ತೆಯಲ್ಲಿ ಗಾಡಿಗಳು ಓಡಾಡುತ್ತಿದ್ದೆವು, ಇವುಗಳು ತಮ್ಮ ಪಾಡಿಗೆ ತಾವು ಇದ್ದೆವು, ಆಗ ಇದ್ದಕ್ಕಿದ್ದಂತೆ ಚಿರತೆಯೊಂದು ಆ ಮಂಗಗಳ ಮೇಲೆ ದಾಳಿ ಮಾಡುತ್ತದೆ, ಪ್ರಾಣ ಭಯದಿಂದ ಆ ಮಂಗಳು ಓಡಲು ಪ್ರಾರಂಭಿಸುತ್ತವೆ, ಆವಾಗ ಅವಕ್ಕೆ ನಾವು ಒಟ್ಟಾಗಿ ನಿಂತರೆ ಗೆಲ್ಲಬಹುದು ಎಂದನಿಸಿರಬಹುದು, ಕೂಡಲೇ ಎಲ್ಲಾ ಸೇರಿ ಚಿರತೆ ವಿರುದ್ಧ ಮುಗಿ ಬೀಳುತ್ತವೆ.
ಪಾಪ! ಆ ಚಿರತೆಗೆ ತನ್ನ ಮೇಲೆ ಈ ರೀತಿ ದಾಳಿ ಆಗುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ, ಇವುಗಳು ನನ್ನನ್ನು ಸುಮ್ಮನೆ ಬಿಡಲ್ಲ ಎಂದರಿತ ಚಿರತೆ ತನ್ನ ಪ್ರಾಣ ಉಳಿಸಲು ಅಲ್ಲಿಂದ ಓಡುತ್ತಿರುವ ದೃಶ್ಯ ತುಂಬಾನೇ ವಿಚಿತ್ರ ಅನಿಸಿದೆ ಇರಲ್ಲ.
ಈ ವೀಡಿಯೋ ನೋಡಿ ತಮ್ಮ ಬದುಕಿನ ಜೊತೆ ಹೋಲಿಕೆ ಮಾಡುತ್ತಿದ್ದಾರೆ ಕೆಲವರು
ಸಮಸ್ಯೆ ಅಂತ ಹೆದರಿ ಓಡುವ ಬದಲಿಗೆ ದಿಟ್ಟವಾಗಿ ಎದುರಿಸಿದರೆ ಸಮಸ್ಯೆಯನ್ನು ಸುಲಭವಾಗಿ ಜಯಿಸಬಹುದು ಎಂಬ ಸ್ಪೂರ್ತಿ ತುಂಬುವಂತಿದೆ ಈ ವೀಡಿಯೋ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಗಾದೆ ಮಾತೇ ಇದೆ, ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದು ಎಂಬ ಮಾತಿದೆ, ಅದು ನಿಜ ಕೂಡ ಅಲ್ಲವೇ?



Click it and Unblock the Notifications











